Sunday, December 25, 2011

Interview with Action Star

ಅಕ್ಷಯ್ ಫಿಟ್ನೆಸ್ ಗುಟ್ಟು..

ನೆಲದ ಮೇಲೆ ಚಂಡಿನಂತೆ ಪುಟಿಯುವ, ಪಾದರಸದಷ್ಟು ಚುರುಕು, ರಬ್ಬರ್ನಂತೆ ಹಾರುವ, ಅಪೂರ್ವ ನಟನೆ ಹಾಗೂ ಆಕರ್ಷಕ ಮೈಮಾಟದಿಂದ ಅಭಿಮಾನಿಗಳ ಮನಸಿನಲ್ಲಿ ಕ್ಷಯವಾಗದೇ ಉಳಿದುಕೊಂಡಿರುವ ಅಕ್ಷಯ್ ಅಭಿನಯ ನಿಜಕ್ಕೂ ರೋಚಕ.
ಫಿಸಿಕಲ್ ಫಿಟ್ನೆಸ್ಗೆ ಹೆಸರುವಾಸಿಯಾದ ಈತನ ಫಿಟ್ನೆಸ್ ಮಂತ್ರದ ಗುಟ್ಟು ಅವರದೇ ಮಾತಲ್ಲಿ ಕೇಳೋಣ,
ಅಕ್ಷಯ್ ದೃಷ್ಟಿಯಲ್ಲಿ ಆರೋಗ್ಯವಂತರೆಂದರೆ, ಬರೀ ದೈಹಿಕವಾಗಿ ಫಿಟ್ ಇರೋರಲ್ಲ. ಬದಲಿಗೆ, ಮಾನಸಿಕವಾಗಿಯೂ ಅಷ್ಟೇ ಸದೃಢರಾಗಿರಬೇಕು. ಅಂದರೆ, ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಮತೋಲನ ಕಾಯ್ದುಕೊಂಡಿರಬೇಕು. ಸಮಯಕ್ಕೆ ಸರಿಯಾಗಿ ಮಲಗುವುದು ಹಾಗೂ ಏಳುವುದು, ಆಹಾರ ಸೇವನೆಯಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕು. ಅಲ್ಕೋಹಾಲ್ ಹಾಗೂ ಮಾದಕ ಪದಾರ್ಥಗಳನ್ನು ಆದಷ್ಟು ಅವೈಡ್ ಮಾಡುವುದೇ ಸೂಕ್ತ ಎನ್ನುತ್ತಾರೆ `ಆ್ಯಕ್ಷನ್ ಕಿಂಗ್.'
ಮಾತು ಮುಂದುವರಿಸಿದ ಅವರು, ಇತ್ತೀಚೆಗೆ ಸಾಮಾನ್ಯವಾಗಿ ದೈಹಿಕ ಸದೃಢತೆಗಾಗಿ ಜೀಮ್ಗೆ ಮೊರೆ ಹೋಗುವುದು ಕಾಮನ್ ಫೆನಾಮಿನಾ ಆಗಿ ಪರಿಣಮಿಸಿದೆ. ಯಾರೂ ಕೂಡ ನ್ಯಾಚುರಲ್ ವ್ಯಾಯಾಮಗಳ ಮೂಲಕ ದೇಹ ಸಾಧನೆಗೆ ಮುಂದಾಗುತ್ತಿಲ್ಲ.
ಜೀಮ್ಗಿಂತ ಪಾಕರ್್ಅವರ್ ಸೂಕ್ತ:
ಒಂದು ವೇಳೆ ಜೀಮ್ಗೆ ಹೋಗುವುದ್ದಾದ್ದಲ್ಲಿ, ಕೇವಲ ಒಂದೇ ಅಂಗಾಂಗಗಳನ್ನು ಟಾಗರ್ೆಟ್ ಮಾಡಬಹುದು. ಆದರೆ, ಅದೇ ಪಾಕರ್್ ಅವರ್ಗೆ ಹೋದ್ದಲ್ಲಿ, ದೇಹದ ಪ್ರತಿಯೊಂದು ಅಂಗಕ್ಕೂ ವ್ಯಾಯಾಮ ದೊರಕುತ್ತದೆ. ಜತೆಗೆ ಖುಷಿ-ಖುಷಿಯಿಂದ ಯಾವುದೇ ತೊಂದರೆ ಇಲ್ಲದೇ ಸರಾಗವಾಗಿ ವ್ಯಾಯಾಮ ಮಾಡಬಹುದು. ಹೀಗಾಗಿ ಆದಷ್ಟು ಜೀಮ್ಗಿಂತ ಪಾಕರ್್ಅವರ್ ಬೆಟರ್ ಎಂದು ಹೇಳಿದರು.
ಮೆಡಿಟೇಷನ್ ಅಥವಾ ಮಾರ್ಷಲ್ ಲಾ:
ಬರೀ ದೈಹಿಕವಾಗಿ ಬಲಶಾಲಿಯಾಗಿದ್ದು, ಮಾನಸಿಕವಾಗಿ ದುರ್ಬಲರಾಗಿದ್ದರೆ, ವೇಸ್ಟ್. ಆದ್ದರಿಂದ ಫಿಸಿಕಲ್ ಜತೆಗೆ ಮೆಡಿಟೇಷನ್ ಕೂಡ ಮಾಡುವುದು ಒಳ್ಳೆಯದು. ಒಂದು ವೇಳೆ ಧ್ಯಾನದಲ್ಲಿ ಸಮಯ ಕಳೆಯಲಾಗದೆಂದರೆ, ಮಾರ್ಷಲ್ ಆಟರ್್ಗೆ ಮೊರೆ ಹೋಗುವುದು ಸೂಕ್ತ. ನಾನೂ ಕೂಡ ಹಾಗೇ ಮಾಡುತ್ತೇನೆ. ಇದು ನನಗೆ ಮಾನಸಿಕವಾಗಿ ಎಂಥ ಬಿರುಗಾಳಿ ಬಂದರೂ ಸಮರ್ಥವಾಗಿ ಎದುರಿಸಲು ಶಕ್ತಿ ನೀಡುತ್ತಾ ಬಂದಿದೆ.
ಪರ್ಸನಲ್ ಮ್ಯಾಟರ್:
ನಾನು ಬಾಲ್ಯದಿಂದ ಕ್ರೀಡೆಯನ್ನು ನನ್ನ ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡಿದ್ದೇನೆ. ಬೆಳಗ್ಗೆ ಬೇಗ ಎದ್ದು ಹೊರಾಂಗಣ ಕ್ರೀಡೆಗಳಾದ ಕ್ರಿಕೆಟ್ ಹಾಗೂ ಫುಟ್ಬಾಲ್ ಆಡುತ್ತಿದ್ದೇನೆ(ಶೂಟಿಂಗ್ ಇಲ್ಲದಿರುವಾಗ ಮಾತ್ರ). ಉಳಿದಂತೆ ಸೂರ್ಯಪುತ್ರನಂತು ನಾನು ಅಲ್ವೇ ಅಲ್ಲ.
ಪಂಚಿಂಗ್ ಲೈನ್:
ಇಂದಿನ ಪಾಲಕರು ತಮ್ಮ ಮಕ್ಕಳನ್ನು ತಮ್ಮ ಕೈಯಿಂದ ತಾವೇ ಹಾಳು ಮಾಡುತ್ತಿದ್ದಾರೆ. ಅವರು ದೈಹಿಕ ಹಾಗೂ ಮಾನಸಿಕವಾಗಿ ಸಮತೋಲನ ಕಳೆದುಕೊಳ್ಳಲು ಅವರೇ ಕಾರಣ. ಏಕೆಂದರೆ, ಇತ್ತೀಚಿನ ಪೀಳಿಗೆಗಳಿಗೆ ಅವರು, ಹೊರಾಂಗಣ ಆಟಗಳಾಡಲು ಅವಕಾಶ ನೀಡದೇ ಕಂಪ್ಯೂಟರ್ ವೈರಸ್ಗಳಾಗಿ ಮಾಡಿದ್ದಾರೆ. ಆದ್ದರಿಂದ ಹೀಗೆ ಮಾಡದೆ ಅವರು ತಾವು ಅನುಭವಿಸಿದ, ಕುಣಿದು ಕುಪ್ಪಳಿಸಿದ ಬಾಲ್ಯವನ್ನು ಅವರಿಗೆ ಧಾರೆ ಎರೆಯಲಿ ಎಂದು ಕರೆ ನೀಡಿದರು.

Thursday, December 1, 2011

ಸ್ಮಾಲ್ ಬಿಗಿನಿಂಗ್ ಗ್ರೇಟ್ ಎಂಡ್...


ಓದಿದ್ದು ಡಿಗ್ರಿ ಮಾಡಿದ್ದು ಅಗ್ರಿ
ಬೆಳಗ್ಗೆ ಭಾನುವಿನ ಹೊಂಗಿರಣ ಭೂಮಿಗೆ ಬರುವ ಮುನ್ನವೇ ಮೈನುಡುಗುವ ಚಳಿಯಲ್ಲಿ ಸೈಕಲ್ ತುಳಿಯುತ್ತಾ ಯಾವ ಭಯವಿಲ್ಲದೇ ತೋಟದ ಕಡೆ ಪಯಣ ಬೆಳಸುತ್ತಾರೆ. ಏಣಿ ಏರಿ ಅಂಬು ಎಲೆಗಳನ್ನು ಕೀಳುತ್ತಾ, ಗುದ್ದಲಿ ಹಿಡಿದು ತೋಟದಲ್ಲಿ ಕೆಲಸಮಾಡುತ್ತಾರೆ ಈ ಮಹಾತಾಯಿ.
ಇಲ್ಲಿವರೆಗೂ ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂದು ಕೇಳಿದ್ದೇವೆ; ನೋಡೂ ಇದ್ದೇವೆ. ಆದರೆ, ಒಬ್ಬ ಮಹಿಳೆ ಆಕಾಶದೆತ್ತರದ್ದನ್ನು ಸಾಧಿಸಬೇಕಾದರೆ, ಅವಳ ಹಿಂದೆ ಯಾರಿರುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಪತಿರಾಯನ ಪ್ರೋತ್ಸಾಹ ಹಾಗೂ ಸಾಮರಸ್ಯ ಜೀವನದಿಂದ ಏನೂ ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಸುನೀತಾ ಜ್ವಲಂತ ನಿದರ್ಶನ.
ಈಕೆಯನ್ನು ಯಾರೇ ಆಗಲಿ `ಹೆಣ್ಣೊಂದು ಮನಸು ಮಾಡಿದರೆ ಕೊರಡು ಕೊನರುವುದಯ್ಯ' ಎಂಬ ಶರಣರ ಉಕ್ತಿಯನ್ನು ಉವಾಚಿಸದಿರಲು ಸಾಧ್ಯವೇ ಇಲ್ಲ. ಅಷ್ಟೊಂದು ಆಕರ್ಷಕ ವ್ಯಕ್ತಿತ್ವ ಹಾಗೂ ಮೈಮನ ನವಿರೇಳಿಸುವ ಕಾರ್ಯಗಳನ್ನು ಮಾಡಿದ್ದಾರೆ. ಹೆಣ್ಣು ಕೃಷಿಕನನ್ನು ಮದುವೆಯಾದಲ್ಲಿ ಹೆಚ್ಚೆಂದರೆ, ಗಂಡನಿಗೆ ರೊಟ್ಟಿ ಕೊಡಬಹುದು ಅಥವಾ ಕಳೆ ಕೀಳುವಲ್ಲಿ ಸಹಾಯ ಮಾಡಬಹುದಷ್ಟೆ. ಆದರೆ, ಬರಡು ಭೂಮಿಯನ್ನೂ ಅಚ್ಚ ಹಸುರಾಗಿ ನಿಲ್ಲಿಸಬಹುದು, ಲಕ್ಷಾಂತರ ಲಾಭ ತರುವಂತೆ ಕೃಷಿಯನ್ನು ಮಾಡುವುದೆಂದರೆ ಅದು ಕನಸಿನ ಮಾತೇ ಸರಿ. ಅದರಲ್ಲೂ ಪದವೀಧರೆಯಾಗಿದ್ದರೆ, ತೋಟದ ಕೆಲಸಗಳಿಂದ ತುಸು ದೂರು ಇರುತ್ತಾರೆ. ನಾಜೂಕು ಲಲನೆಯರು ಯಾವುದೇ ರೀತಿಯ  ಕಷ್ಟದ ಕೆಲಸಕ್ಕೆ ಕೈಹಾಕೋದಿಲ್ಲ. ಅವರಿಗೇನಿದ್ದರೂ ಅಡುಗೆ ಮನೆಯೇ ಪ್ರಪಂಚ.
ಆದರೆ, ಇವೆಲ್ಲವನ್ನೂ ಮೀರಿ ಸಾಧನೆ ಗೈದ ಸುನೀತಾ ಹುಟ್ಟಿದ್ದು ಬೆಟ್ಟಗುಟ್ಟಗಳ ನಾಡು ಶಿವಮೊಗ್ಗದಲ್ಲಿ. ಬೆಳೆದು, ತನ್ನ ಬಿಎ ಗ್ರ್ಯಾಜುಯೇಷನ್ ಸಹ ಅಲ್ಲಿಯೇ ಮುಗಿಸಿದರು. ಬಳಿಕ ಮಹಿಳೆಯರ ಸಹಜ ಪ್ರವೃತ್ತಿ ಹಾಗೂ ಮನೆಯವರ ಮಜರ್ಿಯಂತೆ ರಾಣೆಬೆನ್ನೂರು ತಾಲ್ಲೂಕಿನ ಮದೇನೂರು ಗ್ರಾಮದ ಶಂಕರೇಗೌಡ ಎಂಬುವವರೊಂದಿಗೆ ಹಸೆ ಮಣೆ ಏರಿದರು. ಪತಿರಾಯ ಕೂಡ ಬಿಎ ಪದವೀಧರ. ಆದರೆ, ಅವರಿಗೆ ಸಿನಿಮಾದಲ್ಲಿ ನಟಿಸುವ ವಿಚಿತ್ರ ಹುಚ್ಚು. ಗಾಂಧಿನಗರದಲ್ಲಿ ವಾಸ್ತವ್ಯ ಹೂಡಿ, ಬಳಿಕ ಅವಕಾಶ ದೊರಕದ ಕಾರಣ ಬಂದ ದಾರಿಗೆ ಸುಂಕವಿಲ್ಲವೆಂದು ಊರಿಗೆ ವಾಪಸಾದರು. ಬಳಿಕ ಸತಿಪತಿ ಇಬ್ಬರೂ ಕೃಷಿಯಲ್ಲಿ ತೊಡಗಿಕೊಂಡರು. ಅಲ್ಲಿಂದ ಪ್ರಾರಂಭವಾದ ಅವರ ಜೀವನ ಇಂದು ಇಡೀ ಊರಿಗೆ ಊರೇ ಹೊಗಳುವ ಹಂತಕ್ಕೆ ಬಂದು ನಿಂತಿದೆ.  ಇದಕ್ಕೆ ಅಂಕುರಾರ್ಪಣೆ ಆದದ್ದು ಸುನೀತಾ ಅವರಿಂದ.
ಪ್ರಾರಂಭದಲ್ಲಿ ಮಳೆ ಆಧಾರಿತ ಉತ್ತರ ಕನರ್ಾಟಕದ ಕೃಷಿಗೆ ಒಗ್ಗಿಕೊಳ್ಳಲು ಸ್ವಲ್ಪ ಕಷ್ಟವಾದರೂ ಬಳಿಕ ಅದನ್ನೇ ಸವಾಲಾಗಿ ಸ್ವೀಕರಿಸಿದ ಈ ದಂಪತಿ ಅದನ್ನೇ ಒಗ್ಗಿಸಿಕೊಂಡರು. ಪ್ರಥಮಾರ್ಧದಲ್ಲಿ ಸುನೀತಾ ಬೆಂಗಾಡು ತೋಟನೋಡಿದಾಗ ಇಲ್ಲಿ ಅಚ್ಚ ಹಸುರಾದ ಅಡಿಕೆ ತೋಟ ನಿಮರ್ಾಣವಾಗಬಹುದೆಂದು ಖುದ್ದು ಅವರೇ ಕನಸು ಮನಸ್ಸಿನಲ್ಲೂ ಯೋಚಿಸಿರಲಿಲ್ಲ. ಆದರೆ, ಮನಸ್ಸೊಂದಿದ್ದರೆ ವಿಧಿಯನ್ನೂ ಸ್ಲೇಟು ಲಿಖಿತ ಬರಹದಂತೆ ಬದಲಿಸಬಹುದು ಎನ್ನುವುದಕ್ಕೆ ಇವರೇ ತಾಜಾ ಉದಾಹರಣೆ.
ಸುನೀತಾ ಮೂಲತಃ ಕೃಷಿಕ ಕುಟುಂಬದಿಂದಲೇ ಬಂದಿದ್ದು, ಅವರು ವಿದ್ಯಾಥರ್ಿನಿಯಾಗಿರುವಾಗಲೇ ವಿದ್ಯಾಭ್ಯಾಸದ ಜತೆಗೆ ಅಡಿಕೆ ತೋಟದಲ್ಲಿ ತಮ್ಮ ಬಿಡುವಿನ ವೇಳೆಯಲ್ಲಿ ಕೆಲಸಮಾಡುತ್ತಿದ್ದರಂತೆ. ಹೀಗಾಗಿ ಕೃಷಿ ಅಂದರೆ ಇವರಿಗೆ ಅಚ್ಚುಮೆಚ್ಚು ಎಂದು ಖುಷಿ-ಖುಷಿಯಿಂದ ಹೇಳಿಕೊಂಡರು.

ಅಷ್ಟಕ್ಕೂ ಸಾಧಿಸಿದ್ದೇನು?
ಈ ಹಿಂದೆಯೂ ಕೃಷಿ ಕ್ಷೇತ್ರದಲ್ಲಿ ಸಾದನೆಗೈದ ಮಹಿಳೆಯರು ಹಲವು. ಹಾಗೇ ಅವರು ಮುಖ್ಯವಾಹಿನಿಗೆ ಬಂದು ಪ್ರಶಸ್ತಿಗೂ ಭಾಜನರಾಗಿದ್ದಾರೆ. ಆದರೆ, ವಿಪಯರ್ಾಸವೆಂದರೆ, ಸುನೀತಾರಂಥ ಅನೇಕ ಮಹಿಳೆಯರು ಇನ್ನೂ ಬೆಳಕಿಗೆ ಬಾರದೆ ಎಲೆಮರೆ ಕಾಯಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರು ಸಾಧಿಸಿದ್ದು ಅಷ್ಟಿಷ್ಟಲ್ಲ. ಆಲೋಚನೆಗೆ ಸಿಗದು, ಅಕ್ಷರಗಳಿಗೆ ಎಟುಕದು. ಸಾಮಾನ್ಯವಾಗಿ ಎಲ್ಲ ಇರುವೆಡೆ ಕೃಷಿ ಮಾಡುವುದೆಂದರೆ, `ಯಚ್ಚ(ಮಸಾಲೆ) ಕೊಟ್ರೆ ಹುಚ್ಚಿಯೂ ಅಡುಗೆ ಮಾಡಬಲ್ಲಳು' ಎಂಬ ಹೈದ್ರಾಬಾದ್ ಕನರ್ಾಟಕದ ಪ್ರತಿಷ್ಠಿತ ಗಾದೆಯಂತೆ. ಆದರೆ, ನೂರಾರು ಸಮಸ್ಯೆ ಸವಾಲುಗಳ ಮಧ್ಯೆ, ಹಲವಾರು ಅನಾನುಕೂಲಗಳ ನಡುವೆಯೇ ಕೃಷಿಗಿಳಿದು ಆಕಾಶಕ್ಕೆ ಎಟುಕುವಂಥ ಅಡಿಕೆ ಮರಗಳನ್ನು, ಜೌಷಧಿಗಿಡಗಳನ್ನು, ಗಿಡಮೂಲಿಕೆಗಳನ್ನು, ತರಕಾರಿ, ಹಣ್ಣುಹಂಪಲು, ತೆಂಗು, ಬಾಳೆ, ವೀಳ್ಯದೆಲೆ, ಮಿಶ್ರಬೆಳೆ, ಶ್ರೀಗಂಧ ಮುಂತಾದ ಬೆಳೆಗಳನ್ನು ಬೆಳೆಸುವುದೆಂದರೆ ಸಾಮಾನ್ಯದಾದುದ್ದೇನಲ್ಲ.
ತೋಟದ ಸುತ್ತ ಪಕ್ಷಿನೋಟ:
ಅಡಿಕೆ: ಈ ಹಿಂದೆನೆ ಹೇಳಿರುವಂತೆ ಇಲ್ಲಿ ಇವರು ಬೆಳೆಸಿರುವ ಪ್ರಮುಖ ಬೆಳೆ ಅಡಿಕೆ. ಸುಮಾರು  1100 ಅಡಿಕೆ ಮರಗಳನ್ನು ಬೆಳೆಸಿದ್ದು, ಈ ಹಿಂದಿನ ಇಳುವರಿಯಲ್ಲಿ ಅವರಿಗೆ 5 ಕೀಲೂ ಅಡಿಕೆ ಬಂದಿದೆಯಂತೆ. ಇದಕ್ಕೆ ಇವರು 15 ದಿನಕ್ಕೋಮ್ಮೆ ನೀರು ಕೊಡುತ್ತಾ ಬಂದಿದ್ದಾರೆ.
ತೆಂಗು: ಇಲ್ಲಿ 80 ತೆಂಗಿನಗಿಡಗಳನ್ನು ನೆಟ್ಟಿದ್ದಾರೆ, ಹಿಂದಿನ ವರ್ಷ ಸುಮಾರು 50 ಸಾವಿರ ಆದಾಯ ಬಂದಿದೆಯಂತೆ. ಈ ವರ್ಷವೂ ಬೆಳೆ ಚೆನ್ನಾಗಿದ್ದು, ಕಳೆದ ಬಾರಿಗಿಂತ ಉತ್ತಮ ಇಳುವರಿ ಬರಲಿದೆ ಎಂದು ಹರ್ಷದಿಂದ ನುಡಿದರು.
ಬಾಳೆಗಿಡ: ಅಡಿಕೆ ಮರಗಳ ಮಧ್ಯೆ ಏಲಕ್ಕಿ ಬಾಳೆಯನ್ನೂ ಬೆಳೆದಿದ್ದಾರೆ. ಸುಮಾರು ಒಂದು ಸಾವಿರ ಬಾಳೆ ಗಿಡಗಳಿವೆ. ಈ ಬಾಳೆಯನ್ನು ನಾಟಿಮಾಡಿ 10 ವರ್ಷ ಕಳೆದರೂ ಇಂದಿಗೂ ಅದೇ ಬೆಳೆದುಕೊಂಡುಬಂದಿದೆ. ಈ ಬಾಳೆಯಲ್ಲಿ ಅವರು ಯಾವುದೇ ರೀತಿಯ ಕೆಲಸ ಮಾಡಲ್ವಂತೆ. ಇಲ್ಲಿ ಒಣಗಿ ಬಿದ್ದ ಬಾಳೆ ಎಲೆಗಳೇ ಅದಕ್ಕೇ ಗೊಬ್ಬರ ಹಾಗೂ ಫಲವತ್ತಾದದ್ದು ಎನ್ನುತ್ತಾರೆ ಸುನೀತಾ.
ಕಾಳು ಮೆಣಸಿನ ಕಾಯಿ: 100 ಕಾಳು ಮೆಣಸಿನ ಬಳ್ಳಿ ಹಾಕಲಾಗಿದೆ. ಹಿಂದಿನ ವರ್ಷವಷ್ಟೇ ಇದರ ಇಳುವರಿ ಪ್ರಾರಂಭವಾಗಿದ್ದು, ಈ ಬಾರಿ ಕೇವಲ 1 ಕೆಜಿ (ಮೊದಲನೇ ಇಳುವರಿ) ದೊರೆತಿದೆ. ಅದೇ ರೀತಿಯಲ್ಲಿ ಒಂದು ಎಕರೆ ಭೂಮಿಯಲ್ಲಿ ಅಂಬುಎಲೆಯನ್ನು ಬೆಳೆಸಿದ್ದಾರೆ. ಇವರು ಎಲೆ ಬಳ್ಳಿಗೆ ಬೇರೆ ರೈತರು ತೆಗೆದುಕೊಳ್ಳುವಷ್ಟು ಕಾಳಜಿಯನ್ನು ತೆಗೆದುಕೊಂಡಿಲ್ಲ. ಈ ಬಳ್ಳಿ ತನ್ನಷ್ಟಕ್ಕೆ ತಾನೇ ಬೆಳೆದಿದೆ. ಆದರೂ ಈ ಎಲೆಯಿಂದ 50 ಸಾವಿರ ರೂ. ಲಾಭ ಬಂದಿರುವುದಾಗಿ ತಿಳಿಸಿದರು. ಇದೆಲ್ಲಕ್ಕೂ ಜೀವಂತ ಕಾವಲಾಗಿ ಸುಬಾಬುಲ್ ಗಿಡಗಳನ್ನು ಬೆಳೆಸಿದ್ದಾರೆ. ಇದೂ ಕೂಡ ಅಷ್ಟೆ. ಪ್ರತಿ ಎರಡು ವರ್ಷಕ್ಕೊಮ್ಮೆ ಇವುಗಳ ಕಟಾವು ಮಾಡಿ ದಾಂಡೇಲಿ ಕಾಖರ್ಾನೆಗೆ ಮಾರಾಟ ಮಾಡುತ್ತಾರೆ. ಇದರಿಂದ 4 ಲಕ್ಷ ಆದಾಯ ಬಂದಿರುವುದಾಗಿ ಹೇಳಿದರು. ಜತೆಗೆ ಶ್ರೀಗಂಧ ಕೂಡ ಬೆಳೆಸಲಾಗಿದೆ. ಆದರೆ, ಇದರಿಂದ ನಿರೀಕ್ಷತ ಲಾಭ ದೊರೆತಿಲ್ಲ ಎನ್ನುತ್ತಾರೆ ಶಂಕರೇಗೌಡ.
ಸಾಮಾನ್ಯವಾಗಿ ಇಂದಿನ ರೈತರು `ಅಗಸನಿಗೆ ನೀರಿನ ಬರ' ಎಂಬಂತೆ ಬೇರೆಯವರ ಕಡೆ ಆಹಾರಕ್ಕೆ ಬೇಕಾದ ತರಕಾರಿಯನ್ನು ಖರೀದಿಸುತ್ತಾರೆ. ಆದರೆ, ಈ ದಂಪತಿಗಳು ಮಾತ್ರ ದಿನನಿತ್ಯ ಅವಶ್ಯಕವಾದ (ಬದನೆ, ಹಾಗಲಕಾಯಿ, ಬೆಂಡೆ, ಹೀರೆಕಾಯಿ, ನುಗ್ಗಿ, ಕುಂಬಳ, ಮರಗೆಣಸು, ತೊಗರಿಬೆಳೆ) ಸೇರಿದಂತೆ ವಿವಿಧ ತರಕಾರಿಗಳನ್ನು ತಾವೇ ಬೆಳೆದು ಬಳಸುತ್ತಾರೆ. ಇಷ್ಟೇ ಅಲ್ಲದೇ ಸಾಂಬಾರು ಪದಾರ್ಥ(ಏಲಕ್ಕಿ, ಕಾಫಿ, ಚಕ್ಕೆ, ಅರಿಶಿಣ, ಕರಿಬೇವು ಇತ್ಯಾದಿ)ಗಳನ್ನು ಕೂಡ ಬೆಳಸುತ್ತಾರೆ. ಚಿಕ್ಕಪುಟ್ಟ ಕಾಯಿಲೆಗಳಿಗೆ ಮದ್ದಾಗಿ ಬಳಸಬಲ್ಲ ದೊಡ್ಡಪತ್ರೆ, ಶುಂಠಿ, ಪೇಪರ್ ಗಿಡ, ಬೆಳ್ಳುಳ್ಳಿ, ನಿಂಬೆ, ಚಕ್ರಮುನಿ ಹೀಗೆ ಹತ್ತು ಹಲವಾರು ಉಪಬೆಳೆಗಳನ್ನು ಬೆಳೆದಿದ್ದಾರೆ.
ಪಕ್ಕಾ ನಿಸರ್ಗವಾದಿಗಳು ಈ ದಂಪತಿಗಳು:
ಇವರು ಪಕ್ಕಾ ಪರಿಸರವಾದಿಗಳು. ನಿಸರ್ಗ ಹಾಳು ಮಾಡುವ ಯಾವುದೇ ವಸ್ತುವನ್ನು ಬಳಸೋದಿಲ್ಲ. ತೋಟಕ್ಕೆ ಹೋಗುವಾಗ ಗಾಡಿಯನ್ನೂ ಬಳಸದೆ ಸೈಕಲ್ ಅನ್ನು ಬಳಸುತ್ತಾರೆ. ಇದರಿಂದ ವ್ಯಾಯಾಮವಾಗುತ್ತದೆ ಹಾಗೂ ಆರೋಗ್ಯದಿಂದಿರಲು ಸಾಧ್ಯ. ಜತೆಗೆ ಪರಿಸರಕ್ಕೂ ಯಾವುದೇ ಹಾನಿಯಾಗುವುದಿಲ್ಲ ಎನ್ನುತ್ತಾರೆ ಸುನೀತಮ್ಮ.
ಪ್ಲಾಸ್ಟಿಕ್ ಬ್ಯಾಗ್ನಲ್ಲಿ ತಿಂದು ಬಿಸಾಡಿ ಓಡುವ ಜಮಾನಾ ಇದು. ಆದರೆ, ಇವರು ಮಾತ್ರ ಬಾಳೆ ಎಲೆ ಬಿಟ್ಟು ಬೇರೆ ಯಾವುದರಲ್ಲೂ ಆಹಾರ ಸೇವಿಸುವುದಿಲ್ಲ. ಅಷ್ಟೆ ಯಾಕೆ ಅಡುಗೆಗಾಗಿ ಬಳಸುವ ಪಾತ್ರೆ ಕೂಡ ಮಣ್ಣಿನದ್ದೇ ಆಗಿವೆ. ಬೆಳಗ್ಗೆ ಇವರು ಟಿಫನ್(ತಿಂಡಿ)ನಲ್ಲಿ ಕೇವಲ ಹಣ್ಣುಹಂಪಲು ಮತ್ತು ಗೆಡ್ಡೆಗೆಣಸುಗಳನ್ನೇ ತಿನ್ನುತ್ತಾರೆ.
ಎಲ್ಲದಕ್ಕಿಂತ ವಿಶೇಷವೆಂದರೆ, ಇವರು ಬೆಳೆ, ಗಿಡ ಹಾಗೂ ಮರಗಳಿಗೆ ಇಲ್ಲಿವರೆಗೂ ಯಾವುದೇ ರೀತಿಯ ಗೊಬ್ಬರವನ್ನು ಬಳಸಿಲ್ಲ. ಎರಡು ಎಳೆಹುಳು ತೊಟ್ಟಿಗಳನ್ನು ಕಟ್ಟಿಕೊಂಡಿದ್ದು, ಅದರ ಮೂಲಕ ನೈಸಗರ್ಿಕ ಗೊಬ್ಬರವನ್ನು ಉತ್ಪಾದಿಸಿ ಅದನ್ನು ಬೆಳೆಗಳಿಗೆ ಬೆಳೆಸುತ್ತಾರೆ.  ಒಂದು ಮೊಬೈಲ್ ಬಯೋಗ್ಯಾಸ್ ಅನ್ನು ಹೊಂದಿದ್ದಾರೆ.
ಒಂದು ಬೆಳೆಯನ್ನೇ ಬೆಳೆಸುವಲ್ಲಿ ನೆಲಕಚ್ಚುತ್ತಿರುವ ಈ ಕಾಲದಲ್ಲಿ ಪದವಿ ಮುಗಿಸಿ, ಅದೂ ತಾನು ಹೆಣ್ಣೆಂಬ ವಿಚಾರ ಬದಿಗೊತ್ತಿ ಯಾವ ಕೂಲಿ ಕಾಮರ್ಿಕರ ಸಹಾಯವಿಲ್ಲದೇ ಗಂಡನೊಂದಿಗೆ ಜತೆಗೂಡಿ ಸ್ವಬಲ ಹಾಗೂ ಆತ್ಮವಿಶ್ವಾಸದಿಂದ ಸುನೀತಾ ಸಾಧಿಸಿರುವುದು ವಿರಳಾತಿವಿರಳ. ಇಂಥವರನ್ನು ಮುಖ್ಯವಾಹಿನಿಗೆ ತಂದು ಸನ್ಮಾನಿಸಿ, ಪ್ರೋತ್ಸಾಹಿಸುವುದು ಸಕರ್ಾರ ಮಾತ್ರವಲ್ಲದೇ ಮಹಿಳಾ ಸಂಘಟನೆಗಳ ಆದ್ಯ ಕರ್ತವ್ಯ. ಹೀಗೆ ಮಾಡಿದ್ದಲ್ಲಿ ನಮ್ಮ ಸಮಾಜದಲ್ಲಿರುವ ಮಹಿಳೆಯರನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರೋತ್ಸಾಹಿಸಿದಂತಾಗುವುದಲ್ಲದೇ, ಮಹಿಳಾ ಸಶಕ್ತಿಕರಣಕ್ಕೆ ಬೃಹತ್ ನಾಂದಿಯಾಗಬಲ್ಲದು.
ಈ ಲೇಖನ ಒಂದು ಸಣ್ಣ ಪ್ರಯತ್ನ. ಇನ್ನೂ ಮಹಿಳಾ ಸಂಘಸಂಸ್ಥೆಗಳು ಜಾಗೃತಗೊಂಡಲ್ಲಿ ಈ ಲೇಖನ ಹಾಗೂ ಆ ಮಹಾತಾಯಿಯ ಶ್ರಮ ಸಾರ್ಥಕವಾದೀತು.
ಆತೀಶ್ ಬಿ. ಕೆ.
http://www.ekanasu.com/2011/12/blog-post_2212.html
 

Thursday, November 24, 2011

ಟ್ರಾಫಿಕ್ ಪ್ರಾಬ್ಲಂ

ನೀರಿಗಿಳಿಯದ ಹೊರತು ಆಳ ಅರ್ಥವಾದೀತೆ..?
ಯಾವುದೇ ಮೆಟ್ರೋಪಾಲಿಟನ್ ಹಾಗೂ ಕಾಸ್ಮಾಸಿಟಿಗಳಲ್ಲಿ `ಟ್ರಾಫಿಕ್' ಕಾಮನ್ ಫಿನಾಮಿನಾ, ಅಂಥದ್ರಲ್ಲಿ ಇದನ್ನು ಒಂದು ಸಮಸ್ಯೆ ಎಂದು ಹೇಳಲಾದೀತೆ..?
ಖಂಡಿತ ಎಂದು ಕೆಲವರ ವಾದ. ಇನ್ನು ಕೆಲವರು ಇದು ಸಾಮಾನ್ಯ ವಿಷಯ ಎಂದು ನುಂಗುತ್ತಾರೆ. ಮತ್ತೆ ಕೆಲವರು ಲಾವಾ(ಸಿಟ್ಟು) ಹೊರಹಾಕುತ್ತಾರೆ. ಬೆಂಗಳೂರಿನ ಟ್ರಾಫಿಕ್ ಕುರಿತು ಆಲೋಚಿಸುತ್ತಾ ಹೋದರೆ, ಇದು ನಮ್ಮ ರಾಷ್ಟ್ರದ ಜನಸಂಖ್ಯೆಯಷ್ಟೇ ವಿರಳ. ಹುಟ್ಟು ಬೆಳವಣಿಗೆ ಎರಡೂ ಕಾಮನ್... ಹುಟ್ಟಿಸಿದ ದೇವರು ಹುಲ್ಲಂತೂ ಮೇಯಿಸೋದಿಲ್ಲ ಎಂಬ ಖಾತ್ರಿ ನಮ್ಮೀ ಜನರಿಗೆ(ಸಮಜಾಯಿಷಿ ಎಂದರೂ ತಪ್ಪಾಗದು)!
ಯಾವುದೇ ಒಂದು ವಿಷಯ, ಅದನ್ನು ಸಮಸ್ಯೆ ಎಂದು ಕರೆಯಲಾಗದು. ಹಾಗೆಂದು ಕರೆಯಬೇಕಾದರೆ ಅದರಿಂದ ಕನಿಷ್ಠ ಪಕ್ಷ ಕೆಲವರಿಗೆ ತೊಂದರೆಯಾಗಬೇಕು. ಅಂದ್ರೆ ಟ್ರಾಫಿಕ್ ಎಂದಿಗೂ ಸಮಸ್ಯೆಯಲ್ಲ. ಅದು ನಾಲ್ಕು ಜನರಿಗೆ ತೊಂದರೆಯಾದಾಗ ಮಾತ್ರ ಸಮಸ್ಯೆಯ ರೂಪ ತಳೆಯುತ್ತದೆ. ಇದನ್ನು ಇನ್ನೊಂದು ಅರ್ಥದಲ್ಲಿ ಟ್ರಾಫಿಕ್ ನಿಯಮ ಪಾಲನೆಯಲ್ಲಿನ ವೈಫಲ್ಯ ಎಂದು ಕಡ್ಡಿ ಮುರಿದ ಹಾಗೆ ಹೇಳಬಹುದಲ್ಲವೆ?
ಮೊನ್ನೆ ರಾಜ್ಯದ ರಾಜಧಾನಿಯ ಪ್ರತಿಷ್ಠಿತ ರಿಚ್ಮಂಡ್ ಟೌನ್ ಹತ್ತಿರದ ರಸ್ತೆಯಲ್ಲಿ ಒಬ್ಬ ಟ್ರಾಫಿಕ್ ರೂಲ್ಸ್ ಮುರಿದು ಹೋಗುತ್ತಿದ್ದ, ಬಹುಶಃ ಅವನು ಬೆಂಗಳೂರಿಗೆ ಹೊಸಬ ಎನಿಸುತ್ತಿತ್ತು. ಅಷ್ಟರಲ್ಲೇ ಅದೆಲ್ಲಿಂದಲೋ ಟ್ರಾಫಿಕ್ ಪೊಲೀಸ್ ನುಸುಳಿಕೊಂಡು ಬಂದುದ್ದೇ ಹಣ ವಸೂಲು ಮಾಡಿದ. ಅದು ನಿಯಮದಡಿ ಇದ್ದಿದ್ರೆ, ಯಾವ ಸಮಸ್ಯೆನೂ ಇರ್ತಿರ್ಲಿಲ್ಲ. ಆದರೆ, ಅವನು ಜೋಬಲ್ಲಿರೋ ದುಡ್ಡೆಲ್ಲ ಕಿತ್ತುಕೊಂಡು ಅಲ್ಲಿಂದ ಅವನನ್ನು ಓಡಿಸಿದ ಪಾಪ ಆತ ಹಿಂದಿರುಗಿ ನೋಡದೆ ಪರಾರಿ ಆದ.
ಈ ಹಿಂದೆ ಹೇಳಿರುವಂತೆ ಒಬ್ಬ ವ್ಯಕ್ತಿಗೆ ಯಾವ ವಿಷಯಗಳ ಕುರಿತು ತೊಂದರೆಗಳಾಗುವುದಿಲ್ಲವೋ ಅಲ್ಲಿಯವರೆಗೂ ಅದು ಅವರ ದೃಷ್ಟಿಯಲ್ಲಿ ತೊಂದರೆಯಾಗಿ ಕಾಣಿಸುವುದಿಲ್ಲ. ಮೊನ್ನೆ ಅಂದ್ರೆ ಬರೋಬ್ಬರಿ ಒಂದು ತಿಂಗಳಾಗಿರಬಹುದು. ನೆರೆ ರಾಜ್ಯದ ಮುಖ್ಯಮಂತ್ರಿ ಜಯಲಲಿತಾ ಬೆಂಗಳೂರಿನ `ಪರಪ್ಪನ ಅಗ್ರಹಾರ' ಜೈಲಿಗೆ ವಿಚಾರಣೆ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದರು. ಆಗ ಇಡೀ ಹೊಸೂರು ರಸ್ತೆಯಲ್ಲೆಲ್ಲಾ ನೀರವ ಮೌನ. ಆಕಡೆ ಜನ ಈಕಡೆ ಹೋಗುವಂತಿಲ್ಲ, ಈಕಡೆಯಿಂದ ಆಕಡೆಗೆ ಹೋಗುವಂತಿಲ್ಲ. ಯಡಿಯೂರಪ್ಪ ಅವರನ್ನು ಬಂಧಿಸಿದಾಗಲೂ ಅದೇ ಕಿರಿಕಿರಿ. ಅಷ್ಟೇ ಯಾಕೆ ನಮ್ಮ ಶಾಸಕರು, ಸಚಿವರು, ಪೊಲೀಸ್ ಅಧಿಕಾರಿಗಳು ಯಾರೇ ಹೋಗಬೇಕಾದರೂ ರಸ್ತೆಯಲ್ಲಿ ಯಾರೂ ಓಡಾಡುವಂತಿಲ್ಲ. ಅವರ ವಾಹನ ಮುವ್ ಆಗುವವರೆಗೂ 144 ಜಾರಿ! ಥರ ಫಿಲ್ ಆಗುತ್ತೆ. ಪರಿಸ್ಥಿತಿ ಹೀಗಿರುವಾಗ ನಮ್ಮ ರಾಜಕೀಯ ವ್ಯಕ್ತಿಗಳಿಗೆ ಟ್ರಾಫಿಕ್ ಒಂದು ಸಮಸ್ಯೆಯಾಗಿ ಕಾಣಲು ಸಾಧ್ಯವೇ? ಅವರೂ ಒಂದು ವೇಳೆ ನಿಮ್ಹ್ಯಾನ್ಸ್, ಫೋರಂ, ಬನಶಂಕರಿ ಮತ್ತಿತರ ರೋಡ್ಗಳಲ್ಲಿ ಗಂಟೆಗಟ್ಟೆಲೆ ಸಾಲುಗಟ್ಟಿ ನಿಲ್ಲುವುದಾದರೆ ಟ್ರಾಫಿಕ್ ಪ್ರಾಬ್ಲಂ ಅಂದ್ರೆ ಏನು, ಜನಸಮಾನ್ಯರ ನೋವೇನು ಎಂದೆಲ್ಲಾ ಅರ್ಥವಾಗುತಿತ್ತು. ಆದರೆ, ನಮ್ಮ ರಾಷ್ಟ್ರದ ದೌಭರ್ಾಗ್ಯವೆಂದರೆ, ಒಬ್ಬ ವ್ಯಕ್ತಿ ನೋಟು ನೀಡಿ, ಓಟು ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಅವರು ಹಿಟ್ಲರ್ ಮಾದರಿಯಲ್ಲಿ ವತರ್ಿಸುತ್ತಾರೆ. ಅವರು ಜನಸಾಮಾನ್ಯರು ಅಡ್ಡಾಡುವಂತೆ ಅಡ್ಡಾಡುವ ಹಾಗಿಲ್ಲ. ತಿರುಗಾಡಲು ಗಾಡಿ, ಅದಕ್ಕೆ ಯಾವುದೇ ಟ್ರಾಫಿಕ್ ನಿರ್ಬಂಧಗಳಿಲ್ಲ. ಅದೇನೊ ಅಂತಾರಲ್ಲ `ಜಿಸ್ಕಿ ಲಾಠಿ ಉಸೀಕಿ ಭೈಂಸ್' ಹೀಗಿದೆ ನಮ್ಮ ಟ್ರಾಫಿಕ್ ನಿಯಮ. ಇವತ್ತು ಜನಸಾಮಾನ್ಯರಿಗೆ ಇರುವ ಕಾನೂನು ಟ್ರಾಫಿಕ್ ನಿಯಮಗಳು ಪೊಲೀಸರಿಗೆ ಹಾಗೂ ಪ್ರಭಾವಿ ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ!
ಹಲವು ಬಾರಿ ಗೂಟದ ಕಾರುಗಳು ಅತ್ತಿಂದಿತ್ತ ಚಲಿಸುತ್ತಿರುತ್ತವೆ. ಅವರೇನೋ ರೊಂಯ್.... ಎಂದು ಹೋಗುತ್ತಾರೆ. ಆದರೆ, ಕ್ಷಣ ತಡವಾದರೆ ಜೀವ ಜವರಾಯನ ಪಾಲಾಗುತ್ತೆ ಎಂದು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಅಂಬ್ಯೂಲೆನ್ಸ್ನಲ್ಲಿ ಚಿಕಿತ್ಸೆಗಾಗಿ ಹೋಗುವ ಜನರ ಬಗ್ಗೆ ಯಾರು ಯೋಚಿಸುತ್ತಾರೆ. ಒಂದು ವೇಳೆ ವ್ಯಕ್ತಿ ರಸ್ತೆ ಮಧ್ಯೆ ಕೊನೆಯುಸಿರೆಳೆದರೆ ಅಂಬ್ಯೂಲೆನ್ಸ್ನಲ್ಲಿರುವವರಿಗೆ ಕುತ್ತು. ಸಂಬಂಧಿಕರ ಆಕ್ರೋಶಕ್ಕೆ ಅವರೇ ತಾನೆ ಬಕ್ರಾ. ಇದೆಲ್ಲಾ ನಮ್ಮ ರಾಜಕೀಯ ವ್ಯಕ್ತಿಗಳಿಗೆ ಯಾಕೆ ತಿಳಿಯುತ್ತಿಲ್ಲ.
ಅವರು ಇಷ್ಟೊಂದು ಸ್ವಾಥರ್ಿಗಳಾದರೂ ಯಾಕಾದರು? ಇದಕ್ಕೆಲ್ಲ ಪರಿಹಾರವೇ ಇಲ್ವಾ? ಬಹುಶಃ ಇದಕ್ಕೆಲ್ಲಾ ಉತ್ತರ, ನಿರುತ್ತರ. ಈ ಕುರಿತು ದನಿ ಎತ್ತುವ ಹಾಗಿಲ್ಲ, ಒಂದು ವೇಳೆ ಎತ್ತಿದರೂ ಶಮರ್ಿಳಾಳಂತೆ ಉಪವಾಸವೇ ಇದ್ದು, ಹಣ್ಣುಗಾಯಿ ನೀರುಗಾಯಿ ಆಗಬೇಕಾಗುತ್ತದೆ. ಅಣ್ಣಾ ಹಜಾರೆ ಹಾಗೆ ಎಲ್ಲರಿಗೂ ಜಯ ದೊರಕಲ್ಲ. ಬಾಬಾ ರಾಮದೇವ್ ಹಾಗೇ ಪ್ರಚಾರವೂ ಸಿಗಲ್ಲ. ಇದೆಲ್ಲಾ ಆಲೋಚಿಸುವಾಗ ನಾವು ಸ್ವತಂತ್ರ್ಯರಾಗಿದ್ದೇವಾ ಅನ್ನುವ ಅನುಮಾನ ಆಗಂತುಕವಾಗಿ ಉದ್ಭವಿಸುತ್ತದೆ.
ಒಟ್ಟಲ್ಲಿ ನಮ್ಮ ರಾಷ್ಟ್ರದ ಪ್ರಜ್ಞಾವಂತ ಪ್ರಜೆಗಳೇ ನೀವೇ ಹೇಳಿ, ಇದಕ್ಕೆ ಮುಕ್ತಿನೇ ಇಲ್ವಾ? ಮತ್ತು ಟ್ರಾಫಿಕ್ ಎನ್ನುವ ಪೆಡಂಭೂತ ಜನಸಾಮಾನ್ಯರ ಪಾಲಿಗೆ ಮಾತ್ರ ಸಮಸ್ಯೆ. ಅದು ವಿಐಪಿಗಳಿಗೆ ಅನ್ವಯಿಸುವುದಿಲ್ಲ. ಹೀಗಾದಾಗ ಅದು ಬಗೆಹರಿಸುವ ಪ್ರಯತ್ನಕ್ಕೆ ಯಾರೂ ಇಳಿಯುವುದಿಲ್ಲ..
ನೀರಲ್ಲಿ ಇಳೀದಾಗ ತಾನೆ ಅದರ ಆಳ ಅರ್ಥ, ಉಸಿರುಗಟ್ಟುವ ಅನುಭವವಾಗೋದು.

ಪರಿಹಾರಗಳು:
ಟ್ರಾಫಿಕ್ ಸಮಸ್ಯೆಯೆನೋ ಓಕೆ ಆದರೆ, ಬೆಂಗಳೂರಿಗರಿಗೆ ಇದರಿಂದ ಮುಕ್ತಿಯೇ ಇಲ್ವಾ? ಇದರ ಸಲ್ಯೂಷನ್ ಆದ್ರೂ ಏನು? ಖಂಡಿತ ಇದೆ. ಆದರೆ, ಸಕರ್ಾರ ಹಾಗೂ ಆಡಳಿತಾರೂಢರು ಮನಸು ಮಾಡಬೇಕಷ್ಟೆ.
ಸಲಹೆಗಳು:
ಮರಗಳ ಮಾರಣ ಹೋಮವಾಗದಂತೆ ರಸ್ತೆ ಅಗಲೀಕರಣ ಹಾಗೂ ಅಂಡರ್ಗ್ರೌಂಡ್ಗಳ ನಿಮರ್ಾಣ.
ಜೌಟರ್ ರಿಂಗ್ರೋಡ್ ಮಾಡುವುದು. ಈಗಾಗಲೇ ಇರುವ ವತರ್ುಲ ರಸ್ತೆಯನ್ನು ಸಮರ್ಪಕವಾಗಿ ಬಳಸುವುದು.
ಸರಕು ತುಂಬಿದ ಭಾರಿ ವಾಹನಗಳು ಸಿಟಿ ಹೊರಗಡೆಯಿಂದ ಚಲಿಸಬೇಕು.
ಜೆಸಿ ರೋಡ್ನಿಂದ ಕಾಪರ್ೊರೇಷನ್ವರೆಗೆ ಫ್ಲೈಓವರ್ ನಿಮರ್ಿಸಬೇಕು.
ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ಪ್ರತ್ಯೇಕ ರಸ್ತೆ ನಿಮರ್ಾಣ ಹಾಗೂ ಕಟ್ಟುನಿಟ್ಟಾಗಿ ಬಳಸುವಂತೆ ಸೂಚನೆ ನೀಡುವುದು.
ಟ್ರಾಫಿಕ್ ನಿಯಮ ಪಾಲಿಸುವುದು.
ಮಾನೋ ರೈಲ್ ಆರಂಭಿಸುವುದು.
ಚರಂಡಿ ವ್ಯವಸ್ಥೆ ಹಾಗೂ ರಸ್ತೆಗಳ ಸುಧಾರಣೆ.
ಸಲ್ಯೂಷನ್ ಸಾರ್ವಜನಿಕರ ಮಾತಲ್ಲಿ...
ನಮ್ಮ ರಾಜಕಾರಣಿಗಳಲ್ಲಿ ದೂರ ದೃಷ್ಟಿಯ ಕೊರತೆಯಿಂದಾಗಿಯೇ ಟ್ರಾಫಿಕ್ ತೊಂದರೆ ಉಲ್ಭಣಿಸಿದೆ. ಕಾರಣ, ಈ ಹಿಂದೆಯೇ ಮೆಟ್ರೋ ಪ್ರಾರಂಭಿಸಬೇಕಿತ್ತು. ಆದರೆ, ಅವರಿಗೆ ಈಗ ಕಣ್ಣು ತೆರೆದಿದ್ದರಿಂದ ಇದೆಲ್ಲಾ ತೊಂದರೆಯಾಗುತ್ತಿದೆ. ಜತೆಗೆ ದಿನದಿಂದ ದಿನಕ್ಕೆ ಬೆಂಗಳೂರಂಥ ಸಿಟಿಗೆ ಸಾವಿರಾರು ಜನ ಉದ್ಯೋಗ ಅರಸಿ ವಲಸೆ ಬರುತ್ತಿದ್ದು, ಅವರು ತಮ್ಮ ಸ್ಥಳಗಳಲ್ಲಿಯೇ ಉದ್ಯೋಗ ಸಿಗುವಂತೆ ಮಾಡಿದ್ದಲ್ಲಿ ಸ್ವಲ್ಪ ಮಟ್ಟಗಾದರೂ ಜನಸಂಖ್ಯೆಯನ್ನು ತಗ್ಗಿಸಬಹುದು.
(ಹೆಸರು ಬೇಡ.)

ಇಡೀ ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿಯನ್ನು ಪ್ರಾರಂಭಿಸುವುದಕ್ಕಿಂತ ಯಾವುದಾದರೂ ಒಂದು ಕಡೆ ಕಾಮಗಾರಿ ಮುಗಿಸಿ, ಬಳಿಕ ಇನ್ನೊಂದು ಕಡೆ ಕಾಮಗಾರಿ ಪ್ರಾರಂಭಿಸಬೇಕಿತ್ತು. ಆಗ ಟ್ರಾಫಿಕ್ ಅನ್ನು ನಿಯಂತ್ರಿಸಬಹುದಾಗಿತ್ತು.
ಸುನಿಲ್ (ಗ್ರಂಥಪಾಲಕರು, ಆಕ್ಸ್ಫಡರ್್ ಕಾಲೇಜ್)

ಇಂದು ಬೆಂಗಳೂರಿನ ಪ್ರತಿ ಮನೆಯಲ್ಲೂ ತಲೆಗೊಂದರಂತೆ ಬೈಕ್ಗಳಿದ್ದು, ಇವುಗಳನ್ನು ಕಡಿಮೆಗೊಳಿಸಬೇಕು. ಇದು ಎಲ್ಲ ಕಡೆ ಸಮರ್ಪಕ ಬಿಎಂಟಿಸಿ ಬಸ್ ಸೌಲಭ್ಯ ದೊರಕಿಸಿಕೊಟ್ಟಾಗ ಮಾತ್ರ ಸಾಧ್ಯವಾಗಬಲ್ಲದು. ಇದಕ್ಕಾಗಿ ಪ್ರತಿ ನಿಮಿಷಕ್ಕೆ ಒಂದರಂತೆ ಬಸ್ ಸೌಲಭ್ಯವನ್ನು ಒದಗಿಸಬೇಕು. ಆಗ ಜನ ತಾವಾಗಿಯೇ ಬಸ್ ಸೌಲಭ್ಯ ಪಡೆದುಕೊಳ್ಳುತ್ತಾರೆ.
ಯೋಗೇಶ್ (ಸಾಫ್ಟ್ವೇರ್)

ಮಳೆ ಶುರುವಾದರೆ ಟ್ರಾಫಿಕ್ ಜಾಮ್ ಸಾಮಾನ್ಯ. ಹೀಗಾಗಿ, ಮಳೆಗಾಲಕ್ಕೂ ಮುನ್ನ ಚರಂಡಿ ಶುಚೀಕರಣಗೊಳಿಸುವುದು ಹಾಗೂ ಮಳೆಯ ನೀರು ರಸ್ತೆ ಮೇಲೆ ಶೇಖರಣೆಗೊಳ್ಳದಂತೆ ಪಯರ್ಾಯ ವ್ಯವಸ್ಥೆ ಮಾಡುವುದು.
ಸತ್ಯಶಂಕರ್ (ಡಿಸೈನರ್)
ಆತೀಶ್ ಬಿ. ಕನ್ನಾಳೆ 

Wednesday, October 26, 2011

ಪ್ರತಿಯೊಬ್ಬರೂ ಓದಲೇ ಬೇಕಾದ ಮನದಾಳದ ಮಾತು... ತಪ್ಪದೇ ಓದಿ ಪ್ಲzzz.


ಕಾಡತಾವ ನೆನಪು...
ಈ ಬಾರಿಯ ದೀಪಾವಳಿ ನನ್ ಪಾಲಿಗೆ ಬೆಳಿಕಿನ ಹಬ್ಬ ಅಲ್ಲ; ಬದಲಿಗೆ ತಮಸು ಆವರಿಸಕೊಂಡ ದಿಬ್ಬ! ರೂಮಿನ ಮೇಲೆ ನಿಂತು (ಬೆಂಗಳೂರು) ಆಕಾಶದ ಚುಕ್ಕೆ ಎಣಿಸುವ ಪ್ರಯತ್ನದಲ್ಲಿದ್ದೆ, ಅಷ್ಟರಲ್ಲೇ ಏನೆನೋ ಆಲೋಚನೆಗಳು ಆಗಂತುಕವಾಗಿ ಮನಸಿನ ಮೂಲೆಯಲ್ಲಿ ಉದ್ಭವಿಸುತ್ತಿದ್ದವು. ಕಳೆದ ಬಾರಿಯ ದೀಪಾವಳಿ ಕುರಿತು ಆಲೋಚಿಸುವಾಗ ಈ ಬಾರಿಯ ದೀಪಾವಳಿ ನನಗೆ ಮೂದಿಸುತಿತ್ತು. ಆಕಾಶಕ್ಕೆ ಸೊಂಯ್ ಎಂದು ಹಾರಿದ ಬಾಣಗಳು ಸೀದಾ ಬಂದು ನನ್ನ ಹೃದಯಕ್ಕೆ ಘಾಸಿಗೊಳಿಸುತ್ತಿದ್ದವು. ಹಾರುತ್ತಿದ್ದ ಪಟಾಕಿಗಳು ಅಂತರಾತ್ಮವನ್ನು ಕದಲಿಸುತ್ತಿದ್ದವು. ಹೀಗೆಲ್ಲಾ ನನಗಾಗಿದ್ದು ಇದೇ ಮೊದಲು.
ಈ ಹಿಂದೆ ನನಗೆ ಎಂದೂ ಹೀಗಾಗಿರಲಿಲ್ಲ. ದೀಪಾವಳಿ ಅಂದ್ರೆ ನನಗೆ ಅತೀ ಪ್ರೀತಿಯ ಹಬ್ಬ, ಎಲ್ಲ ಹಬ್ಬಗಳಿಗಿಂತ ನಾನು ಪ್ರೀತಿಸುವ ಹಾಗೂ ಇಷ್ಟಪಡುವ ಹಬ್ಬ. ಇದರೊಂದಿಗೆ ನನ್ನ ಅನೇಕ ಭಾವಚುಂಬಿ ಕನಸುಗಳು ತಳುಕುಹಾಕಿಕೊಂಡಿವೆ. ನನಗೆ ಈಗಲೂ ತುಂಬಾ ಚೆನ್ನಾಗಿ ನೆನಪಿದೆ. ಆ ದಿನ, ಅದನ್ನೂ ನಾನು ಸಾಯುವವರೆಗೂ ಮರೆಯಲು ಸಾಧ್ಯವೇ ಇಲ್ಲ. ಇದು ಮಾತ್ರ ಸ್ಪಟಿಕದಷ್ಟು ನಿಚ್ಚಳ, ಸ್ಪಷ್ಟ. ಅದು ಕೂಡ ದೀಪಾವಳಿಯ ದಿನವೇ ಆಗಿತ್ತು. ಆಗ ನಾನು ಬರೀ ಆರೇಳು ವರ್ಷದ ಪೋರ(ಬಾಲಕ). ಕಾಂಪೌಂಡ್ ಮೇಲೆ ಕುಳಿತು ನನ್ನ ಓಣೆಯಲ್ಲಿ ಪಟಾಕಿಹಾರಿಸುತ್ತಿದ್ದ ಬೇರೆಯವರನ್ನು ನೋಡುತ್ತಿದ್ದೆ. ಅವರು ಖುಷಿಯಿಂದ ಕುಟುಂಬದೊಂದಿಗೆ ಪಟಾಕಿ ಹಾರಿಸುತ್ತಿದ್ದರು. ನಾನೂ ಅವರಂತೆಯೇ ಬಾಣ-ಬಿರುಸುಗಳನ್ನು ಹಾರಿಸಬೇಕು, ಮನಃತುಂಬಿ ಕುಣಿದಾಡಬೇಕು, ಪಟಾಕಿಯ ಸದ್ದು ಒಳಗೆ ಹಾಸಿಗೆಯಲ್ಲಿ ಮಲಗಿದ್ದ ಅಣ್ಣ ಹಾಗೂ ಅಕ್ಕಳಿಗೆ ಎಬ್ಬಿಸಿ ಅಚ್ಚರಿಯನ್ನುಂಟುಮಾಡಬೇಕು ಎಂದು ಕುಳಿತಿದ್ದೆ. ಮುಂದೆ ನಾನೂ ವಿಭಿನ್ನಾವಿಭಿನ್ನ ಥರದ ಪಟಾಕಿಗಳನ್ನು ಹಾರಿಸುತ್ತಿರುವುದನ್ನು ಹೃದಯದಲ್ಲಿ ಧೆನಿಸಿಕೊಂಡೆ, ವ್ಹಾ...! ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು.. ಮತ್ತೆ ವಾಸ್ತವಕ್ಕೆ ಮರಳಿದೆ.
ಎಲ್ಲರೂ ಪಟಾಕಿ ಹೊಡೆದು ಮನೆಯೊಳಗೆ ತೆರಳಿದ್ದರು. ಆದರೆ, ನಾನು ಮಾತ್ರ ಅಪ್ಪನಿಗಾಗಿ ಕಾಯ್ತಾ ಕುಳಿತಿದ್ದೆ. ಬೆಳಗ್ಗೆ ನಾನು ಪಟಾಕಿ ಲಿಸ್ಟ ಮಾಡಿಕೊಟ್ಟಿದ್ದೆ, ಅಪ್ಪ ನನಗೆ ಆ ಎಲ್ಲಾ ಪಟಾಕಿಗಳನ್ನು ತರುವುದಾಗಿ ಪ್ರಾಮಿಸ್ ಮಾಡಿ ಹೋಗಿದ್ರು. ಆದ್ರೆ ರಾತ್ರಿ 10 ಗಂಟೆ ಆದರೂ ಅಪ್ಪನ ಸುಳಿವೇ ಇಲ್ಲ, ಒಳಗಡೆಯಿಂದ ಅಮ್ಮ ಕೂಗಿದಳು ಬಾರೋ ನಿಮ್ಮಪ್ಪ ಇವತ್ತೂ ಲೇಟೆ.. ಬಂದು ಊಟ ಮಾಡಿ ಮಲ್ಕೋ ಎಂದರು. ಅದರೆ ಮನಸಿನಲ್ಲಿ ಮಂಡಕ್ಕಿ ತಿನ್ನುತಿದ್ದ ನನ್ನ ಈ ಹಾಳು ವಾಂಛೆ ನಿದ್ದೆ ಮಆಡಲು ಬಿಟ್ಟೀತೆ.
ಆಯ್ತಮ್ಮ ಇನ್ನೇನು ಅಪ್ಪ ಬರ್ಬಹುದು ಎಂದು ಓಣೆಯ ರಸ್ತೆ ಕಡೆ ಕಣ್ಣು ಹಾಯಿಸಿದೆ. ಯಾರೂ ಇಲ್ಲ. ಕಣ್ಣು ರೆಪ್ಪೆ ಮುಚ್ಚುತಿದ್ದವು, ಆದರೂ ಪಟಾಕಿ ಹಾರಿಸಬೇಕೆಂಬ ನನ್ನ ಹೆಬ್ಬಯಕೆಯ ಎದುರು  ನಿದ್ದೆ ಯಾವ ಲೆಕ್ಕ ಹಾಗೇ ಕುಳಿತೆ. ಕೊನೆಗೂ ನಿರೀಕ್ಷೆ ಬಸಿರು ಹರಿದು ರಸ್ತೆಯ ಮೇಲೆ ಯಾರೋ ಬರುವ ಕರಿನೆರಳು ಕಣ್ಣಿಗೆ ಕಾಣಿಸಿತು. ಅದ್ಯಾರಿರಬಹುದೆಂದು ತದೇಕ ಚಿತ್ತದಿಂದ ನೋಡಿದೆ. ದೂರ ಕಡಿಮೆ ಆಗುತ್ತಾಹೋದಂತೆ, ಆಖತ್ರಿ ಆಯ್ತು ಅಪ್ಪಾನೇ ಬರ್ತಾ ಇದಾರೆ ಅಂತಾ, ಯುನೋ ಆ ನನಗೆ ಸ್ವರ್ಗ ಜಸ್ಟ್ ಮೂರೇ ಗೇಣು! ಕಾಂಪೌಂಡ್  ಎತ್ತರ ಗಮನಿಸದೇ ಹಾರಿ ರಸ್ತೆ ಮೇಲೆ ನಿಂತೆ.. ಆಶ್ಚರ್ಯ ಅಪ್ಪನ ಕೈಯಲ್ಲಿ ಯಾವ ಬಾಣ-ಬಿರುಸೂ ಇಲ್ಲ. ಸೈಕಲ್ನಿಂದ ಕೆಳಗಿಳಿದವರೇ ಅವರಿಗೆ ನಿಲ್ಲೋದಕ್ಕೂ ಆಗುತ್ತಿಲ್ಲ. ಅಮೇಲೆ ತಾನೆ ಗೊತ್ತಾಗಿದ್ದು, ಅಪ್ಪಾ ಅವತ್ತೂ ಸುರಾಧಿನರಾಗಿದ್ದರು. ನನ್ನ ಮೂರು ಗಂಟೆಯ ನಿರೀಕ್ಷೆ ಕಣ್ಣಾಲಿಯಲ್ಲಿ ನೀರಾಗಿ ಹರಿಯಲಾರಂಭಿಸಿತು. ಕಷ್ಟಪಟ್ಟು ಕಂಟ್ರೋಲ್ ಮಾಡಿಕೊಳ್ಳಲು ಯತ್ನಿಸಿದೆ, ಆಗಲಿಲ್ಲ. ಅಮ್ಮನೆಡೆಗೆ ಓಡಿ ಗಟ್ಟಿಯಾಗಿ ತಬ್ಬಿಕೊಂಡೆ, ಅಳಲಾರಂಭಿಸಿದೆ. ಅಮ್ಮ ಕೂಡ ಅಷ್ಟೆ ನನ್ನನ್ನು ತನ್ನ ಸೆರಗಿನಲ್ಲಿ ನನ್ನನ್ನು ಅವಿತುಕೊಂಡ ಸಂತೈಸಿದಳು. ಅಪ್ಪಾ ಒಳಗೆ ಬಂದವರೇ ಅಮ್ಮನಿಗೆ ಹೊಡೆಯಲಾರಂಭಿಸಿದರು. ಇದು ನಮ್ಮ ಮನೆಯಲ್ಲಿ ನಿತ್ಯ ಕಥೆ...
ಟ್ರಸ್ಟ್ ಮಿ ಫ್ರೆಂಡ್ಸ್ ಅವತ್ತು ಪಟಾಕಿ ತರಲು ಮರೆತಿದ್ದ ನಮ್ಮಪ್ಪ ಮುಂದೆ ನನ್ನ ಭವಿಷ್ಯಕ್ಕಾಗಿ ಅಷ್ಟೊಂದು ಕಷ್ಟ ಪಡಬಹುದು ಎಂದುಕೊಂಡಿರಲಿಲ್ಲ. ಅವರು ತನ್ನ ಎಲ್ಲ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ, ಅಷ್ಟೆ ಯಾಕೆ ತಮ್ಮ ಒಡಲಲ್ಲಿ ಅನೇಕ ಚಿಂತೆಗಳನ್ನು ತುಂಬಿಕೊಂಡು ನನಗೆ ಪಿಜಿ(ಪತ್ರಿಕೋದ್ಯಮ) ಓದಿಸಿದರು. ಅಂದಿನ ಅಪ್ಪನಿಗೂ ಇಂದಿನ ಅಪ್ಪನಿಗೂ ವ್ಯತ್ಯಾಸ ತಾಳೆ ಹಾಕುವುದಾದರೆ, ಕಣ್ರೆಪ್ಪೆ ಒದ್ದೆಯಾಗುತ್ತೆ. ಬಳಿಕ ನಾನೂ ಸ್ನಾತಕೋತ್ತರ ಮುಗಿಸಿ, ಸಂಯುಕ್ತ ಕನರ್ಾಟಕ ಬೆಂಗಳೂರು ಕಚೇರಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ, ಇವತ್ತಿಗೆ ನಾನು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಒಂದು ವರ್ಷ ಒಂದು ತಿಂಗಳು ಕಳೆದಿರಬಹುದು. ಅದೇ ರೀತಿ ನನ್ನ ಭವಿಷ್ಯಕ್ಕಾಗಿ ಬೆನ್ನೆಲುಬಾಗಿ, ಇಂಬಾಗಿ, ಕಸುವಾಗಿ, ಸ್ಫೂತರ್ಿಯ ಸೆಲೆಯಾಗಿ ನಿಂತಿದ್ದ ನಮ್ಮಪ್ಪ ನನ್ನನ್ನು ಬಿಟ್ಟು ಅಗಲಿ ಆರು ತಿಂಗಳುಗಳೇ ಕಳೆದಿವೆ. ಆದರೆ, ಅವರ ನೆನಪು ಮಾತ್ರ ಇನ್ನೂ ಹಸಿಹಸಿ, ಅಮ್ಮ ಕೂಡ ಅಷ್ಟೆ ಈ ದೀಪಾವಳಿಯಲ್ಲಿ ಯಾವುದೇ ಆಚರಣೆ ಮಾಡುತ್ತಿಲ್ಲ. ಮನೆಯಲ್ಲೆಲ್ಲಾ ಸೂತಕದ ಛಾಯೆ... ನಾನು ಈ ಸಲ ದೀಪಾವಳಿಗೆ ಮನೆಗೆ ಹೋಗಲಾಗಲಿಲ್ಲ. ಯಾಕೋ ಹೋಗಬೇಕೆಂದೂ ಎನಿಸುತಿಲ್ಲ. ಭಾವನೆಗಳು ಭಾರವಾಗಿ, ಕಣ್ಣಹನಿಗಳು ಬತ್ತಿಹೋಗಿವೆ ಎಂದೆನಿಸುತ್ತಿದೆ.
ಅದಕ್ಕೆ ಹೇಳಿದ್ದು, ಹೊರಗಡೆ ದೀಪಾವಳಿ ಆದರೆ ನನ್ನೊಡಲಲ್ಲಿ ದೀಪಗಳ ಹಾವಳಿ ಎಂದು..
ಫ್ರೆಂಡ್ಸ್ ಅಪ್ಪನನ್ನು ಎಂದೂ ಹೇಟ್ ಮಾಡಬೇಡಿ ಆದಷ್ಟು ದಿನ ಅವರೊಂದಿಗೆ ಖುಷಿಖುಷಿಯಿಂದ ಬದುಕಿ, ಈ ದೀಪಾವಳಿ ನಿಮ್ಮೆಲ್ಲರ ಬಾಳಲ್ಲಿ ಸುಖ, ನೆಮ್ಮದಿ, ಶಾಂತಿ ಹಾಗೂ ಬೆಳಕನ್ನು ತರಲಿ ಎನ್ನುವುದೇ ನನ್ನ ಹೆಬ್ಬಯಕೆ..


Saturday, October 22, 2011

ಇಲ್ಲ್ಲೂ ನೀನೆ ಎಲ್ಲೂ ನೀನೆ ಎಲ್ಲೆಲ್ಲೂ ನೀನೆ..

ಹೊಸ ಗಾನಾ ಬಜಾನಾ..
ಅಪಸ್ವರದ ಮಧ್ಯೆ ಮೆಟ್ರೋ ಮೋಡಿ..!
ಮೊನ್ನೆ ಬೆಂಗಳೂರಿಗರ ಖುಷಿಗೆ ಪಾರವೇ ಇರಲಿಲ್ಲ. ಅಂತೂ ಬಹುದಿನದ ಕನಸು ನನಸಾಯಿತು ಎಂಬ ಸಾರ್ಥಕತೆ ಜತೆಗೆ ದಕ್ಷಿಣ ಭಾರತದಲ್ಲಿಯೇ ಇದೇ ಮೊದಲು ಕನರ್ಾಟಕದಲ್ಲಿ ಮೆಟ್ರೋ ಟಿಸಿಲೊಡೆದು ಹಳಿಗಳ ಮೇಲೆ ರೊಂಯ್ ಗುಟ್ಟುತ್ತ ಹೋಗುವಾಗ ಎಲ್ಲರ ಕಣ್ಣಲ್ಲೂ ಧನ್ಯತೆಯ ಭಾವ.
ಹಲವು ವರ್ಷಗಳಿಂದ ಎಲ್ಲರ ಗಮನ ತನ್ನತ್ತ ಸೆಳೆದಿದ್ದ `ನಮ್ಮ ಮೆಟ್ರೋ'ಗೆ ಕೊನೆಗೂ ಉದ್ಘಾಟನೆಯ ಭಾಗ್ಯ ಲಭಿಸಿದೆ. ವಿಧಾನಸೌಧ ಹಾಗೂ ಪರಪ್ಪನ ಅಗ್ರಹಾರ ನಡುವಣ ಸಂಬಂಧ  ಗಟ್ಟಿಗೊಳ್ಳುತ್ತಿರುವ ಜತೆಜತೆಗೆ ಈ ಬೆಳವಣಿಗೆ ನಡೆಯಿತು. ತಾನೇ ಮೆಟ್ರೋ ಉದ್ಘಾಟನೆ ನೆರವೇರಿಸಬೇಕು ಎಂಬ ವಾಂಛೆಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡ್ಯೂರಪ್ಪ ಅವರ ಅನುಪಸ್ಥಿಯಲ್ಲಿಯೇ ಈ `ಐ-ಘಟನೆ' ನಡೆದು ಪರದೆಯತ್ತ ಸರಿಯಿತು. ಆಕಡೆ ಕಂಬಿಯ ಮೇಲೆ ಅಂಬೇಗಾಲಿಡುತ್ತಾ ಮೆಟ್ರೋ ಮುನ್ನೆದಿತ್ತು. ಈಕಡೆ ಕಂಬಿಯ ಹಿಂದೆ ಸಂಘಟನೆಯ ನಾಯಕ ಅಂಬ್ಯೂಲೆನ್ಸ್ನಿಂದ ಅಂಬ್ಯೂಲೆನ್ಸ್ಗೆ ಹಾರಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಹಾರುವ ಯತ್ನದಲ್ಲಿದ್ದರು. ಮತ್ತೊಂದು ಕಡೆ ಇವರ ಆಪ್ತರೆನಿಸಿಕೊಳ್ಳುವ ಭಾಜಪ ಸದಸ್ಯರು ಖುಷಿಯ ಕ್ಷಣಗಳನ್ನು ಮೆಟ್ರೋ ರೈಲಲ್ಲಿ ಕಳೆಯುತ್ತಿದ್ದರು. ಇನ್ನೊಂದೆಡೆ ಕೇಂದ್ರವನ್ನೇ ಕದಲಿಸಿದ ಸೆಡ್ಯೂರಪ್ಪ ಹತಾಷೆಯ ನಡುವೆ ತನ್ನ ಕ್ಷಣಗಳನ್ನು `ಗಾಂಧೀ ಭಯಾಗ್ರಫಿ'ಯ ಪುಟಗಳನ್ನು ಭಕ್ತಿಪೂರ್ವಕವಾಗಿ ಎಣಿಸುವ ಪ್ರಯತ್ನದಲ್ಲಿದ್ದರು.
ನಾನು ಈ ಹಿಂದೆ `ಖರಾಬ್ ಟೈಂ' ಅನ್ನೋದರ ಬಗ್ಗೆ ಕೇಳಿದ್ದೆ. ಆದರೆ, ಹೀಗೂ ಇರಬಹುದು ಎಂದೂ ಎಂದೆಂದೂ ಊಹಿಸಿರಲಿಲ್ಲ. ಒಂದು ಟೈಂನಲ್ಲಿ ಕುಬೇರರಂತೆ ಮೆರದ ಇವರೆಲ್ಲ ಹೀಗೂ ಜೈಲಲ್ಲಿ ಕಾಲ ಕಳೆಯುತ್ತಾರೆ ಎಂದೆನಿಸಿರಲಿಲ್ಲ. ಇದೆಲ್ಲ ನೋಡುವಾಗ `ಉಪ್ಪು ತಿಂದವರು ನೀರು ಕುಡಿಯಲೇಬೇಕು' ಎಂಬ ಮಾತು ನೆನಪಾಯ್ತು.
ಏನೇ ಇರ್ಲಿ, `ಹತ್ತರ ಜತೆ ಹನ್ನೊಂದು' ಎಂಬಂತೆ ಪರ ರಾಜ್ಯದ ಮುಖ್ಯಮಂತ್ರಿ ಸಹ ಕೇಂದ್ರ ಕಾರಾಗ್ರಹಕ್ಕೆ ಬಂದು ವಿಸಿಟ್ ಕೊಟ್ಟು ಹೋಗೋ ರೇಂಜಿಗೆ ನಮ್ಮ ಕನರ್ಾಟಕ ಕಾರಾಗೃಹಗಳು ಬಂದಿವೆ ಅಂದ್ರೆ ಒಂದೊಂದು ಸಾರಿ `ಡೌಟ್' ಸ್ಟಾಟರ್್ ಆಗುತ್ತೆ! ನಮ್ಮ ಕಾರಾಗೃಹದ ದ್ವಾರಗಳಿಗೆ ಇಷ್ಟೊಂದು ಕಸುವು ಬಂದುದ್ದಾದ್ರು ಎಲ್ಲಿಂದ? ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಿಗೆ ಇಷ್ಟೊಂದು ಆನೆಬಲ ಎಲ್ಲಿಂದ ಬಂತು. ಇದೆಲ್ಲಾ ಸಂತೋಷ ಹೆಡ್ಗೆ ಅವರು ನೀಡಿದ ಗಣಿ ವರದಿ ಬಳಿಕವೇ ಆದ ಪಾಸಿಟಿವ್ ಇಂಪೆಕ್ಟ್ ಅಲ್ವಾ..?
ಒಟ್ಟಲ್ಲಿ ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರಿಗೆ ನಂಬಿಕೆ ಉಲ್ಭಣಿಸಿದೆ. ಬೆಳಿಗ್ಗೆಯಿಂದ ರಾತ್ರಿವರಗೂ ಹಗರಣಗಳನ್ನು ನೋಡಿ ಜನ ಬೇಸತ್ತು ಹೋಗಿದ್ದರು. ರಾಜಕೀಯ ಎಂದರೆ, ವಾಕರಿಕೆ ಹುಟ್ಟಿಸುತಿತ್ತು. ಸಮ್ ಟೈಮ್ಸ್ ಅಂತು ನಾವು ಆರಿಸಿ ಕಳುಹಿದ ಜನನಾಯಕರು ಇವರೇನಾ ಎಂದೂ ಎನಿಸತೊಡಗಿತ್ತು. ಇವರು ಇಷ್ಟೊಂದು ಭ್ರಷ್ಟತೆಯಿಂದ ಮೆರೆದರೂ ಕಾನೂನು ದೇವತೆ ಮತ್ರ ಕನ್ಫ್ಯೂಷನ್ನಲ್ಲಿ ಏಕೆ ಕೂತಿದ್ದಾಳೆ ಎಂದೆನಿಸುತ್ತಿತ್ತು. ಇದರ ಫಲಶೃತಿ ಎಂಬಂತೆ ಅಣ್ಣಾಗಿರಿಯೂ ಆರಂಭವಾಯ್ತು. ಇದರಿಂದ ಯುವಶಕ್ತಿ ಒಗ್ಗಟ್ಟಿನಿಂದ, ಒಕ್ಕೊರಳಿನಿಂದ ಸಕರ್ಾರದ ಮೇಲೆ ಒತ್ತಡ ಹೇರಿತ್ತು. ಹೀಗೆ ಬೆಳಯುತ್ತಾ ಬಂದ ಕ್ರಾಂತಿಯ ಸೆಲೆ ವಿವಿಧ ರೂಪ ಪಡೆಯುತ್ತಾ ಇಂದು ಇಂಥ ಸ್ವರೂಪ ತಳೆದಿದೆ.
ಈ ಹಿಂದನಿಂದಲೂ ಪ್ರತಿಯೊನ್ನರೂ ಹೇಳುತ್ತಿದ್ದ ಸಾಮಾನ್ಯ ಮಾತಿನಂತೆ, ಕಾನೂನು ಶಿಕ್ಷಿಸುವುದು ಕೇವಲ ದುರ್ಬಲರನ್ನು ಎಂಬ ಮಾತು ಇಲ್ಲಿ ಸ್ವಲ್ಪ ಮಟ್ಟಿಗೆ ಸುಳ್ಳಾಗಿದೆ. ಇತ್ತೀಚೆಗೆ ಪ್ರಭಾವಿ ವ್ಯಕ್ತಿಗಳಿಗಾದ ಗತಿಯನ್ನು ನೋಡಿ ಜನರಿಗೆ ಕಾನೂನಿನ ಮೇಲಿದ್ದ ಅಪನಂಬಿಕೆಯ ಕಾಮರ್ೋಡ ಮಾಯವಾಗಿ ನಿರೀಕ್ಷೆಯ ಕಿರಣವೊಂದು ಟಿಸಿಲೊಡೆದಿದೆ. ಇದೆಲ್ಲಾ ಅಭಿವೃದ್ಧಿಯ ಪ್ರತೀಕವೇ ಅಥವಾ ಮಿಡಿಯಾ ಹಾಗೂ ರಾಜಕೀಯ ಪಕ್ಷಗಳ ಮಸಲತ್ತೇ ಎನ್ನುವ ವಿಷಯ ಇನ್ನು ಕೆಲವೇ ದಿನಗಳಲ್ಲಿ ಗೋಚರಿಸುವದರಲ್ಲಿ ಸಂದೇಹವಿಲ್ಲ.
ಮತ್ತಷ್ಟು ಗೋಮುಖವ್ಯಾಘ್ರರ ಸಾಚಾತನ ಬಯಲಿಗೆ ಬರಲಿದೆ.. ಇದೆಲ್ಲದರ ಹಿಂದೆ ಮಾಹಿತಿ ಹಕ್ಕು ಕಾಯ್ದೆ ಕಾರ್ಯವೈಖರಿಯನ್ನು ಎಂದೂ ಮರೆಯುವಂತಿಲ್ಲ.
ಆತೀಶ್ ಬಿ ಕೆ.

Friday, October 14, 2011

ಮುಂದೂ+ಭಯ=ಮುಂಭಯ

ಇತ್ತೀಚೆಗೆ ನಮ್ಮ ಸುತ್ತಲೂ ನಡೆಯುತ್ತಿರುವ ದಗಲ್ಬಾಜಿ ಸುತ್ತ ಒಂದು Reವೀವ್...

Thursday, October 13, 2011

ಲೈಫ್ ಇಸ್ ಮ್ಯಾಜಿಕ್ ಬಾಕ್ಸ್..!

ರಾ ದರ್ಬಾರು
ಕುಛ್ ಖಟ್ಟಾ; ಕುಛ್ ಮಿಠಾ..

ನಿಮಗೆ ಯಾವತ್ತಾದ್ರು ಯಾಕಾದ್ರು ದೊಡ್ಡವರಾದ್ವಪ್ಪಾ ಚಿಕ್ಕವರಿದ್ದಾಗೆ ಲೈಫ್ ಚೆನ್ನಾಗಿತ್ತು. ಒಂಥರಾ ಖುಷಿ ಇತ್ತು. (ಕುಛ್ ಖಟ್ಟಾ; ಕುಛ್ ಮಿಠಾ) ಎಂದೆನಿಸಿದೇನಾ?
ನನಗೆ ಮೊನ್ನೆ ಹಾಗೇ ಅನಿಸ್ತು! ಆಫಿಸ್ಗೆನೋ ರಜೆ ಇರ್ಲಿಲ್ಲಾ. ಆದ್ರು ಈ ಬಾರಿ ನಮ್ಮೂರಲ್ಲೇ ವಿಜಯದಶಮಿ ಆಚರಣೆ ಮಾಡ್ಬೇಕು ಅನ್ಕೊಂಡು ಹೊಗಿದ್ದೆ, ಆದ್ರೆ ಅಲ್ಲಿ ಆದದ್ದೇ ಬೇರೆ. ಪ್ರತಿ ವರ್ಷ ಇರುತ್ತಿದ್ದ ಖುಷಿ, ಉನ್ಮಾದ, ಭಾವೋದ್ವೇಗ ಹಾಗೂ ಚೈತನ್ಯ ಈ ಬಾರಿ ಕಾಣಲೇ ಇಲ್ಲ.
ಊರಲ್ಲಿದ್ದದ್ದು ಕೇವಲ ಒಂದೇ ಒಂದು ವಾರ. ಅದೆಲ್ಲಾ ಕಳೆದದ್ದು, ಮನೆಯಲ್ಲೇ ಹೊರತು ಎಲ್ಲಿಗೂ ಹೋಗೋದಕ್ಕೆ ಮನಸಾಗಲ್ಲಿಲ್ಲ. ತಿರುಗಾಡೋದಕ್ಕೆ ಸ್ನೇಹಿತರೂ ಊರಿಗೆ ಬಂದಿರಲಿಲ್ಲ. ಕಾರಣ ಅವರಿಗ್ಯಾರಿಗೂ ಲೀವ್ ಸಿಕ್ಕಿರಲಿಲ್ವಂತೆ. ಹೀಗಾಗಿ ಈ ಬಾರಿ ಮನೆಯೇ ಎನ್ನ ಪಾಲಿಗೆ ಮಂತ್ರಾಲಯವಾಗಿತ್ತು.
ಡಿಶ್ ಡಿಶುಮ್: ಅಮ್ಮ ಮಾಡಿದ್ದ ಚಕ್ಕಲಿ, ಕರಜಿಕಾಯಿ ಹಾಗೂ ಒಬ್ಬಟ್ಟು ಸೋ ಆನ್ ತಿಂದು ತಿನ್ನುತ್ತಲೇ ಕಾಲ ಕಳೆದೆ. ಹಾಗೇ ಬೋರ್ ಆದಾಗಂತೂ ಇದೇ ಅಲ್ಲಾ ಆ(3ಖ)ರ ಪೆಟ್ಟಿಗೆ! ಅದರ ಮುಂದೆ ಕಾಲ ಕಳೆದೆ, ಹಾಗೇ ಓದೊದಕ್ಕೆ ಏನೋ ಪುಸ್ತಕ ತಗೊಂಡುಹೋಗಿದ್ದೆ ಅಂತಾ ಬಚಾವಾದೆ. ಸೋ ಪುಸ್ತಕನೂ ಓದಿ ಮುಗಿಸೋದಕ್ಕಾಯಿತು.
ಬಟ್ ಈ ಹಿಂದೆಂದಿಗಿಂತ ಈ ಬಾರಿ ಮನೇಲಿ ಅದ್ರಲ್ಲೂ ಸ್ಪೆಷಲ್ಲಿ ಅಮ್ಮನ ಜತೆ ಸ್ವಲ್ಪ ಜಾಸ್ತಿನೇ ಸಮಯ ಕಳೆಯೋದಕ್ಕೆ ಅವಕಾಶ ಸಿಕ್ತು. ಬೆಂಗಳೂರು ಊಟ ತಿಂದು ಸಾಕಾಗಿತ್ತು, ವ್ಹಾ ಅಮ್ಮನ ಕೈ ಊಟ ನೆನೆಸಿಕೊಂಡರೆ ಈಗಲೂ ಬಾಯಲ್ಲಿ ನೀರು ಬರುತ್ತೆ. ಒಂಥರಾ ಖುಷಿಯಲ್ಲಿ ಮನಸು ತೇಲಾಡುತ್ತೆ. ಅದ್ರಲ್ಲೂ ಜೋಳದ ರೊಟ್ಟಿ, ಶೇಂಗಾ ಚಟ್ನಿ ತಿನ್ನದೇ ತುಂಬಾನೇ ದಿನಗಳು ಕಳೆದಿದ್ವು. ಹಬ್ಬ ಇತ್ತು ಹೀಗಾ ರೊಟ್ಟಿ ಏನೂ ತಿನ್ನಕ್ಕಾಗಲಿಲ್ಲ. ಆದರೆ, ಹಬ್ಬದ ಮರುದಿನದಿಂದಂತೂ ರೊಟ್ಟಿಯದ್ದೇ ಪಾರುಪತ್ಯ.
ಮೊನ್ನೆ ಅಂದ್ರೆ ಸಂಡೇ ಮತ್ತೆ ಬೆಂಗಳೂರಿಗೆ ಬಂದಿದ್ದೀನಿ, ಲೆಟ್ಸ್ ಮತ್ತೆ ಅದೇ ಹೋರಾಟ, ಅದೇ ಬದುಕು ನಡೀತಾ ಇದೆ. ಬಹುಶಃ ದೀಪಾವಳಿಗೆ ಊರಿಗೆ ಹೋಗೋದಕ್ಕಾಗಲ್ಲ ಅನಸುತ್ತೆ. ಏನೆ ಇರಲಿ ಈ ಬಾರಿ ಮನೇಲಿ ಕಳೆದ ಟೈಮ್ ಮರೆಯಲಾಗದು.. ಅಮ್ಮನನ್ನು ಮಾತ್ರ ತುಂಬಾ ಮಿಸ್ ಮಾಡ್ಕೋತಿನಿ.. ಫ್ರೆಂಡ್ಸ್ ನಿಮ್ದು ಅದೇ ಕಥೆ ಅನ್ಕೋತಿನಿ.. ಇಸ್ ಇಟ್?

Thursday, September 29, 2011


ಮಾರ್ಕೆಟಿಂಗ್ ಮಾತು:
ವಿಶೇಷವಾಗಿ ಮಹಿಳಾ ಧೂಮಪಾನಿಗಳ ಸಂಖ್ಯೆ `ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ'ಗಳಲ್ಲಿ ಮಾತ್ರ ಹೆಚ್ಚುತ್ತಿದೆ ಎಂದು ಆಧುನಿಕ ಸಂಶೋಧನೆ ಹೇಳಿದೆ. ಈ ನಿಟ್ಟಿನಲ್ಲಿ ಮಾರುಕಟ್ಟೆಗಳು ತಂಬಾಕು ಉತ್ಪನ್ನಗಳ ಮಾರಾಟಕ್ಕಾಗಿ ಮಹಿಳೆಯರ ಕಡೆಗೆ ವಿಶೇಷವಾಗಿ ಗಮನಹರಿಸಿವೆ. ಇದಕ್ಕಾಗಿ ವಿಶೇಷ ಜಾಹಿರಾತು, ಇತ್ತೀಚಿನ ಪೀಳಿಗೆಗಳ ಚಿತ್ತ ತನ್ನತ್ತ ಸೆಳೆದುಕೊಳ್ಳಲು ಅವಶ್ಯವಾಗಿರುವ ಎಲ್ಲಾ ಹೈಟೆಕ್ ಹೆಜ್ಜೆಗಳನ್ನು ತಂಬಾಕು ಕಂಪೆನಿಗಳು ತೆಗೆದುಕೊಳ್ಳಲಾಗುತ್ತಿದೆ.


ದಂ ಮಾರೆ ದಂ...
ಮದಿರೆವಾಸಿ ಮಾನನಿಯರು

ಆಗ ತಾನೆ ಕಚೇರಿ ಕಾರುಬಾರು ಮುಗಿಸಿ ಬೆಂಗಳೂರಿನ ಪ್ರತಿಷ್ಟಿತ ರೆಸಿಡೆನ್ಸಿ ರಸ್ತೆಯಿಂದ ಮನೆಗೆ ಹೋಗುತ್ತಿದ್ದೆ. ಐ ಥಿಂಕ್ ಅದು ರಾತ್ರಿ 2 ಗಂಟೆ ಸಮಯ. ದಿನದಲ್ಲಿ ರೋಡ್ ಕ್ರಾಸ್ ಮಾಡೋದಕ್ಕೆ ಕನಿಷ್ಠ 15-20 ನಿಮಿಷ ಅವಶ್ಯವಾಗಿ ಬೇಕೆ ಬೇಕು.  ಆದರೆ, ಆ ಹೊತ್ತಲ್ಲಿ ಬರೀ ಬೀದಿನಾಯಿಗಳ ಕೂಗಾಟ ಹಾಗೂ ಸ್ಟ್ರೀಟ್ ಲ್ಯಾಂಪ್ ಬಿಟ್ರೆ ಬೇರೆ ಏನೂ ಇಲ್ಲ. ಅಂಥ ನಿಶಾಚರ ಮೌನದ ಮಧ್ಯೆ ಇಬ್ಬರು 24-25 ವಯೋಮಾನದ ಆಸುಪಾಸಿನ ಯುವತಿಯರು ಯಾವುದೇ ಭಯವಿಲ್ಲದೆ ಹೋಗುತ್ತಿದ್ದರು. ಅವರನ್ನು ನೋಡಿದ್ದೇ ಅಚ್ಚರಿಯೇನೋ ಆಯ್ತು. ಜತೆಗೆ ಪುಂಖಾನುಪುಂಖವಾಗಿ ಪ್ರಶ್ನೆಗಳು ಏಳುತ್ತಿದ್ದವು...
ಆ ಹೊತ್ತಿಲ್ಲದ ಹೊತ್ತಲ್ಲಿ ಹುಡುಗಿಯರಿಬ್ಬರು ಅಂಡೆಪಿಕರ್ಿಗಳಂತೆ ಅಡ್ಡಾಡುತ್ತಿದದ್ದನ್ನು ನೋಡಿದ್ದೇ, "ಎಂದು ಯುವತಿಯರು ಮಧ್ಯೆ ರಾತ್ರಿಯಲ್ಲಿ ಯಾವ ಸಮಸ್ಯೆ ಇಲ್ಲದೆ ಸಲೀಸಾಗಿ ಓಡಾಡುವಂತಾಗುತ್ತಾರೋ; ಅಂದು ನಮ್ಮ ರಾಷ್ಟ್ರ ನಿಜವಾಗಿಯೂ ಸ್ವತಂತ್ರ್ಯ ಹೊಂದಿದೆ ಎಂದರ್ಥ" ಎಂಬ ರಾಷ್ಟ್ರಪಿತರ ಮಾತು ನೆನಪಾಯ್ತು.
ಸ್ಟ್ರಿಟ್ ಲ್ಯಾಂಪ್ನ ಬೆಳಕಲ್ಲಿ ನಾನೂ ಅಲ್ಲೇ ಫುಟ್ಪಾತ್ ಮೇಲೆ ನಿಂತಿದ್ದ ಟೀ ಕುಡಿಯಲು ನಿಂತುಕೊಂಡೆ. ಅಷ್ಟ್ಟರಲ್ಲೇ ಅವರೂ ಆ ಕಡೆಗೆ ಬಂದು ನಿಂತರು. ಆಶ್ಚರ್ಯ ಅವರ ಕೈಯಲ್ಲಿ ರದ್ದಿಯಲ್ಲಿ ಸುತ್ತಿದ್ದ ಬಾಟಲ್ಗಳಿದ್ದವು. ಸಿಗಾರ್ ತೆಗೆದು ಸೇದಲಾರಂಭಿಸಿದರು. ಜತೆಗೆ ಕೈಯಲ್ಲಿದ್ದ ಬಾಟಲ್ಗಳನ್ನು ಓಪನ್ ಮಾಡಿ ಸಿನಿಮೀಯ ರೀತಿಯಲ್ಲಿ ನಿರರ್ಗಳವಾಗಿ ಬಾಟಲಿಬ್ರಹ್ಮನನ್ನು ಗಂಟಲಿಗಿಳಿಸಿ, ಸುರಾಧೀನರಾದರು.
ಆಗ ಯಾವ ರಾಷ್ಟ್ರಪಿತರ ಮಾತು ಕಿವಿಯಲ್ಲಿ ರೊಂಯ್.. ಎಂದು ಹೋಗ್ತಾ ಇತ್ತೋ ಅದರ ಬದಲು, ಯಾಕೋ ಸ್ವಲ್ಪ ಜಾಸ್ತಿನೇ ಸ್ವಾತಂತ್ರ್ಯ ಸಿಕ್ಕಿದೆ ಎಂದೆನಿಸುತ್ತಿತ್ತು. ಹೋಗ್ಲಿ ಊರು ಉಸಾಬರಿ ನನಗ್ಯಾಕೆ ಎಂದು ಸುಮ್ಮನಾದೆ. ಕೈಯಲ್ಲಿದ್ದ ಟೀ ಹೀರಿ, ಮನೆ ಕಡೆ ಕಾಲು ಕಿತ್ತಿದೆ. ಮನೆ ಏನೋ ರೀಚ್ ಆದೆ. ಆದ್ರೆ ಆ ದೃಶ್ಯ ಮಾತ್ರ ಮನಸೆಂಬ ಪ್ರಾಜೆಕ್ಟರ್ನಿಂದ ಸರಿಯುತ್ತಿಲ್ಲ. ಮತ್ತೆ-ಮತ್ತೆ ಆಗಂತುಕವಾಗಿ ಅದೇ ಆಲೋಚನೆ, ಛೇ ಇದೇನು ಎಂಥಾ ಪರಿಸ್ಥಿತಿ ಬಂತಲ್ಲ.. ಹೀಗೆ ಸೋ ಆನ್...
ಮಹಿಳೆ ದಾರಿದೀಪ:
ಕನ್ನಡದಲ್ಲಿ ಒಂದು ಪ್ರತಿಷ್ಠಿತ ಗಾದೆ ಇದೆ. ಅದರ ತಾತ್ಪರ್ಯ ಇಷ್ಟೆ; ರಕ್ಷಿಸಿ, ಉಳಿಸಿ ಬೆಳೆಸಬೇಕಾದವರೇ ಭಕ್ಷಕರಾದರೆ ಸಮಾಜದ ಸ್ವಾಸ್ಥ್ಯವನ್ನು ಕಾಯುವುದು ಕನಸಿನ ಮಾತೇ ಸರಿ. ಗಾದೆಯ ಪುನರ್ಮನನದ ಮೂಲ ಉದ್ದೇಶವೆಂದರೆ, ನಮ್ಮ ಹಿಂದೂಸ್ಥಾನದಲ್ಲಿ ಹಿಂದಿನಿಂದಲೂ ಮಹಿಳೆಯರಿಗೆ ಉನ್ನತ ಸ್ಥಾನ ನೀಡಲಾಗಿದೆ. ಸ್ತ್ರೀ ಮಾತೆ, ಮಮತೆಯ ಸಪ್ರತೀಕ, ಕುಟುಂಬವನ್ನು ಸರಿದಾರಿಗೆ ತರಬಲ್ಲವಳು ಹೀಗೆ ಹತ್ತು ಹಲವಾರು ರೀತಿಯಲ್ಲಿ ಹೊಗಳಿ ಉಪ್ಪರಿಗೆ ಮೇಲೆ ಕೂಡಿಸಲಾಗಿದೆ. ಅಷ್ಟೇ ಯಾಕೆ ಈಗಲೂ ಶಿಕ್ಷಣದ ವಿಚಾರಕ್ಕೆ ಬಂದಾಗ ಮಹಿಳೆಯೊಬ್ಬಳು ಕಲಿತರೇ ಇಡೀ ಕುಟುಂಬವೇ ಕಲಿತಂತೆ ಎಂಬ ಅತಿಶಯೋಕ್ತಿ ಅವಳ ಸುತ್ತ ಗಿರಕಿ ಹೊಡಿಯುತ್ತಲೇ ಇವೆ.
ಮಹಿಳೆಯ ಮರ್ಮದ ಕುರಿತು ಹೇಳಲಾಗದು. ಇತಿಹಾಸದ ಪುಟಗಳನ್ನು ಕಲಕಿದಾಗ ಹೊರಬೀಳುವ ಸತ್ಯಾಂಶ ಕೂಡ ಇದೇ ಆಗಿದೆ. ಅನೇಕ ಮಹಾನ್ ಪುರುಷರ ಹೆಸರುಗಳು ಸುವರ್ಣ ಅಕ್ಷರಗಳಲ್ಲಿ ಬರೆಯಲ್ಪಡಬೇಕಾದರೆ ಅಲ್ಲಿ ಮಹಿಳೆ ಪಾತ್ರ ಅನನ್ಯ. ಅದು ತಾಯಿಯ ರೂಪದಲ್ಲಾಗಿರಬಹುದು ಅಥವಾ ಹೆಂಡತಿ ಮತ್ತ್ಯಾವುದೋ ರೀತಿಯಲ್ಲಿ ಅವಳು ಸಾಧಿಸಲಾರದ್ದನ್ನು ಸಾಧಿಸಿದ್ದಾಳೆ. ಅದಕ್ಕಾಗಿಯೇ ಅಬ್ದುಲ್ ಕಲಾಂ ತಮ್ಮ `ಅಗ್ನಿಯ ರೆಕ್ಕಗಳು' ಪುಸ್ತಕದ ಪ್ರಿಫೇಸ್ನಲ್ಲೇ ಪದಗಳ ವರ್ಣವೆಗೆ ಸಿಗದ ತಾಯಿಯ ಕುರಿತು ಬರೆದಿದ್ದಾರೆ.
 ಅದಕ್ಕಾಗಿಯೇ ಹೆಣ್ಣು ಒಲಿದರೇ ನಾರಿ, ಮುನಿದರೆ ಮಾರಿ ಎಂದೂ ಹೇಳಲಾಗುತ್ತದೆ. ಅದಕ್ಕೆ ಹಲವು ನಿದರ್ಶನಗಳೂ ಇವೆ. ಆದರೆ, ಇಂದು ಇಂಥ ಮಹಿಳೆ ಯಾವ ಸ್ಟೆಟಸ್ಗೆ ಬಂದಿಳಿದಿದ್ದಾಳೆ ಎಂದರೆ, ಬೀದಿ ಪಕ್ಕದಲ್ಲಿ ಬಿಯರ್ ಬಾಟಲ್ ಹಿಡಿದು, `ದಂ' ಹೊಡಿಯುತ್ತಾ ಮಹಿಳಾ ಸಹಜ ಎಲ್ಲ ಗುಣಗಳನ್ನು ಗಾಳಿಗೆ ತೂರಿ, ಮಾನವನ್ನು ಮೂರು ಕಾಸಿಗೆ ಹರಾಜು ಮಾಡುತ್ತಿದ್ದಾಳೆ ಎಂದರೂ ತಪ್ಪಾಗಲಾರದು.
ಹಿಂದಿನ ಅಂಕಿಅಂಶಗಳ ಕಡೆ ಮೆಲುಕು ಹಾಕುವುದಾರೆ, 2008ರಲ್ಲಿ ಶೇ. 18.3 ಮಹಿಳೆಯರು ಧೂಮಪಾನದ ಸೇವಿಸುತ್ತಿದ್ದರು. ಅದೇ ರೀತಿ ಬೇರೆ ರಾಷ್ಟ್ರಗಳಾದ ಅಜರ್ೆಂಟಿನಾದಲ್ಲಿ ಶೇ.22.6 ಹಾಗೂ ಉರುಗ್ವೆಯಲ್ಲಿ ಶೇ. 25.1ರದಷ್ಟು ಮಹಿಳೆಯರು ಸ್ಮೋಕ್ ಮಾಡುತ್ತಾರೆ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ. ಇದೇ ರೀತಿ ಮುಂದುವರೆದರೆ, 2025ರ ವೇಳೆಗೆ ಮಹಿಳಾ ಧೂಮಪಾನಿಗಳ ಸಂಖ್ಯೆಯಲ್ಲಿ ಶೇ. 20ರಷ್ಟು ಹೆಚ್ಚಳವಾಗಲಿದೆ ಎಂದು ಒಂದು ಸಂಶೋಧನೆ ಹೇಳುತ್ತದೆ.
ಅದೆಲ್ಲಾ ಬೇರೆ ವಿಚಾರ. ಆದರೆ, ನೈತಿಕತೆಯ ಗರಡಿಗೆ ಬಂದಲ್ಲಿ ಧೂಮಪಾನ ಸೇವನೆ ಎಂದರೆ ಅದು ಪಾಪ ಪ್ರಜ್ಞೆ ಎನ್ನುವಷ್ಟು ಉನ್ನತ ಆದರ್ಶವುಳ್ಳ ರಾಷ್ಟ್ರ ನಮ್ಮದು. ಇಂಥ ಪವಿತ್ರ ಭೂಮಿಯಲ್ಲಿ ಕಾಲ್ ಸೆಂಟರ್ನಲ್ಲಿ ರಾತ್ರಿ ಇಡೀ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ. ಹೀಗಾಗಿ ಮೈಂಡ್ ರಿಲ್ಯಾಕ್ಸೇಷನ್ ಎಂಬ ಕಾರಣವೊಡ್ಡಿ, ಈ ರೀತಿ ನೈತಿಕತೆಯನ್ನು ಅಧಃಪತನಗೊಳಿಸುವುದು ಯಾವ ಸೀಮೆ ನ್ಯಾಯ ಸ್ವಾಮಿ..?
ಒಟ್ಟಲ್ಲಿ ವಿದೇಶಿ ಸಂಸ್ಕೃತಿಯ ಆಗಮನದಿಂದ ನಾವು ಇಲ್ಲಿಯವರೆಗೂ ಉಳಿಸಿ ಬೆಳೆಸಿಕೊಂಡು ಬಂದಿರುವ ಸಂಸ್ಕೃತಿ ಹೊಳೆಯಲ್ಲಿ ಹಣಸೆ ಹಣ್ಣು ತೊಳೆದಂತೆ ಎಂಬಂತಾಗಿದೆ. ಇದರ ರಕ್ಷಣೆಗಾಗಿ ಮಹಿಳೆಯರೇ ಮನಸು ಮಾಡಬೇಕಷ್ಟೆ, ಬೆಂಗಳೂರಂಥ ಮೆಟ್ರೋ ಪಾಲಿಟಿಯನ್ ಸಿಟಿಗಳಲ್ಲಿ ಸ್ಮೋಕ್ ಮಾಡದಿರುವದೆಂದರೆ, ಅವರು ಒಂಥರಾ ಸಂಸ್ಕೃತಿಕರಣವಾಗದ ಗುಗ್ಗು ಎಂದು ಭಾವಿಸಲಾಗುತ್ತದೆ. ಇದಕ್ಕಾದರೂ ಬಗ್ಗಿ ಫ್ಯಾಷನ್ಗೊಸ್ಕರ ಮಾಮನಿ ಮದಿರೆಯ ಪಾಲಾಗುತ್ತಾಳೆ. ಮುಂದಾಗುವುದೆಲ್ಲಾ ಗೊತ್ತೇ ಇದೆ. ನೀವೆ ಹೇಳಿ ಇಂತಹರಿಂದ ಮುಂದೆ ಅವರು ಮಕ್ಕಳು ಏನನ್ನಾದರೂ ಸಮಾಜದ ಉದ್ಧಾರಕ್ಕಾಗಿ ಏನಾದರೂ ಮಾಡುತ್ತಾರೆ ಎನ್ನುವುದು ಪಳಗದ ಸಲಗವನ್ನು ನಂಬುವ ಮುಗ್ಧತನವೇ ಸರಿ. ಅಲ್ವಾ..?
http://www.ekanasu.com/2012/01/blog-post_01.html




ಹೀಗೊಂದು `ನೀರು+ಧಾರ=ನಿರ್ಧಾರ'
ತುಂಬಾ ಚೆನ್ನಾಗಿ ನೆನಪಿದೆ, ಬರೋಬ್ಬರಿ ಆರು ತಿಂಗಳು ಕಳೆದಿರಬಹುದು ಅನ್ಸುತ್ತೆ. ನಾನು ನನ್ನ ಬ್ಲಾಗ್ ಅನ್ನು ಬಳಕೆ ಮಾಡಲಾಗಲಿಲ್ಲ. ಅದಕ್ಕೆ ಲೇಖನಗಳನ್ನು ಬರೆಯಬೇಕೆಂದು ಹಲವುಬಾರಿ ಕುಳಿತುಕೊಂಡೆ, ಆದರೆ ಹಾಗೇ ಮಾಡಲಾಗಲಿಲ್ಲ. ಕಾರಣ, ಸ್ವಲ್ಪ ಬ್ಯೂಸಿ ಆಗಿದ್ದೆ. ಅದಕ್ಕಾಗಿ ಈಗ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಕನಿಷ್ಠ ತಿಂಗಳಲ್ಲಿ ಎರಡು ಬಾರಿಯಾದರೂ, ಬ್ಲಾಗ್ ಅನ್ನು ಬಳಸಲೇ ಬೇಕು.ಇದಕ್ಕಾಗಿ ನಿಮ್ಮ ಪ್ರೋತ್ಸಾಹ ಹಾಗೂ ಬೆಂಬಲ ನನಗೆ ಅವಶ್ಯ... ನೀವು ಹಾಗೇ ಮಾಡ್ತೀರಿ ಅನ್ನೋ ನಂಬಿಕೆ ನನಗಿದೆ.
ಎಲ್ಲರಿಗೂ ವಿಜಯ ದಶಮಿಯ ಹಾರ್ದಿಕ ಶುಭಾಷಯಗಳು.
ನಿಮ್ಮ ಸ್ನೇಹಿತ
ಆತೀಶ್

Saturday, July 16, 2011

Direct Word...

ಮತ್ತೆ ನಲುಗಿದ ಮುಂಬೈ...

ಹೈ ಸೋನೆ ಕಿ ಚಿಡಿಯಾ, ಅಬ್ ತೇರೆ ಬೇಟೆ ಹೋಗಯೆ ಹೈ ರಾಜನೀತಿಕಿ ಗುಡಿಯಾ(ಕೈಗೊಂಬೆ)!!!
"ನಾರೀಮನ್ ನರಳಾಟ, ತಾಜ್ ತಾಂಡವ ಇನ್ನೂ ಹಸಿ-ಬಿಸಿ. ಹೀಗಿರುವಾಗಲೇ ಏದುಸಿರು. ಲೆಟ್ಸ್ ಟುಗೆದರ್ ಇದು ಸರ್ವ ಭಾರತೀಯರು ಒಂದಾಗಲೇಬೇಕಾದ ಸಮಯ. ಈಗ ಒಂದಾಗದಿದ್ದಲ್ಲಿ ಮುಂದೆ ಅವಕಾಶ ದೊರಕದೆ ಹೋಗದಿರುವಲ್ಲಿ ಸಂದೇಹವಿಲ್ಲ. ಕಾರಣವಿಷ್ಟೆ, ಮುಂದೆ ಕಸಬ್ ನಿಮ್ಮ ಮನೆಗೂ ಬರಬಹುದು! ಅಲ್ಲಿಯೂ ರಕ್ತದೋಕುಳಿ ಹರಿಸಬಹುದು. ಇಲ್ಲಿ ರಾವಣನ ನಿನರ್ಾಮ ಖಚಿತ... (ರಾವಣ ಯಾರು ಎನ್ನುವುದು ಇನ್ನೂ ನಿಗೂಢ ಎನ್ನುವುದು ನಮ್ಮ ರಾಜಕೀಯ ವ್ಯಕ್ತಿಗಳ ಅಭಿಪ್ರಾಯ..!!)"
ಪದೇ-ಪದೆ ರಕ್ತದೋಕುಳಿಯಾಡುತ್ತಿರುವ ಈ ನರಹಂತಕರರಿಗೆ ಮೂಗುದಾರ ಹಾಕುವ ಸಾಮಥ್ರ್ಯ ಭಾರತಕ್ಕಾಗಲೀ, ವಿಶ್ವದ ಹಿರಿಯಣ್ಣನ ಸ್ಥಾನದಲ್ಲಿರುವ ಅಮೆರಿಕಕ್ಕಾಗಲಿ ಅಷ್ಟೇ ಯಾಕೆ ಖುದ್ದು ಪಾಕಿಸ್ತಾನಕ್ಕೇ ಇಲ್ಲ. ಅದರ ಪರಿಣಾಮವೇ ಈ ತ್ರಿವಳಿ ಬಾಂಬ್ ಸ್ಫೋಟಗಳು.
26/11 ಇನ್ನೂ ಕಣ್ಣೆದುರು ಹಸಿಹಸಿಯಾಗಿದೆ. ಅಷ್ಟರಲ್ಲೇ 13/7 ನಡೆದು ಪರದೆಯತ್ತ ಸರಿಯಿತು. ಈ ಪಾತಕಿಗಳ ಪಾಪಕೃತ್ಯಕ್ಕೆ 17 ಜನ ಬಲಿಯಾಗಿದ್ದಾರೆ. 131 ಜನ ಜೀವನ್ಮರಣದ ನಡುವೆ ಸೆಣಸುತ್ತಿದ್ದಾರೆ. ಇಂಥ ಕ್ರೌರ್ಯದಲ್ಲಿಯೇ ಸಂತೃಪ್ತಿ ಪಡುವ ಪಾಕಿಸ್ತಾನಿಗಳು ಜಿಹಾದ್ ಹೆಸರಿನಲ್ಲಿ ಇದೆಲ್ಲಾ ನಡೆಸುತ್ತಿರುವುದಕ್ಕೆ ಕಾರಣ ಹಲವಾದರೆ, ಉದ್ದೇಶ ಒಂದೇ ಅದು ಭಯ+ಉತ್ಪಾದನೆ. ಕಂಪನಿಯಲ್ಲಿ ವಸ್ತುಗಳ ಉತ್ಪಾದನೆ ಹಾಗೂ ಟಾಗರ್ೆಟ್ಗಳಿರುವಂತೆ ಇಲ್ಲಿಯೂ ಅವರಿಗಿರುವುದು ಭಯ ಹುಟ್ಟಿಸಲೇಬೇಕೆಂಬ ಟಾಗರ್ೆಟ್.
ಇಂಡಿಯನ್ ಮುಜಾಹಿದ್ದೀನ್, ಲಷ್ಕರ್ ಕೃತ್ಯ ಎಂದು ಹೇಳಲಾಗುತ್ತಿದೆ. ಆದರೂ ಇನ್ನೂ ಯಾರೂ ಇದರ ಹೊಣೆಹೊತ್ತುಕೊಂಡಿಲ್ಲ. ಯಾರು ಹೊಣೆ ಹೊತ್ತುಕೊಂಡರೆಷ್ಟು ಬಿಟ್ಟರೆಷ್ಟು ಏನೂ ಬದಲಾಗದು ಎಂಬ ಮಾತು ಮಾತ್ರ ಸ್ಪಟಿಕದಷ್ಟು ಸ್ಪಷ್ಟ.
ಈ ಘಟನೆಗಳನ್ನು ಗಮನಿಸುತ್ತಿರುವಾಗ ಒಂದು ಮಾತು ನೆನಪಾಗುತ್ತೆ, "ಹಿಂಸೆ ಕೊಡುವವರಿಗಿಂತ ಸಹಿಸಿಕೊಳ್ಳುವವನೇ ಹೆಚ್ಚು ಅಪರಾಧಿ..." ಹಾಗೇ ಇಲ್ಲಿಯೂ ಅಷ್ಟೆ. ಬೆಣ್ಣೆ ಕೈಲಿಟ್ಟುಕೊಂಡು ತುಪ್ಪಕ್ಕಾಗಿ ಅಲೆದಾಡಿದಂತಾಗಿದೆ. ನಮ್ಮೀ ರಾಷ್ಟ್ರದ ಸ್ಥಿತಿ, ಪರಿಸ್ಥಿತಿ... ಇದರ ಫಲಶ್ರುತಿ ಅಮಾಯಕರ ಪ್ರಾಣತ್ಯಾಗ.
ಈ ಉದಾಹರಣೆಗೆ ಇಷ್ಟೇ ಕಾರಣ, ಕಸಬ್ ಸಿಕ್ಕು ತಿಂಗಳುಗಳು ಸವೆಯುತ್ತಿವೆ. ವರ್ಷಗಳು ಘಟಿಸುತ್ತಿವೆ. ಆದರೆ, ಬೆಳವಣಿಗೆ ಮಾತ್ರ ಶೂನ್ಯ! ಬದಲಿಗೆ `ಪಾತಕಿಗಳ ಪತಿ'ಗೆ ರಾಜ ಸತ್ಕಾರ ಹಾಗೂ ಭೋಗದ ಜೀವನ ನೀಡಲಾಗುತ್ತಿದೆ. ಇರುವುದಕ್ಕೆ ಜೈಲು, ಓದುವುದಕ್ಕೆ ಪುಸ್ತಕಗಳು, ಸಮಯ-ಸಮಯಕ್ಕೆ ಬೇಕಾದ ಎಲ್ಲಾ ವಸ್ತುಗಳು ಹಾಗೂ ಇಲ್ಲಿಯವರೆಗೆ ಇವನ ಜೀವನ ನಿರ್ವಹಣೆಗೆ ಭಾರತ (ಅ)ಸಕರ್ಾರ ಕೋಟಿ ಕ್ರಾಸ್ ಮಾಡಿದೆ. ಬಹುಶಃ ಬೆಂಗಳೂರಿನಂಥ ನಗರದಲ್ಲಿ ದಿನವಿಡೀ ದುಡಿಯುವ ಕೂಲಿಯಾಳಿಗೂ ಆ ಜೀವನ ಅಲಭ್ಯವಾಗಿದೆ. ಇದನ್ನು ನಮ್ಮ ದೌಭರ್ಾಗ್ಯವೆಂದರೆ ಉತ್ಪ್ರೇಕ್ಷೆಯೇನಲ್ಲ.
ವಿಷಯವಸ್ತು ಇಷ್ಟೆ, 13 ಜುಲೈ ಮಿಸ್ಟರ್ ಪರಮ ಪಾತಕಿಯ ಹುಟ್ಟು ಹಬ್ಬ. ಆ ಹುಟ್ಟು ಹಬ್ಬದ ಉಡುಗೊರೆಯಾಗಿ ಅವನಿಗೆ ಭಾರತೀಯರ ರಕ್ತದ ಹವ್ವಿಸ್ಸು. ವಾಹ್ಹ ಎಂಥಾ `ದೇಶ ಪ್ರೇಮ.' ಅವರಿಗಾಗಿ ತಾಜ್ನಲ್ಲಿ ತಕರಾರಿಲ್ಲದೆ ತರಾತುರಿಯಲ್ಲಿ ಬುಲೆಟ್ ಸುರಿಸಿದ ಕಸಬ್ ಇಂದು (ನಿ)ರ್ಬಂಧಿ. ಅಂಥವನಿಗಾಗಿ ಇಂಥದ್ದೊಂದು ಕೊಡುಗೆ ನೀಡುವ ಉ(ದಾರ)ದ್ರಿ  ಮನೋಭಾವ. ಇವರ ತಮ್ಮ ಸ್ವಾರ್ಥಕ್ಕಾಗಿ, ಸೀಟು ರಕ್ಷಣೆಗಾಗಿ ತಿಪ್ಪರಲಾಗ ಹಾಕುವ ರಾಜಕೀಯ ಧುರಿಣರು.
ಇಷ್ಟೇಲ್ಲಾ ಹೇಳೋದರ ಪ್ರಮುಖ ಉದ್ದೇಶ ಒಂದೆ, ಸಾಯಂಕಾಲದ ಸುಂದರ ಗಾಳಿಯಲ್ಲಿ ಕುಟುಂಬದೊಂದಿಗೆ ಏನೋ ಖರೀದಿ ಮಾಡಬೇಕೆಂದು ಬಂದ ಮಕ್ಕಳು, ಪಾಲಕರು ಹೀಗೆ ಹತ್ತು ಹಲವಾರು ವರ್ಗದ ಜನ ನಿಭರ್ಿಡೆಯಿಂದ (ಬಹುಶಃ ಇದು ತಮ್ಮ ಮನೆಯೆಂದು) ತಿಳಿದೋ ಏನೋ ತಿರುಗಾಡುತ್ತಿದ್ದರು. ಅಂಥ ವೇಳೆ ನಡೆದುದ್ದೇ ಈ ನರಮೇಧ....
ಜಸ್ಟ್ ಈ ನರಮೇಧದ ಕಡೆ ಮೆಲುಕು ಹಾಕೋಣ:
mugdha aakrandana
ಅಪೇರಾ ಹೌಸ್, ಜವೇರಿ ಬಜಾರ್, ಚನರ್ಿರಸ್ತೆ ಹಾಗೂ ದಾದರ್ ಮತ್ತಿತರ ಸ್ಥಳಗಳಲ್ಲಿ ಒಟ್ಟು 9 ನಿಮಿಷಗಳಲ್ಲಿ ಅಂದರೆ, 6.51-7 ಆಸುಪಾಸಿನವರೆಗೆ ನಡೆದ ಈ ಡೀಲಿಂಗ್ ಮತ್ತೆ ಜನರಲ್ಲಿ ಎಲ್ಲಿಲ್ಲದ ಭಯ ಮೂಡಿಸಿದೆ. ವಿಶೇಷವೆಂದರೆ ಈ ಮೂರೂ ಸ್ಥಳಗಳು ಜನನಿಬಿಡ. ಇಂಥ ಸ್ಥಳದಲ್ಲಿ ಸ್ಫೋಟ ನಡೆಯಬೇಕಾದ್ದಲ್ಲಿ ಸಾಮಾನ್ಯವಾದುದ್ದೇನಲ್ಲ. ಇದೊಂದೆ ಅಲ್ಲ, ಯಾವ ಸ್ಫೋಟ ನಡೆಯಬೇಕಾದರೂ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈ ಇರಲೇಬೇಕು. ಹೀಗಿದ್ದಾಗ ಮಾತ್ರ ಇದು ಸಾಧ್ಯ. ಈಗ ಪ್ರತಿಯೊಂದು ಪ್ರಾಬ್ಲಮ್ಗಳ ಎದುರಿರುವುದು ಒಂದೇ ಸವಾಲು, ಅದು ಈ ರಕ್ತದೋಕುಳಿ ಹಿಂದಿರುವ ಕೈಗಳನ್ನು ಪತ್ತೆ ಹಚ್ಚುವ ಕೆಲಸವಾಗಬೇಕು.
ಈ ವಿಷಯಗಳು ಸೈಡ್ಗಿಟ್ಟು, ಸರಣಿ ಸ್ಫೋಟಗಳ ಕುರಿತು ನಮ್ಮ ರಾಷ್ಟ್ರದ ಹೊಣೆಹೊತ್ತವರ ಅಭಿಪ್ರಾಯಗಳನ್ನು ನೋಡೋಣ;

"ಈ ವಿಧ್ವಂಸಕ ಕೃತ್ಯದ ಹಿಂದಿರುವವರ ಹೆಸರು ಹೇಳಲಾರೆ ಹಾಗೂ ಇದರ ಹಿಂದಿರುವವರ ಸುಳಿವು ಸಿಕ್ಕಿಲ್ಲ"
ಪಿ. ಚಿದಂಬರಂ, ಗೃಹ ಸಚಿವ
"ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೊಗೆಯಲು ಸಕರ್ಾರ ನೀತಿಯನ್ನು ರೂಪಿಸಬೇಕು. ವಿಫಲವಾಗಿರುವುದು ಗುಪ್ತಚರ ಸಂಸ್ಥೆಯಲ್ಲ ಸಕರ್ಾರ"
ಲಾಲ್ಕೃಷ್ಣ ಅಡ್ವಾಣಿ, ಬಿಜೆಪಿ ಹಿರಿಯ ನಾಯಕ.
ಉಗ್ರರ ಎಲ್ಲ ದಾಳಿಗಳನ್ನು ತಡೆಯುವುದು ಕಠಿಣ. ಅಮೆರಿಕದಲ್ಲೂ ಉಗ್ರರ ದಾಳಿಗಳು ನಡೆದಿದ್ದು, ಅದನ್ನು ತಡೆಯಲು ಅವರಿಂದಲೂ ಸಾಧ್ಯವಾಗಲಿಲ್ಲ."
ರಾಹುಲ್ ಗಾಂಧಿ, ಎಐಸಿಸಿ ಕಾರ್ಯದಶರ್ಿ.

ಹೀಗೆ ಹಲವರು ಹಲವು ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಇದರಲ್ಲಿ ಕೆಲವರದ್ದು ಪಕ್ಷ ಉಳಿಸಿಕೊಳ್ಳುವ ಪ್ರಯತ್ನವಾದರೆ, ಇನ್ನೂ ಕೆಲವರದ್ದು ಪಕ್ಷ ಬೀಳಿಸುವುದಾಗಿದೆ. ಅವರ ಅಭಿಪ್ರಾಯಗಳಲ್ಲಿ ಪಾರದರ್ಶಕತೆ ಎನ್ನುವುದು ಮೈಲಿ ದೂರ!
ಸತ್ತವರು ಸುಮಾರು. ಆದರೆ ಆ ಸ್ಫೋಟದಲ್ಲಿ ಯಾರೂ ಪ್ರಭಾವಿ ವ್ಯಕ್ತಿಗಳಿಲ್ಲ. (ಇದು ಇಂಥರಾ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟಂತೆ ಎಂದೆನ್ಸಲ್ವಾ?) ಇದರ ಒಳಾರ್ಥ ಸುಸ್ಪಷ್ಟ, ಕಸಬ್ ಬುಲೆಟ್ಗೆ ಕಾಣುವುದು ಕೇವಲ ಬಡವರು, ಅಬ್ಬೇಪಾರಿಗಳು ಹೊರತು ಪ್ರಭಾವಿ(ಸ್ಟ್ರಾಂಗ್) ವ್ಯಕ್ತಿಗಳಲ್ಲ. ಇದೆಲ್ಲಾ ಗಮನಿಸಿವುದಾದರೆ ಕಿತ್ತೂರು ರಾಣಿ ಚೆನ್ನಮ್ಮಳ ರಾಜ್ಯದಲ್ಲಾದ ದಗೇಬಾಜಿ ಏನಾದರೂ ನಮ್ಮಲ್ಲಿಯೂ ನಡೆಯುತ್ತಿರಬಹುದೇ ಎಂಬ ಪ್ರಶ್ನೆ ಏಳುವುದು ಸಾಮಾನ್ಯ... ಅಷ್ಟೆ ಯಾಕೆ ಇದು ಪ್ರತಿಯೋರ್ವ ಭಾರತೀಯನ ಆಂತರ್ಯದ ಕೂಗು.
ಆತೀಶ್ ಬಿ ಕೆ.

Sunday, April 24, 2011

ಫ್ರಾನ್ಸ್ಲ್ಲಿ ಘಮಲಿದ ಭಾರತದ ಕಮಲ

`ದೇವೀರಿ' ಮುಡಿಗೆ ಕಮಲ

ನಾನು ಏನೂ ಮಾಡಬೇಕಾಗಿಲ್ಲ; ಏನನ್ನೂ ಸಾಧಿಸಬೇಕಾಗಿಲ್ಲ. ಎಂತಹುದೇ ರಿಸ್ಕ್ ತೆಗೆದುಕೊಳ್ಳಬೇಕಾಗಿಲ್ಲ. ಒಂದು ವೇಳೆ ಯಾವುದರಲ್ಲಾದರೂ ಸೋಲುಂಟಾದರೆ, ಅದರಿಂದ ನುಣುಚಿಕೊಳ್ಳಬಹುದು. ಇತರರ ಸಹಾನುಭೂತಿ ಪಡೆಯಬಹುದು. ಜವಾಬ್ದಾರಿಯನ್ನು ಇತರರು ಹೊತ್ತುಕೊಳ್ಳುತ್ತಾರೆ. ಯಾರೊಂದಿಗೂ ಸ್ಪಧರ್ಿಸಬೇಕಾದ ಅಗತ್ಯವಿಲ್ಲ. ಎಲ್ಲವನ್ನು ಗಂಡ ನೋಡಿಕೊಳ್ಳುತ್ತಾನೆ; ವಯಸ್ಸಾದ ಮೇಲೆ ಮಕ್ಕಳಂತೂ ಇದ್ದೇ ಇರುತ್ತಾರಲ್ಲ! ಈ ರೀತಿ ನೇತ್ಯಾತ್ಮ ಹಾಗೂ ನಿಷ್ಕ್ರಿಯ ಆಲೋಚನೆಯಿಂದಾಗಿ ಸ್ತ್ರೀ ನಾಲ್ಕು ಗೋಡೆಗಳ ನಡುವಿನ ದೌಭರ್ಾಗ್ಯಲಕ್ಷ್ಮಿ, ಅಬಲೆ, ಹೆರಿಗೆ ಯಂತ್ರ, ಏನನ್ನೂ ಮಾಡಲು ಶಕ್ತಳಲ್ಲವೆಂಬ ಪಟ್ಟ ಕಟ್ಟಿಕೊಂಡು ಅಭಿವೃದ್ಧಿಯಿಂದ ವಂಚಿತಳಾಗುತ್ತಿದ್ದಾಳೆ.
ತನ್ನಲ್ಲಿ ನೂರಾರು ಕೌಶಲ್ಯಗಳಿದ್ದರೂ ಕ್ರಿಯಾಶೀಲತೆಯಿಂದ ಕಾರ್ಯ ನಿಭಾಯಿಸಿಕೊಂಡು ಹೋಗುವ ಚಾಕಚಕ್ಯತೆ, ನಾಯಕತ್ವದ ಗುಣಗಳಿದ್ದರೂ, ಶೈಕ್ಷಣಿಕ ಅರ್ಹತೆಗಳಿದ್ದರೂ ಅವುಗಳು ಅಡುಗೆಮನೆಗೆ ಸೀಮಿತ. ಸ್ತ್ರೀ ಇಂದಿಗೂ ಹಲವು ಕುಟುಂಬಗಳಲ್ಲಿ ಸ್ವತಂತ್ರಳಾಗಿ ನಿಧರ್ಾರಗಳನ್ನು ತೆಗೆದುಕೊಳ್ಳುವಂತಿಲ್ಲ. ಸ್ವಚ್ಚಂದವಾಗಿ ಬದುಕುವಂತಿಲ್ಲ; ದುಡಿದರೂ ಸ್ವತಂತ್ರವಿಲ್ಲ. ಯಾರೊಂದಿಗೂ ಮಾತನಾಡುವಂತಿಲ್ಲ; ಬೆರೆಯುವಂತಿಲ್ಲ. ಇದಕ್ಕೆ ಅವಳ ಸಕುಂಚಿತ ಮನೋಭಾವವೂ ಕಾರಣವಾಗಿದೆ!
ಬರೀ ಮಹಿಳೆಯ ಸಂಕುಚಿತ ಮನೋಭಾವವೇ ಆಕೆಯ ವ್ಯವಸ್ಥಿತ ಶೋಷಣೆಗೆ ಸಿಲುಕಿ ನಲುಗಲು ಕಾರಣವೆಂದರೆ ಪ್ರಾಯಶಃ ಮೂಗಿನ ನೇರಕ್ಕೆ ನುಡಿದಂತಾಗಬಹುದು. ಇದರ ಜತೆಗೆ ನಮ್ಮ ಸಮಾಜ ಕೂಡ ಅಷ್ಟೇ ಪ್ರಭಾವ ಬೀರುತ್ತಿದೆ.
`ಬಿಹೈಂಡ್ ಎವರಿ ಸಕ್ಸಸ್ಫುಲ್ ಮ್ಯಾನ್, ದೇರ್ ಇಸ್ ಎ ವುಮ್ಯಾನ್' ಎಂಬ ವಾಕ್ಯ ಕೇಳಿದ ತಕ್ಷಣ ಪ್ರತಿಯೊಬ್ಬ ಮಹಿಳೆ ಅಭಿಮಾನದಿಂದ ಹಿಗ್ಗಿ ಹೀರೆಕಾಯಿಯಾಗಬಹುದು. ಆದರೆ ಅದರಲ್ಲಿಯೇ ಅಡಕವಾಗಿರುವ ಮತ್ತೊಂದು ಅರ್ಥದ ಪರಿವೇ ಅವಳಿಗಿಲ್ಲ. ಇದರ ದ್ವಂದ್ವಾರ್ಥವೆಂದರೆ, ಮಹಿಳೆಯರು ಪುರುಷರ ಹಿಂದೆ ಇರಬೇಕೇ ವಿನಃ ಮುಂದೆ ಬಂದು ಹೆಸರಿಗಾಗಿ ಹೋರಾಟ ನಡೆಸುವಂತಿಲ್ಲ. ಸ್ವವರ್ಚಸ್ಸಿಗಾಗಿ ಸೆಣಸುವಂತಿಲ್ಲ. ಅಭಿವೃದ್ಧಿ ಏನಿದ್ದರೂ ಪುರುಷರಿಗೆ, ಮಹಿಳೆ ಪರದೆ ಹಿಂದಿನ ಕಲಾವಿದೆಯಷ್ಟೆ.


ಈ ಸಮಾಜದ ಅಂಕುಡೊಂಕು, ನಿಂದನೆಯ ಮಾತುಗಳಿಗೆ ಕಿವಿಗೊಟ್ಟು ತಮ್ಮ ಅಭಿವೃದ್ಧಿ ಮೇಲೆ ತಾವೇ ಕಲ್ಲುಹಾಕಿಕೊಳ್ಳುವುದು ಯಾವ ಸೀಮೆ ಸಂಸ್ಕೃತಿ? ಅಂದಿನ ಪುರುಷ ಪ್ರಧಾನ ಸಮಾಜಕ್ಕೆ ಸವಾಲಾಗಿ ನಿಂತವರು ಇಂದು ಇತಿಹಾಸದ ಪುಟಗಳಲ್ಲಿ ರಾರಾಜಿಸುತ್ತಿದ್ದಾರೆ. ಅಷ್ಟೇ ಯಾಕೆ ಪ್ರಸ್ತುತ ಸಮಾದಲ್ಲಿಯೂ ಅನೇಕ ಮಹಿಳೆಯರು ತಮ್ಮ ಸಾಧನೆಯಿಂದ ಮೆರೆದಿದ್ದಾರೆ. ಅದರಲ್ಲಿ ಬಾಲಿವುಡ್ ತಾರೆ ನಂದಿತಾದಾಸ್ ಕೂಡ ಒಬ್ಬರು.

ಯಾರು ಈ ನಂದಿತಾದಾಸ್?
ನಂದಿತಾ ಭಾರತೀಯ ನಟಿ ಹಾಗೂ ನಿದರ್ೇಶಕಿ ಕೂಡ ಹೌದು. ಸಿನಿಮಾರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಈಕೆ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಇಂಡೋ ಫ್ರಾನ್ಸ್ ಸಹಕಾರದಿಂದ ಸಿನಿಮಾ ಅಭಿವೃದ್ಧಿಗಾಗಿ ಶ್ರಮಿಸಿ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಇವರು ನೀಡಿರುವ ಮಹತ್ತರ ಕೊಡುಗೆ ಮತ್ತು ಕ್ರಿಯಾಶೀಲತೆಯನ್ನು ಪರಿಗಣಿಸಿರುವ ಫ್ರಾನ್ಸ್ ಸಕರ್ಾರ ಸರ್ವಶ್ರೇಷ್ಠ ಫ್ರಾನ್ಸ್ ನಾಗರಿಕ (ಶೆವೆಲಿಯರ್ ಆಫ್ ದ ಆರ್ಡರ್ ಡೆಸ್ ಆಟರ್್ ಎಟ್ ಡೆಸ್ ಲೆಟರ್ಸ್) ಪ್ರಶಸ್ತಿ ನೀಡಿ ಗೌರವಿಸಿದೆ.
ಫೈರ(1996), ಅಥರ್್(1998), ಬವಾಂದರ್(2000) ಹಾಗೂ ಅಮಾರ್ ಭುವನ್(2002) ಚಲನಚಿತ್ರಗಳ ಮೂಲಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿರಪರಿಚಿತರಾದರು ನಂದಿತಾ ದಾಸ್. ನಿದರ್ೇಶಕಿಯಾಗಿ ಹಲವು ಚಿತ್ರಗಳನ್ನು ನಿದರ್ೇಶಿಸಿರುವ ಪ್ರತಿಭಾವಂತೆ. ಅಲ್ಲಿಯವರೆಗೆ ಕ್ಯಾಮರಾ ಹಿಂದಿನ ಕಾರುಬಾರು ನೋಡಿಕೊಳ್ಳುತ್ತಿದ್ದ ಈಕೆ ಬಳಿಕ ತನ್ನ ಸೌಂದರ್ಯ, ನಟನೆ, ಮಾತಿನ ಶೈಲಿಯಿಂದ ವೀಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.
ಅವರು ನಟಿಸಿದ ಚಿತ್ರ `ಫಿರಾಕ್' ಗಳಿಸಿದ ಖ್ಯಾತಿಗೆ ಪುಳಕಿತರಾದ ದಾಸ್ ಸಂಗ್ರಾಮ್ ರೇಡಿಯೋ ನಡೆಸಿದ ಸಂದರ್ಶನದಲ್ಲಿ ಅಭಿಮಾನಿ ದೇವರುಗಳಿಗೆ ಅಭಿನಂದಿಸಿ, ಅವರ ಪ್ರತಿಕ್ರಿಯೆಗಳನ್ನು ಒಪ್ಪಿಕೊಳ್ಳುವುದಾಗಿ ತಿಳಿಸಿದ್ದು ಅವರ ಸರಳ ಸಜ್ಜನಿಕತೆಗೆ ಉದಾಹರಣೆ.

ಬಹುಮುಖ ಪ್ರತಿಭೆ
ಇಂಗ್ಲಿಷ್, ಹಿಂದಿ, ಮಲಯಾಳಂ, ಬಂಗಾಳಿ, ತಮಿಳು, ಮರಾಠಿ, ಕನ್ನಡ, ಓರಿಯಾ ಮತ್ತು ಉದರ್ು ಹೀಗೆ ವಿಭಿನ್ನ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿ ಪ್ರತಿಭೆ ಮೆರೆದಿದ್ದಾರೆ. ಅಷ್ಟೇ ಅಲ್ಲದೆ ಹಲವು ಆಡಿಯೋ ಬುಕ್ಸ್ಗಳಿಗೆ ದನಿ ಕೂಡ ನೀಡಿದ್ದಾರೆ. ಕೃಷ್ಣವರ್ಣದ ಈ ಬೆಂಗಾಲಿ ಸುಂದರಿಯದು ಬಹುಮುಖ ಪ್ರತಿಭೆ.
ಅವರು ನೀಡಿರುವ ಧ್ವನಿಪುಸ್ತಕಗಳಲ್ಲಿ ಅಂಡರ್ ದ ಬನಿಯಾನ್, ವಂಡರ್ ಪೆಟ್ಸ್ ಆಸ್ ಎ ಬೆಂಗಾಲ್ ಟೈಗರ್ ಇವು ಮಕ್ಕಳ ಸಿರೀಸ್ಗಳಾಗಿವೆ. ಅದೇ ರೀತಿ ಮಹಾತ್ಮ ಗಾಂಧೀಜಿಯವರ ಆತ್ಮಚರಿತ್ರೆ `ದ ಸ್ಟೋರಿ ಆಫ್ ಮೈ ಎಕ್ಸ್ಪೆರಿಮೆಂಟ್ ವಿಥ್ ಟ್ರುಥ್' ಪ್ರಮುಖವಾದವುಗಳಾಗಿವೆ.


ವೈಯಕ್ತಿಕ ವಿಚಾರಗಳು:
ದಾಸ್ ಭಾರತೀಯ ಖ್ಯಾತ ಪೇಂಟರ್ ಜಟಿನ್ ದಾಸ್ ಹಾಗೂ ಲೇಖಕಿ ವರ್ಷ ಅವರ ಮಗಳಾಗಿ ಜನಿಸಿ, ದೆಹಲಿ ವಿವಿಯಿಂದ(ಮಿರಂದ್ ಹೌಸ್) ಜಿಯಾಗ್ರಫಿ ವಿಷಯದಲ್ಲಿ ಪದವಿ ಪಡೆದರು. ನಂತರ ಸಮಾಜಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ದೆಹಲಿ ಸ್ಕೂಲ್ನಿಂದ ಪಡೆದರು. ಶಿಕ್ಷಣ ಮುಗಿಸಿ ಕಲೆಯ ಕಡೆಗೆ ವಾಲಿದರು. ಇವರಲ್ಲಿದ್ದ ಕಲಾವಿದೆಯನ್ನು ಬೆಳೆಸಿ, ಪೋಷಿಸಿದ್ದು `ಜನನತ್ಯ ಮಂಚ ಥೇಟರ್ ಗ್ರೂಪ್', ಈ ಸಂಸ್ಥೆ ಮೂಲಕ ಅವರು ಕಲಾ ಜೀವನಕ್ಕೆ ಕಾಲಿಟ್ಟರು.
2002ರಲ್ಲಿ ಸೌಮ್ಯಸೇನ್ ಎಂಬುವವರನ್ನು ಮದುವೆಯಾಗಿ ಸಾಂಸಾರಿಕ ಜೀವನಕ್ಕೆ  ಕಾಲಿಟ್ಟ ನಂದಿತಾ ಜಾಹಿರಾತು ಸಂಸ್ಥೆಯೊಂದನ್ನು ತೆರೆದು ಅದರ ಮೂಲಕ ಹಲವು ಸಾಮಾಜಿಕ ಜಾಗೃತಿಯ ಆಡ್ಫಿಲ್ಮ್ಗಳನ್ನು ಮಾಡಿದರು. ಬಳಿಕ ಸಂಸಾರಿಕ ಜೀವನದಲ್ಲಿ ಯಾವುದೋ ವಿರಸದಿಂದಾಗಿ ವಿಚ್ಛೇದನ ನೀಡಿದರು. ಮತ್ತೆ 2010 ಜನವರಿ 2ರಂದು ಸುಭೋದ್ ಮಸ್ಕಾರ್ ಅವರನ್ನು ವಿವಾಹವಾದರು.
 ಪ್ರಶಸ್ತಿಗಳ ಮಹಾಪೂರ:
2001-ಅತ್ಯುತ್ತಮ ನಟಿ (ಬವಾಂದರ್ ಚಿತ್ರಕ್ಕೆ), 2002-ಅತ್ಯುತ್ತಮ ನಟಿ (ಅಮಾರ್ ಭುವಾನ್ ಚಿತ್ರಕ್ಕೆ), 2002-ಕನ್ನಾಥಿಲ್ ಮುತ್ತಾಮಿತ್ತಲ್, ವಿಶೇಷ ಪ್ರಶಸ್ತಿ ತಮಿಳುನಾಡು ಸಕರ್ಾರ, 2006-ಅತ್ಯುತ್ತಮ ನಟಿ (ಕಮಲಿ),
2008-ಏಷ್ಯನ್ ಫೆಸ್ಟಿವಲ್ ಆಫ್ ಫಸ್ಟ್ ಫಿಲ್ಮನಲ್ಲಿ; ಅತ್ಯುತ್ತಮ ಚಿತ್ರ-ಫಿರಾಕ್, ಅತ್ಯುತ್ತಮ ಚಿತ್ರಕಥೆ- ಫಿರಾಕ್ ಹಾಗೂ ಅತ್ಯುತ್ತಮ ಚಿತ್ರಕ್ಕಾಗಿ ಫಾರೆನ್ ಕರಸ್ಪಾಂಡೆಂಟ್ಸ್ ಅಸೋಸಿಯೇಷನ್ ಪರ್ಪಲ್ ಆಚರ್ಿಡ್ ಪ್ರಶಸ್ತಿ., 2008-ಶೆವೆಲಿಯರ್ ಆಫ್ ದ ಆರ್ಡರ್ ಡೆಸ್ ಆಟರ್್ ಎಟ್ ಡೆಸ್ ಲೆಟರ್ಸ್ ಪ್ರಶಸ್ತಿ, 2009- ತೀಪರ್ುಗಾರರ ವಿಶೇಷ ಬಹುಮಾನ(ಫಿರಾಕ್ ಚಿತ್ರಕ್ಕೆ), 2009-ಥೊಸೆಲೊನಿಕಿ ಫಿಲ್ಮ್ ಫೆಸ್ಟಿವಲ್ನಲ್ಲಿ ವಿಶೇಷ ಪ್ರಶಸ್ತಿ, 2010-ಫಿಲ್ಮ್ಫೆರ್ ಅವಾಡರ್್ನಲ್ಲಿ ಫಿರಾಕ್ ಚಿತ್ರಕ್ಕೆ ವಿಶೇಷ ಪ್ರಶಸ್ತಿ ಸಂದಿದೆ.
ಇಷ್ಟೊಂದು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಡಿರುವ ಅಭೂತಪೂರ್ವ ಪ್ರತಿಭೆ ಇವರದ್ದಾಗಿದೆ.


ಕಲಿಯಬೇಕಾದದ್ದು ತುಂಬಾ ಇದೆ:
ಮಹಿಳೆ ಅದು ಭಾರತದಲ್ಲಿಯೇ ಹುಟ್ಟು ಬೆಳೆದಿರುವ ದಾಸ್ ಇಷ್ಟೊಂದು ಸಾಧನೆಗಳನ್ನು ಮಾಡಿರುವಾಗ ನಮ್ಮಿಂದ ಏಕೆ ಸಾಧ್ಯವಿಲ್ಲ..? ಒಂದು ಮಾತಂತೂ ನಿಜ, ಪ್ರತಿಯೊಬ್ಬರಿಗೂ ನಂದಿತಾಳಿಗೆ ದೊರೆತ ಪ್ರೋತ್ಸಾಹ ಹಾಗೂ ಅನುಕೂಲಕರವಾದ ವಾತಾವರಣ ದೊರೆಯುವುದು ದುರ್ಲಭ. ಆದರೆ ತನ್ನಲ್ಲಿರುವ ಕ್ರಿಯಾಶೀಲತೆ, ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಅಪರೂಪ ಅವಕಾಶಗಳಂತೂ ಇದ್ದೇ ಇರುತ್ತವೆ. ಅವುಗಳನ್ನು ಸಮರ್ಪಕವಾಗಿ ಬೆಳೆಸಿಕೊಂಡಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ನಂದಿತಾ ದಾಸ್ ಮಾದರಿಯಾಗಿ ನಿಲ್ಲಬಲ್ಲರು.


ಆತೀಶ್ ಬಿ ಕನ್ನಾಳೆ







Friday, April 8, 2011

ಡರ್ ಕೆ ಆಗೆ ಜೀತ್ ಹೆ, ಪರ್ ಯಂಹಾ ಮೌತ್ !

ಪುಕುಶಿಮಾ ಈಗ ಮತ್ತೆ ಪುಕುಪುಕು!
"ಯಾಕೆ ಈ ಪ್ರಕೃತಿ ಹೀಗೆ ಮಾಡುತ್ತೆ...? ಏನಾದ್ರು ಪೂರ್ವಜನ್ಮದ ಹಗೆತನ ಏನಾದ್ರು ಇದೆನಾ? ಅಥವಾ ಜಪಾನ್ ಅಂದ್ರೆ ಅಲಜರ್ಿನಾ....?"

ಜಪಾನ್ ಬಹುಶಃ ಆ ದಿನವನ್ನು ಮರೆಯಬೇಕೆಂದುಕೊಂಡರೂ ಮರೆಯಲಾಗದು. ಅದು ಅಂಥ ಕರಾಳ ದಿನ. ಇಡೀ ವಿಶ್ವವೇ ನಿಬ್ಬೆರಗಾಗಿ ಆ ಕಡೆಗೆ ನೋಡುತ್ತಿತ್ತು. ಇದೇನು ಪ್ರಳಯದ ಸೂಚನೆಯೇ ಅಥವಾ ವಿನಾಶದ ಅಂಕುರವೇ..? ಭಾರತದಲ್ಲಿಯೂ ಕೂಡ ಆ ಪುಕುಪುಕು ಪ್ರಾರಂಭವಾಗಿತ್ತು. ಅಂದು ಸುದ್ದಿ ವಾಹಿನಿ ವೀಕ್ಷಿಸಿದ ಪ್ರತಿಯೊಬ್ಬರು ಉದ್ಗಾರದಿಂದ ನುಡಿದದ್ದೊಂದೆ ಇಂಥ ಟೈಂ ಎಲ್ಲೂ ಬರಬಾರ್ದಪ್ಪಾ..! ಕೆಲವರಿಗಂತೂ ಈ ಘಟನೆ ಎಸ್ಎಂಎಸ್ ಜೋಕಾಗಿ ಮಾರ್ಪಟ್ಟಿತ್ತು. ಯಮ ಚಂದ್ರಗುಪ್ತನಿಗೆ `ಜಾ ಪಾನ್ ಲೇಕೆ ಆ..' ಎಂದು ಹೇಳಿದ್ದನಂತೆ, ಆದರೆ ಅವನು ಇಡೀ ಜಪಾನ್ನನ್ನೇ ಕೊಚ್ಚಿಕೊಂಡು ಹೋದ... ಅದೆಲ್ಲಾ ಬುರುಡೆ ಬಿಡಿ. ಆದ್ರೆ ಇಂತಹ ಕ್ರಿಟಿಕಲ್ ಕಂಡಿಷನ್ ಮಾತ್ರ ಯಾವ ವೈರಿಗೂ ಬರ್ಬಾರ್ದು.
ಐತಿಹ್ಯದ ಬೆನ್ನು ಬಾರಿಸುತ್ತಾ ಕೂಡುವುದಕ್ಕಿಂತ, ಪ್ರಸ್ತುತತೆಯ ಬಗ್ಗೆ ಗಮನ ಹರಿಸಲೇಬೇಕು. ಈಗ ಮತ್ತೆ ಜಪಾನಿನಲ್ಲಿ ಸುನಾಮಿಯಾಗುವ ಮುನ್ಸೂಚನೆ ಕಾಣಿಸಿಕೊಂಡಿದೆ. ಪ್ರಾಯಶಃ ಭೂಕಂಪ ಮತ್ತೆ ಬ್ಯಾಕ್ ಟು ಪೆವೆಲಿಯನ್ ಎಂಬಂತೆ ಮರಳಬಹುದೇನೊ? ಎಂಬ ಭಯ ಕಾಡುತ್ತಿದೆ. ಗುರುವಾರವಾದ ಲಘು ಭೂಕಂಪದಿಂದ ಹಾಲಿ ಅಳಿದುಳಿದಿರುವ ಜಪಾನ್ ಅಬ್ಬೇಪಾರಿಯಾಗಿದೆ.

ಕನ್ಫೂಸ್ ಆಗೋ ಪ್ರಮೇಯವೇ ಇಲ್ಲ. ಇದೆಲ್ಲ ನಾವೇ ಮಾಡಿರೋದು ಈಗ ನಾವೆ ಅನುಭವಿಸಬೇಕು. ವಿಜ್ಞಾನ ಮುಂದುವರಿಯುವುದರಿಂದ ಏನೆನೋ ಆಗ್ತಾ ಇದೆ. ಅದನ್ನು ಅಲ್ಲಗೆಳೆಯಲಾಗದು. ಆದ್ರೆ ಆ ಏನೆನೋದಲ್ಲಿ ಇದು ಕೂಡ ಒಂದು...
"ನಮ್ ಕೈಯಲ್ಲಿರೋದು ಒಂದೇ, ಅದು ದೇವರಲ್ಲಿ ಅವರಿಗೋಸ್ಕರ ಪ್ರಾರ್ಥನೆ ಮಾಡುವುದು ಅಷ್ಟೆ ಅದನ್ನು ಬಿಟ್ಟು ಮತ್ತೇನನ್ನು ಮಾಡಲಾಗದು." ನಮ್ಮಲ್ಲಿಯೂ ಇಂಥ ಘಟನೆಗಳು ಆಗಬಾರದೆಂದರೆ ಸೃಷ್ಟಿಯ ಸಂರಕ್ಷಣೆಯಲ್ಲಿ ಎಲ್ಲರೂ ಟೊಂಕಕಟ್ಟಿ ನಿಲ್ಲಬೇಕು.. ಲೆಟ್ಸ್ ಜಾಯಿನ್ ಟುಗೆದರ್...

Wednesday, April 6, 2011

Bichu Matu...


ಒಂದು ಕಡೆ ಖುಷಿ,  
ಮತ್ತೊಂದು ಕಡೆ ನೈತಿಕತೆಯ ಅಧಃಪತನ!
ಮಿಸ್ ಪೂನಂ ಪಾಂಡೆ ನೀವ್ ಇರೋದು ಭಾರತದಲ್ಲಿ ಅದನ್ನು ಮರೀದೆ ಇದ್ರೆ ಸಾಕು.


ಭಾರತ ಶ್ರೀಲಂಕಾ ವಿರುದ್ಧ ಸಾಧಿಸಿದ ಜಯ ಪ್ರಾಯಶಃ ಪ್ರತಿಯೊಬ್ಬ ಭಾರತೀಯ ಎಂದೂ ಕೂಡ ಮರೆಯಲಾಗದು. ಅದೊಂದು ರೋಮಾಂಚಕ ಹಾಗೂ ವಿರೋಚಿತ ಜಯ. ಇಡೀ ವಿಶ್ವದೆದುರು ಸಿಂಹಳಿಯರನ್ನು ಸೆದೆಬಡಿದ ಬ್ಲೂ ಬಾಯ್ಸ್ಗಳ ಆಟದ ವೈಖರಿ ಕಣ್ಪರದೆ ಮೇಲಿಂದ ಅಳಿಸುವುದು ಅಸಾಧ್ಯವೇ ಸರಿ.
28 ವರ್ಷಗಳಿಂದ ಕಾಯುತಿದ್ದ ಆ ಕ್ಷಣ ಕೊನೆಗೂ ನಮ್ಮ ನೆಲೆದಲ್ಲೆ ಜನ್ಮ ತಳೆದದ್ದು ಮತ್ತೊಂದು ಖುಷಿಯ ವಿಚಾರ. ಈ ಹರುಷದ ವರುಷಕ್ಕೆ ಬರೀ ಪದಗಳಿಂದ ವಣರ್ಿಸುವುದು ತುಂಬಾ ಕಷ್ಟ. ಅದು ಬರೀ ಭಾರತೀಯರ ಜಯವಲ್ಲ! ಭಾರತದ ವಿಜಯ. ಧೋನಿ ಬಾರಿಸಿದ ಸಿಕ್ಸ್ಗೆ ವಾಂಖೆಡಾ ಗ್ರೌಂಡ್ ಅಷ್ಟೆ ಅಲ್ಲ, ಬದಲಿಗೆ ಇಡೀ ಭಾರತವೇ ಸಂತೋಷದಿಂದ ಕುಣಿದು ಕುಪ್ಪಳಿಸಿತು. ಬೆಂಗಳೂರಿನ ಎಂ.ಜಿ. ರೋಡ್ ಹಾಗೂ ಬ್ರಿಗೆಡ್ ರೋಡ್ನಲ್ಲಂತೂ ಹೇಳತೀರದ ಖುಷಿ ವ್ಯಕ್ತವಾಗುತ್ತಿತ್ತು.
ಹುಡುಗರಷ್ಟೆ ಅಲ್ಲ. ಹೆಂಗಳೆಯರೂ ಕೂಡ ರಾತ್ರಿ 2 ಗಂಟೆ ಆದರೂ ವಿಜಯೋತ್ಸವ ಆಚರಣೆಯಲ್ಲಿ ಫುಲ್ ಬಿಜಿ ಯಾಗಿದ್ದರು. ಏನೆ ಅನ್ನಿ ಆ ದೃಶ್ಯ ಸವಿಯಲು ಬರೀ ಎರಡು ಕಣ್ಣುಗಳು ಸಾಲವು.
ಇವೆಲ್ಲ ಒಂದು ಕಡೆ ಆದ್ರೆ ಮತ್ತೊಂದು ಕಡೆ, `ಭಾರತ ಏನಾದ್ರು ಟೂರ್ನಮೆಂಟ್ನಲ್ಲಿ ಶ್ರೀಲಂಕಾ ವಿರುದ್ಧ ಗೆದ್ದರೆ ತಾನು ಬೆತ್ತಲೆ ಪರೆಡ್ ಮಾಡುವೆ' ಎಂದು ಹೇಳಿದ್ದ ರೂಪದಶರ್ಿ ಪೂನಂ ಪಾಂಡೆಗೋಸ್ಕರ ಎಲ್ಲರೂ ಕಾಯ್ತಾ ಇದ್ರು. ಆದ್ರೆ ಪೂನಂ ಮಾತ್ರ ಕಾಣ್ಲೆ ಇಲ್ಲ :(
ಈಗಲೂ ಹಲವು ಕೊಟೇಷನ್ಗಳನ್ನು ನೀಡಿ ವಿವಾದದಲ್ಲಿದ್ದಾಳೆ ಈ ಬಿಚ್ಚಮ್ಮ. ತನ್ನ ಮೈಮಾಟದಿಂದ ಈಗಾಗಲೆ ಪಡ್ಡೆ ಹುಡುಗರಲ್ಲಿ ಹುಚ್ಚೆಬ್ಬಿಸಿರುವ ಪಾಂಡೆಗೆ ಶಿವಸೇನಾ, ಬಿಜೆಪಿ ಬೆದರಿಸಿದ್ದಕ್ಕೆ ಕ್ವೈಟ್ ಆಗಿದ್ದಾಳೆ. ಆದರೆ ಈಗಲೂ ಐಸಿಸಿ ಪಮರ್ಿಷನ್ ಕೊಟ್ರೆ ಭಾರತೀಯ ಕ್ರಿಕೆಟ್ ಆಟಗಾರರ ಮುಂದೆ ಬೆತ್ತಲಾಗುವುದಾಗಿ ಹೇಳಿದ್ದಾಳೆ. ಎಂಥಾ ಕಿಕ್ಕಿಂಗ್ ವಡ್ಸರ್್ ಅಲ್ವಾ!
ಬಡ್ಡಿಮಗುಂದು ಇಂಥವಳನ್ನು ನಮ್ಮ ಭಾರತೀಯಳೆನ್ನಲು ನಾಚಿಕೆ ಆಗುತ್ತೆ. ಶೀಲಕ್ಕಾಗಿ ಜೀವ ನೀಡುವ ಸಂಸ್ಕೃತಿ ನಮ್ಮದು ಆದರೆ ಇಂತಹ ಪವಿತ್ರ ಭಾರತ ಭೂಮಿಯಲ್ಲಿ ಜನ್ಮವೆತ್ತು ದೇಹ ತೋರಿಸುವುದಾಗಿ ಹೇಳುತ್ತಿರುವುದು ದೊಡ್ಡ ದುರಂತ. ಏನೆ ಅನ್ನಿ ಮೈತೋರಿಸಿಕೊಳ್ಳುವ ಷರತ್ತು ಮಾಡಿ, ಇಡೀ ಪರಿಸ್ಥಿತಿಯೇ ಅವಳ ಈ ನಿಧರ್ಾರಕ್ಕೆ ಎದುರಾದರೂ ಸುಮ್ಮನಾಗುವ ಬದಲು ತಾನು ಮಾತು ತಪ್ಪುವುದಿಲ್ಲವೆಂದು ಹೇಳಿಕೊಳ್ಳುತ್ತಿದ್ದಾಳೆ. ಇಂಥವರ ವಿರುದ್ಧ ಕಾನೂಕು ಕ್ರಮ ಕೈಗೊಂಡರೆ ಮುಂದಾಗುವ ಅವಘಡಗಳನ್ನು ತಪ್ಪಿಸಬಹುದೇನೊ..?
ಯಾಕೊ ನಮ್ಮ ಹುಡುಗಿಯರಿಗೆ ಸ್ವಲ್ಪ ಜಾಸ್ತಿನೇ ಸ್ವತಂತ್ರ ಸಿಕ್ಕಿದೆ ಎನೋ ಅನಸ್ತಾ ಇದೆ...

ಆತೀಶ್ ಬಿ ಕನ್ನಾಳೆ.

 

Thursday, March 17, 2011

My Voice...

ತಿಮ್ಮಕ್ಕನ ದನಿಗೆ ಕಿವುಡಾಯಿತೆ ಸಕರ್ಾರ....?


"ನಾನು ನನ್ನ ಪತಿ ಬೆಳೆಸಿದ್ದು 284 ಮರಗಳಲ್ಲ, ಹತ್ತಿರಾತ್ತಿರ ಸಾವಿರ ಮರಗಳು. ನನಗೆ ಸಕರ್ಾರ ಈವರೆಗೂ ಏನನ್ನೂ ಕೊಟ್ಟಿಲ್ಲ. ನನಗೆ ಅನ್ನ, ಸಂಪತ್ತು ಯಾವುದೂ ಬೇಡ. ನಮ್ಮೂರಿನಲ್ಲಿ ಹೆರಿಗೆ ಆಸ್ಪತ್ರೆ ಸ್ಥಾಪಿಸಬೇಕೆಂದು ಬಹುದಿನಗಳ ಕನಸು. ಸಕರ್ಾರ ಆ ಕನಸನ್ನು ನನಸು ಮಾಡಬೇಕು ಇದನ್ನು ಬಿಟ್ಟು ಬೇರೆನನ್ನು ಕೇಳಲಾರೆ. ಹತ್ತು ದಿನಗಳೊಳಗೆ ಸಕರ್ಾರ ಆಸ್ಪತ್ರೆ ನಿಮರ್ಾಣದ ಭರವಸೆ ನೀಡಬೇಕು."


ಮೊನ್ನೆ ಬೆಳಗಾವಿ ವಿಶ್ವಕನ್ನಡ ಸಮ್ಮೇಳನದಲ್ಲಿ ಸಾಲುಮರದ ತಿಮ್ಮಕ್ಕನ ಬಾಯಿಂದ ಭಾವೋದ್ವೇಗದಿಂದ ಹೊರಬಂದ ಮಾತುಗಳಿವು. ವಿಪಯರ್ಾಸವೆಂದರೆ, ಇದಕ್ಕೆ ಯಾವ ನಾಯಕರಾಗಲಿ, ರಾಜಕೀಯ ಮುಖಂಡರಾಗಲಿ ಅಥವಾ ಮಾಧ್ಯಮಗಳಾಗಲಿ ಒತ್ತು ನೀಡಲಿಲ್ಲ. ಆ ಅಜ್ಜಿಯ ಚಿತ್ಕಾರ ಯಾರ ಚಿತ್ತಕ್ಕೂ ಬಾರದೆ ಕುಂದಾನಗರಿಯಲ್ಲಿ ಕಣ್ಮರೆಯಾಯಿತು.
ಆಶ್ವಾಸನೆಗಳ ಮಹಾಪುರ:
ಲಿಬಟರ್ಿ ಮಾದರಿಯಲ್ಲಿ ಭುವನೇಶ್ವರಿ ಪ್ರತಿಮೆ ನಿಮರ್ಾಣಕ್ಕೆ 100 ಕೋಟಿ, ಬೆಳಗಾವಿಯಲ್ಲಿ ಸುವರ್ಣಸೌಧಕ್ಕೆ 300 ಕೋಟಿ, ಲಾಲ್ಬಾಗ್ ಮಾದರಿಯ ಉದ್ಯಾನವನ ಹಾಗೂ ಗಾಜಿನ ಮನೆ ನಿಮರ್ಾಣಕ್ಕೆ 25 ಕೋಟಿ, ಬಸವ ಅಂತಾರಾಷ್ಟ್ರೀಯ ಕೇಂದ್ರ ಸ್ಥಾಪನೆಗೆ 25 ಕೋಟಿ, ಕುವೆಂಪು ಭವನಕ್ಕೆ 3 ಕೋಟಿ, ಹೀಗೆ ಆಶ್ವಾಸನೆಗಳ ಮಹಾಪುರವನ್ನೇ ಸುರಿಸಿದ ಮುಖ್ಯಮಂತ್ರಿಯವರಿಗೆ ಮುದಿದನಿಯ ಮರ್ಮ ತಿಳಿಯಲ್ಲೇ ಇಲ್ಲ..!
ಕನರ್ಾಟಕ ಜನತೆಯ ಜೀವನ ಕಟ್ಟಲು ಬೇಕಾಗಿರುವುದು ಉತ್ತಮ ಆರೋಗ್ಯ, ಶಿಕ್ಷಣ ಹಾಗೂ ವರಮಾನ ಇದೆಲ್ಲಾ ಇರದ ಹೊರತು ಸರ್ವವೂ ತೃಣ. ಆದರೆ ಈ ಅಂಶಗಳ ಕುರಿತು ತಲೆಕೆಡಿಸಿಕೊಳ್ಳದ ಸಕರ್ಾರದ ವತಿಯಿಂದ ಸ್ಟ್ಯಾಚ್ಯು, ಗ್ಲಾಸ್ಹೌಸ್ ಮತ್ತಿತರ ಅಂಶಗಳನ್ನು ನಿಮರ್ಿಸುವುದಾಗಿ ಹೇಳಿರುವುದು ಯಾವ ಪುರುಷಾರ್ಥಕ್ಕಾಗಿ...? (`ಭೂಕೆ ಕೋ ಕಾನ್ ನಹಿ ಹೋತೆ ಎನ್ನುವ ಮಾತು ಬಹುಶಃ ನಮ್ಮನ್ನಾಳುವ ಪ್ರಭುಗಳು ಮರೆತಿದ್ದಾರೆ!')
ಕನಸು ನನಸಾಗುವುದೆ...
`ಕ್ಷೌರನ ತಿಪ್ಪೆ ಕೆದಕಿದ್ದಲ್ಲಿ ಬರೀ ಕೂದಲೆ' ಎಂಬ ಗಾದೆಯೇ ಇದೆ. ಆದರೂ ನೈತಿಕ ಮೌಲ್ಯ ಹಾಗೂ ನಡುಕದ ಆ ಮುದಿದನಿಯ ಒಳನೋವು ಅಕ್ಷರರೂಪ ತಳೆಯಲು ಕಾರಣ. ಸುಮಾರು ವರ್ಷಗಳಿಂದ ಯಾವ ಸಂಸ್ಥೆ ಅಥವಾ ಸಕರ್ಾರದ ನೆರವಿಲ್ಲದೆ ತನ್ನ ಪತಿ ಚಿಕ್ಕಯ್ಯನ ಜತೆಗೂಡಿ ಮರ ನೆಡುವ ಕೆಲಸಕ್ಕೆ ಕೈಹಾಕಿ ಸು. 4 ಕಿ.ಮೀ. ಹೆದ್ದಾರಿಯ ಅಕ್ಕಪಕ್ಕ 284 ಗಿಡಗಳನ್ನು ನೆಟ್ಟು ಅವುಗಳನ್ನು ಮಕ್ಕಳಂತೆ ಪೋಷಿಸಿ, ಯಾವುದೇ ಜಾನುವಾರುಗಳು ಹಾಳು ಮಾಡದಂತೆ ಬೆಳೆಸಿರುವ ಈ ತಾಯಿಗೆ ಸಕಲ ಕನ್ನಡಿಗರ ಸಾಷ್ಟಾಂಗ ನಮನ... ಸು. 1.5 ಮಿಲಿಯನ್ ಮೌಲ್ಯದ ಮರಗಳನ್ನು ಬೆಳಿಸಿರುವ ಖ್ಯಾತಿ ಈ ಅಜ್ಜಿಯದು. ಇದಕ್ಕೆ ವಿದೇಶಿ ಹಾಗೂ ಕನರ್ಾಟಕ ಸಕರ್ಾರ ಗುತರ್ಿಸಿ, ಪುರಸ್ಕರಿಸಿದ್ದು ಬೇರೆ ವಿಷಯ ಬಿಡಿ. ಆದರೆ ಎಂದಿಗೂ `ಪ್ರಶಸ್ತಿಯ ಮುಲಾಮು ಹಾಕದು ಹಸಿವಿಗೆ ಲಗಾಮು' ಎಂಬ ಮಾತು ನಮ್ಮ ಪಾಲಿನ ದುರಂತವೇ ಸರಿ.
`ನನಗೆ ಸಕರ್ಾರ ಏನನ್ನೂ ಕೊಟ್ಟಿಲ್ಲ. ನನಗೆ ಅನ್ನ, ಸಂಪತ್ತು ಯಾವುದೂ ಬೇಡ ನಮ್ಮೂರಿನಲ್ಲಿ ಇಂದು ಹೆರಿಗೆ ಆಸ್ಪತ್ರೆ ನಿಮರ್ಿಸಿಕೊಡುವುದಾಗಿ 10 ದಿನಗಳಲ್ಲಿ ಭರವಸೆ ನೀಡದರೆ ಸಾಕು!' ಎಷ್ಟು ಮುಗ್ಧ ಮಾತಲ್ಲವೇ ರಾಷ್ಟ್ರ ಅಷ್ಟೇ ಯಾಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುತರ್ಿಸಿಕೊಂಡುರುವ ಈಕೆಯ ಮುಗ್ಧ ನಿಷ್ಕಪಟ ಮಾತು ಎಂಥ ಕಲ್ಲು ಹೃದಯವನ್ನೂ ಸಹ ಕರಗಿಸಬಲ್ಲದು. ಆದರೆ, ನಮ್ಮ ಗೂಟದ ಕಾರಿನ ಮುಖಂಡರಿಗೆ....?
ಯಾರು ಈ ಸಾಲುಮರದ ತಿಮ್ಮಕ್ಕ
ಈಕೆ ಮೂಲತಃ ಪರಿಸರ ಪ್ರೇಮಿ. ಸಾಲು ಮರಗಳನ್ನು ನೆಡುವುದರ ಮೂಲಕ ಸಾಲುಮರದ ತಿಮ್ಮಕ್ಕ ಎಂದೇ ಪ್ರಖ್ಯಾತಿಯಾಗಿದ್ದಾರೆ.
ಬೆಂಗಳೂರಿನ ಮಾಗಡಿ ತಾಲ್ಲೂಕಿನ ಹುಳಿಯಾಳ ಇವರ ವಾಸೂರು. ಸುಮಾರು ವರ್ಷಗಳಿಂದ ಪರಿಸರ ಪ್ರೇಮಿಯಾಗಿ ಸಮಾಜ ಅಭಿಮುಖವಾದ ಕೆಲಸವನ್ನು ಎಗ್ಗಿಲ್ಲದೆ ಲೋಪರಹಿತವಾಗಿ ಮಾಡುತ್ತಾಬಂದಿದ್ದಾರೆ.
1991ರಲ್ಲಿ ತಮ್ಮ ಪತಿರಾಯನನ್ನು ಕಳೆದುಕೊಂಡು ಅಬ್ಬೇಪಾರಿಯಾದ ಈಕೆಯ ಆಧಾರಕ್ಕೆ, ಕಣ್ಣು ವರಿಸಿ ಸಾಂತ್ವಾನ ಹೇಳುವುದಕ್ಕೆ ಮಕ್ಕಳೂ ಇರಲಿಲ್ಲ. ಈ ಕೊರತೆಯನ್ನು ನೀಗಿಸಿಕೊಳ್ಳುವುದಕ್ಕಾಗಿಯೇ ಗಿಡಗಳನ್ನು ಬೆಳೆಸುವ ಕೆಲಸಕ್ಕೆ ಕೈಹಾಕಿರುವುದಾಗಿ ಹೇಳುತ್ತಾರೆ ಸಾಳುಮರದ ತಿಮ್ಮಕ್ಕ. ಇಲ್ಲಿಯವರೆಗೂ ಸಕರ್ಾರಕ್ಕೆ ಎಂದೂ ಕೈಚಾಚಿಲ್ಲ. ಪರಿಸರ ಸಂರಕ್ಷಣೆಯಲ್ಲಿ ತನ್ನಿಂದಾದಷ್ಟು ಕೆಲಸ ಮಾಡುತ್ತಾಬಂದಿದ್ದೇನೆ.
ನಂತರ ಅವರ ಅಳಿಲುಸೇವೆಗೆ ಹಲು ಪ್ರಶಸ್ತಿಗಳು ಸಂದಿವೆ. ಆದರೆ ದುಖಃದ ವಿಷಯವೆಂದರೆ 4 ಕಿ.ಮೀ. ದೂರದಿಂದ ನೀರು ಹೊತ್ತುತಂದು ಹಸಿರಿನ ತೋರಣಕ್ಕೆ ಸೊಬಗುತರಲು ಕೈಜೋಡಿಸಿದ್ದ ಪತಿರಾಯರೇ ಇಲ್ಲವೆಂಬುದು ಅವರ ಕೊರಗು.
ಪ್ರಶಸ್ತಿಗಳು:
ನಾಡೋಜ ಪ್ರಶಸ್ತಿ, ಹಂಪಿ ವಿವಿ-2000
ರಾಷ್ಟ್ರೀಯ ಪೌರ ಪ್ರಶಸ್ತಿ-1995
ಇಂದಿರಾ ಪ್ರಿಯದಶರ್ಿನಿ ವೃಕ್ಷಮಿತ್ರ ಪ್ರಶಸ್ತಿ-1997
ವೀರ ಚಕ್ರ ಪ್ರಶಸ್ತಿ-1997
ಮಹಿಳಾ ಮತ್ತು ಮಕ್ಕಳ ಯೋಗಕ್ಷೇಮ ಇಲಾಖೆ, ಕನರ್ಾಟಕ ಸಕರ್ಾರ ವತಿಯಿಂದ ಗೌರವಾನ್ವಿತ ಪ್ರಮಾಣ ಪತ್ರ.
ಕನರ್ಾಟಕ ಕಲ್ಪವಲ್ಲಿ ಪ್ರಶಸ್ತಿ-2000
ಗೋಡ್ ಫ್ರೆ ಪಿಲಿಪ್ಪಿ ಶೌರ್ಯ ಪ್ರಶಸ್ತಿ-2006
ವಿಶಾಲಾಕ್ಷ್ಮಿ ಪ್ರಶಸ್ತಿ (ಆಟರ್್ ಆಫ್ ಲಿವಿಂಗ್)

ಭುವನೇಶ್ವರಿಯ ಮಡಿಲಿಂದ ಹೊರಟಿರುವ ಚಿತ್ತ ಸೆಳೆಯುವ ಚಿತ್ಕಾರಕ್ಕೆ ಬೆಲೆಯುಂಟೆ? ಸಮಾಜದ ಏಳ್ಗೆಗೆ ಜೀವನ ಮುಡುಪಾಗಿಟ್ಟ ಆಕೆಯ ನಿಷ್ಕಪಟ ಕನಸಿಗೆ ಅರ್ಥವುಂಟೆ...? ಹಾಗಿದ್ದಲ್ಲಿ ಪ್ರಭುವೆ ಈ ದನಿಗೆ ಧ್ವನಿಯಾಗಿ. ಈಗಲೂ ರೋಮ್ ಸಾಮ್ರಾಟ ನೀರೋನಂತೆ ಪಿಟಿಲು ಬಾರಿಸುತ್ತಾ ಕುಳಿತರೆ ಅಧಿಕಾರ ಹಾಗೂ ಆಯ್ಕೆಮಾಡಿ ಕಳುಹಿರುವ ಪ್ರಜೆಗಳಿಗೆ ದ್ರೋಹ ಬಗೆದ ಹಾಗಲ್ಲವೇ?
ಅದಕ್ಕೆ ಹೇಳಿದ್ದು ಕಿವುಡಾಯಿತೇ ನಿಮ್ಮ ಕಿವಿ ತಿಮ್ಮಕ್ಕನ ದನಿ ಕೇಳದೆ, ಓ ಪ್ರಭುವೆ ಎಂದು......?
ಆತೀಶ್ ಬಿ ಕನ್ನಾಳೆ

Sunday, March 6, 2011

Dare 2 B Different...

ಏನಾಗಲಿ ಮುಂದೆ ಸಾಗುನಿ.... 
ಹೆಣ್ಣೊಂದು ಮನಸು ಮಾಡಿದರೆ!


ಈ ಪ್ರಪಂಚದಲ್ಲಿ ಮಾತಿನ ಜಾಣರೇ ಹೆಚ್ಚು. ಮಾತಿನಲ್ಲಿ ಮಂಟಪ ಕಟ್ಟುವಷ್ಟು ಚತುರರಿರುತ್ತಾರೆ. ಕೆಲವರ ಬೆರಗುಗೊಳಿಸುವ ಮಾತಂತೂ ನಿಮಿಷಾರ್ಧದಲ್ಲಿ ಮತ್ತೊಂದು ಲೋಕವನ್ನು ಇಳೆಗಿಳಿಸುವಷ್ಟು ಪ್ರಭಾವಪೂರ್ಣವಾಗಿರುತ್ತದೆ. ಓ! ಇನ್ನೇನು ಎಲ್ಲವೂ ಆಯಿತು, ಅವರು ಹೇಳಿದ್ದೆಲ್ಲ ನನಗೆ ದೊರಕೇಬಿಟ್ಟಿತು ಎಂದು ನಂಬಿಕೊಳ್ಳುವಂತೆ ಮಾಡಿಬಿಡುತ್ತದೆ.
ಹೀಗೆ ಮಾಡುವುದು ವಾಕ್ಚತುರರಿಗಂತೂ ಅತ್ಯಂತ ಸುಲಭ. ಆದರೆ ಆಡಿದ ಮಾತನ್ನು ಕೃತಿಗಿಳಿಸುವುದು ಅಷ್ಟು ಸುಲಭವಲ್ಲ. ಅದೇ ಮಾತಿಗೂ ಕೃತಿಗೂ ಇರುವ ವ್ಯತ್ಯಾಸ. ವೇದಿಕೆ ಮೇಲೆ ನಿಂತು ಆದರ್ಶದ ಮಾತು ಗಳನ್ನು ಗಂಟೆಗಟ್ಟಲೆ ಆಡಿಬಿಡಬಹುದು, ಆದರೆ ಅವುಗಳನ್ನು ಬದುಕಿಗೆ ಅಳವಡಿಸಿಕೊಳ್ಳಲು ಹೊರಟಾಗ ಸಂಕಟಗಳ ಸರಮಾಲೆಯೇ ಮುಂದೆ ನಿಲ್ಲುತ್ತದೆ. ಬದುಕು ನಿತ್ಯದ ಹೋರಾಟವಾಗುತ್ತದೆ. ಹಾಗೆಂದು ಹೋರಾಟಕ್ಕೆ ಎಲ್ಲರೂ ವಿಮುಖವಾದರೆ ಆದರ್ಶಮಯ ವ್ಯಕ್ತಿಗಳು ಕಾಣದಾಗಿಬಿಡುತ್ತಾರೆ. ಹಾಗೆ ಅಂತಹ ಆದರ್ಶ, ವಿಶೇಷ ಗುರಿಗಳಿಗೆ ತಮ್ಮನ್ನು ಒಪ್ಪಿಸಿ ಕೊಂಡವರಿಗೆ ತ್ಯಾಗ, ಸಂಘರ್ಷ, ಹೋರಾಟದ ಜೀವನ ಅವಶ್ಯ. ಹೀಗೆ ಬದುಕಿದವರೇ ಇತಿಹಾಸದ ಪುಟಗಳಲ್ಲಿ ಶೋಭಿಸಲು ಸಾಧ್ಯ.
ಈಗೆಲ್ಲ ದಾಖಲೆ ವೀರರೇ ಶೋಭಿಸುವ ಕಾಲ. ಏನಾದರೂ ಸಾಧಿಸಬೇಕು, ನಮ್ಮಿಂದ ನಾಲ್ಕಾರು ಜನಕ್ಕೆ ಒಳ್ಳೆಯದಾಗಬೇಕು ಎಂದು ಭಾವಿಸುವವರು ಅತಿ ಕಡಿಮೆ. ಹಾಗೆ ಸಾಧಿಸಲು ಹೊರಟರೆ ಸಾಧನೆ ಬೇಕೆಂದಾಗ ಕೈಗೆ ಸಿಗುವ ಹಿತ್ತಲ ಕುಂಬಳಕಾಯಲ್ಲ. ಕಾಸು ಕೊಟ್ಟರೆ ಸುಲಭವಾಗಿ ದೊರಕಬಲ್ಲ ಆಟಿಕೆಯೂ ಅಲ್ಲ.
ಸವಾಲುಗಳನ್ನು ಸ್ವೀಕರಿಸಿ, ಸಾಧಿಸಲು ಮುಂದಾಗು ವವರಿಗೆ ಶ್ರಮ, ಸಹನೆ ಅತ್ಯವಶ್ಯ. ಶಿಲ್ಪಿ ಒಂದು ಕಲ್ಲನ್ನು ಸುಂದರವಾದ ಕಲಾಕೃತಿಯಾಗಿ ನಿಮರ್ಿಸುವಾಗ ಶಿಲ್ಪಿಗೆ ಏಕಾಗ್ರತೆ, ಗುರಿ ಮುಖ್ಯವಾದರೆ ಆ ಕಲ್ಲಿಗೆ ಸಹಸ್ರಾರು ಪೆಟ್ಟುಗಳನ್ನು ಸಹಿಸಬಲ್ಲೆನೆಂಬ ಛಾತಿ ಅನಿ ವಾರ್ಯ. ಹಾಗಾದಾಗ ಮಾತ್ರ ಅದು ಮುಂದೊಂದು ದಿನ ಸರ್ವರ ಚಿತ್ತ ತನ್ನತ್ತ ಸೆಳೆಯಬಲ್ಲ ಸುಂದರ ಮೂತರ್ಿಯಾಗಿ ರೂಪುಗೊಳ್ಳಲು ಸಾಧ್ಯ.
ಒಂದು ವೇಳೆ ಪೆಟ್ಟುಗಳಿಗೆ ಹೆದರಿ ಹುದುಗಿ ಕುಳಿತಲ್ಲಿ ಅದು ಜನ ತಿಂದು ತೇಗಿ ಹರಟುವ ಹರಟೆ ಕಟ್ಟೆಯಾಗಬಹುದು ಇಲ್ಲವೆ ತುಳಿದು ಮುಂದೆ ಸಾಗುವ ಹಾಸುಗಲ್ಲೂ ಆಗಬಹುದು.
ಹಾಗೆಯೇ ಮನುಷ್ಯ ತನ್ನ ಜೀವನ ಸಂತೃಪ್ತಿ ಕಾಣ ಬೇಕಾದರೆ ಅದಕ್ಕೊಂದು ಅರ್ಥ ನೀಡಬೇಕೆಂದಾದಲ್ಲಿ ಬೇಕಾದ-ಬೇಡವಾದ ಹಲವಾರು ಕಷ್ಟಗಳನ್ನು ಎದುರಿಸ ಬೇಕು, ಸಹಿಸಲೂಬೇಕು.
ತೊಡರುಗಳ ಸರಮಾಲೆ
ಇಂದಿನ ಜಾಗತೀಕರಣದ ಯುಗದಲ್ಲಿ ಜನರು ಸ್ವತೃಪ್ತಿಗಾಗಷ್ಟೇ ಬದುಕಿದರೆ ಸಾಕು ಎನ್ನುವಷ್ಟು ಸ್ವಾಥರ್ಿಗಳಾಗಿದ್ದಾರೆ. ಸಮಾಜ ಸೇವೆಯ ಹೆಸರಲ್ಲಿ ಸ್ವಾರ್ಥಸಾಧನೆ ಮಾಡಿಕೊಳ್ಳುವವರೇ ಹೆಚ್ಚು. ಉಪಕಾರ-ಅಪಕಾರಗಳ ಚಿಂತೆ ಇಲ್ಲದೆ ತನ್ನಷ್ಟಕ್ಕೆ ತಾನು ಬದುಕುವುದೇ ದೊಡ್ಡ ಸಾಧನೆ ಎನಿಸಿರುವ ಈ ಕಾಲಮಾನದಲ್ಲಿ ಸಾಧಿಸುವುದು-ಸೇವೆ ಮಾಡುವುದು ಎಂದರೆ ಸಣ್ಣ ವಿಷಯವಲ್ಲ. ಬಹಳಷ್ಟು ಬಾರಿ ಈ ಸಾಧನೆಗಳು ವೈಯಕ್ತಿಕವಾಗಿದ್ದು ಹೆಸರು ಸಂಪಾದನೆ ಗಾಗಿ ಸೀಮಿತವಾಗಿರುತ್ತದೆಯೇ ವಿನಃ ಸಮಾಜ, ಸಮೂಹದ ಉಪಕಾರಕ್ಕಾಗಿ ಇರುವುದಿಲ್ಲ. ಅಪರೂಪ ಕ್ಕೊಮ್ಮೆ ಕಾಣುವ ಕೋಲ್ಮಿಂಚಿನಂತೆ ಅಲ್ಲೊಬ್ಬರು ಇಲ್ಲೊಬ್ಬರು ಸೇವಾಮನೋಭಾವದಿಂದ ಸಾಮಾಜಿಕ ಕ್ಷೇತ್ರಕ್ಕೆ ಧುಮುಕುತ್ತಾರೆ. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವುದೆಂದರೆ ಸಾಹಸವೇ ಸರಿ. ಅದರಲ್ಲೂ ಆ ವ್ಯಕ್ತಿ ಮಹಿಳೆಯಾದರೆ ಕಾರ್ಯಸಾಧನೆ, ಅಭಿವೃದ್ಧಿ ಎಲ್ಲವೂ ಹರಸಾಹಸವೇ ಸರಿ.
ನೂರಾರು ಜನರ ನಡುವೆ ಮುನ್ನುಗ್ಗಿ ಕೆಲಸ ಮಾಡ ಬೇಕಾದಾಗ ಪ್ರೋತ್ಸಾಹ ನೀಡುವುದಕ್ಕಿಂತ ಕಾಲೆಳೆಯು ವವರೇ ಹೆಚ್ಚು. ಓರ್ವ ಮಹಿಳೆ ಏನನ್ನಾದರೂ ಮಾಡ ಬೇಕೆಂದಾದಲ್ಲಿ ಅದಕ್ಕೆ ಪುರುಷಪ್ರಧಾನ ಸಮಾಜದ ಕಟ್ಟುಕಟ್ಟಳೆಗಳು ತೊಡರುಗಳಾಗೇ ಗೋಚರಿಸುತ್ತವೆ. ಭಂಡ ಧೈರ್ಯದಿಂದ ಮುಂದೆ ಹೋದರೂ ಕಟ್ಟಿಟ್ಟ ಕಷ್ಟದ ಬುತ್ತಿಯ ಜೊತೆಗೆ ಟೀಕೆ-ನಿಂದನೆ, ಕೋಟಳೆಗಳ ಮುಖಾಮುಖಿ.
ಇಂಥ ಹಲವಾರು ಸಾಂಪ್ರದಾಯಿಕ-ಪ್ರಾದೇಶಿಕ-ಸಾಮಾಜಿಕ ಸವಾಲುಗಳ ಮಧ್ಯೆ ಒಬ್ಬ ಯುವತಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಬಂದು ಯಾವ ಸ್ವಾರ್ಥವಿಲ್ಲದೆ ಸಮಾಜಕಾರ್ಯಗಳಲ್ಲಿ ತೊಡಗಿದರೆಂದರೆ ಅವರಿಗೆ ಹ್ಯಾಟ್ಸ್ ಅಪ್ ಎನ್ನಲೇಬೇಕಲ್ಲ!
ಹೆಸರು ಶಿಖಾಸಿಂಗ್. ಓದಿದ್ದು ದೆಹಲಿ ವಿಶ್ವವಿದ್ಯಾಲಯದಲ್ಲಿ. 1999ರಲ್ಲಿ ತಮ್ಮ ಎಂಬಿಎ ಮುಗಿಸಿ, ನಂತರ ದೆಹಲಿಯಲ್ಲಿಯೇ ಇಟಲಿ ರಾಯಭಾರಿ ಕಚೇರಿ ಯಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ರಾಯಭಾರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸಿದವರಿಗೆ ಅವಕಾಶಗಳಿಗೇನು ಕೊರತೆ? ಶಿಖಾ ಅವರಿಗೂ ಹಾಗೆಯೇ ಅವಕಾಶಗಳು ನಾ ಮುಂದು, ತಾ ಮುಂದು ಸಾಲುಗಟ್ಟಿ ನಿಂತಿದ್ದವು. ಆದರೆ ಆಕೆಯ ಆಯ್ಕೆ ಸಮಾಜ ಸೇವೆಯಾಗಿತ್ತು.
ಮನದಾಳದ ಮಾತು:
ನಾನು ದೇಶ-ವಿದೇಶಗಳನ್ನು ಸುತ್ತಿದ್ದೇನೆ. ಹೊರದೇಶಗಳಲ್ಲಿ ನನಗೆ ಅಪಾರ ಅವಕಾಶಗಳಿದ್ದವು. ಹಾಗೆಯೇ ಸಾಧಿಸಲು ಹಲವಾರು ಮಾರ್ಗಗಳಿದ್ದವು. ಜೀವನದಲ್ಲಿ ಮಹತ್ತರವಾದ ಹಾಗೂ ಅರ್ಥಪೂರ್ಣ ವಾದ ಕಾರ್ಯ ಮಾಡಲು ಮನಸ್ಸು ಹಾತೊರೆಯುತಿತ್ತು. ಅದೇ ಸಂದರ್ಭದಲ್ಲಿ ಕೆ. ಎನ್. ಗೋವಿಂದಾಚಾರ್ಯರ ಕನಸಿನ ಕೂಸಾದ ಭಾರತ ವಿಕಾಸ ಸಂಗಮದ 3ನೇ ಕಾರ್ಯಕ್ರಮವಾದ `ಕಲ್ಬುಗರ್ಿ ಕಂಪು 2010' ರ ಕಾರ್ಯಕ್ರಮದಲ್ಲಿ ಜನರ ಜೊತೆ ಬೆರೆತು ಅವರ ಕಷ್ಟ, ಸಮಸ್ಯೆ, ಸವಾಲುಗಳನ್ನು ತಿಳಿದುಕೊಳ್ಳಲು, ಅವಶ್ಯವಿದ್ದಲ್ಲಿ ಉತ್ತಮ ಮಾರ್ಗದರ್ಶನ ನೀಡಲು ಒಂದು ಸುವರ್ಣ ಅವಕಾಶ ದೊರಕಿತು ಎಂದೇ ಇದನ್ನು ಕಾರ್ಯಕ್ಷೇತ್ರವನ್ನಾಗಿ ಆಯ್ದುಕೊಂಡ ಶಿಖಾ ಇಟಲಿ ರಾಯಭಾರಿ ಕಚೇರಿಯ ತಮ್ಮ ವೃತ್ತಿಗೆ ರಾಜೀನಾಮೆ ಇತ್ತು ಕಲ್ಬುಗರ್ಿಗೆ ಕಾಲಿಟ್ಟಿದ್ದಾರೆ. ತಮ್ಮ ಮನದಾಳದ ಮಾತುಗಳನ್ನು ಹಿಂದಿ ಮಿಶ್ರಿತ ಕನ್ನಡದಲ್ಲಿ ಹೇಳುವಾಗ ಧನ್ಯತೆ, ಸಂತೃಪ್ತ ಭಾವ ಅವರ ಮೊಗದಲ್ಲಿ ಎದ್ದು ಕುಣಿಯುತಿತ್ತು.
ಏನಿದು ಭಾರತ ವಿಕಾಸ ಸಂಗಮ?
ಕೊತ್ತಲ ಬಸವೇಶ್ವರ ಭಾರತ ವಿಕಾಸ ಸಂಗಮ ಸಮಿತಿ, ಸೇಡಂ 1974ರಲ್ಲಿ ಹೈದರಾಬಾದ್-ಕನರ್ಾಟಕ ಭಾಗದ ಅಭಿವೃದ್ಧಿಗಾಗಿ ಇದನ್ನು ಪ್ರಾರಂಭಿಸಿತು. ಇದರ ಪ್ರಮುಖ ಉದ್ದೇಶ ಈ ಭಾಗದ 5 ಜಿಲ್ಲೆಗಳು ಹಾಗೂ 24 ತಾಲೂಕುಗಳನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವುದು. ಆಥರ್ಿಕ, ಕೃಷಿ, ಇಂಗ್ಲಿಷ್ ಮತ್ತು ಕಂಪ್ಯೂಟರ್ ಶಿಕ್ಷಣ, ಪ್ರವಾಸ, ಶಿಷ್ಯವೇತನ, ಮಹಿಳಾ ಸಶಕ್ತಿಕರಣದ ಬಹುಮುಖ್ಯವಾದ ಜವಾಬ್ದಾರಿಯನ್ನು ಈ ನಿಟ್ಟಿನಲ್ಲಿ ವಹಿಸಿಕೊಳ್ಳಲಾಗಿದೆ. ಈ ಕಾರ್ಯದ ಚಾಲನೆ ಗಾಗಿ ಭಾರತ ವಿಕಾಸ ಸಂಗಮ ಸಮಿತಿ `ಕಲ್ಬುಗರ್ಿ ಕಂಪು' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಅದರ ಮೂಲಕ ಸಾಮಾಜಿಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತದೆ. ಕಳೆದ ವರ್ಷ ಸಹ 10 ದಿನಗಳ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಪ್ರಮುಖ ಧ್ಯೇಯ ಅಭಿವೃದ್ಧಿ ಇನ್ನೊಂದು ಅರ್ಥದಲ್ಲಿ ಗಾಂಧೀಜಿಯವರ ಕನಸಿನ ಪರಿಪೂರ್ಣತೆ ಎಂದರೂ ತಪ್ಪಾಗಲಾರದು.
ಇಂತಹ ಅರ್ಥಪೂರ್ಣ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ದೇಶದ ಇನ್ನೊಂದು ಮೂಲೆಯಿಂದ ಕಲ್ಬುಗರ್ಿಯಂತಹ ಬಿಸಿಲನಾಡಿಗೆ ಬಂದಿಳಿದ ಶಿಖಾರ ಆತ್ಮಸ್ಥೈರ್ಯ ಮೆಚ್ಚಬೇಕಾದದ್ದೆ. ತಿಳಿಯದ ಭಾಷೆ, ಜನ, ಜಾಗ...ಇವೆಲ್ಲದರ ನಡುವೆ ಕೆಲಸ ಮಾಡುವ ಉತ್ಕಟತೆ, ಮಾಡುವೆನೆಂಬ ಆತ್ಮವಿಶ್ವಾಸ ಇವೆರಡೇ ಆಕೆಯ ಜೊತೆಗಿದ್ದುದು.
ಸವಾಲುಗಳು:
ಸಾಮಾನ್ಯವಾಗಿ ಯಾವುದೇ ಒಬ್ಬ ಮಹಿಳೆ ಅದರಲ್ಲೂ ಇಲ್ಲಿನ ಸಂಸ್ಕೃತಿ, ಭಾಷೆ, ಆಚಾರ-ವಿಚಾರ, ಯಾವುದನ್ನೂ ತಿಳಿಯದ ಅವಿವಾಹಿತ ಯುವತಿ ದೊರೆತ ವಿಪುಲ ಅವಕಾಶಗಳನ್ನು ತೃಣವೆಂದು ಭಾವಿಸಿ, ಸೂರ್ಯನಗರಿ ಎನಿಸಿರುವ ಕಲ್ಬುಗರ್ಿಯಂತಹ ಸ್ಥಳಕ್ಕೆ ಬಂದು ಉದ್ಯೋಗ ಮಾಡುವುದೆಂದರೆ ಹುಡುಗಾಟವಲ್ಲ.
ಹಿಂದುಳಿದ ಭಾಗ ಎಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಹೈದ್ರಾಬಾದ್ ಕನರ್ಾಟಕವನ್ನು, ಇಲ್ಲಿನ ಜನರ ಜೀವನ ಮಟ್ಟ, ವ್ಯಕ್ತಿತ್ವ ಹಾಗೂ ಈ ಭಾಗಕ್ಕೆ ವಿಶೇಷ ಸ್ಥಾನ ಮಾನ ಕಲ್ಪಿಸುವ ನಿಮಿತ್ತ ಇವರು ಈ ಸಂಘಟನೆ ಮೂಲಕ ಪಡುತ್ತಿರುವ ಶ್ರಮ ಮಾತಿಗೆ ಎಟುಕು ಭಾವನೆಗಳಿಗೆ ನಿಲುಕದು.
`ಪ್ರಾರಂಭದಲ್ಲಂತೂ ಜನರೊಂದಿಗೆ ಒಂದಾಗುವಲ್ಲಿ ಅವರು ಬಹು ಶ್ರಮ ಪಟ್ಟಿದ್ದಾರೆ. `ಇಲ್ಲಿನ ಊಟ-ತಿಂಡಿ, ವಾತಾವರಣ ಇವೆಲ್ಲವುಗಳ ಜೊತೆ ಹೊಂದಿಕೊಳ್ಳಲು ಕೊಂಚ ಕಷ್ಟವೇನೋ ಪಡಬೇಕಾಯಿತು. ಆದರೆ, ಇಲ್ಲಿನ ಜನರ ಪ್ರೀತಿ, ವಿಶ್ವಾಸ ಹಾಗೂ ಪ್ರೋತ್ಸಾಹ ನನಗೆ ನನ್ನ ಗುರಿ ಸಾಧನೆಯಲ್ಲಿ ಮತ್ತಷ್ಟು ಬಲವಾಗಿ ನಿಲ್ಲಲು ಹುರಿದುಂಬಿಸಿದೆ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ.'
ಪ್ರಾರಂಭದಲ್ಲಂತೂ ನಮ್ಮ ಕುಟುಂಬದವರು ಈ ಕೆಲಸಕ್ಕೆ ಒಪ್ಪಲಿಲ್ಲ. ತುಂಬಾ ಆತಂಕ ವ್ಯಕ್ತಪಡಿಸಿದ್ದರು. ಕುಟುಂಬದಿಂದ ನೀನೊಬ್ಬಳೆ ಅಲ್ಲಿ ಹೇಗಿರಲು ಸಾಧ್ಯ. ಎಂದು ತಡೆಯೊಡ್ಡಿದರು. ಅದೇನೋ ಅಂತಾರಲ್ಲ, ಗುರಿಗೆ ಧೈರ್ಯ ಪ್ರಚೋದನಾಕಾರಿಯಾಗಿ ನಿಲ್ಲುವು ದಾದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. ಅದರಂತೆ ನನಗೆ ಎಲ್ಲವೂ ಸರಳವಾಗಿಯೇ ಗೋಚರಿಸುತ್ತಿವೆ. ಬಂದ ಸವಾಲುಗಳನ್ನು ಭಾರವೆಂದು ನಾನು ಪರಿಗಣಿಸಿಲ್ಲ ಎಂದು ನಗೆ ಬೀರಿದರು.
ಕುಟುಂಬ:
ಶಿಖಾ ತಂದೆ ರೈಲ್ವೆ ಇಲಾಖೆಯಲ್ಲಿ ಕಾರ್ಯನಿವರ್ಾಹಕ ನಿದರ್ೇಶಕರಾಗಿ ಸೇವೆ ಸಲ್ಲಿಸಿರುವ ನಿವೃತ್ತ ಅಧಿಕಾರಿಗಳು. ಇವರೇ ಮನೆಗೆ ಹಿರಿಯ ಮಗಳು. ಆದರೆ ಇಂದು ಕುಟುಂಬವನ್ನು ಬಿಟ್ಟು ಒಬ್ಬರೇ ಕಲ್ಬುಗರ್ಿಯಲ್ಲಿದ್ದಾರೆ.
  
ಸ್ನೇಹಿತರೆ, ಯುವತಿಯೊಬ್ಬಳು ಉನ್ನತ ಹುದ್ದೆಗೆ ರಾಜೀನಾಮೆ ಕೊಟ್ಟು, ದೂರದ ದೆಹಲಿಯಿಂದ ಬಿಸಿಲನಾಡಿಗೆ ಬಂದು, ಅಭಿವೃದ್ಧಿ ಕಾರ್ಯಗಳಿಗಾಗಿ ಟೊಂಕಕಟ್ಟಿ ನಿಂತಿದ್ದಾರೆಂದರೆ ಅದು ಸಾಮಾನ್ಯ ವಿಷಯವಲ್ಲ. ಹೊರ ರಾಜ್ಯದವರಿಗೆ ನಮ್ಮ ಹಿಂದುಳಿದ ಜಿಲ್ಲೆ, ತಾಲ್ಲೂಕು, ಹೋಬಳಿಗಳ ಕುರಿತು ಅಷ್ಟೊಂದು ಆಸಕ್ತಿ ಇರುವಾಗ, ಇಲ್ಲಿಯೇ ಹುಟ್ಟಿ ಬೆಳೆದಿರುವ ನಮಗೆ ಅದರ ಬಗ್ಗೆ ಇನ್ನಷ್ಟು ಆಪ್ತತೆ ಇರಬೇಕು.
ಮಹಿಳೆಯೊಬ್ಬಳು ಮನಸ್ಸು ಮಾಡಿದರೆ ಹಳ್ಳಿಯಾದರೇನು, ದಿಲ್ಲಿಯಾದರೇನು ಸಾಮಾಜಿಕ ಜವಾಬ್ದಾರಿಗಳನ್ನು ಉತ್ತಮವಾಗಿ ನಿಭಾಯಿಸಬಲ್ಲಳು ಎನ್ನುವುದಕ್ಕೆ ಶಿಖಾಸಿಂಗ್ ಯುವಪೀಳಿಗೆಗಳಿಗೆ ಆದರ್ಶವಾಗಿ ನಿಲ್ಲಬಲ್ಲಾಕೆ.
ದಿಟ್ಟ ಹೆಜೆಯನ್ನಿಟ್ಟ ಶಿಖಾ ಜತೆ ನೀವು ಮಾತನಾಡಿ ಅವರನ್ನು ಮತ್ತಷ್ಟು ಹುರಿದುಂಬಿಸಬೇಕಾದ್ದಲ್ಲಿ 0847-2273810 ಕರೆ ಮಾಡಿ.
ಎನಿ ವೇ ಎಲ್ಲರೂ ಮುಂದೆ ಸಾಗೋಣ ಸಮಾಜ ಕಟ್ಟಲು ಎದೆಗಾರಿಕೆಯಿಂದ ಮುಂದೆ ಸಾಗೋಣ.....
ಆತೀಶ್ ಬಿ ಕನ್ನಾಳೆ


Sunday, February 6, 2011

Filmy Funda...

ಮಗನಿಗೆ ತಕ್ಕ ಅಪ್ಪ 

ತಂದೆಯಂತೆ ಮಗ ಎಂಬ ಮಾತು ನೀವು ಕೇಳಿರಬಹುದು ಅಥವಾ ನೋಡಿರಲೂಬಹುದು. ಆದರೆ, ಮಗನಂತೆ ಅಪ್ಪನೆಂಬ ಮಾತು ಎಲ್ಲಾದರೂ ನೀವು ಕೇಳಿದ್ದಿರಾ?! ಹೋಗಲಿ ನೋಡಿದ್ದಾದ್ರು ನೆನಪಿದೇನಾ?
ಆದರೆ, ನಮ್ಮ ಕನ್ನಡ ಫೀಲ್ಮ್ ಇಂಡಸ್ಟ್ರಿಯಲ್ಲಿ ಇಂಥ ಉದಾಹರಣೆ ನೋಡಬಹುದು. ಒಂಬತ್ತರ ಬಾಲ್ಯದಲ್ಲೇ ಗಿನ್ನಿಸ್ ವಿಶ್ವ ದಾಖಲೆ ಪುಸ್ತಕಕ್ಕೆ ಸೇರಿದ ಮಾಸ್ಟರ್ ಕಿಶನ್ ಅಪ್ಪಾ ಈಗ ಹೊಸ ಸಾಹಸ ಕಾರ್ಯಕ್ಕೆ ಕೈಹಾಕಿದ್ದಾರೆ.
ಮಾಚರ್್ 2011ರಲ್ಲಿ ಅವರು ಕನರ್ಾಟಕದ 1 ಲಕ್ಷ ವಿದ್ಯಾಥರ್ಿಗಳನ್ನು ವೇದಿಕೆ ಮೇಲೆ ಏಕಕಾಲಕ್ಕೆ ಡ್ಯಾನ್ಸ್ ಮಾಡಿಸುವುದರ ಮೂಲಕ ವಿಶ್ವ ದಾಖಲೆಯನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಬೇಕೆಂಬ ಮಹತ್ತಾಸೆ ತೋಡಿಕೊಂಡಿದ್ದಾರೆ. ಕನರ್ಾಟಕದ ಬೆಂಗಳೂರು, ಹುಬ್ಬಳ್ಳಿ, ಚಿತ್ರದುರ್ಗ, ಹಾಸನ್, ಬಳ್ಳಾರಿ, ಶಿವಮೊಗ್ಗ, ಮಂಗಳೂರು ಮತ್ತು ಗುಲ್ಬಗರ್ಾದ ವಿದ್ಯಾಥರ್ಿಗಳು ಈ ಡ್ಯಾನ್ಸ್ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಸಾಹಸವೇನೂ ಇದೇ ಪ್ರಥಮ ಬಾರಿಗೆ ನಡೆಯುತ್ತಿಲ್ಲ. ಈ ಹಿಂದೆಯೂ ಅನೇಕರು ಇದಕ್ಕೆ ಕೈಹಾಕಿ ಗಿನ್ನಿಸ್ ದಾಖಲೆ ಬಾಚಿಕೊಂಡಿದ್ದಾರೆ. ಅದರಲ್ಲಿ ಮೈಕಲ್ ಜಾಕ್ಸ್ನ್ ತನ್ನ 51ನೇ ಹುಟ್ಟುಹಬ್ಬದ ಸಂದರ್ಭದಲ್ಲಿ 22,596 ಜನರ ಜೊತೆ `ಥ್ರಿಲರ್ ಅಲ್ಬಂ' ಸಂಗೀತಕ್ಕೆ ಸ್ಟೆಪ್ಸ್ ಹಾಕಿದ್ದರು.
ಕೆಲ ದಿನಗಳ ಹಿಂದೆಯಷ್ಟೆ 1,082 ಶಾಲಾ ವಿದ್ಯಾಥರ್ಿಗಳು ಬಾಲಿವುಡ್ ಸಂಗೀತಕ್ಕೆ ಸಿಂಗಾಪುರನಲ್ಲಿ ಕುಣಿದಿದ್ದರು. ಅದೇ ರೀತಿ 2,100 ಭಾರತೀಯ ಸ್ಪಧರ್ಾಳುಗಳು ಭಾಂಗ್ರಾ ಹಾಡಿಗೆ ಕುಣಿದು ದಾಖಲೆ ಮಾಡಿದ್ದರು. ಇವೆಲ್ಲವುಗಳ ಗಡಿಮೀರಿ ಏಕ ಕಾಲಕ್ಕೆ ಬೇರೆ-ಬೇರೆ ಸ್ಥಳದ ಹಾಗೂ ವಿಭಿನ್ನ ಸಂಸ್ಕೃತಿಯ ಒಂದೇ ವೇದಿಕೆ ಮೇಲೆ 1 ಲಕ್ಷ ವಿದ್ಯಾಥರ್ಿಗಳನ್ನು ಕುಣಿಸುವ ಒತ್ತಾಸೆ ಶ್ರೀಕಾಂತ್(ಕಿಶನ್ ಅಪ್ಪ) ಅವರದ್ದಾಗಿದೆ.
ಈ ಉದ್ದೇಶದ ಪೂತರ್ಿಗಾಗಿಯೇ ಹಲವು ಶಾಲೆಗಳಿಗೆ ಭೇಟಿ ನೀಡಿದ್ದೇವೆ. 48,000 ಶಾಲಾ ವಿದ್ಯಾಥರ್ಿಗಳು ಇದಕ್ಕಾಗಿ ಒಪ್ಪಿಕೊಂಡಿದ್ದಾರೆ ಆದರೆ ಈ ವಿಷಯವನ್ನು ಬಹಿರಂಗ ಪಡಿಸಿಲ್ಲ ಎಂದು ಶ್ರೀಕಾಂತ್ ಮನದಾಳದ ಮಾತನ್ನು ಬಿಚ್ಚಿಟ್ಟರು. ಇದಕ್ಕಾಗಿ ನಾಲ್ಕು ನಿಮಿಷಗಳ ಹಾಡನ್ನು ಆರಿಸಿಕೊಳ್ಳಲಾಗಿದ್ದು, ಅದಕ್ಕೆ ಗೀತ ನಿದರ್ೇಶನ ಪ್ರೇಮ್ ಮಾಡಿದ್ದು, ಸಿದ್ಧಾರ್ಥ ವಿಪ್ಪಿನ್ ದನಿ ನೀಡಿದ್ದಾರೆ ಹಾಗೂ ಕೊರಿಯೋಗ್ರಾಫಿ ರಾಮು ನೀಡಿದ್ದಾರೆ. ಈ ಸಾಹಸ ಕಾರ್ಯಕ್ಕೆ 40 ಲಕ್ಷ ರೂಪಾಯಿ ಖಚರ್ು ಮಾಡಲಾಗುತ್ತಿದೆ.
ಒಂದು ವೇಳೆ ಈ ಸಾಹಸ ಫಲನೀಡಿದ್ದಲ್ಲಿ, ಕನರ್ಾಟಕ 1 ಲಕ್ಷ ಗಿನ್ನಿಸ್ ದಾಖಲೆಗಾರರು ಹೊಂದಲಿದೆ ಎಂದು ಖುಷಿಯಿಂದ ನುಡಿದರು.
ಆತೀಶ್ ಬಿ ಕನ್ನಾಳೆ
 

Tuesday, January 18, 2011

ಬುಟ್ಟಿ ಹೆಣೆಯುವವರ ಬದುಕಿನ ಸುತ್ತ  ಕೋಟಲೆಗಳ ಹುತ್ತ ...

'ಈಗ ಆ್ಯನೋ ಮದಿ ಸೀಸನ್ ಆದಾರಿ ರೊಕ್ಕದ ಸಮಸ್ಯೆ ಆ್ಯನಬಿ ಇಲ್ರಿ, ಆದುರಾ ಮಳಗಾಲ ಬಂತು ಅಂದುರಾ ಒಂದು ಹೊತ್ತಿಂದ ಉಳ್ಳಾಕಬಿ ಪರದಾಡಬೇಕಾಯ್ತುದ್ರಿ ಅಂತಾರೆ ಈ ಬುಟ್ಟಿ ಹೆಣೆಯುವ ಮಹಿಳೆ.' ಹಾಗು ಇಡೀ ನಮ್ ಕುಟುಂಬಾನೆ ಈ ವೃತ್ತಿ ಮಾಡ್ತಿವ್ರಿ ಆದುರಾ ಆದಾಯ ಮಾತ್ರ ಒಪ್ಪತ್ತಿನ ಕೂಳಿಗು ಸಾಲಂಗಿಲ್ರಿ. ಈ ಮಹಿಳೆ ಮಾತು ಕೇಳಿ ಎಷ್ಟು ಜನರ ಕರುಳು ಚುರುಕ್ ಅನ್ನೋಲ್ಲಾ ನೀವೆ ಹೇಳಿ? 
ಬೀದರ್ನಲ್ಲಿ ಬಿದಿರಿನಿಂದ ಸಾಮಗ್ರಿಗಳನ್ನು ತಯಾರಿಸುವ ಇವರು ಸುಮಾರು ವರ್ಷಗಳಿಂದ ಈ ಸ್ಥಳದಲ್ಲಿಯೇ ನೆಲೆಸಿದ್ದು ಈ ವೃತ್ತಿಯಲ್ಲಿ ನಿರತರಾಗಿದ್ದಾರೆ. ಇವರು ತಮಗೆ ಬೇಕಾದ ಬಿದಿರುಗಳನ್ನು ಸಾಮಗ್ರಿ ಎನ್ನುವ ಸ್ಥಳದಿಂದ ಆಮದು ಮಾಡಿಸಿಕ್ಕೊಳ್ಳುತ್ತಾರೆ. ಈ ಬಿದಿರಿನಿಂದ ಹಲವು ಬಗೆಯ ಬುಟ್ಟಿ, ಹೂವಿನ ಪುಟ್ಟಿ, ಮೊರ ಮುಂತಾದ ಹಲವು ಬಗೆಯ ಸಾಮಗ್ರಿಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. 1 ಬಂಬುಗೆ ಸು. 60-70 ರೂ. ನೀಡಿ ಅದರಿಂದ ಹಲವು ಬಗೆಯ ಸಾಮಗ್ರಿಗಳನ್ನು ತಯಾರು ಮಾಡಿ ದಿನಕ್ಕೆ 1000 ರೂ. ನಷ್ಟು ಹಣಗಳಿಸುತ್ತಾರೆ. ಮದುವೆ ಸಮಯದಲ್ಲಿ ಮಾತ್ರ ಬುಟ್ಟಿಗಳಿಗೆ ಬೇಡಿಕೆ ಹೆಚ್ಚುವುದರಿಂದ ಸ್ವಲ್ಪ ಮಟ್ಟಿಗೆ ಹಣದ ಸಮಸ್ಯೆಯೇನಿರುವುದಿಲ್ಲ, ಆದರೆ ಮಳೆಗಾಲದಲ್ಲಂತೂ ಇಡಿ ಕುಟುಂಬವೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದ ಸದಸ್ಯರೆಲ್ಲರು ಬೇರೆ ತಿಳಿಯದ ಕಾರಣ ಇದೆ ವೃತ್ತಿಯನ್ನು ಜೀವನದ ಮಾರ್ಗವೆಂದು ಆರಿಸಿಕೊಂಡಿರುವುದು. 'ಶಾಸ್ತ್ರ ಹೇಳೋಕ್ಕೆ ಬದನೆಕಾಯಿ ತಿನ್ನೋಕ್ಕೆ' ಎಂಬಂತೆ ಸಕರ್ಾರದ ಯೋಜನೆಗಳೆಲ್ಲಾ ಇಂಥವರಿಗೆ ಸ್ಪಂದಿಸುತ್ತಿಲ್ಲ! ಕುಟುಂಬದಲ್ಲಿ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡಲಾಗಿಲ್ಲವೆಂಬ ಕೊರಗು ಹೆತ್ತ ಕರುಳಿನದ್ದಾದರೆ, ಇನ್ನೊಂದು ಕಡೆ ಕಿತ್ತು ತಿನ್ನುವ ಬಡತನ ಇರುವಾಗ ನಮಗೆ ಯಾಕೆ ಈ ಶಾಲೆ-ಗೀಲೆ ಸಾರ್ ಎನ್ನುತ್ತಾರೆ ಹತಾಶಗೊಂಡ ಆ ಮಹಿಳೆ. ವಿಪಯರ್ಾಸವೆಂದರೆ ಜನರಿಗೆಲ್ಲಾ ರೊಟ್ಟಿಗಾಗಿ ಬುಟ್ಟಿ ನೇಯ್ದು ಕೊಡುವ ಇವರ ಜೀವನಕ್ಕೆ ಭದ್ರತೆಯ ಬುಟ್ಟಿಯೇ ಇಲ್ಲ.
ಹಾಗಾದರೆ ಇವರು ಜೀವನ ಆದ್ರು ಹೇಗೆ ಮಾಡ್ತಾರೆ ಅನ್ನೊ ಪ್ರಶ್ನೆ ನಿಮಗೆ ಬರ್ಲಿಲ್ವಾ? ಬೇಸಿಗೆಯಲ್ಲಿ ದುಡಿದುದ್ದನ್ನು ಮಳೆಗಾಲದಲ್ಲಿ ತಿನ್ನುವ ಇರುವೆಯಂತೆ ಇವರ ಜೀವನ ಎನ್ನಬಹುದು! ಏಕೆಂದರೆ ಇವರು ಸಹ ಇರುವೆಯಂತೆಯೇ ಬೇಸಿಗೆಯ ಸೀಸನ್ನಲ್ಲಿ ಗಳಿಸಿದ್ದನ್ನು ಯೋಜನಾಬದ್ದವಾಗಿ ಮಳೆಗಾಲದಲ್ಲಿ ವ್ಯಯಮಾಡುತ್ತಾರೆ. ಆದರೆ ಇಂದಿನ ಆಧುನಿಕ ಪಾಶ್ಚಾತ್ಯ ಸಂಸ್ಕೃತಿಯಿಂದಾಗಿ ಬೇಸಿಗೆಯು ಅವರ ಪಾಲಿಗೆ ಮಳೆಗಾಲವೆ ಆಗಿದೆ..!
ಬುಟ್ಟಿ ಹೆಣೆಯುವವರ ಜೀವನದ ಸುತ್ತ ಸುತ್ತಿ ನೋಡುವಾಗ ಮುತ್ತಿರುವುದು ಬರೀ ಕರಾಳ ಛಾಯೆ, ದುಃಖ ಹಾಗು ಹಸಿವಿನ ಪರದಾಟ. ಇವೆಲ್ಲವುಗಳಿಂದ ಇವರಿಗೆಮುಕ್ತಿಯೇ ಇಲ್ಲವೆ?
ಆತೀಶ ಬಿ ಕನ್ನಾಳೆ

Saturday, January 1, 2011

In & As

ಕಥೆಯಲ್ಲ ವ್ಯಥ್ಯೆ..!
ಲೈಫು ಇಷ್ಟೆನೆ...

ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ...(ಎಲ್ಲಿ ಮಹಿಳೆಯರನ್ನು ಆದರಿಸಲಾಗುತ್ತದೆಯೋ ಅಲ್ಲಿ ದೇವರು ನೆಲೆಸಿರುತ್ತಾರೆ) ಎನ್ನುತ್ತದೆ ಈ ಶ್ಲೋಕ. ಸ್ತ್ರೀಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿ...! ಆಕೆ ಆದಿಶಕ್ತಿ, ಪ್ರಕೃತಿ, ಸೃಷ್ಟಿಯ ಮೂಲ ಎಂದೆಲ್ಲಾ ಗೌರವಿಸುತ್ತೇವೆ.
ಆದರೆ...ಎಷ್ಟರಮಟ್ಟಿಗೆ...?
ಕೆಲವು ದಿನಗಳು ಹಿಂದೆ ನಾನು ಮೆಜೆಸ್ಟಿಕ್ ಪ್ಲೈಓರ್ ಮೇಲೆ ಸ್ನೇಹಿತರ ಜೊತೆ ಹೋಗುತ್ತಿದ್ದೆ. ಅದು ಸಂಧ್ಯಾ  ಸಮಯವಾದ್ದರಿಂದ ಸಿಕ್ಕಾಪಟ್ಟೆ ಜನರಿಂದ ಫ್ಲೈಓರ್ ಫುಲ್ ರಷ್. ಅಲ್ಲಿ ಕೆಲವು ಪೋಲಿ ಹುಡುಗರು ನಿಂತಿದ್ದರು. ಎಲ್ಲರು 20-25 ಹದಿಹರೆಯದವರೆ. ಅಲ್ಲಿಯೇ ಕುಳಿತಿದ್ದ ಮೂವರು ಹುಡುಗಿಯರನ್ನು ನೋಡಿ ಏನೆನೋ ಮಾತನಾಡುತ್ತಿದ್ದರು. ಆ ಮೂವರು ಹುಡುಗಿಯರು ಕೂಡ ಅಷ್ಟೇ ಬಿಂದಾಸಾಗಿ ನಗುತ್ತಾ, ಮಾತನಾಡುತ್ತ ಈ ಹುಡುಗರ ಕಡೆಗೆ ನೋಡುತ್ತಿದ್ದರು. ನಾನೂ ಸ್ವಲ್ಪ ಹೊತ್ತು ಅಲ್ಲೇ ನಿಂತೆ, ಪರಿಸ್ಥಿತಿಯನ್ನು ತಿಳಿದುಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದೆ. ನನ್ನ ಲೇಖನಿಗೆ ಆಹಾರ ಸಿಕ್ಕಬಹುದೆಂಬ ತವಕ ಮನದ ಮೂಲೆಯಲ್ಲಿ ಸಮುದ್ರದ ಅಲೆಗಳಂತೆ ಏಳುತ್ತಿತ್ತು.
ಆ ಯುವತಿಯರು ತಮ್ಮ ದೇಹದ ಮೇಲೆ ಬಟ್ಟೆ ಇದೆಯೋ ಇಲ್ಲವೋ ಎಂಬ ಪರಿವಿಲ್ಲದೆ ಕುಳಿತಿದ್ದರು. ಒಂದೇ ಪದದಲ್ಲಿ ಹೇಳಬೇಕಾದರೆ ಹೆಣ್ಣಿಗೆ ಸಹಜವಾದ ಲಜ್ಜೆಯ ಸ್ವಭಾವವೇ ಅವರಲ್ಲಿ ಕಾಣುತ್ತಿರಲಿಲ್ಲ...!
ಹದಿನೈದಿಪ್ಪತ್ತು ನಿಮಿಷ ನಿಂತು ಪರಿಸ್ಥಿತಿಯನ್ನು ಪರಾಮಶರ್ಿಸಿದಾಗ ಗೊತ್ತಾಯ್ತು. ಅವರು ಬೇರೆ ಯಾರೂ ಅಲ್ಲ, `ಬದುಕಿನ ಬಂಡಿ ದೂಡಲು ದೇಹವನ್ನು ಬಂಡವಾಳವಾಗಿ ಮಾಡಿಕೊಂಡಿರುವವರು.'
ಆಮೇಲೆ 24-25 ಆಸುಪಾಸು ವಯಸ್ಸಿನ ಹುಡುಗ ಬಂದು ಕಣ್ಣು ಮಿಟುಕಿಸಿದ ತಕ್ಷಣ ಗ್ರೀನ್ ಸಿಗ್ನಲ್ ದೊರೆತ ಯುವತಿ ಸನ್ನೆಯ ಮೂಲಕ ಏನೋ ಹೇಳಿದಳು. ನಂತರ ಇಬ್ಬರೂ ಆಟೋ ಹಿಡಿದು ಎಲ್ಲಿಗೋ ಹೊರಟು ಹೋದರು.
ಆ ಘಟನೆಯಿಂದ ನನ್ನಲ್ಲಿ ಹಲವು ಪ್ರಶ್ನೆಗಳು ಫುಂಕಾನುಫುಂಕವಾಗಿ ಏಳಲಾರಂಭಿಸಿದವು. ಡಿಗ್ರಿಯಲ್ಲಿದ್ದಾಗ ಸಾಮಾಜಿಕ ಸಮಸ್ಯೆಗಳ ಕುರಿತಾಗಿ  ಓದಿದ್ದೆ. ಆದರೆ ಅದೇನೋ ಅಂತಾರಲ್ಲಾ, ಓದಿದ್ದು ಸುಳ್ಳಾಗಬಹುದು, ನೋಡಿದ್ದೂ ಸುಳ್ಳಾಗಬಹುದು, ನಿಧಾನಿಸಿ  ಯೋಚಿಸಿದಾಗ ನಿಜವ ತಿಳಿವುದು.... ಎಂಬಂತೆ ನನಗೂ ಆ ಮೆಜೆಸ್ಟಿಕ್ ಮೂಲೆಯಲ್ಲಿ ಈ ಲೋಕದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಇಂತಹ ವಿಷಯಗಳ ಒಂದು ತುಣುಕು ಕಣ್ಣಿಗೆ ಬಿತ್ತು. ಅದರ ಪ್ರತಿಫಲವೇ ಈ ಲೇಖನ.
ಮೆಜೆಸ್ಟಿಕ್ ಫ್ಲೈಓರ್ ಮೇಲೆ ಟೋಪಿ, ವಾಚು ಮಾರಿಕೊಂಡಿದ್ದ ಹಲವರನ್ನು ಅಲ್ಲಿಂದ ನೌದೋಗ್ಯಾರಾಹ (ಓಡಿಸಲಾಗಿದೆ) ಮಾಡಲಾಗಿದೆ.

ಮೂಗು ಮುರಿಯುವವರು
ಇಂತಹ ವೃತ್ತಿ ಎಂದಾಕ್ಷಣ ಮೂಗುಮುರಿಯುವ ಜನರೇ ಇವತ್ತು ಅತ್ಯಧಿಕ. ಆದರೆ ಹೀಗೆ ಮೂಗು ಮುರಿಯುವ ಮುನ್ನ ಕೆಲವು ಸಂಗತಿಗಳ ಕುರಿತು ಯೋಚಿಸಲೇಬೇಕು.
ಯಾವ ಹೆಣ್ಣು ತಾನೆ ಹುಟ್ಟಿದ ತಕ್ಷಣದಿಂದ ಇಂತಹ ವೃತ್ತಿಗಿಳಿಯಲು ಸಾಧ್ಯ....? ಈ ಸೃಷ್ಟಿಯ ನಿಯಮದಂತೆ ಪ್ರತಿ ಹೆಣ್ಣಿನಲ್ಲೂ ನಾಚಿಕೆ, ಸಂಕೋಚ ಮನೆಮಾಡಿರುತ್ತದೆ. ಒಬ್ಬ ಪುರುಷ ತನ್ನನ್ನು ನೋಡುತ್ತಿದ್ದಾನೆಂದರೆ, ಅಲ್ಲಿಂದ ಪಾರಾಗಲು ಯತ್ನಿಸುತ್ತಾಳೆ. ಅವಳಿಗೆ ಅವಳದ್ದೇ ಆದ ಆತ್ಮಾಭಿಮಾನ, ವರ್ಚಸ್ಸೆನ್ನುವುದಿದೆ. ಅದರಲ್ಲೂ ನಮ್ಮ ಭಾರತದ ಸಂಸ್ಕೃತಿ ಶ್ರೇಷ್ಠವಾದದ್ದು. ಆ ಶ್ರೇಷ್ಠತೆಗೆ ಇಲ್ಲಿಯ ನಾರಿ ದ್ಯೋತಕ. ಇಲ್ಲಿ ಹೆಣ್ಣಿಗೆ ನಾಚಿಕೆ, ಮಾನ-ಮಯರ್ಾದೆ ಎನ್ನುವ ಗುಣಗಳೆ ನಿಜ ಭೂಷಣ. ಆ ಗುಣಗಳನ್ನು ಅವಳು ಮೈಗೂಡಿಸಿಕೊಂಡಾಗ ಮಾತ್ರ ಪರಿಪೂರ್ಣಳಾಗಲು ಸಾಧ್ಯ. ಅದಕ್ಕೂ ಮಿಗಿಲಾಗಿ ಬೇರೆ ರಾಷ್ಟ್ರಗಳಿಗೆ ಹೋಲಿಸಿದಾಗ ನಮ್ಮ ದೇಶದಲ್ಲಿ ಸಾಂಪ್ರದಾಯಿಕ ಕುಟುಂಬಗಳು, ಕಟ್ಟುಕಟ್ಟಳೆಗಳು ಅತೀ ಹೆಚ್ಚು. ಇಂತಹ ವಾತಾವರಣದ ಮಧ್ಯೆ, ಇಷ್ಟೆಲ್ಲ ಕಟ್ಟುಪಾಡುಗಳ ನಡುವೆಯೂ ಈ ವೃತ್ತಿ ನಾಯಿಕೊಡೆಯಂತೆ ಬೆಳೆಯುತ್ತಿದೆ ಎಂದರೆ ಇಲ್ಲಿ ಯಾರ ಲೋಪವಿದೆ...?
ಈ ವೃತ್ತಿಯಲ್ಲಿರುವವರಿಗೆ ಸೌಂದರ್ಯವೇ ಬಂಡವಾಳ. ವಯಸ್ಸು ಕಳೆದಂತೆ ಅವಳ ಇಡೀ ಜೀವನ ಮುಳ್ಳಿನ ಹಾಸಿಗೆ. ಇವರ ಬದುಕಿನ ಕುರಿತು ಕ್ಷಣಹೊತ್ತು ಆಲೋಚಿಸುವಾಗ ಕಸಿವಿಸಿಯಾಗುತ್ತದೆ.

ಸ್ಥಾನಮಾನ
ಬಾಲ್ಯದಲ್ಲಿ ಯಾರಿಗೆ ಬೇಕಾದರೂ ಕೇಳಿ ನೋಡಿ ಅವಳು(ರು) ಇಂಜಿನೀಯರ್, ಡಾಕ್ಟರ್, ವಿಜ್ಞಾನಿ, ಪತ್ರಪತರ್ೆ, ಶಿಕ್ಷಕಿ ಹೀಗೆ ಹಲವಾರು ಗುರಿಗಳನ್ನು ನಿಮ್ಮ ಎದುರು ಬಿತ್ತರಿಸುತ್ತಾರೆ. ಆದರೆ ಯಾರೂ ಕೂಡ ತಾನು ಲೈಂಗಿಕ ಕಾರ್ಯಕತರ್ೆಯಾಗಬೇಕೆಂದು ಹೇಳುವುದಿಲ್ಲ. ಹೇಳಲು ಸಾಧ್ಯವೂ ಇಲ್ಲ. ಏಕೆಂದರೆ ಅದೊಂದು `ಪಾಪಕೂಪ'ವೆಂದು ಪ್ರತಿಯೊಬ್ಬರಿಗೂ ಗೊತ್ತು. ಹೀಗಿರುವಾಗ್ಯೂ ಇವತ್ತು ಆ ಇದನ್ನು ಅವರು ತಮ್ಮ (ಪ್ರ)ವೃತ್ತಿಯನ್ನಾಗಿಸಿಕೊಂಡಿದ್ದಾರೆಂದರೆ ಬಹುಶಃ ಸ್ವಯಿಚ್ಛೆಯಿಂದ ಯಾರೂ ಆ ವೃತ್ತಿಗೆ ಕಾಲು ಇಟ್ಟಿಲ್ಲವೆಂದು ಕಡ್ಡಿ ಮುರಿದಷ್ಟು ಸುಲಭವಾಗಿ ಹೇಳಬಹುದು. ಕ್ಷಣಹೊತ್ತು ನೀವೆ ಯೋಚಿಸಿ.... ಒಬ್ಬ ಮಹಿಳೆ ತನ್ನ ದೇಹವನ್ನು ಹಲವು ಪುರುಷರಿಗೆ ಒಪ್ಪಿಸಬೇಕಾದ್ದಲ್ಲಿ ಅವಳು ತನ್ನ ಮನಃಸಾಕ್ಷಿಯನ್ನು ಎಷ್ಟರ ಮಟ್ಟಿಗೆ ಕೊಂದಿರಬಹುದು(ಕೊಲೆಗೈದಿರಬಹುದು)!?
ಕನಸುಗಳಿಲ್ಲವೆ?
ಹಾಗಾದರೆ ಈ ಹೆಣ್ಣು ಮಕ್ಕಳಿಗೆ ಬೇರೆಯವರಂತೆ ತಮ್ಮದೇ ಕನಸುಗಳೇ ಇಲ್ಲವೇ..? ಅವರು ಇತರರಂತೆ ಬದುಕಬೇಕು ಎಂದುಕೊಳ್ಳೋದೇ ಇಲ್ಲವೇ...??
ಖಂಡಿತವಾಗಿ ಅವರಲ್ಲಿಯೂ ಅನೇಕ ಕನಸುಗಳುಂಟು. ಇಂತಹ ಹೀನಾಯ ಬದುಕನ್ನು ದೂಡುತ್ತಿರುವ ಅವರ ಹೃದಯ ನೋಯುತ್ತಲೇ ಇರುತ್ತದೆ. ಈ ಬದುಕಿನ ಹೊರತಾಗಿಯೂ ಆ ಹೃದಯದಲ್ಲಿ ನೂರಾರು ಆಸೆಗಳುಂಟು.
ತನ್ನ ಬದುಕಿಗಿಂತ ಭಿನ್ನವಾಗಿ ಬದುಕುತ್ತಿರುವ ಬೇರೆ ಸ್ತ್ರೀಯರನ್ನು ನೋಡುವಾಗ ಅವಳೂ ಅಂತಹ ಜೀವನಕ್ಕಾಗಿ ತವಕಿಸಬಹದು. ಅವರ ಕೌಟುಂಬಿಕ ಜೀವನ, ಪುಟ್ಟ ಸಂಸಾರ ನೋಡುವಾಗ ಅವಳ ಹೃದಯದಲ್ಲಿ ಜ್ವಾಲಾಮುಖಿ ಭುಗಿಲೇಳುತ್ತಿರಬಹುದು?
ಪರಿಸ್ಥಿತಿ ಹೀಗಿರುವಾಗ ಏಕೆ ಈ ಜಾಡ್ಯ ನಮ್ಮ ಸಮಾಜದಲ್ಲಿ ಹೆಚ್ಚುತ್ತಿದೆ?
ಸಿ.ಎನ್.ಮುಕ್ತಾರವರ `ಪರಿಭ್ರಮಣ' ಕಾದಂಬರಿಯಲ್ಲಿ `ಈ ಏಕೆ?' ಎನ್ನುವ ಪ್ರಶ್ನೆಗೆ ಸ್ಪಟಿಕದಂಥ ಉತ್ತರ ದೊರಕಬಹುದು. ಒಂದು ಹೆಣ್ಣು ಹುಟ್ಟಿದಾಗ ತಂದೆಯ, ಮದುವೆಯ ನಂತರ ಪತಿಯ ಹಾಗೂ ಮುಂದೆ ಮಕ್ಕಳು ಹೇಳಿದಂತೆ ಕೇಳುತ್ತಾ ಜೀವಿಸಬೇಕೆಂಬ ನಿಯಮ (ಪ್ರಾಯಶಃ ಇದು ಮೆಟ್ರೋ ಸಿಟಿಗಳಿಗೆ  ಅಷ್ಟು ಅನ್ವಯಿಸದು) ಹಳ್ಳಿಗಳಲ್ಲಿ ಅಷ್ಟೆ ಏಕೆ ಅನೇಕ ನಗರಗಳಲ್ಲಿ ಇಂದಿಗೂ ಚಾಲ್ತಿಯಲ್ಲಿದೆ.
ಈ ಪರಿಭ್ರಮಣ ಕಾದಂಬರಿಯ ಸ್ವಾರಸ್ಯ ಕೂಡ ಅದೇ. ಅಪ್ಪನಿಲ್ಲದ ಸುಂದರ ಯುವತಿಯೊಬ್ಬಳ ಬದುಕಿನ ವ್ಯಥ್ಯೆ ಇದರಲ್ಲಿ ಅಡಕವಾಗಿದೆ. ಅನಾರೋಗ್ಯದಲ್ಲಿದ್ದ ಅಜ್ಜಿ ಆಶ್ರಯದಲ್ಲಿ ಅವಳು ಬೆಳೆಯುತ್ತಾಳೆ ನಂತರ ಅಜ್ಜಿ ಸತ್ತ ಮೇಲೆ ಅವಳು ಕಂಗಾಲಾಗಿ ಪುರುಷ ಪ್ರಧಾನ ಸಮಾಜದ  ಕಾಮಾಲೆ ಕಣ್ಣಿಗೆ ಗುರಿಯಾಗುತ್ತಾಳೆ. ಇಂತಹ ವಾತಾವರಣ ಇಂದಿಗೂ ಇದೆ. ಇದೆಲ್ಲಾ ಕಥೆಯಂತೆ ಭಾಸವಾದರೂ ವಾಸ್ತವ್ಯಕ್ಕೆ ಆಳ ಸಂಬಂಧವಿದೆ. ಕಥಾನಕಗಳು ಯಾರದೋ ಬದುಕಿನ ವಾಸ್ತವವಾಗಿರಬಹುದು.
ಅನಿವಾರ್ಯ ಕಾರಣಗಳು
ಎಸ್ಟಿಡಿ(ಸೆಕ್ಷುಯಲ್ ಟ್ರಾನ್ಸ್ಮಿಟಡ್ ಡಿಸಿಸ್) ಎಂದು ಕರೆಯಲಾಗುವ ಈ ವೇಶ್ಯೆಯರ ತಾಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇವತ್ತು 100ಕ್ಕೆ ಪ್ರತಿಶತಃ ಓರ್ವ ಮಹಿಳೆ ಸ್ವಇಚ್ಛೆಯಿಂದ ಈ ವೃತ್ತಿಗೆ ಇಳಿದರೂ, ಇನ್ನುಳಿದ 99% ಮಹಿಳೆಯರು ಈ ಕೂಪಕ್ಕೆ ಅನಿವಾರ್ಯ ಕಾರಣಗಳಿಂದ ದೂಡಲ್ಪಡುತ್ತಿದ್ದಾರೆ. ಇದಕ್ಕೆ ಹಲವು ಕಾರಣಗಳುಂಟು.

ವಿಭಕ್ತ ಕುಟುಂಬಗಳ ಹೆಚ್ಚಳ: `ವಿನಾಶ ಕಾಲೆ ವಿಪರೀತ ಬುದ್ಧಿ' ಎಂಬಂತಾಗಿದೆ ನಮ್ಮ ಈ ಸಮಾಜದ ಪರಿಸ್ಥಿತಿ. ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ವಲಸೆ ಪ್ರಮಾಣ ಮುಗಿಲು ಮುಟ್ಟಿದೆ. ಜೌದ್ಯೋಗೀಕರಣದ ಫಲಶ್ರುತಿಯಾಗಿ ಇಂದು ಅವಿಭಕ್ತ ಕುಟುಂಬಗಳು ಕಾಣೆಯಾಗಿವೆ. ಹಿರಿಯರೂ ಅನುಭವಿಗಳೂ ಇದ್ದ ಅವಿಭಕ್ತ ಕುಟುಂಬಗಳಲ್ಲಿ ಏನಾದರೂ ಕೌಟುಂಬಿಕ ವಿರಸ ತಲೆದೋರಿದರೆ, ಅದಕ್ಕೆ ಅವರು ತಕ್ಷಣ ಸೂಕ್ತ ಪರಿಹಾರ ನೀಡುತ್ತಿದ್ದರು. ಆದರೆ ಈಗ ಪತಿ-ಪತ್ನಿಯರಿಬ್ಬರು ದುಡುಕಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ವಿಚ್ಛೇದನಗಳ ಪ್ರಮಾಣ ಹೆಚ್ಚಿದೆ. ಇದು ಪರೋಕ್ಷವಾಗಿ ಅನೈತಿಕ ಸಂಬಂಧ, ವೇಶ್ಯಾವೃತ್ತಿ ಹೆಚ್ಚಳಕ್ಕೆ ಕಾರಣವಾಗಿದೆ.
ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕಾದ ಆರಕ್ಷರು (ಪೊಲೀಸರು) ಹಾಗೂ ರಾಜಕಾರಣಿಗಳು ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಇದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಬೇಲಿಯೇ ಎದ್ದು ಹೊಲವನ್ನು ಮೇಯ್ದಂತೆ ಎಂಬ ಪರಿಸ್ಥಿತಿ ನಿಮರ್ಾಣವಾಗಿದೆ.
ಪಿಂಕ್ ಸಿಟಿ, ಮರುಭೂಮಿಗೆ ಪ್ರಖ್ಯಾತಿ ಪಡೆದಿರುವ ರಾಜಸ್ಥಾನ ಎಲ್ಲರಿಗೂ ಗೊತ್ತೆ ಇದೆ. ಈ ರಾಜಸ್ತಾನದಲ್ಲಿರುವ ಚಿಕ್ಕ ಪಟ್ಟಣ `ಆಲ್ವರ್' ಯಾವುದಕ್ಕೆ ಪ್ರಸಿದ್ಧಿ ಪಡೆದಿದೆ ಎಂದರೆ, ದೇಶದ ಹಲವು ರಾಜ್ಯಗಳಿಂದ ಚಿಕ್ಕ ಹುಡುಗಿಯರನ್ನು ಹೊತ್ತೊಯ್ದು ಅವರನ್ನು ಈ ವೇಶ್ಯಾಗೃಹಕ್ಕೆ ದಬ್ಬಲಾಗುತ್ತದೆ. ಅತೀ ಕಡಿಮೆ ವಯೊಮಾನದಲ್ಲಿ(12ವರ್ಷದ) ಹುಡುಗಿಯರನ್ನು ಈ ವೃತ್ತಿಗೆ ಇಳಿಸಲಾಗುತ್ತದೆ.
ರಾತ್ರೋರಾತ್ರಿ ಏನೂ ತಿಳಿಯದ ಬಾಲೆಯರನ್ನು  ಕರೆತಂದು ಅವರನ್ನು ಮಕ್ಕಳಂತೆ ಬೆಳೆಸಲಾಗುತ್ತದೆ. ಕೇಳಿದಾಗ ಪೌಷ್ಠಿಕಾಂಶಯುಕ್ತ ಊಟ ನೀಡಲಾಗುತ್ತದೆ. ಆದರೆ ಅದರ ಜತೆ `ಆಕ್ಸಿಟಾಸಿನ್' ಇಂಜಕ್ಷನ್ ಕೂಡ ನೀಡಲಾಗುತ್ತದೆ. ಇದರ ಪ್ರಮುಖ ಉದ್ದೇಶ ಹುಡುಗಿಯರು ಆದಷ್ಟು ಬೇಗ ಋತುಮತಿಯರಾಗಿ ಈ ವೃತ್ತಿಗೆ ಯೋಗ್ಯರಾಗಲೆನ್ನುವುದು!. ಇದರಿಂದ ದಷ್ಟಪುಷ್ಟರಾಗಿ ತುಂಬಿಕೊಂಡು ಬೆಳೆಯುವ ಯುವತಿಯರನ್ನು ಅರಬ್ (ಯುಎಇ) ರಾಷ್ಟ್ರಗಳಿಗೆ ಮಾರಲಾಗುತ್ತದೆ. ಈ ವ್ಯವಹಾರದಲ್ಲಿ ತೊಡಗಿರುವವರು ಕೈತುಂಬಾ ಹಣ ಪಡೆದು, ಐಷಾರಾಮಿ ಜೀವನ ನಡೆಸುತ್ತಾರೆ. ಆದರೆ ಈ ವಿಷ ವತರ್ುಲದಲ್ಲಿ ಸಿಲುಕುವ ಹೆಣ್ಣುಗಳ ಜೀವನ ಮಾತ್ರ ದುರ್ಭರ. ಸಾಯುವುದಕ್ಕೂ ಸ್ವಾತಂತ್ರವಿಲ್ಲ. ಇವತ್ತು ಇದರ ಪರಿಣಾಮವಾಗಿ ಈ `ಆಲ್ವರ್'ನಲ್ಲಿರುವ ಬಹುತೇಕ ಮಹಿಳೆಯರು ಲೈಂಗಿಕ ರೋಗಗಳಿಗೆ ತುತ್ತಾಗಿದ್ದಾರೆ. ಇದು ಅಲ್ಲಿನ ಪೊಲೀಸರಿಗೆ ತಿಳಿದಿಲ್ಲವೆಂದೇನಿಲ್ಲ. ಆದರೆ ಅವರೂ ಮಾಮುಲು ಪಡೆದು ತಮ್ಮ ಜೇಬು ತುಂಬಿಸಿಕೊಂಡು ಕುರುಡ ಜಾಣರಾಗಿದ್ದಾರೆ. ಇಲ್ಲಿ ಶೋಷಣೆಗೆ ಒಳಗಾಗುತ್ತಿರುವವಳು ಮಹಿಳೆ. ವಿಪಯರ್ಾಸವೆಂದರೆ ಇಲ್ಲಿ ಹೆಣ್ಣೇ ಮತ್ತೋರ್ವ ಹೆಣ್ಣಿನ ಪಾಲಿಗೆ ವೈರಿಯಾಗಿದ್ದಾಳೆ.

ಇದಕೆ ಕೊನೆಯೇ ಇಲ್ಲವೇ?
ಇದಕ್ಕೆ ಕೊನೆನೇ ಇಲ್ವಾ..? ನಮ್ಮದು ಭವ್ಯಸಂಸ್ಕೃತಿ. ಆದರೆ ಇಲ್ಲಿ ಹೆಣ್ಣು ಹುಟ್ಟಿದಂದಿನಿಂದ ಒಂದಲ್ಲಾ ಒಂದು ರೀತಿಯಲ್ಲಿ ಶೀಷಣೆಗೆ ಗುರಿಯಾಗುತ್ತಲೇ ಬಂದಿದ್ದಾಳೆ. ಅನೇಕ ಹೋರಾಟಗಳಾದವು, ಸತ್ಯಾಗ್ರಹಗಳಾದವು, ಅನೇಕರು ಇದಕ್ಕಾಗಿ ಹೋರಾಡಿ ಮಡಿದರು. ಆದರೆ ಇದರಿಂದ ಮುಕ್ತಿ ಸಿಕ್ಕಿಲ್ಲ.
ಸ್ತ್ರೀ ಆದಿಶಕ್ತಿ, ಮಹಿಷಾಸುರ ಮದರ್ಿನಿ ಎಂದು ಹೊಗಳಿ ಚಪ್ಪರದ ಮೇಲೆ ಕೂಡಿಸಲಾಗುತ್ತಿದೆಯೇ ಹೊರತು ನೈಜವಾಗಿ ಸ್ತ್ರೀ ವಿಮೋಚನೆ ಆಗಿಲ್ಲ. ಒಂದು ವೇಳೆ ಇದು ಹೀಗೆ ಮುಂದುವರೆದರೆ ಖಂಡಿತವಾಗಿ ನಮ್ಮ ರಾಷ್ಟ್ರದ  ಭವಿಷ್ಯ ಕತ್ತಲು ಕವಿದು ಕಣ್ಮರೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಈಗಾಲಾದರೋ ಕಾನೂನು, ಮಹಿಳಾ ಅಭಿವೃದ್ಧಿ ಪರ ಎಂದು ಸೆಡ್ಡುಹೊಡೆದು ಕುಳಿತಿರುವ ಸಂಸ್ಥೆಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಜಾಗೃತವಾಗಿ ಇದರ ವಿರುದ್ಧ ಹೋರಾಡಿದರೆ ಸ್ವಲ್ಪಮಟ್ಟಿಗಾದರೂ ಪರಿಸ್ಥಿತಿ ಸುಧಾರಿಸೀತು.

ಆತೀಶ್ ಬಿ ಕನ್ನಾಳೆ