Friday, April 8, 2011

ಡರ್ ಕೆ ಆಗೆ ಜೀತ್ ಹೆ, ಪರ್ ಯಂಹಾ ಮೌತ್ !

ಪುಕುಶಿಮಾ ಈಗ ಮತ್ತೆ ಪುಕುಪುಕು!
"ಯಾಕೆ ಈ ಪ್ರಕೃತಿ ಹೀಗೆ ಮಾಡುತ್ತೆ...? ಏನಾದ್ರು ಪೂರ್ವಜನ್ಮದ ಹಗೆತನ ಏನಾದ್ರು ಇದೆನಾ? ಅಥವಾ ಜಪಾನ್ ಅಂದ್ರೆ ಅಲಜರ್ಿನಾ....?"

ಜಪಾನ್ ಬಹುಶಃ ಆ ದಿನವನ್ನು ಮರೆಯಬೇಕೆಂದುಕೊಂಡರೂ ಮರೆಯಲಾಗದು. ಅದು ಅಂಥ ಕರಾಳ ದಿನ. ಇಡೀ ವಿಶ್ವವೇ ನಿಬ್ಬೆರಗಾಗಿ ಆ ಕಡೆಗೆ ನೋಡುತ್ತಿತ್ತು. ಇದೇನು ಪ್ರಳಯದ ಸೂಚನೆಯೇ ಅಥವಾ ವಿನಾಶದ ಅಂಕುರವೇ..? ಭಾರತದಲ್ಲಿಯೂ ಕೂಡ ಆ ಪುಕುಪುಕು ಪ್ರಾರಂಭವಾಗಿತ್ತು. ಅಂದು ಸುದ್ದಿ ವಾಹಿನಿ ವೀಕ್ಷಿಸಿದ ಪ್ರತಿಯೊಬ್ಬರು ಉದ್ಗಾರದಿಂದ ನುಡಿದದ್ದೊಂದೆ ಇಂಥ ಟೈಂ ಎಲ್ಲೂ ಬರಬಾರ್ದಪ್ಪಾ..! ಕೆಲವರಿಗಂತೂ ಈ ಘಟನೆ ಎಸ್ಎಂಎಸ್ ಜೋಕಾಗಿ ಮಾರ್ಪಟ್ಟಿತ್ತು. ಯಮ ಚಂದ್ರಗುಪ್ತನಿಗೆ `ಜಾ ಪಾನ್ ಲೇಕೆ ಆ..' ಎಂದು ಹೇಳಿದ್ದನಂತೆ, ಆದರೆ ಅವನು ಇಡೀ ಜಪಾನ್ನನ್ನೇ ಕೊಚ್ಚಿಕೊಂಡು ಹೋದ... ಅದೆಲ್ಲಾ ಬುರುಡೆ ಬಿಡಿ. ಆದ್ರೆ ಇಂತಹ ಕ್ರಿಟಿಕಲ್ ಕಂಡಿಷನ್ ಮಾತ್ರ ಯಾವ ವೈರಿಗೂ ಬರ್ಬಾರ್ದು.
ಐತಿಹ್ಯದ ಬೆನ್ನು ಬಾರಿಸುತ್ತಾ ಕೂಡುವುದಕ್ಕಿಂತ, ಪ್ರಸ್ತುತತೆಯ ಬಗ್ಗೆ ಗಮನ ಹರಿಸಲೇಬೇಕು. ಈಗ ಮತ್ತೆ ಜಪಾನಿನಲ್ಲಿ ಸುನಾಮಿಯಾಗುವ ಮುನ್ಸೂಚನೆ ಕಾಣಿಸಿಕೊಂಡಿದೆ. ಪ್ರಾಯಶಃ ಭೂಕಂಪ ಮತ್ತೆ ಬ್ಯಾಕ್ ಟು ಪೆವೆಲಿಯನ್ ಎಂಬಂತೆ ಮರಳಬಹುದೇನೊ? ಎಂಬ ಭಯ ಕಾಡುತ್ತಿದೆ. ಗುರುವಾರವಾದ ಲಘು ಭೂಕಂಪದಿಂದ ಹಾಲಿ ಅಳಿದುಳಿದಿರುವ ಜಪಾನ್ ಅಬ್ಬೇಪಾರಿಯಾಗಿದೆ.

ಕನ್ಫೂಸ್ ಆಗೋ ಪ್ರಮೇಯವೇ ಇಲ್ಲ. ಇದೆಲ್ಲ ನಾವೇ ಮಾಡಿರೋದು ಈಗ ನಾವೆ ಅನುಭವಿಸಬೇಕು. ವಿಜ್ಞಾನ ಮುಂದುವರಿಯುವುದರಿಂದ ಏನೆನೋ ಆಗ್ತಾ ಇದೆ. ಅದನ್ನು ಅಲ್ಲಗೆಳೆಯಲಾಗದು. ಆದ್ರೆ ಆ ಏನೆನೋದಲ್ಲಿ ಇದು ಕೂಡ ಒಂದು...
"ನಮ್ ಕೈಯಲ್ಲಿರೋದು ಒಂದೇ, ಅದು ದೇವರಲ್ಲಿ ಅವರಿಗೋಸ್ಕರ ಪ್ರಾರ್ಥನೆ ಮಾಡುವುದು ಅಷ್ಟೆ ಅದನ್ನು ಬಿಟ್ಟು ಮತ್ತೇನನ್ನು ಮಾಡಲಾಗದು." ನಮ್ಮಲ್ಲಿಯೂ ಇಂಥ ಘಟನೆಗಳು ಆಗಬಾರದೆಂದರೆ ಸೃಷ್ಟಿಯ ಸಂರಕ್ಷಣೆಯಲ್ಲಿ ಎಲ್ಲರೂ ಟೊಂಕಕಟ್ಟಿ ನಿಲ್ಲಬೇಕು.. ಲೆಟ್ಸ್ ಜಾಯಿನ್ ಟುಗೆದರ್...

No comments:

Post a Comment