Wednesday, April 6, 2011

Bichu Matu...


ಒಂದು ಕಡೆ ಖುಷಿ,  
ಮತ್ತೊಂದು ಕಡೆ ನೈತಿಕತೆಯ ಅಧಃಪತನ!
ಮಿಸ್ ಪೂನಂ ಪಾಂಡೆ ನೀವ್ ಇರೋದು ಭಾರತದಲ್ಲಿ ಅದನ್ನು ಮರೀದೆ ಇದ್ರೆ ಸಾಕು.


ಭಾರತ ಶ್ರೀಲಂಕಾ ವಿರುದ್ಧ ಸಾಧಿಸಿದ ಜಯ ಪ್ರಾಯಶಃ ಪ್ರತಿಯೊಬ್ಬ ಭಾರತೀಯ ಎಂದೂ ಕೂಡ ಮರೆಯಲಾಗದು. ಅದೊಂದು ರೋಮಾಂಚಕ ಹಾಗೂ ವಿರೋಚಿತ ಜಯ. ಇಡೀ ವಿಶ್ವದೆದುರು ಸಿಂಹಳಿಯರನ್ನು ಸೆದೆಬಡಿದ ಬ್ಲೂ ಬಾಯ್ಸ್ಗಳ ಆಟದ ವೈಖರಿ ಕಣ್ಪರದೆ ಮೇಲಿಂದ ಅಳಿಸುವುದು ಅಸಾಧ್ಯವೇ ಸರಿ.
28 ವರ್ಷಗಳಿಂದ ಕಾಯುತಿದ್ದ ಆ ಕ್ಷಣ ಕೊನೆಗೂ ನಮ್ಮ ನೆಲೆದಲ್ಲೆ ಜನ್ಮ ತಳೆದದ್ದು ಮತ್ತೊಂದು ಖುಷಿಯ ವಿಚಾರ. ಈ ಹರುಷದ ವರುಷಕ್ಕೆ ಬರೀ ಪದಗಳಿಂದ ವಣರ್ಿಸುವುದು ತುಂಬಾ ಕಷ್ಟ. ಅದು ಬರೀ ಭಾರತೀಯರ ಜಯವಲ್ಲ! ಭಾರತದ ವಿಜಯ. ಧೋನಿ ಬಾರಿಸಿದ ಸಿಕ್ಸ್ಗೆ ವಾಂಖೆಡಾ ಗ್ರೌಂಡ್ ಅಷ್ಟೆ ಅಲ್ಲ, ಬದಲಿಗೆ ಇಡೀ ಭಾರತವೇ ಸಂತೋಷದಿಂದ ಕುಣಿದು ಕುಪ್ಪಳಿಸಿತು. ಬೆಂಗಳೂರಿನ ಎಂ.ಜಿ. ರೋಡ್ ಹಾಗೂ ಬ್ರಿಗೆಡ್ ರೋಡ್ನಲ್ಲಂತೂ ಹೇಳತೀರದ ಖುಷಿ ವ್ಯಕ್ತವಾಗುತ್ತಿತ್ತು.
ಹುಡುಗರಷ್ಟೆ ಅಲ್ಲ. ಹೆಂಗಳೆಯರೂ ಕೂಡ ರಾತ್ರಿ 2 ಗಂಟೆ ಆದರೂ ವಿಜಯೋತ್ಸವ ಆಚರಣೆಯಲ್ಲಿ ಫುಲ್ ಬಿಜಿ ಯಾಗಿದ್ದರು. ಏನೆ ಅನ್ನಿ ಆ ದೃಶ್ಯ ಸವಿಯಲು ಬರೀ ಎರಡು ಕಣ್ಣುಗಳು ಸಾಲವು.
ಇವೆಲ್ಲ ಒಂದು ಕಡೆ ಆದ್ರೆ ಮತ್ತೊಂದು ಕಡೆ, `ಭಾರತ ಏನಾದ್ರು ಟೂರ್ನಮೆಂಟ್ನಲ್ಲಿ ಶ್ರೀಲಂಕಾ ವಿರುದ್ಧ ಗೆದ್ದರೆ ತಾನು ಬೆತ್ತಲೆ ಪರೆಡ್ ಮಾಡುವೆ' ಎಂದು ಹೇಳಿದ್ದ ರೂಪದಶರ್ಿ ಪೂನಂ ಪಾಂಡೆಗೋಸ್ಕರ ಎಲ್ಲರೂ ಕಾಯ್ತಾ ಇದ್ರು. ಆದ್ರೆ ಪೂನಂ ಮಾತ್ರ ಕಾಣ್ಲೆ ಇಲ್ಲ :(
ಈಗಲೂ ಹಲವು ಕೊಟೇಷನ್ಗಳನ್ನು ನೀಡಿ ವಿವಾದದಲ್ಲಿದ್ದಾಳೆ ಈ ಬಿಚ್ಚಮ್ಮ. ತನ್ನ ಮೈಮಾಟದಿಂದ ಈಗಾಗಲೆ ಪಡ್ಡೆ ಹುಡುಗರಲ್ಲಿ ಹುಚ್ಚೆಬ್ಬಿಸಿರುವ ಪಾಂಡೆಗೆ ಶಿವಸೇನಾ, ಬಿಜೆಪಿ ಬೆದರಿಸಿದ್ದಕ್ಕೆ ಕ್ವೈಟ್ ಆಗಿದ್ದಾಳೆ. ಆದರೆ ಈಗಲೂ ಐಸಿಸಿ ಪಮರ್ಿಷನ್ ಕೊಟ್ರೆ ಭಾರತೀಯ ಕ್ರಿಕೆಟ್ ಆಟಗಾರರ ಮುಂದೆ ಬೆತ್ತಲಾಗುವುದಾಗಿ ಹೇಳಿದ್ದಾಳೆ. ಎಂಥಾ ಕಿಕ್ಕಿಂಗ್ ವಡ್ಸರ್್ ಅಲ್ವಾ!
ಬಡ್ಡಿಮಗುಂದು ಇಂಥವಳನ್ನು ನಮ್ಮ ಭಾರತೀಯಳೆನ್ನಲು ನಾಚಿಕೆ ಆಗುತ್ತೆ. ಶೀಲಕ್ಕಾಗಿ ಜೀವ ನೀಡುವ ಸಂಸ್ಕೃತಿ ನಮ್ಮದು ಆದರೆ ಇಂತಹ ಪವಿತ್ರ ಭಾರತ ಭೂಮಿಯಲ್ಲಿ ಜನ್ಮವೆತ್ತು ದೇಹ ತೋರಿಸುವುದಾಗಿ ಹೇಳುತ್ತಿರುವುದು ದೊಡ್ಡ ದುರಂತ. ಏನೆ ಅನ್ನಿ ಮೈತೋರಿಸಿಕೊಳ್ಳುವ ಷರತ್ತು ಮಾಡಿ, ಇಡೀ ಪರಿಸ್ಥಿತಿಯೇ ಅವಳ ಈ ನಿಧರ್ಾರಕ್ಕೆ ಎದುರಾದರೂ ಸುಮ್ಮನಾಗುವ ಬದಲು ತಾನು ಮಾತು ತಪ್ಪುವುದಿಲ್ಲವೆಂದು ಹೇಳಿಕೊಳ್ಳುತ್ತಿದ್ದಾಳೆ. ಇಂಥವರ ವಿರುದ್ಧ ಕಾನೂಕು ಕ್ರಮ ಕೈಗೊಂಡರೆ ಮುಂದಾಗುವ ಅವಘಡಗಳನ್ನು ತಪ್ಪಿಸಬಹುದೇನೊ..?
ಯಾಕೊ ನಮ್ಮ ಹುಡುಗಿಯರಿಗೆ ಸ್ವಲ್ಪ ಜಾಸ್ತಿನೇ ಸ್ವತಂತ್ರ ಸಿಕ್ಕಿದೆ ಎನೋ ಅನಸ್ತಾ ಇದೆ...

ಆತೀಶ್ ಬಿ ಕನ್ನಾಳೆ.

 

1 comment:

  1. ಭಾರತ್ ಗೇದಿದ್ದು ನಂಗೂ ಬಹಳ ಕುಶಿ ತಂದಿದೆ ಅದು ಕೂಡಾ ೨೮ ವರ್ಷ ಆದ್ ನಂತ್ರಾ ಅಲ್ವಾ
    ಇಂಡಿಯಾ ಈಸ್ ಗ್ರೇಟ್ ಕಂಟ್ರೀ.............!
    ಸಚಿನ್ ಕನಸು ನನಸು ಆಯಿತ್ ಅಲ್ವಾ.....!
    ವರ್ಲ್ಡ್ ಕಪ್ ಇವಾಗ್ ಇಂಡಿಯಾ ಸೊತ್ತೂ.......!
    ನಮಗೆ ಹೆಮ್ಮೆ ಇದೆ ಇಂಡಿಯಾ ಮೇಲೆ,,,,,,,,,,,,!

    ಕಾಶೀನಾಥ್ ಸ್ವಾಮಿ.......!

    ReplyDelete