Monday, December 13, 2010

Love is sweet Poison

ಕೊನೆಗೂ ಕೂಡದ ಪ್ರೀತಿ...... 
ಮೊಬೈಲ್ ಇಲ್ಲದ ಕಾಲವದು. ಆವಾಗ ಎಲ್ಲಿ ಮೊಬೈಲ್? ತಂತ್ರಜ್ಞಾನ, ಜನಜೀವನ ಇಷ್ಟೊಂದು ಮುಂದುವರೆದಿರಲಿಲ್ಲ. ಆದರೆ ಪ್ರೀತಿಸುವ ಮನಸ್ಸುಗಳಿಗೆ ಅನುಕೂಲಕರವಾದ ಎಲ್ಲಾ ವಾತಾವರಣ ಆಗ ಇತ್ತು. ಬಹುಷ್ಯ ಈ ವಾತಾವರಣವೇ ಅವರ ಪ್ರೀತಿಯ ಹುಟ್ಟಿಗೆ ಕಾರಣವಾಯಿತೇನೋ?
ಅವರಿಬ್ಬರ ನಡುವಿನ ಸ್ನೇಹ ಯಾವಾಗ ಪ್ರೇಮವಾಗಿ ಮಾರ್ಪಟ್ಟಿತೋ ಗೊತ್ತಿಲ್ಲ. ಅದು ಪ್ರೀತಿ ಎಂದು ತಿಳಿಯುವ ಹೊತ್ತಿಗಾಗಲೇ ಕಾಲ ಮಿಂಚಿಹೋಗಿತ್ತು. ಅದು ಅವರ ಪದವಿಯ ಕೊನೆಯ ವರ್ಷವಾಗಿದ್ದರಿಂದ ಅವರು ಬೇರೆ-ಬೇರೆ ಸ್ಥಳಗಳಿಗೆ ಪಲಾಯನಗೈಯಲೇ ಬೇಕಾಯಿತು. ಅವನು ಉದ್ಯೋಗ ಅರಸಿ ಬೆಂಗಳೂರಿಗೆ ಹೋದನು. ಇತ್ತ ಇವಳು ಮನೆಯ ಒತ್ತಾಯಕ್ಕೆ ಮಣಿದು ಉದ್ಯೋಗದ ಸೊಲ್ಲೆತ್ತದೆ ಆಟೋಗ್ರಾಫ್ ಡೈರಿ ನೋಡುತ್ತಾ ಸುಮ್ಮನಾಗುತ್ತಿದ್ದಳು. ಮನೆಯಲ್ಲೆಲ್ಲಾ ಬರೀ ಸ್ಮಶಾನ ಮೌನ, ಚಿಗುರೆಯಂತೆ ಚೂಟಿಯಾಗಿದ್ದ ಈಕೆ ಸಮ್ಮನಾಗಿದ್ದಳು. 'ಎಷ್ಟಾದರೂ ಕಾಯಿಯಾದ ಪ್ರೀತಿ ಅಲ್ಲವೇ? ಹೂವಾಗಿದ್ದರೆ ಚಿವುಟಬಹುದಾಗಿತ್ತೇನೋ.' ಆದರೆ ಅದು ಮಾಗಿಹೋಗಿತ್ತು. ಮನೆಯಲ್ಲಿ ಮದುವೆಯ ಒತ್ತಾಯ ಬೇರೆ ಹೆಚ್ಚುತ್ತಲೇ ಇತ್ತು. ಹೇಗಾದರೂ ಮಾಡಿ ತನ್ನ ಪ್ರೀತಿಯನ್ನು ಸುರೇಶನಿಗೆ ತಿಳಿಸಲೇಬೇಕು. ಎಂದು ಪಟ್ಟು ಹಿಡಿದು, ಬಂಡು ಧೈರ್ಯದಿಂದ ಅವನಿಗೆ ತನ್ನ ಭಾವನೆಗಳನ್ನು ಪತ್ರದ ಮೂಲಕ ಹೇಳಿಯೇ ಬಿಟ್ಟಳು.
ಪತ್ರ ಕಳುಹಿದ ಮೇಲೆ ಮನಸ್ಸು ಸುಮ್ಮನಿರಬೇಕಲ್ಲ. ಯಾಕೆ ಪ್ರತ್ಯುತ್ತರ ಬರಲಿಲ್ಲ. ಪತ್ರ ತಲುಪಿತೋ ಹೇಗೋ. ಎಂದು ಹಲವು ಅನುಮಾನಗಳ ಸುಳಿಯಲ್ಲಿ ಆಕೆ ಸಿಲುಕಿದ್ದಳು. ಪ್ರತ್ಯುತ್ತರಕ್ಕಾಗಿ ನೀರಿನಿಂದ ಹೊರತೆಗೆದ ಮೀನಿನಂತೆ ವಿಲಿ-ವಿಲಿ ಒದ್ದಾಡುತ್ತಿದ್ದಳು. ಪತ್ರ ಇಂದು ಬರಬಹುದು, ನಾಳೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಳು. ಬಹುಷ್ಯ ಇಂದಿನಷ್ಟು ಸೌಲಭ್ಯಗಳಿದ್ದರೆ ಫೋನಾಯಿಸುತ್ತಿದ್ದಳೋ ಏನೋ..! ಕೊನೆಗೂ ಒಂದು ದಿನ ನಿರೀಕ್ಷೆಯ ಬಸುರನ್ನು ಒಡೆದು ಒಂದು ಪತ್ರ ಬಂದೆ ಬಿಟ್ಟಿತು.
ಪ್ರೀತಿಯ ಗೀತಾ,
ನಿನ್ನ ಪತ್ರವನ್ನು ಓದಿದೆ, ನಾನೂ ಸಹ ನಿನಗೆ ತುಂಬಾ ಪ್ರೀತ್ರಿಸುತ್ತಿದ್ದೇನೆ. ಆದರೆ, ಸ್ನೇಹಕ್ಕೆ ಚ್ಯುತಿ ಬರಬಹುದೆಂದು ನನ್ನ ಒಡಲಿನ ಪ್ರೀತಿಯನ್ನು ನಿನ್ನ ಜೊತೆ ಹಂಚಿಕೊಳ್ಳಲಿಲ್ಲ. ಈಗಲೂ ಅಷ್ಟೇ ಪ್ರೀತಿಸುತ್ತೇನೆ. ನಿನ್ನನ್ನು ಬಿಟ್ಟು ಇಂದು ಕ್ಷಣ ಜೀವಿಸಲಾಗದು. ನಾನು ನಿನ್ನಲ್ಲಿಗೆ ಬಂದು ನಿಮ್ಮ ತಂದೆಯ ಜೊತೆ ಮಾತಾಡುತ್ತೇನೆ. ಆದರೆ ಈಗ ನನ್ನ ತಂದೆಗೆ ಹುಷಾರಿಲ್ಲ ಆದ್ದರಿಂದ  ಚೇತರಿಸಿಕೊಂಡ ತಕ್ಷಣ ನಿನ್ನಲ್ಲಿಗೆ ಬರುತ್ತೇನೆ.
ಇತಿ ನಿನ್ನ ಪ್ರೀತಿಯ
ಸುರೇಶ.

ಪತ್ರ ಓದಿದ್ದೆ ಆಕೆಯ ಕಾಲು ನೆಲದ ಮೇಲೆ ನಿಲ್ಲಲಿಲ್ಲ. ವಾರವಾಗುತಿತ್ತದ್ದಂತೆ ಈ ಕಡೆಯ ಪತ್ರ ಆಕಡೆಗೆ, ಆ ಕಡೆಯಿಂದ ಈ ಕಡೆಗೆ ಹೀಗೆ ಪ್ರೀತಿಯ ಪ್ರಹಸನ ನಡೆಯುತ್ತಿತ್ತು. ಆದರೆ ಈ ವಿಚಾರ ಮನೆಯಲ್ಲಿ ಮಾತ್ರ ಯಾರಿಗೂ ತಿಳಿದಿರಲಿಲ್ಲ. ತಿಳಿಯಲು ತಾನೆ ಹೇಗೆ ಸಾಧ್ಯ. ಪತ್ರಗಳೇನಿದ್ದರೂ ಸ್ನೇಹಿತೆಯ ಮನೆಗೆ ಹೋಗುತ್ತಿದ್ದವು. ಹೀಗೆ ಪ್ರೇಮ ಪತ್ರಾಯಣ ಮಂದುವರಿಯಿತು.
ದಿನಗಳೆದಂತೆ ಸುರೇಶ ಕಡೆಯಿಂದ ಪತ್ರಗಳು ಕಮ್ಮಿಯಾದವು. ಬಹುಷ್ಯ ಕಚೇರಿಯ ಕೆಲಸ ಹಾಗೂ ತಂದೆಯ ಆರೋಗ್ಯದಿಂದಾಗಿ ಸಮಯ ಜೋಡಿಸಲಾಗುತ್ತಿಲ್ಲವೆನೋ ಎಂದು ಸಮ್ಮನಾದಳು. ಈ ಕಡೆಯಿಂದ ವಾರವಾರಕ್ಕೆ ತಪ್ಪದೆ ಪತ್ರ ಹೋಗುತಿತ್ತು. ಅಂತೂ ಒಂದು ದಿನ ಸುರೇಶ ಕಡೆಯಿಂದ ಪತ್ರ ಬರುವುದು ಸಂಪೂರ್ಣವಾಗಿ ನಿಂತೆಬಿಟ್ಟಿತು.
ಸುರೇಶ ತಂದೆಯ ಆರೋಗ್ಯ ಏನಾಯಿತೋ? ಕಚೇರಿ ಕೆಲಸಗಳು ಹೆಚ್ಚಾದವೋ? ಏನಾಯಿತೋ ಏನೋ ಒಂದು ತಿಳಿಯದೆ ಗೀತಾ ದಿನಗಳನ್ನು ದೂಡುತ್ತಿದ್ದಳು. ಆದರೆ ಒಳಗಿದ್ದ ಪ್ರೀತಿ ಆಕೆಯನ್ನು ದಿನೇ-ದಿನೇ ಸುಡುತ್ತಲೇ ಇತ್ತು. ಕೊನೆಗೆ ತಾನೇ ಹೇಗಾದರೂ ಮಾಡಿ ಸುರೇಶನಲ್ಲಿಗೆ  ಹೋಗಬೇಕೆಂದು ನಿರ್ಧರಿಸಿದಳು. ಆದರೆ..... ಬೆಂಗಳೂರು ಎಂಥಾ ನಗರವೋ ಏನೋ, ಎಲ್ಲಿ ಹೋಗೋದು? ಹೇಗೆ ಹೋಗೋದು? ಅಲ್ಲಿ ಸುರೇಶ ಮನೆ ಎಲ್ಲಿರುವುದೋ ಏನೋ? ಇಲ್ಲಿಯವರೆಗೆ ಬರೀ ಪುಸ್ತಕದಲ್ಲಿ ಹಾಗೂ ಬೇರೆಯವರ ಬಾಯಿಂದ ಮಾತ್ರ ಬೆಂಗಳೂರಿನ ಬಗ್ಗೆ ಕೇಳಿದ ಈಕೆಗೆ ತಮ್ಮ ಹಳ್ಳಿಯೊಂದು ಬಿಟ್ಟರೆ ಬೇರೆನೂ ತಿಳಿಯದಷ್ಟು ಮುಗ್ಧೆ ಈಕೆ. ಹಾಗೆಂದು ಸುಮ್ಮನಿದ್ದರೆ ಪ್ರೀತಿಯನ್ನು ಕಳೆದುಕೊಳ್ಳಬೇಕಾಗುತ್ತದೆ, ಎಂದು ಕೊನೆಗೂ ಆಕುಂಚನಗೊಳ್ಳದೆ(ಕುಗ್ಗದೆ) ಬೆಂಗಳೂರಿಗೆ ಪ್ರಯಾಣ ಬೆಳೆಸಿಯೇ ಬಿಟ್ಟಳು. ಅಲ್ಲಿ ಇಳಿದಿದ್ದೆ ಅಲ್ಲಿನ ಜನ, ದೊಡ್ಡ ರಸ್ತೆ, ಕಟ್ಟಡಗಳು, ಟ್ರಾಫಿಕ್ ಎಲ್ಲವೂ ಆಕೆಯನ್ನು ಹೌಹಾರುವಂತೆ ಮಾಡಿತು. ತಂದಿದ್ದ ಅಲ್ಪಸ್ವಲ್ಪ ದುಡ್ಡಿನಿಂದ ಸುರೇಶ ಮನೆಯ ಕಡೆಗೆ ಹೊರಟಳು. ಮನೆ ಸಿಕ್ಕಿದ್ದೆ ತಡ ಖುಷಿ-ಖುಷಿಯಿಂದ ಮನೆಯ ಕಡೆಗೆ ಧಾವಿಸಿದಳು. ಆದರೆ ವಿಪಯರ್ಾಸ, ಜಾಳುಗಟ್ಟಿದ ಮನೆಯ ಬಾಗಿಲು, ಜಡಿದ ಬೀಗ ಅನೇಕ ಆಖ್ಯಾನಗಳ ವರಸೆಯನ್ನೇ ಹೇಳುತ್ತಿತ್ತು. ಛೇ.. ಹಾಗೇ ಯೋಚಿಸುವುದು ತಪ್ಪು ಎಂದು ಅಲ್ಲಿಂದ ಕಾಲು ಕಿತ್ತಿದಳು. ವಿದ್ಯಾಭ್ಯಾಸದಲ್ಲಿ ಪದವಿ ಮುಗಿದ ಈಕೆಗೆ ಅವನ ಕಚೇರಿಯ ವಿಳಾಸ ಹುಡುಕಿ ತೆಗೆಯುವುದು ಅಷ್ಟೇನು ಕಷ್ಟದ ಕೆಲಸವಾಗಿರಲಿಲ್ಲ. ಕೊನೆಗೂ ಕಚೇರಿ ಪತ್ತೆ ಹಚ್ಚಿ ಜೀವ ಕೈಯಲ್ಲಿ ಹಿಡಿದುಕೊಂಡು ಕಚೇರಿ ತಲುಪಿದಳು.
ಅಲ್ಲಿ ಸುರೇಶ ವಿಷಯದ ಸತ್ಯ ಕೇಳಿ ಆಕೆಯ ಹೃದಯ ಒಡೆದು ಹೋಯಿತು. ಕಣ್ಣೀರು ಸಮುದ್ರದಂತೆ ಉಕ್ಕಿ ಬಂದವು. 'ಕೊನೆಗೂ ನನ್ನ ಪ್ರೀತಿ ನನ್ನ ಕೈಸಿಗಲಿಲ್ಲ,' ಎಂದು ರೋಧಿಸುತ್ತಾ ಅವನ ಫೋಟೊ ಮೇಲಿದ್ದ ಹಾರವನ್ನು ಕಿತ್ತೆಸೆದಳು. ಅಷ್ಟೊಂದು ಗಾಢವಾಗಿದ್ದ ಪ್ರೀತಿ ಬದುಕಲು ಬಿಟ್ಟಿತೆ? ಅವಳ ಪ್ರಾಣಪಕ್ಷಿಯೂ ಆಗಂತುಕನಾಗಿ ಬಂದವನ ಹಿಂದೆ ಹಾರಿಹೋಯಿತು.
'ಕೊನೆಗೂ ಪತ್ರದಲ್ಲಿ ಒಂದಾದ ಪ್ರೀತಿ, ವಾಸ್ತವದಲ್ಲಿ ಒಂದಾಗಲೇ ಇಲ್ಲ.'
ಆತೀಶ. ಬಿ. ಕನ್ನಾಳೆ.

Sunday, December 12, 2010

ಅಮ್ಮನೆಂಬ ಬ್ರಹ್ಮ.....
(ತಾಯಿಯಾಗಿ ಮಲತಾಯಿಯಲ್ಲ)

 ಮೊನ್ನೆ ಟೆರಸ್ ಮೇಲೆ ನಿಂತು ರಾಜಧಾನಿಯ ರಹದಾರಿಗಳ ಕಡೆ ಕಣ್ಣು ಹಾಯಿಸಿದೆ. ಮೋಟಾರು-ಸೈಕಲ್ಗಳು ಎಗ್ಗಿಲ್ಲದೆ ಓಡಾಡುತ್ತಿವೆ. ಬರೀ ಅವುಗಳದ್ದೆ ಸದ್ದು. ವಾಹನಗಳ ಪರದಾಟ ನೋಡಿ-ನೋಡಿ ಸುಸ್ತಾಯ್ತು. ಅಲ್ಲಿಂದ ಟೆರಸ್ನ ಮತ್ತೊಂದು ಭಾಗಕ್ಕೆ ಬಂದು ಓಣೆಯ ರಸ್ತೆಯ ಕಡೆಗೆ ದೃಷ್ಟಿ ನೆಟ್ಟೆ. ಅದು ಸಾಯಂಕಾಲದ ಸಮಯ ರಸ್ತೆಯಲ್ಲೆಲ್ಲಾ ನೀರವ ಮೌನ. ಅಲ್ಲಿ ಒಂದು ಪುಟ್ಟ ಮನೆ, ಆ ಮನೆ ಹೊರಗೆ ಇಬ್ಬರು ಪುಟ್ಟ ಮಕ್ಕಳು ಬಹುಶಃ ಅಣ್ಣತಮ್ಮಂದಿರಿರಬಹುದೆನೋ ಅನಿಸಿತ್ತೆ. ಇಬ್ಬರ ಕೈಯಲ್ಲು ಒಂದೊಂದು ಬಿದಿರು ಅವರು ಮುಂದೆ ಯಾವುದೋ ಒಂದು ಯುದ್ಧ ನಡೆಯಲಿದೆ ಎಂಬಂತೆ ಖಡ್ಗಯುದ್ಧ ಪಾರಾಯಣದಲ್ಲಿ ತೊಡಗಿದ್ದರು.
ಆ ಮನಮೋಹಕ ದೃಶ್ಯ ಕಾಣುತ್ತಲೆ ಏನೋ ಒಂಥರಾ ಖುಷಿಯಾಗಿ, ಮನಸ್ಸಿಗೆ ರೆಕ್ಕೆ ಬಂದು ಹಾರಾಲಾರಂಭಿಸಿತು. ಮುಂದುವರಿದು ಆ ಬಾಲಕರ ಬಾಲ್ಯ ಚೇಷ್ಟೆಗಳನ್ನು ಕಣ್ಣು ಮಿಟುಕಿಸದೆ ನೋಡುತ್ತಿದ್ದೆ. ಅದು ಹಾಗೇ ಯಾವುದೋ ಒಂದು ಕಲ್ಪನ್ಪಾಲೋಕಕ್ಕೆ ಕರೆದೊಯ್ದಿತ್ತು. ನನ್ನ ಬಾಲ್ಯದ ಕುಚೇಷ್ಟೆಗಳು ನೆನಪಾಗಿ ಕಣ್ಣ ಅಂಚಲ್ಲಿ ಹನಿ ಮೂಡಿತು. ಮಳೆಹನಿಯಲ್ಲಿ ಮೆಂದು ಕಾಗದದ ದೋಣಿ ಮಾಡಿ ಆಡಿದ್ದು, ಮಳೆ ಬಾರದಿದ್ದಾಗ ಮಳೆ ಬಾರೋ ಮಲ್ಲೇಶ.. ಎಂದು ಹಾಡಿ ಕುಣಿದಾಡಿದ್ದು ಹೀಗೆ ಮಣ್ಮಂದೆ ಕನಸಿನ ಲೋಕವೆ ಅವತರಿಸಿ ನಿಂತಿತ್ತು. ಹಾಗೇ ಆ ಕ್ಷಣಗಳನ್ನು ಆಸ್ವಾದಿಸುತ್ತಿದ್ದೆ, ಅಷ್ಟರಲ್ಲೆ ಎಲ್ಲಿಂದ ಬಂದಳೋ ಆ ಮಹಾತಾಯಿ...! ಸುನಾಮಿಯಂತೆ ಬಂದವಳೆ ನಾಲ್ಕೈದು ವರ್ಷದ ಆ ಪೋರನನ್ನು ತನ್ನತ್ತ ಎಳೆದು ಕೈಯಲ್ಲಿದ್ದ ಬೆತ್ತ ಕಸಿದುಕೊಂಡು ಅದರಿಂದಲೇ ನಾಲ್ಕು ಬಾರಿಸಿ ಹುಡುಗನನ್ನು ಭವ್ಯ ಬಂಗಲೆಯೊಂದಕ್ಕೆ ಎಳೆದೊಯ್ದಳು. ಇನ್ನೊಬ್ಬ ಹುಡುಗ ಮಾತ್ರ ತುಟಿ ಪಿಟಕ್ ಅನ್ನದೆ ಮ್ಲಾನವದನದಿಂದ ಚರಂಡಿಯ ಪಕ್ಕ ನಿಂತು ಕಂಬನಿಗೆರೆಯುತ್ತಿದ್ದನು. ನನಗೆ ಒಂದೂ ತಿಳಿಯಲಿಲ್ಲ. ಆ ಘಟನೆಯ ಜೊತೆಗೆ ಅನೇಕ ಪ್ರಶ್ನೆಗಳು ಕವಲೊಡೆಯುತ್ತಿದ್ದವು. ಆ ಯಮ್ಮ ಆ ಹುಡುಗನನ್ನೆ ಏಕೆ ಎಳೆದೊಯ್ದರು? ಈ ಹುಡುಗ ಮಾತ್ರ ಯಾಕೆ ಇಲ್ಲೆ ನಿಂತಿದ್ದಾನೆ? ಹಾಗೇನಾದ್ರು ತಪ್ಪು ಮಾಡಿದಿದ್ರೆ ಇಬ್ಬರನ್ನು ಹೊಡೆಯಬೇಕಿತ್ತು. ಯಾಕೆ ಆ ಒಬ್ಬ ಪೋರನನ್ನೆ ಹೊಡೆದು ಎಳೆದೊಯ್ದರು? ಬಹುಶಃ ಆಕೆ ಈ ಹುಡುಗನ ಮಲತಾಯಿ ಏನಾದ್ರು ಆಗಿರಬಹುದೆ? .... ಹೀಗೆ ನೂರಾರು ಪ್ರಶ್ನೆಗಳು ಪುಂಖಾನುಪುಂಖವಾಗಿ ಹೊರಗೆಡುಹುತ್ತಿದ್ದರಿಂದ ಪ್ರಶ್ನೆಗಳ ವರಸೆಯೇ ನನ್ನೆದುರಿಗಿತ್ತು.

ಇದರ ಜೊತೆಗೆ ಆನೆಗಾತ್ರದ ಮಹಿಳೆ ಮೇಲೆ ನನಗೆ ಎಲ್ಲಿಲ್ಲದ ಕೋಪ. ಏಕೆಂದರೆ, ಆ ಹುಡುಗರ ಬಾಲ್ಯ ಕುಚೇಷ್ಟೆಗಳನ್ನು ಗಮನಿಸುತ್ತಾ ಕ್ಷಣಕಾಲ ಇಡೀ ಪ್ರಪಂಚವನ್ನು ಮರೆತು ನನ್ನ ಬಾಲ್ಯದಲ್ಲಿ ಕಳೆದುಹೋಗಿದ್ದೆ. ಆ ಕನಸಿನ ಮಹಲನ್ನು ಕ್ಷಣದಲ್ಲಿ ನುಚ್ಚುನೂರು ಮಾಡಿದಳಲ್ಲ ಈ ರಾ.....ಕ್ಷಸಿ ಎಂಬ ಕಾರಣಕ್ಕಾಗಿಯೋ ಏನೊ ಕೊಪ ಕಾಡುತಿತ್ತು.
ಅದೇನೆ ಇರಲಿ, ಮಹಿಳೆ ಆ ರೀತಿ ವತರ್ಿಸುವುದಕ್ಕೆ ಕಾರಣ ಆದ್ರು ಏನು....?? ಯೋಚಿಸಿದೆ ಏನೂ ತೋಚಲಿಲ್ಲ. ಸರಿ ಇದರ ಉತ್ತರ ಈ ಹುಡುಗನಿಂದ ಮಾತ್ರ ಸಾಧ್ಯ ಎಂದು ಅವನ ಕಡೆ ಹೊರಟೆ. ಕ್ಷಣಕಾಲ ಅವನ ಮುಖದ ಹತಾಶೆಯನ್ನು ಜಾಲಾಡಿ, ಕಣ್ಣಿನ ಆಳದಲ್ಲಿ ಅಡಗಿದ್ದ ಮುಗ್ಧತೆಯನ್ನು ಗಮನಿಸಿ, ಮರಿ ನಿನ್ ಹೆಸರೇನು ಎಂದು ಕೇಳಿದೆ. ಅದಕ್ಕೆ ಆಕಾಶ್ ಎಂದು ಗಲ್ಲ ಉಬ್ಬಿಸಿಕೊಂಡು ಉತ್ತರಿಸಿದ. ನನಗೆ ಅವನ ವದನ ನೋಡಿ ಕಪಿ ನೆನಪಾಗಿ ಕೊಂಚ ನಗುಬಂತು ಆದರೂ ನಗಲಿಲ್ಲ. ಪುಟ್ಟ ಯಾಕೋ ನಿಮ್ಮಮ್ಮ ನಿನ್ನ ತಮ್ಮನನ್ನು ಮಾತ್ರ ಕರೆದುಕೊಂಡು ಹೋದ್ರು ಎಂದು ಕೇಳಿದ್ದೆ ತಡ ಅದಕ್ಕೆ ಅವನು ನನ್ನ ತಮ್ಮ ಅಲ್ಲ; ನನ್ನ ಸ್ನೇಹಿತ ಅಷ್ಟೆ. ಅವನು ಇರೋದು ಆ ಬಂಗಲೆಯಲ್ಲಿ; ನಾವಿರೋದು ಈ ಗುಡಿಸಲಲ್ಲಿ. ಎಂದು ಬೆರಳು ತೋರಿದ. ಅಂಕಲ್ ನಾವು ಬಡವರಂತೆ ಅದಕ್ಕೆ ಆನಂದನನ್ನು ನನ್ನ ಜೊತೆ ಆಡೋದಕ್ಕೆ ಬಿಡೋದಿಲ್ಲ. ಎಂದು ಜೋರಾಗಿ ಆಳಲಾರಂಭಿಸಿದ. ಆ ಪುಟ್ಟನ ಮುಗ್ಧ ಮಾತುಗಳನ್ನು ಕೇಳಿ ನನ್ನ ಕಣ್ಣನಾಲಿಯಲ್ಲಿ ಕಂಬನಿ ಮೂಡಿದವು. ಆ ಘಟನೆಯ ಕಾರಣ ಹಾಗೂ ಸ್ವಾರಸ್ಯ ನನಗೆ ದರ್ಪಣದಷ್ಟು ನಿಚ್ಚಳವಾಯ್ತು.
ನಂತರ ಚಹ ಹೀರಲು ಸಹ ಮನಸ್ಸಾಗಲಿಲ್ಲ. ಯಾಕೋ ಮನಸ್ಸು ಯಾವ ಕೆಲಸಕ್ಕೂ ಒಪ್ಪದೆ, ಹೃದಯ ಭಾರವಾಗಿತ್ತು. ಪದೇ-ಪದೇ ಆ ಪುಟಾಣಿ ಹೇಳಿದ ಅಂಕಲ್ ನಾವು ಬಡವರಂತೆ ಎಂಬ ಮಾತು ನನ್ನ ಕಿವಿಯಲ್ಲಿ ಪುನರಾವರ್ತನೆ ಆಗುತಿತ್ತು.
ಯಾಕೆ ನಮ್ಮ ಸಮಾಜದ ಈ ಜನ ಶಿಕ್ಷಣ ಹಾಗೂ ಜೀವನಮಟ್ಟದಲ್ಲಿ ಮೇಲೆ ಹೋದಂತೆಲ್ಲಾ ಈ ರೀತಿ ಯೋಚಿಸುತ್ತಾರೆ. ಇದರಲ್ಲಿ ಆ ಮಕ್ಕಳ ತಪ್ಪಾದರೂ ಏನು? ಯಾರೂ ತಮ್ಮ ಇಚ್ಛೆಯಿಂದ ಬಡವರಾಗುವುದಿಲ್ಲ ಎಂಬ ಸತ್ಯ ತಿಳಿದಿದ್ದರೂ ಏಕೆ ಜಾಣಕುರುಡರಂತೆ ನಡೆದುಕೊಳ್ಳುತ್ತಾರೆ. (ನಿಜ, ಇಂದು ಆದರ್ಶ ಹಾಗೂ ನೈಜತೆಯ ನಡುವೆ ಕಲ್ಪನೆಗೂ ಎಟುಕದ ಕಂದಕ ಏರ್ಪಟ್ಟಿದೆ.) ಆದರೆ ಇಲ್ಲಿ ಪರಿಗಣಿಸಲೇಬೇಕಾದ ಅತೀ ಪ್ರಮುಖವಾದ ಅಂಶವೆಂದರೆ, ಈ ರೀತಿಯ ಘಟನೆಗಳು ಬೆಳೆಯುವ ಮಕ್ಕಳ ಮೇಲೆ ಎಂಥ ಪರಿಣಾಮ ಬೀರಬಲ್ಲವು ಎಂಬ ಪರಿಕಲ್ಪನೆ ಪೋಷಕರಿಗಿಲ್ಲವೆ?!


ಇಂದು ಮಕ್ಕಳ ಜೀವನದಲ್ಲಿ ಮಾರ್ಗದರ್ಶಕಿ ಹಾಗೂ ಶಿಕ್ಷಕಿಯ ಸ್ಥಾನದಲ್ಲಿರಬೇಕಾದ ತಾಯಂದಿರು ಇಂಥ ಕೀಳುದಜರ್ೆಯ ಆಲೋಚನೆಗೆ ಇಳಿದರೆ ನಮ್ಮ ಸಮಾಜದ ಮುಂದಿನ ಸ್ಥಿತಿ ಏನಾಗಬೇಕು....?
ಆಗ ತಾನೆ ಜನಿಸಿದ ಮಗು ಮಾಂಸದ ಮುದ್ದೆಯಂತಿದ್ದು, ಸಮಾಜ ಹಾಗೂ ಅದರ ಸುತ್ತಲಿನ ವಾತಾವರಣ ಅದರ ಮೇಲೆ ಪರಿಣಾಮವನ್ನು ಬೀರುತ್ತದೆ. ಇದರಿಂದ ಆ ಮಗು ಅಂಥದ್ದೇ ಸಂಸ್ಕಾರಗಳನ್ನು ಮ್ಕೈಗೂಡಿಸಿಕೊಳ್ಳುತ್ತದೆ. ಎಂಬ ಸಮಾಜಶಾಸ್ತ್ರಜ್ಞರ ಮಾತು ಇಲ್ಲಿ ನೆನೆಯಲೇಬೇಕು. ಏಕೆಂದರೆ, ಒಂದು ಮಗು ಬೆಳೆದು ಸಮಾಜಘಾತುಕ ಅಥವಾ ಸಮಾಜ ಸುಧಾರಕನೂ ಆಗಬಲ್ಲ. ಅದು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಅದರ ಬಾಲ್ಯದಲ್ಲಿ ನೀಡುವ ಸಂಸ್ಕಾರವನ್ನೇ ಅವಲಂಭಿಸಿದೆ. ಮಾತೃಗರ್ಭದಲ್ಲಿರುವ ಭ್ರೂಣದ ಮೇಲೆ ಸುತ್ತಲಿನ ವಾತಾವರಣ ಪರಿಣಾಮ ಬೀರುತ್ತದೆ ಎಂದು ಒಂದು ಸಂಶೋಧನೆ ಸಿದ್ಧಾಂತ ಪಡಿಸಿದೆ. ಹೀಗಿರುವಾಗ ಮಾಂಸದ ರೂಪವನ್ನು ದಾಟಿ ಆಲೋಚನೆ ಮಾಡುವಷ್ಟು ಬೆಳೆದಿರುವ ಮಕ್ಕಳ ಮೇಲೆ ಇಂತಹ ಘಟನೆಗಳು ಬೀರದಿರಲು ಸಾಧ್ಯವೇ?
ಮಗು ಇನ್ನೂ ಮೂರು ಹೆಜ್ಜೆ ಸ್ವತಂತ್ರವಾಗಿ ಇಡಲಾಗದು ಆಗಲೇ ಅದಕ್ಕೆ ವರ್ಗಭೇದದ ಕುರಿತು ಬೋಧಿಸುವುದಾದರೆ ಭವಿಷ್ಯದಲ್ಲಿ ಆ ಮಕ್ಕಳು ಉತ್ತಮ ಪ್ರಜೆಗಳಾಗಬಲ್ಲರು ಎಂಬ ಖಾತ್ರಿಯಾದರೂ ಏನು..?
ಕೊಂಚ ಯೋಚಿಸಿ: ಅಂದು ಛತ್ರಪತಿ ಶಿವಾಜಿ ಅವರ ತಾಯಿ ಮಗನಿಗೆ ರಾಚಾಯಣ, ಮಹಾಭಾರತ ಆದರ್ಶಗಳನ್ನು ಬೋಧಿಸಿ, ಅವರ ರಕ್ತದ ಕಣ-ಕಣದಲ್ಲಿ ದೇಶಪ್ರೇಮ ತುಂಬದೇ ಹೋಗಿದ್ದಲ್ಲಿ ಅವರು ರಾಷ್ಟ್ರರಕ್ಷಣೆಯನ್ನಿ ನಿಲ್ಲಲಾಗುತಿತ್ತೆ? ವಿವೇಕಾನಂದರು ಭಾರತನ್ನು ಅಷ್ಟಾಗಿ ಪ್ರೀತಿಸಲು ಕಾರಣ ಅವರ ತಾಯಿ ಬಾಲ್ಯದಲ್ಲಿ ನೀಡಿದ ಶಿಕ್ಷಣ. ಅಷ್ಟೇ ಯಾಕೆ ಇಂದು ಅನೇಕ ಯೋಧರು ಯಾವುದೇ ವರ್ಣ, ವರ್ಗಭೇದವನ್ನು ಕಾಣದೆ ನಮ್ಮ ತಮ್ಮ ಜೀವ ಒತ್ತೆಯಿಟ್ಟು ಗಡಿ ಕಾಯುತ್ತಿರುವುದಕ್ಕೆ ಅವರ ತಾಯಂದಿರೂ ಕಾರಣವಾಗಿರಬಹುದು. ಒಂದು ವೇಳೆ ಅವರಿಗೂ ಮೇಲು-ಕೀಳು, ವರ್ಣ-ವರ್ಗಭೇದಗಳ ಪ್ರಬೋಧನೆ ನೀಡುತ್ತಿದ್ದಲ್ಲಿ ನಮ್ಮ ರಾಷ್ಟ್ರದ ಗತಿ ಏನಾಗುತಿತ್ತು.....?
ಅದಕ್ಕಾಗಿ ತ್ಯಾಗ, ಪ್ರೀತಿ, ಮಮತೆಗೆ ಪ್ರತೀಕವಾಗಿರುವ ತಾಯಂದಿರೆ ನಿಮ್ಮ ಮಕ್ಕಳ ಕೋಮಲವಾದ ಮನಸ್ಸನ್ನು ಹಾಳುಮಾಡಬೇಡಿ. ನೀವೇ ಅವರ ಪಾಲಿಗೆ ಬ್ರಹ್ಮ ನೀವು ರೂಪಿಸಿದಂತೆಯೇ ರೂಪುಗೊಳ್ಗ್ಳುತ್ತಾರೆ. ಹೀಗಾಗಿ ನಿಮ್ಮ ಮಕ್ಕಳ ಧಮನಿ-ಧಮನಿಗಳಲ್ಲಿ ರಾಷ್ಟ್ರಪ್ರೇಮವನ್ನು ತುಂಬಿ, ಹೊರತು ಸಮಾಜ ಕಂಠಕಗಳನ್ನಲ್ಲ.
ಆತೀಶ್.ಬಿ.ಕನ್ನಾಳೆ

Monday, November 29, 2010

ಹೀಗೂ ಉಂಟೆ.......??
ಎಕೆ 47 ತುಪಾಕಿಯಲ್ಲಿ ಸಿಡಿಯಲಿವೆ ರಬ್ಬರ್ ಗುಂಡು!!

ಇನ್ನು ಮುಂದೆ ಯಾರೇ ನಿಮ್ಮ ಎದುರು ಎಕೆ 47 ಹಿಡಿದು ನಿಂತರೆ ಹೆದರಬೇಕಾಗಿಲ್ಲ..!?? ಯಾಕೆ ಅಂತಾ ಕೇಳ್ತಾ ಇದಿರಾ. ಆ ಮ್ಯಾಟರೆ ಹಾಗೆ, ಎಕೆ 47 ಎಂದರೆ ಪ್ಯಾಂಟ್ ಪ್ಯಾಂಟೆಲ್ಲಾ ಒದ್ದೆಯಾಗಿಬಿಡುತ್ತಿದ್ದ ಜಮಾನ ಒಂದಿತ್ತು. ಆದರೆ ಈಗ....?
ಎಕೆ 47 ತುಪಾಕಿಗಳಲ್ಲಿ ರಬ್ಬರ್ ಗುಂಡುಗಳು ಸಿಡಿಯುವುದೆಂದರೆ ಊಹೆಗೆ ನಿಲುಕದ ಆಲೋಚನೆ ಎನಿಸಬಹುದೇನೊ. ಆದರೆ ಇನ್ನು ಮುಂದೆ ಇದು ಸತ್ಯವಾಗಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುವ ಗಲಭೆಗಳ ನಿಯಂತ್ರಿಸುವುದಕ್ಕಾಗಿ ಕೇಂದ್ರ ಸಕರ್ಾರ ಕಂಡುಕೊಂಡ ಸೂತ್ರ ಇದಾಗಿದೆ.
 ಗೃಹ ಸಚಿವಾಲಯದಲ್ಲಿ ಸೇರಲಾಗಿದ್ದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಚಚರ್ಿಸಲಾಯಿತು. ಮತ್ತು ಆ ಸಭೆಯಲ್ಲಿ ಎಕೆ47ಗಳಲ್ಲಿ ಪ್ಲಾಸ್ಟಿಕ್ ಗುಂಡುಗಳನ್ನು ಬಳಸುವುದರ ಕುರಿತು ನಿಧರ್ಾರ ತೆಗೆದುಕೊಳ್ಳಲಾಯಿತು.
ಎಕೆ 47 ನಲ್ಲಿ ರಬ್ಬರ್ ಗುಂಡುಗಳನ್ನು ಬಳಸುವುದರಿಂದ ಗಲಭೆಕೋರರು ಸಾವಿಗೀಡಾಗುವ ಸಾಧ್ಯತೆಗಳು ಕಡಿಮೆ. ಒಂದು ವೇಳೆ ಇದನ್ನು ಕಡಿಮೆ ಅಂತರದಿಂದ ಹಾರಿಸದಿದ್ದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂದು ತಿಳಿಸಿದರು. ದೊಂಬಿಯನ್ನು ಹತ್ತಿಕ್ಕಲು ಇರುವ ಮತ್ತೊಂದು ತಂತ್ರವೆಂದರೆ, `ಡ್ಯಾಜ್ಲರ್' ಇಲ್ಲಿ ಲೆಸರ್ ಕಿರಣಗಳನ್ನು ಬಳಸಿ ಗಲಭೆಕೋರರನ್ನು ತಾತ್ಕಾಲಿಕ ಅಂಧತ್ವಕ್ಕೀಡು ಮಾಡಲಾಗುತ್ತದೆ ಈಗಾಗಲೇ ಕಾಶ್ಮಿರದಲ್ಲಿ ಇದು ಬಳಕೆಯಲ್ಲಿದೆ.
ಈ ಡ್ಯಾಜ್ಲರ್ ಅನ್ನು 50 ಮೀಟರ್ನಿಂದ 250 ಮೀ. ಒಳಗೆ ವ್ಯಾಪ್ತಿಯಲ್ಲಿ ಬಳಸಬಹುದು. ಇದನ್ನು ವೈಯಕ್ತಿಕವಾಗಿ ಒಬ್ಬೊಬ್ಬರ ಮೇಲೆ ಪ್ರಯೋಗ ಮಾಡಲಾಗುತ್ತದೆ. ಇದರಿಂದ ಗಲ್ಲಭೆಕೋರರು ಕಲ್ಲು ತೂರಾಟ ನಡೆಸುವುದನ್ನು ತಪ್ಪಿಸಬಹುದಾಗಿದೆ.
ಗಲ್ಲಭೆ ನಿಯಂತ್ರಣಕ್ಕಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪಂಪ್ ಆ್ಯಕ್ಷನ್ ಗನ್ (ಶಾಟ್ ಗನ್) ಮತ್ತು ಗಲಭೆ ನಿಯಂತ್ರಣಾ ಗನ್ಗಳನ್ನು ಬಳಸಲಾಗುತ್ತಿದೆ. ಇದರಿಂದ ಜೀವಕ್ಕೆ ಹಾನಿಯೇನೂ ಇಲ್ಲ. ಆದರೆ ಪ್ರತಿಭಟನೆಯಲ್ಲಿ ತೊಡಗಿರುವವರಿಗೆ ಗಾಯಗಳಾಗುವ ಸಾಧ್ಯತೆಗಳುಂಟು ಎಂದು ಆಪಾದಿಸಲಾಗಿದೆ.
ಕಾಶ್ಮೀರ ಕಣಿವೆ ಹಿಂಸಾಚಾರ ನಿಯಂತ್ರಣ ಸಂದರ್ಭದಲ್ಲಿ ರಕ್ಷಣಾ ಪಡೆಯವರು ನಡೆಸಿದ ಗುಂಡು ಕಾಳಗದಲ್ಲಿ ಹಲವರು ಮೃತಪಟ್ಟಿದ್ದಾರೆ. ಆದ್ದರಿಂದ ಶೀಘ್ರವಾಗಿ ಜೀವಕ್ಕೆ ಹಾನಿಮಾಡದ ಬಂದೂಕಗಳನ್ನು ತಯಾರಿಸಿ ಕೊಡುವಂತೆ ಜಮ್ಮುವಿನ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೇಂದ್ರಕ್ಕೆ ಕೋರಿದ್ದರು. ಅದರಂತೆ ಜಬಲ್ಪುರದ ಮದ್ದು ಗುಂಡು ಕಾಖರ್ಾನೆಗೆ ಅಂತಹ ಬಂದೂಕಗಳನ್ನು ತಯಾರಿಸಿ ಕೊಡುವಂತೆ ತಿಳಿಸಲಾಗಿದೆ.
ಏನು ಇದರ ವಿಶೇಷ?: ಈ ಬಂದೂಕಗಳಿಂದ ಗುಂಡು ಹಾರಿಸಿದರೆ, ಆ ಗುಂಡು 40 ಚಿಕ್ಕ ತುಕ್ಕಡಿಗಳಲ್ಲಿ ವಿಭಜನೆಗೊಂಡು ಗಲಭೆಕೋರರಿಗೆ ಬಡಿಯುತ್ತದೆ. ಇದನ್ನು ಉಳಿದ ಬೋಲ್ಟ್ ಆ್ಯಕ್ಷನ್ ಪದ್ದತಿ ಮತ್ತು ಲಿವರ್ ಆ್ಯಕ್ಷನ್ ಪದ್ದತಿಗೆ ಹೋಲಿಸಿದ್ದಲ್ಲಿ ಹೆಚ್ಚು ವೇಗವಾದದ್ದು ಮತ್ತು ಗುಂಡು ತುಂಬುವಲ್ಲಿಯೂ ಸುಲಭವಾದದ್ದಾಗಿದೆ. ಇದರಲ್ಲಿರುವ ಗುಂಡುಗಳು ಚಪ್ಪಟೆಯಾಗಿರುವುರಿಂದ ಎದುರಾಳಿಗಳಿಗೆ ಚಿಕ್ಕ ಪುಟ್ಟ ಗಾಯಗಳಾಗಬಹುದೇ ಹೊರತು ಜೀವಕ್ಕೆ ಯಾವುದೇ ಅಪಾಯವಾಗದು ಎಂದು ತಿಳಿಸಲಾಗಿದೆ.
ಆತೀಶ್ ಬಿ ಕನ್ನಾಳೆ

Tarale 3 murthigalu

ಬೀದರಿನ ತರಲೆ ತ್ರಿಮೂತರ್ಿಗಳು...
‘College life is golden life and it’s include many golden memories’ ಎನ್ನುವ ಮಾತು ಎಷ್ಟು ಅರ್ಥಗಭರ್ಿತ ಅಲ್ವಾ?
ನಾನು 2007-08 ನೇ ವರ್ಷದಲ್ಲಿ ಬೀದರ್ನ ಕನರ್ಾಟಕಾ ಕಾಲೇಜ್ನಲ್ಲಿ ಬಿಎ ಪದವಿಯನ್ನು ಮುಗಿಸಿದೆ. ಪಿಯುಸಿಯಲ್ಲೆನೋ ಕಾಲೇಜ್ ಲೈಫ್ನ ಮೊದಲ ಮೆಟ್ಟಿಲೆಂದು ಯಾರ ತಂಟೆಗೂ ಹೋಗದೆ ಕೋಲೆ ಬಸವನಂತೆ ಸುಮ್ಮನಾಗಿ, ಇನೋಸೆಂಟ್ ಬಾಯ್ ಎಂಬ ಬಿರುದನ್ನು ಪಡೆದುಕೊಂಡೆ, ನಂತರ ಡಿಗ್ರಿಯಲ್ಲಿ ಭಂಟ ಸ್ನೇಹಿತರೋಡಗೂಡಿ ತುಂಟಾಟಗಳ ವರಸೆಯನ್ನೆ ನಿಲ್ಲಿಸಿದೆ. ಆ ತುಂಟಾಟಗಳ ಲಿಸ್ಟ್ ಮಾಡಿದರೆ ಗಿನ್ನಿಸ್ ದಾಖಲೆಯಾಗಬಹುದೇನೋ(!)
ಕ್ಲಾಸ್ನಲ್ಲಿ ಕುಳಿತಾಗ ಸಂತೋಷ ಎನ್ನುವ ಸ್ನೇಹಿತ ಬಂದರೆ ಸಾಕು 'ಕ್ರಿಷ್....' ಎಂಬ ಅಡ್ಡಹೆಸರು ಪ್ಲೇ ಬ್ಯಾಕ್ ಮ್ಯೂಸಿಕ್ ಆಗಿ ಹೊರಹೋಮ್ಮುತಿದ್ದಾಗ ಮೇಷ್ಟ್ರು ಕೂಡ ದಂಗು ಬಡಿದು ನಿಲ್ಲುತ್ತಿದ್ದರು. ಸ್ಟ್ಯಾಟಿಸ್ಟಿಕ್ಸ್ ಕ್ಲಾಸ್ ನಡೆದಾಗ ಹಿಂದೆ ಕೂತು ಎಕಾನಾಮಿಕ್ಸ್ ನೋಟ್ಸ್ ಬರೆಯುವುದು ರೂಢಿಯಾಗಿ ಬಿಟ್ಟಿತ್ತು. ಒಂದ್ಸಲ ಸ್ಟ್ಯಾಟಿಸ್ಟಿಕ್ಸ್ ಮೇಷ್ಟ್ರಿಂದ ಉಗಿಸಿ ಕೊಂಡುದ್ದುಂಟು. ಹಾಗು ಎಕಾನಾಮಿಕ್ಸ್ ಮೇಷ್ಟ್ರು ಬಂದು ಕೊರೆಯುವಾಗ ಬಾಲಕೋನಿಯಲ್ಲಿ ಕುಳಿತು ಎಂಪಿ3 ಹಾಡು, ಮೊಬೈಲ್ನಲ್ಲಿ ಗೇಮ್ ಆಡುತ್ತಿದ್ದುದ್ದು, ಆಮೇಲೆ ಚಿಟಿಥಿ ಡಣಜಣಠಟಿ ಎಂದಾಗ ಮೂರು ತರಲೆ ಪ್ರಶ್ನೆಗಳು ಹೊರಹೊಮ್ಮುತ್ತಿದ್ದವು. ಇದರಿಂದ ಇಂಪ್ರೇಸ್ ಆದ ಹುಡುಗಿಯರು ಗ್ರೀನ್ ಸಿಗ್ನಲ್ ಕೂಡ ನೀಡಿದ್ದುಂಟು.
 ಇವೆಲ್ಲಾ ಇಂಡೋರ್ ತುಂಟಾಟಗಳಾದರೆ ಜೌಟ್ಡೋರ್ ತುಂಟಾಟಗಳೆ ಬೇರೆ, ಎನ್ಎಸ್ಎಸ್ ಕ್ಯಾಂಪ್ನಲ್ಲಿ ವರಕ್ಕಾಗಿ ಕಾಯುವ ಮುನಿಯಂತೆ ಸರ್ ಬರುವವರೆಗೆ ಬಿಸಿಲುಕುದುರೆಯಂತೆ ಅಂಡಲೆದು ಎನ್ಎಸ್ಎಸ್ ಸರ್ ಬರುವ ಮುನ್ನ ಗೌಂಡ್ಗೆ ಹಾಜರ್, ಅಟೆಂಡೆನ್ಸ್ ಟೈಮ್ನಲ್ಲಿ ಇದ್ದವರು ನಂತರ ಕಾಣಿಸೋದು ಊಟದ ಸಮಯದಲ್ಲೇ ಎನ್ನಬಹುದು. ಆಮೇಲೆ ಸರ್ ಕೆಲಸ ತುಂಬಾ ಆಯ್ತು ಊಟ ಎಲ್ಲಿ ಅಂತಾ ರಾಜಾರೋಷವಾಗಿ ಕೇಳ್ದಾಗ ಡೋಳ್ಳು ಹೊಟ್ಟೆಯ; ಕುಬ್ಜ ಕಾಯದ ಮೇಷ್ಟ್ರು ಆಯ್ತಪ್ಪಾ ನಡೀರಿ ಅಂತಾ ಹೇಳಿದ್ದೆ ತಡ ಎಲ್ಲಾ ಕೆಲಸ ಬಿಟ್ಟು ಊಟಕ್ಕೆ ಧಾವಿಸುತ್ತಿದ್ದೆವು. ಆ ತರೆಲೆ-ತುಂಟಾಟದ ದಿನಗಳೆ ಹಾಗೆ ಎಂದಿಗೂ ಮರೆಯಲಾಗದು.
ಗ್ರಂಥಾಲಯದ ಮೇಡಂಗಂತೂ ಅಟ್ಟದ ಮೇಲೆ ಕೂರಿಸಿ ಪುಸ್ತಕ ಗಿಟ್ಟಿಸಿಕೊಳ್ಳುವ ವಿದ್ಯೆ ನಮ್ಮಿಂದ ಕಲಿಯಬೇಕು. ಅವರಿಂದ ಪುಸ್ತಕ ಗಿಟ್ಟಿಸಿಕೊಳ್ಳುವುದೆಂದರೆ ನಮಗೆ ನೀರು ಕುಡಿದಷ್ಟು ಸುಲಭ. ಇನ್ನೊಂದು ವಿಷಯ ಹೇಳುವುದು ಮರೆತೆ ಅನ್ಸುತ್ತೆ ನಮ್ಮ ನೋಟ್ಸ್ಗಳಿಗೆ ಸರ್ ಸಹಿ ಹಾಕದೆ ಹೋದಾಗ ಅವರ ಸಿಗ್ನೇಚರ್ ಕಾಪಿ ಕೂಡ ಮಾಡಿದ್ದುಂಟು. ಒಮ್ಮೆ ಸರ್ ಅನುಮತಿ ಇಲ್ಲದೆ ಹೈದ್ರಾಬಾದ್ ಟೂರ್ಗೆ ಹೋಗಿ ಮುಖಕ್ಕೆ ಮಂಗಳಾರತಿ ಮಾಡಿಸಿಕೊಳ್ಬೆಕಾಯ್ತು. ಹೀಗೆ ತ್ರಿಮೂತರ್ಿ ತರಲೆಗಳ ತುಂಟಾಟದ ಬಗ್ಗೆ ಹೇಳುತ್ತಾ ಹೋದರೆ ಪುಸ್ತಕವೇ ಆಗಬಹುದು, ಅದಕ್ಕೆ ಇಲ್ಲಿಗೆ ನಿಲ್ಲಿಸುತ್ತೇನೆ. ನೆನೆಪುಗಳನ್ನು ರಿಫ್ರೇಶ್ ಮಾಡಿಕೋಳ್ಳುವ ಅವಕಾಶ ನೀಡಿದಕ್ಕೆ ಯುವಜನಕ್ಕೆ ತುಂಬಾ ಧನ್ಯವಾದಗಳು.
ಆತೀಶ ಬಿ ಕನ್ನಾಳೆ

ಯುಪಿ ಸಕರ್ಾರವೇನು ಮಲಗಿದೆಯೇ? 
(IS UP GOVERNMENT SLEEPING.....?)

'ಅತಿಥಿ ದೇವೋಭವ' ಎನ್ನುವ ಮಾತೊಂದಿದೆ ನಮ್ಮಲ್ಲಿಗೆ ಯಾವ ದೇಶ ಜನ ಬಂದರೂ, ಸತ್ಕರಿಸುವ ಶ್ರೀಮಂತ ಸಂಸ್ಕೃತಿ ನಮ್ಮದು. ಆದರೆ, ಇಂಥ ಸಂಸ್ಕೃತಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿರುವುದನ್ನು ನೋಡಿದರೆ ನಿಜಕ್ಕೂ ಖೇದವೆನಿಸುತ್ತದೆ.
ಜುಲೈ 2009 ರಲ್ಲಿ ನಾನು ಮತ್ತು ನನ್ನ ಸ್ನೇಹಿತ ದೆಹಲಿ ಪ್ರವಾಸಕ್ಕೆ ಹೋಗಿದ್ದೆವು. ತಿರುಗಿ ಬರುವಾಗ ತಾಜ್ಮಹಲ್ ನೋಡಬೇಕೆನ್ನುವ ಆಸೆ ನಮ್ಮದಾಗಿತ್ತು. ಹಾಗೆ ಪರಿಚಿತರಿಗೆ ಹೋಗಬೇಕಾದ ಮಾರ್ಗವನ್ನು ಕೇಳಿದೆವು. ಅವರು ಸರಿ ಮಾಹಿತಿ ನೀಡಿ, ಮಧ್ಯವತರ್ಿಗಳಿಂದ ಸ್ವಲ್ಪ ಎಚ್ಚರ ವಹಿಸಬೇಕೆಂದು ಹೇಳಿದರು.
ರೈಲಿನ ಮೂಲಕ ಆಗ್ರಾ ರೈಲು ನಿಲ್ದಾಣದಲ್ಲಿ ಇಳಿದಿದ್ದೆ ತಡ ಅಲ್ಲಿದ್ದ ಕೆಲವು ಮಧ್ಯವತರ್ಿಗಳು ಸತ್ತ ಹೆಣವನ್ನು ಹದ್ದುಗಳು ಆಕ್ರಮಿಸುವಂತೆ ನಮ್ಮನ್ನು ಸುತ್ತುವರೆದರು. ಏನನ್ನು ವಿಚಾರಿಸದೆ ಅಸಭ್ಯವಾಗಿ ವರ್ತನೆ ಮಾಡಲಾರಂಭಿಸಿದರು. ನಮ್ಮ ಕೈಗಳಲ್ಲಿದ್ದ ಬ್ಯಾಗ್ಗಳನ್ನು ಕಿತ್ತುಕೊಂಡು ಯಂಹಾ ಪೇ ದೇಖನೆಕೆ ಲಿಯೆ 5-6 ಜಗಹ ಹೇ, ಆಪಕೊ ಹಮ್ ಸಬ್ ದಿಖಾದೆಂಗೆ ಚಲಿಯೆ ಎಂದು ಒತ್ತಡ ಹೇರಲು ಆರಂಭಿಸಿದರು. ನಾವು ಅವರಿಂದ ತಪ್ಪಿಸಿಕೊಳ್ಳಬೇಕೆಂದು, ಒಂದೆರಡು ಕಿ.ಮಿ. ಕಾಲ್ನಡಿಗೆಯಲ್ಲಿಯೆ ಕ್ರಮಿಸಿದೆವು. ಆದರೂ ಅವನು ನಮ್ಮ ಬೆನ್ನು ಬಿಡದೆ ಹಿಂದೆಯೇ ಬಿದ್ದಿದ್ದ. ಮತ್ತು ಹಿಂದಿಯಲ್ಲಿ ಅಸಹ್ಯವಾಗಿ ಬೈಯಲಾರಂಬಿಸಿದ, ಹೇಗಾದರೂ ಮಾಡಿ ಅವನಿಂದ ತಪ್ಪಿಸಿಕೊಳ್ಳಬೇಕೆಂದು ರಿಕ್ಷಾ ಹಿಡಿದು ತಾಜ್ಮಹಲ್ ಕಡೆಗೆ ಹೊರೆಟೆವು. ಅಬ್ಬಾ! ಅಂತೂ ಶನೇಶ್ವರನ ಕಾಟ ತಪ್ಪಿತು ಎನ್ನುವಷ್ಟರ ಹೊತ್ತಿಗೆ 'ಹೋದೆ ಗವಾಕ್ಷಿ ಎಂದರೆ ಬಂದೆ ಕಾಮಾಕ್ಷಿ' ಎನ್ನುವ ಮಾತಿನಂತೆ ರಿಕ್ಷಾದವನು ಒಂದು ಮನೆಯ ಮುಂದೆ ನಿಲ್ಲಿಸಿ, ನಿಮ್ಮ ಬ್ಯಾಗ್ಗಳನ್ನು ಇಲ್ಲೆ ಇಡಿ ಎಂದು ಧಿಮಾಕಿನ ಧಾಟಿಯಲ್ಲಿ ಹೇಳಿದ. ಆದರೆ ನಾವು ರಾತ್ರಿ ಹೊಗಬೇಕಾದುದ್ದರಿಂದ ನಿರಾಕರಿಸಿದೆವು. ಆದರೆ ಅವನು ಹಿಟ್ಲರ್ನಂತೆ ಸವರ್ಾಧಿಕಾರ ಮಾಡಲಾರಂಭಿಸಿದ. ನಾವೂ ಸಹ ಖಡಾಖಂಡಿತವಾಗಿ ತಿರಸ್ಕರಿಸಿದ್ದರಿಂದ ನಮ್ಮನ್ನು ಅರ್ಧ ದಾರಿಯಲ್ಲೆ ಇಳಿಸಿ ಅಲ್ಲಿಂದ ಅವನು ಪಾರಾದ. ಆದರೆ ಧರ್ಮಸಂಕಟಕ್ಕೆ ನಾವು ಸಿಕ್ಕಿಬಿದ್ದೆವು. ನಂತರ ಆಟೋ ಹಿಡಿದು ತಲುಪಬೇಕಾದ ಸ್ಥಳ ಅನತಿ ದೂರದಲ್ಲಿರುವುದನ್ನು ನೋಡಿ ನಿಟ್ಟುಸಿರು ಬಿಟ್ಟೆವು.
ಮುಂದೆ ತಾಜ್ಮಹಲ್ ಕಡೆಗೆ ಹೋಗುತ್ತಿರುವಾಗಲೆ ಮತ್ತೊಬ್ಬ ಮಧ್ಯವತರ್ಿ ಬಂದು ಲಗೇಜ್ ಇಲ್ಲೆ ಇಡಿ, ಒಳಗೆ ಪ್ರಮುಖ ಸ್ಥಳಗಳನ್ನು ತೊರಿಸುತ್ತೇನೆಂದು ಹೇಳಿದ, ಅಲ್ಲೇ ಪಕ್ಕದಲ್ಲಿ ಪ್ರೇಕ್ಷಕರಿಗಾಗಿ ಸಕರ್ಾರದಿಂದ ಲಾಕರ್ ವ್ಯವಸ್ಥೆ ಮಾಡಲಾಗಿದೆ. ಆದರೆ ಅವನು ನಮಗೆ ಆ ಕಡೆಗೆ ಹೋಗಲು ಬಿಡುತ್ತಿಲ್ಲ. ಈ ಸಮಸ್ಯೆಯಿಂದ ಯಾವ ರೀತಿ ಪಾರಾಗಬೇಕೆಂದು ಯೋಚಿಸುತ್ತಿರುವಾಗಲೆ ಅಲ್ಲೊಬ್ಬ ಪೊಲೀಸ್ ಅಧಿಕಾರಿ ಕಾಣಿಸಿದ ಇವರಿಗೆಲ್ಲಾ ಖಾಕಿಯೇ ಸರಿಯಾದ ಮದ್ದು ಎಂದು ಪೊಲೀಸ್ ಕಡೆಗೆ ಹೋಗಿ ಎಲ್ಲಾ ವಿವರಿಸಿದೆ. ವಿಪಯರ್ಾಸವೆಂದರೆ ಅವನು ಕೂಡ ಮಧ್ಯವತರ್ಿಯನ್ನು ಬೆಂಬಲಿಸತೊಡಗಿದ ಕೊನೆಗೆ ಚಕಾರವೆತ್ತದೆ ಅಲ್ಲಿಂದ ಲಾಕರ್ ಕಡೆಗೆ ಧಾವಿಸಿದೆ. ಅಂತು ಇಂತು ಹೇಗೋ ಮಾಡಿ ಅಲ್ಲಿಂದ ಪಾರಾದೆವು.
ನೀವೆ ಯೋಚಿಸಿ... ದಿನಕ್ಕೆ ನೂರಾರು ಜನ ಬಂದು ಹೋಗುವ ಇಂತಹ ಪ್ರಮುಖ ಐತಿಹಾಸಿಕ ಸ್ಥಳಗಳಲ್ಲಿ ಮಧ್ಯವತರ್ಿಗಳ ಹಾವಳಿ ಇಷ್ಟೊಂದು ರಾಜಾರೋಷವಾಗಿ ನಡೆಯುತ್ತಿರುವಾಗ, ಉತ್ತರ ಪ್ರದೇಶ ಸಕರ್ಾರವೇನು ಮಲಗಿದೆಯೇ? ಒಂದು ವೇಳೆ ಇಂಥ ಕೃತ್ಯಗಳಿಗೆ ಸೊಪ್ಪು ಹಾಕುವ ಕೆಲಸ ಹೀಗೆ ಮುಂದುವರಿದರೆ ಐತಿಹಾಸಿಕ ಸ್ಥಳಗಳು ಮಧ್ಯವತರ್ಿಗಳ ತಾಣಗಳಾಗಬಹುದು, ಎಚ್ಚರಿಕೆ.
ಆತೀಶ ಬಿ ಕನ್ನಾಳೆ
ಪ್ರೀತಿಯ ಬಂಗಲೆಗೆ ಧರ್ಮದ ತಳಹದಿ
ನೋಡಮ್ಮ ಈಗ ತಾನೇ ಕಾಲೇಜ್ ಎಂಟರ್ ಆಗಿದಿಯಾ, ನಿನ್ ಹೈಸ್ಕೂಲ್ ಬುದ್ಧಿ ಎಲ್ಲಾ ಬಿಟ್ಟು ಡಿಸೆಂಟ್ ಆಗಿರಬೇಕು. ಓದಿನ ಕಡೆಗೆ ಹೆಚ್ಚು ಗಮನ ಹರಿಸಬೇಕು. ಎನ್ನುವುದು ಪ್ರತಿಯೊಂದು ಮನೆಯಲ್ಲಿ ಕೇಳಿಬರುವ ಕಾಳಜಿಯ ಕಿವಿಮಾತಾಗಿದೆ.
ಹುಡುಗಿಯರಲ್ಲಿ ಈ 16 ಎನ್ನುವ ವಯಸ್ಸು ಚಿಟ್ಟೆಯಲ್ಲಿ ಆಗುವ ಬದಲಾವಣೆಯಂತೆ ಅವರಲ್ಲಿ ಅನೇಕ ಹಾಮರ್ೋನ್ಗಳ ಬದಲಾವಣೆಯಿಂದಾಗಿ ಅವರ ಉಡುಗೆ-ತೊಡುಗೆ, ಭಾವನೆ, ಮಾತಿನ ಶೈಲಿ ಎಲ್ಲಾ ಬದಲಾಗಿ ವಿರುದ್ಧ ಲಿಂಗಗಳ ಕಡೆಗೆ ಆಕಷರ್ಿಸುತ್ತದೆ. ಈ ಸಮಯದಲ್ಲಿ ಅವರು ಇನ್ಫ್ಯಾಕ್ಚ್ಯುಯೇಷನ್ ಲವ್ಗೆ ಸುಲಭವಾಗಿ ಒಳಗಾಗುತ್ತಾರೆ.
ಸಾಮಾನ್ಯವಾಗಿ 10 ವರ್ಷಗಳ ಹಿಂದಿನ ಕಾಲೇಜು ಯುವತಿಯರ ಕಡೆಗೆ ಕಣ್ಣು ಹಾಯಿಸುವುದಾದರೆ ಅವರು ಒಬ್ಬ ಹುಡುಗನನ್ನು ಕಣ್ಣೆತ್ತಿ ನೋಡುತ್ತಿರಲಿಲ್ಲ. ಒಂದು ವೇಳೆ ನೋಡಿದರು ಅವನನ್ನು ಪರೀಕ್ಷಿಸಿ ಅವನ ಬೇಕು-ಬೇಡಗಳನ್ನು, ಎಲ್ಲಾದಕ್ಕಿಂತ ಹೆಚ್ಚಾಗಿ ನಡತೆಯನ್ನು ಸಾಣೆಗಲ್ಲಿಗೆ ಹಾಕಿ ತಿಕ್ಕುತ್ತಿದ್ದರು. ಒಂದು ವೇಳೆ ಆ ಹುಡುಗನ ಗುಣ ಅಪ್ಪಟ ಚಿನ್ನ ಎಂದು ಖಾತ್ರಿಯಾದ್ದಲ್ಲಿ ಪ್ರೇಮ ಪತ್ರಕ್ಕೆ ರುಜುಹಾಕುತ್ತಿದ್ದರು. ಹಾಗೂ ಆ ಪ್ರೀತಿ ಇಬ್ಬನಿಯಷ್ಟು ಪರಿಶುದ್ಧವಾಗಿರುತ್ತಿತ್ತು. ಅಲ್ಲಿ ಭಾವನೆಗಳ ಸಮಾಗಮವಿರುತ್ತಿತ್ತೆ ಹೊರತು ಲೈಂಗಿಕ ತೃಷೆಯಲ್ಲ. ಸಮಾಜವನ್ನು ದೃಷ್ಟಿಕೋನದಲ್ಲಿಟ್ಟುಕೊಂಡು, ಮನೆಯ ಪರವಾನಗಿ ಪಡೆದು ಮದುವೆಯ ನಂತರವೇ ಆ ಪ್ರೀತಿ ಬೆಡ್ರೂಂ ಪ್ರಣಯಕ್ಕೆ ನಾಂದಿ ಹಾಡುತ್ತಿತ್ತು.
ಆದರೆ ಇಂದಿನ 21 ನೇ ಶತಮಾನದ ಪ್ರೀತಿ ಯಂತ್ರಗಳಷ್ಟೇ ಭಾವನಾರಹಿತ ಹಾಗೂ ನಿಸ್ಸಾರಗೊಂಡಿದೆ. ಇಲ್ಲಿ ಪ್ರೀತಿ ಆರಂಭವಾಗುವುದೆ (ದೈಹಿಕ) ಚರಮ ಸುಖಕ್ಕಾಗಿ. ಇಂದು ಪ್ರೀತಿ ಎಂದರೆ ಬೆಡ್ರೂಂ ಎನ್ನುವಷ್ಟರ ಮಟ್ಟಿಗೆ ಪ್ರೀತಿಯ ವ್ಯಾಖ್ಯೆ ಅಗ್ಗವಾಗಿದೆ.
ಇಂಥ ಅವಕಾಶಗಳನ್ನು ಉಪಯೋಗಿಸಿಯೇ ಕೆಲವು ಧಮರ್ಾಂಧರು ಲವ್ ಅನ್ನು ಜಿಹಾದ್ ಆಗಿಸಿದ್ದಾರೆ. ಇಂದಿನ ಹುಡುಗಿಯರು ಹೊರಗಿನ ಸೌಂದರ್ಯ ನೋಡುವುದರ ಮೂಲಕ ಹುಡುಗರನ್ನು ಪ್ರೀತಿಸುತ್ತಾರೆ. ಹಾಗೂ ಅದು ಮುಂದೆ ಬಾರ್, ರೆಸ್ಟೋರೆಂಟ್ ಮತ್ತು ಲಾಡ್ಜ್ಗಳವರೆಗೆ ಮುಂದುವರಿಯುತ್ತದೆ. ಇದರ ಪ್ರತಿಫಲ ಎಷ್ಟುದಿನ ಮುಚ್ಚಿಡಲು ಸಾಧ್ಯ. ಕೊನೆಗೆ ಸಮಾಜದ ದೃಷ್ಟಿಯಲ್ಲಿ ಹೇಯವಾದ ಕೃತ್ಯಮಾಡಿದ ಯುವತಿಯರು ವಾಸ್ತವಕ್ಕೆ ಮರುಳುತ್ತಾರೆ. ಆಗ ಅವರ ತಲೆಯ ಪಿತ್ತ ಕಾಲಿಗಿಳಿಯುತ್ತದೆ. ಇದಕ್ಕಾಗಿಯೇ ಬಕಪಕ್ಷಿಯಂತೆ ಕಾಯುವ ಜಿಹಾದಿಗಳು ಬಲವಂತವಾಗಿ ಮಂತಾತರ ಮಾಡುತ್ತಾರೆ. ಇಂಥ ಎಷ್ಟೋ ಘಟನೆಗಳು ಇಂದು ಮಾಧ್ಯಮದಲ್ಲಿ ಸುದ್ದಿ-ಗದ್ದಲವನ್ನು ಎಬ್ಬಿಸಿವೆ. ಈ ನಿಟ್ಟಿನಲ್ಲಿ ಧಮರ್ಾಂಧ ಜನರಿಗಿಂತ ಮೋಸ ಹೋಗಿರುವ ಯುವತಿಯರದ್ದೂ ತಪ್ಪೆನ್ನಬಹುದು. ತಮ್ಮ ವಾಂಛೆಗಳನ್ನು ಪೂರೈಸಿಕೊಳ್ಳುವ ಯುವಕರು ನೂರುಜನ ನಿಂತರು. ತಾನು ಸಂಯಮ ಕಳೆದುಕೊಳ್ಳದೆ ಇದ್ದಲ್ಲಿ ಇಂಥ ಮತಾಂತರ ಪ್ರಕರಣಗಳಾಗಲು ಸಾಧ್ಯವೇ ಇಲ್ಲ.

ಪ್ರೀತಿ ಎಂಬ ಬಂಗಲೆಗೆ, ಧರ್ಮವೆಂಬ ತಳಹದಿಯನ್ನು ಹಾಕಿಕೊಂಡಿರುವುದು ಎಷ್ಟು ಸೂಕ್ತ? ಇದು ಕುರಿಯ ವೇಷದಲ್ಲಿರುವ ತೋಳಗಳ ಹೊಸ ಅವತಾರವೇ ಆಗಿದೆ. ಅವರನ್ನು ಹಿಡಿಯುವುದು ತುಂಬಾ ಕಷ್ಟ. ಆದರೆ ಹುಡುಗಿಯರೇ ನೀವು ಪ್ರೀತಿಯ ಮತ್ತಿನಿಂದ ಕೆಳಗಿಳಿದು, ವಾಸ್ತವಿಕತೆಯ ಕಡೆಗೆ ಚಿತ್ತ ಕೇಂದ್ರಿಕರಿಸಿ, ಪ್ರೀತಿಸುವ ಮುನ್ನ ಯೋಚಿಸಬೇಕು. ಬಾಹ್ಯ ಸೌಂದರ್ಯವನ್ನಲ್ಲದೆ ಆಂತರಿಕ ಸೌಂದರ್ಯವನ್ನು ಒರೆಹಚ್ಚುವುದಾದರೆ ಇವರ ಮೇಲೆ ಅಂಕುಶವಿಡಲು ಸಾಧ್ಯ. ಆದ್ದರಿಂದ ಪ್ರೀತಿ ಎಂಬ ಭವ್ಯ ಬಂಗಲೆಗೆ ಪ್ರವೇಶಿಸುವ ಮುನ್ನ ಅದರ ತಳಹದಿಯನ್ನು ಪರೀಕ್ಷಿಸಿ ತಾಳೆಹಾಕಿ. ಇಲ್ಲವಾದ್ದಲದಲ್ಲಿ, ನಿಮ್ಮ ಜೀವನ ನೀರು ಪಾಲಾಗಬಹುದು. ಏನಂತಿಯಾ ಸಖಿ..?
ಆತೀಶ ಬಿ ಕನ್ನಾಳೆ
ಆಹಾ ಎಂಥಾ 
 ಆ ಕ್ಷಣ ನೆನೆದರೆ ತಲ್ಲಣ
(ರಂಗು ರಂಗಿನ ಕೊನೆಯ ಕ್ಷಣಗಳು)


ಇದು ನಮ್ಮ ಸ್ನಾತಕೋತ್ತರ ಪತ್ರಿಕೋದ್ಯಮದ ಅಂತಿಮ ವರ್ಷ ಇನ್ಮುಂದೆ ಣಣಜಜಟಿಣ ಟಜಿಜ ಅನ್ನೋ ಉಠಟಜಜಟಿ ಠಿಜಡಿಠಜ ಮುಗಿಯಿತು. ಕಾಲೇಜು ಜೀವನದ ರಂಗು-ರಂಗಿನ ಕ್ಷಣಗಳು, ಸ್ನೇಹಿತರೊಂದಿಗೆ ಕಳೆದ ಸುಮಧುರ ದಿನಗಳು ವಾಪಸ್ ಬರ್ಲಿಕ್ಕಿಲ್ಲ. ಎಂಬ ಕಾರಣಕ್ಕೆ ಈ ಸಲದ ಹೋಳಿ ಏನಿದ್ದರೂ ಫ್ರೆಂಡ್ಸ್ ಜೊತೆಗೆ ಕ್ಯಾಂಪಸ್ನಲ್ಲಿಯೆ ಆಚರಿಸಬೇಕು. ಒಂದು ವೇಳೆ ಇದು ಮಿಸ್ ಆದ್ರೆ ಬಹುಶಃ ಇಂಥ ಜಟಿರಿಠಥಿಚಿಛಟಜ ಟಜಟಠಡಿಥಿ ಇನ್ಮುಂದೆ ಸಿಗೋದು ದುರ್ಬರ ಎಂದು ನಿಶ್ಚಯಿದೆವು.

ಅದರಂತೆ ಪ್ರಾರಂಭದ ರಂಗು-ರಂಗಿನ ದಿನಚರಿ, ಮೈ-ಮುಖವನ್ನೆಲ್ಲಾ ರಂಗು-ರಂಗಾಯಿಸಿತು. ಯಾಕೋ ಏನೋ ಬಟ್ಟೆ ತೊಡೋದು ಅಲಜರ್ಿ ಅನ್ಸುತ್ತೆ. ಬಂದ ಪ್ರತಿಯೊಬ್ಬ
ಆಸಾಮಿಯ ಬಟ್ಟೆ ಚಿಂದಿ-ಚಿಂದಿಯಾಗಿಸಿ ಅವರನ್ನು ರಂಗಿನಲ್ಲಿ ಮುಳುಗಿಸಿದೆವು. 'ಪಾಪ ರಂಗು ಬ್ಯಾಡಾ, ಗಿಂಗು ಬ್ಯಾಡಾ' ಎಂದು ಯಾರ ಸಹವಾಸಕ್ಕೂ ಬಾರದೆ, ಯಾರಿಗೂ ಹೇಳದೆ ಅಂಡೆಪಿಕರ್ಿಯಂತೆ ಟೆರಸ್ ಮೇಲೆ ಅಡ್ಡಾಡುತ್ತಿದ್ದ ಸ್ನೇಹಿತ ಸಿದ್ದಯ್ಯನ ಸುಳಿವು ಸಿಕ್ಕಿದ್ದೇ ತಡ ಅವನ ಬೆನ್ನಟ್ಟಿ ಹೊಸ ಶ್ವೇತ ವಸ್ತ್ರಕ್ಕೆ ಕ್ಷಣದಲ್ಲಿ ಕಾಮನ ಬಿಲ್ಲಿನ ಬಣ್ಣಗಳಿಂದ ಆವೃತಗೊಳಿಸಿದೆವು. ಹೀಗೆ ನಮ್ಮ ಎಲ್ಲಾ ಸ್ನೇಹಿತರು ಸೇರಿ ರಂಗಿನ ಗುಂಗಲ್ಲಿ ರಂಗಾಗಿ ಹೋದೆವು.
ಅಷ್ಟೂ ಸಾಲದ್ದಕ್ಕೆ ರಸ್ತೆಯಿಂದ ಹಾದು ಹೋಗುತ್ತಿದ್ದ ದಾರಿಹೋಕರಿಗೂ ಸುಮ್ಮನೆ ಬಿಡಲಿಲ್ಲ. ಎಷ್ಟಾದರೂ ಕಪಿಬುದ್ಧಿ ಸುಮ್ಮನಿರಬೇಕಲ್ವಾ? ಮತ್ತೆ ನಮ್ಮ ವಿಶ್ವವಿದ್ಯಾಲಯದ ಗ್ರಂಥಪಾಲಕರ ಮನೆಯಲ್ಲಿ ಸ್ವೀಟ್ಸ್ ಮಾಡಿದ್ದಾರೆ ಅನ್ನೋ ವಿಷಯ ತಿಳಿದಿದ್ದೆ ತಡ ಲಬೊ... ಲಬೋ... ಬೊಬ್ಬೆ ಹಾಕುತ್ತಾ ಕ್ವಾರ್ಟಸರ್್ ಕಡೆಗೆ ಧಾವಿಸಿ ಅವರ ಮೇಲೂ ಒಲವಿನ ಬಣ್ಣವನ್ನು ಎರಚಿದೆವು. ಈ ರೀತಿ ಬಣ್ಣಗಳ ಹಬ್ಬ ಕ್ಯಾಂಪಸ್ನಲ್ಲಿಯೇ ನೆರವೇರಿತು. ಓ ಸಾರಿ ಮರೆತೆ ಬಿಟ್ಟೆ, ನೆನಪಿಗೋಸ್ಕರ ಫೋಟೋಗಳನ್ನು ಸಹ ಕ್ಲಿಕ್ಕಿಸಿಕೊಂಡೆವು. ಇಂಥ ಕಲರ್ಫುಲ್ ಡೇಸ್ನಲ್ಲಿ ಮತ್ತಷ್ಟು ಕಲರ್ ನೀಡಿದ ಈ ಬಣ್ಣದ ಹಬ್ಬಕ್ಕೆ ತುಂಬಾನೆ ಚಿರರುಣಿ ಹಾಗೂ ಯುವಜನಕ್ಕೂ ಸಹ, wish u all the best for all my dearest friends..... 

ಆತೀಶ ಬಿ ಕನ್ನಾಳೆ
ಯುಸ್ಲೆಸ್ ಅಲ್ಲ, ಯುಸ್ಡ್ಲೆಸ್'.....!

`ನಮ್ಮ ಯುವಕರು ಯುಸ್ಲೆಸ್ ಅಲ್ಲ, ಯುಸ್ಡ್ಲೆಸ್' ಎಂಬ ವಿವೇಕಾನಂದರ ಮಾತು ಎಷ್ಟು ಅರ್ಥಗಭರ್ಿತ ಅಲ್ಲವೆ?
ಇಂದು ಅಮೇರಿಕಾ, ಆಸ್ಟ್ರೇಲಿಯಾ, ಬ್ರೆಜಿಲ್, ಚೀನಾ ಮುಂತಾದ ದೇಶಗಳಿಗೆ ಸಾಫ್ಟ್ವೇರ್ ಇಂಜಿನಿಯರ್ಗಳನ್ನು, ಸಂಶೋಧಕರನ್ನು ಬಹುಪಾಲು ನೀಡುತ್ತಿರುವುದು ನಮ್ಮ ಭಾರತ ಎಂದು ಹೆಮ್ಮೆಯಿಂದ ಹೇಳಬಹುದು. ಅವರು ಭಾರತೀಯರಾದರೂ ಇತರೆ ರಾಷ್ಟ್ರಗಳಲ್ಲಿ ತಮ್ಮ ನಿರಂತರ ಪ್ರಯತ್ನ ಹಾಗೂ ಕಠಿಣ ಪರಿಶ್ರಮದಿಂದ ಹಲವು ಸಾಧನೆಗಳನ್ನು ಮಾಡುತ್ತಿದ್ದಾರೆ. ಅದೇ ಯುವಕರು ಭಾರತದಲ್ಲಿ ತಮ್ಮ ಜ್ಞಾನ, ಚಾತುರ್ಯಗಳಿಗೆ ಶೆಡ್ಡು ಹೊಡೆದು ಆಕುಂಚನಗೊಂಡು ಕುಳಿತಿರುವುದನ್ನು ನೋಡಿದರೆ ವಿಪಯರ್ಾಸ ಎನಿಸುತ್ತದೆ.

ಅದಕ್ಕಾಗಿಯೇ ವಿವೇಕಾನಂದರು, ನಮ್ಮ ಯುವಕರಲ್ಲಿ ಕಾರ್ಯ ಸಾಧಿಸುವ ಬಲ, ಜ್ಞಾನ, ಎದೆಗಾರಿಕೆ ಎಲ್ಲವು ಇದೆ. ಅಂದರೆ ಇದರರ್ಥ ಅವರು ಣಜಟಜ ಅಲ್ಲ, ಬದಲಿಗೆ ಣಜಜ ಟಜ ಆಗಿದ್ದಾರೆ ಎಂದರ್ಥ.
ಇದಕ್ಕೆ ಹಲವು ಉದಾಹರಣೆಗಳನ್ನು ನಮ್ಮೆದುರಿಗಿವೆ, ಪರೀಕ್ಷೆಗಳನ್ನು ರಾತ್ರೋರಾತ್ರಿ ಓದಿ 60-70 ಶೇಕಡವಾರು ಫಲಿತಾಂಶವನ್ನು ಗಳಿಸುವಷ್ಟು ಚಾಕಚಕ್ಯತೆ ಹೊಂದಿರುವ ಇವರಿಗೆ ಯಾರು ತಾನೆ ಣಜಟಜ ಅನ್ನಲು ಸಾಧ್ಯ. ಅದೇ ಸ್ವಲ್ಪ ಪರಿಶ್ರಮಪಟ್ಟು ಮೊದಲಿನಿಂದಲೇ ಓದಿ ಪರೀಕ್ಷೆಗೆ ಸಿದ್ಧವಾದರೆ, ನೀವೇ ಯೋಚಿಸಿ ಅವರು ಎಂಥ ಸಾಧನೆಗಳನ್ನು ಮಾಡಬಹುದಲ್ಲವೆ?

ಈ ಎಲ್ಲಾ ವಿಷಯಗಳನ್ನು ಕೊಂಚ ಬದಿಗೊತ್ತಿ ಯೋಚಿಸುವುದಾದರೆ, ಯುವಕರು ಇಂದು ಯಾಕೆ ಕಡಿಮೆ ಉಪಯೋಗಿಸಲ್ಪಡುತ್ತಿದ್ದಾರೆ. ಇದೇನು ಆಷರ್ೇಯವೋ? ಜಾಢ್ಯವೋ? ಅಥವಾ ಮಾರ್ಗದರ್ಶನದ ಕೊರತೆಯೋ? ಇದಕ್ಕೆ ಸೂಕ್ತ ಸಲ್ಯೂಷನ್ ಕೂಡ ವಿವೇಕಾನಂದರೆ ನೀಡುತ್ತಾರೆ. ಅದೇನೆಂದರೆ, 'ನಮ್ಮ ಯುವಕರಿಗೆ ಬೇಕಾದದ್ದು ಸರಿಯಾದ ಮಾರ್ಗದರ್ಶನ' ಅದೊಂದು ದೊರೆತರೆ ಸಾಕು, ನಾವು ಏನನ್ನು ಬೇಕಾದರೂ ಸಾಧಿಸಬಹುದಗಿದೆ.
ನಮ್ಮ ರಾಷ್ಟ್ರದ ಐತಿಹ್ಯವನ್ನು ಕೆದಕಿ ನೋಡಿದಾಗ, ಯುವಕರ ಪಾತ್ರ ಮಹತ್ವದ್ದಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಜೀವವನ್ನೇ ಒತ್ತೆ ಇಟ್ಟು ಬ್ರಿಟೀಷರ ವಿರುದ್ಧ ಹೋರಾಡಿದವರು ಯುವಕರೆ, ಕಾಗರ್ಿಲ್ ಯುದ್ಧದಲ್ಲಿ ವೈರಿಗಳ ಗುಂಡಿಗೆ ಎದೆಯೊಡ್ಡಿ ಭಾರತವನ್ನು ರಕ್ಷಿಸಿದವರು ಈ ಯುವಕರೆ, ಅಷ್ಟೆ ಯಾಕೆ ಮುಂಬೈ ದಾಳಿಯಲ್ಲಿ ಉಗ್ರವಾದಿಗಳನ್ನು ಸೇದೆಬಡಿದ ಎನ್ಎಸ್ಜಿ ಕಮಾಂಡೊ ಸಂದೀಪ್ ಉನ್ನಿಕೃಷ್ಣನ್ ಕೂಡ ಒಬ್ಬ ಯುವಕನೆ ಅಲ್ಲವೆ? ಹೀಗಿರುವಾಗ ಇಂದಿನ ಯುವಕರಿಗೆ ಏನಾಗಿದೆ, ಅವರು ಏಕೆ ಡ್ರಗ್ಸ್, ಅಫೀಮು, ಮಧ್ಯಪಾನ ಹಾಗೂ ರಾಜಕೀಯ ವ್ಯಕ್ತಿಗಳ ಕೈಗೊಂಬೆಗಳಾಗಿ ಮಾರ್ಪಡುತ್ತಿದ್ದಾರೆ? ಇವುಗಳೇನು ಯಕ್ಷಪ್ರಶ್ನೆಗಳಲ್ಲ!

ಹೀಗೆ ನಮ್ಮ ಯುವಜನತೆ ಅಂಡೆಪಿಕರ್ಿಗಳಂತೆ ವತರ್ಿಸಲು ಮೂಲ ಕಾರಣ ಅವರಿಗೆ ಸೂಕ್ತ ಮಾರ್ಗದರ್ಶನ ಇಲ್ಲದಿರುವುದೆ ಎಂದು ಕಡ್ಡಿ ಮುರಿದಷ್ಟು ಸುಲಭವಾಗಿ ಹೇಳಬಹುದು.  ಅದಕ್ಕಾಗಿಯೇ ನಮ್ಮ ಯುವಕರಿಗೆ ಬೇಕಾದದ್ದು ಸರಿಯಾದ ಮಾರ್ಗದರ್ಶನ ಎಂಬ ವಿವೇಕಾನಂದರ ಮಾತು  ನಾವು ನಂಬಿ ಅದರಂತೆ ಪಾಲಕರು ತಮ್ಮ ಮಕ್ಕಳ ಭವ್ಯ ಭವಿಷ್ಯತ್ತಿಗೆ ನಾಂದಿ  ಹಾಡಬೇಕಾದಲ್ಲಿ ಅವರು ಎಷ್ಟೇ ಛಣಥಿ ಆಗಿದ್ದರೂ ಸಹ ಮಾರ್ಗದರ್ಶನ ನೀಡಲೇಬೇಕು ಇಲ್ಲವಾದಲ್ಲಿ ಯುವಜನತೆ ಣಜಜ ಟಜ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಏನಂತಿರಾ.....? 

ಆತೀಶ ಬಿ ಕನ್ನಾಳೆ

Sunday, November 28, 2010

Scarf....

ಕರೆಂಟ್ ರಕ್ಷಿಸುವುದು ನಮ್ಮೆಲ್ಲರ ನೈತಿಕ ಜವಾಬ್ದಾರಿ ಅಲ್ಲವೇ?
(ಕರೆಂಟ್ ರಕ್ಷಿತೆ ರಕ್ಷಿತಃ)

 ಇಂದು ಇದರ ಕುರಿತು ನಾವು ಗಹನವಾಗಿ ಯೋಚಿಸಲೇಬೇಕಾಗಿದೆ......!
ರಾಜ್ಯಾದ್ಯಂತ ಬೇಸಿಗೆಯ ಝಳದ ಜೊತೆಗೆ ಲೋಡ್ಶೆಡ್ಡಿಂಗ್ ಕೂಡ ಅವ್ಯಾಹತವಾಗಿ ಹೆಚ್ಚಿದೆ. ಹಾಗಂತ ಬೇಸಿಗೆಯನ್ನು ನಿಲ್ಲಿಸಲಾದೀತಾ? ಖಂಡಿತವಾಗಿ ಅಸಾಧ್ಯ. ಆದರೆ ಲೋಡ್ಶಡ್ಡಿಂಗ್ ನಿಲ್ಲಿಸಬಹುದಲ್ವಾ?
ಈ ಹಿಂದೆ ಅತಿವೃಷ್ಠಿಯಿಂದ ಇಡೀ ಉತ್ತರ ಕನರ್ಾಟಕವೇ ಜರ್ಜರಿತವಾದ ಬೆನ್ನಲ್ಲೆ ಇಂದು ಅದೇ ನೀರಿಗಾಗಿ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಇಂದು ರಾಜ್ಯದ ಜಲಾಶಯಗಳಲ್ಲಿ ನೀರು ಕಡಿಮೆಯಾಗಿ ಬಹುಶಃ ಏಪ್ರಿಲ್-ಮೇ ತಿಂಗಳಲ್ಲಿ ವಿದ್ಯುತ್ಗಾಗಿ ಪರದಾಡುವ ಪ್ರಮೇಯ ಬಂದೊದಗಬಹುದೇನೊ.
ಇಂಧನ ಸಚಿವರಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ "ಬೇಸಿಗೆಯಲ್ಲಿ ಗ್ರಾಹಕರಿಗೆ ಯಾವುದೇ ತೊಂದರೆ ಆಗದಂತೆ ಅದೆಲ್ಲದ್ದಕ್ಕಿಂತ ಹೆಚ್ಚಾಗಿ ಇದು ವಿದ್ಯಾಥರ್ಿಗಳಿಗೆ ಪರೀಕ್ಷಾ ಸಮಯವಾಗಿರುವುದರಿಂದ ಎಷ್ಟೇ ಹಣ ಖಚರ್ಾದರೂ ಪರ್ವಾಗಿಲ್ಲ. ವಿದ್ಯುತ್ ಖರೀದಿಸಿಯಾದರೂ ರಾಜ್ಯಕ್ಕೆ ಬೆಳಕು ನೀಡುತ್ತೇವೆ" ಎಂದು ಹೇಳಿಕೆ ನೀಡಿದ್ದರು. ಅದಕ್ಕೆ ತಕ್ಕಂತೆ ರಾಜ್ಯಕ್ಕೆ ಅವಶ್ಯವಿರುವ 150 ದಶಲಕ್ಷ ಯುನಿಟ್ಗೆ 130 ದಶಲಕ್ಷ ಯುನಿಟ್ನಷ್ಟು ವಿದ್ಯುತ್ ಅನ್ನು ಖರೀದಿಸಿ ರಾಜ್ಯದ ಬೇಡಿಕೆಯನ್ನು ಪೂರೈಸುವಲ್ಲಿ ಪ್ರಯತ್ನಿಸಿದ್ದಾರೆ. ಬಹುಶಃ ಅವರ ಮೇಲೆ ಗೊಣಗಾಡಿ ಪ್ರಯೋಜನವೇ ಇಲ್ಲವೇನೊ ಎನಿಸುತ್ತದೆ! ಅದಕ್ಕೆ ಕಾರಣವಿಷ್ಟೆ, ಈಗಾಗಲೇ ದಿನಕ್ಕೆ 20 ದಶಲಕ್ಷ ಯುನಿಟ್ ವಿದ್ಯುತ್ ಅನ್ನು ಪ್ರತಿ ಯುನಿಟ್ಗೆ 5.50 ರೂ.ನಂತೆ ಪ್ರತಿನಿತ್ಯ 11 ಕೋಟಿ ರೂ. ವ್ಯಯಮಾಡಿ ತಿಂಗಳಿಗೆ 110 ಕೋಟಿ ರೂ. ಸರಕಾರದ ಬೊಕ್ಕಸದಿಂದ ನೀಡಿ ವಿದ್ಯುತ್ ಕೊರತೆಯನ್ನು ನೀಗಿಸುವ ಪ್ರಯತ್ನದಲ್ಲಿದ್ದಾರೆ.


ಅದೆಲ್ಲಾ ಇರಲಿ ಬಿಡಿ, ಇಂದು ಜಲಾಶಯಗಳಲ್ಲಿ ನೀರಿನ ಮಟ್ಟದ ಕುಸಿತದಿಂದಾಗಿ, ವಿದ್ಯುತ್ ಖರೀದಿಗಾಗಿ ಏಳು ರಾಜ್ಯಗಳು ಪೈಪೋಟಿಗೆ ಇಳಿದಿವೆ. ಹೀಗಾಗಿ ಬಹುಶಃ ಮುಂದಿನ ದಿನಗಳಲ್ಲಿ ವಿದ್ಯುತ್ ಮತ್ತಷ್ಟು ವ್ಯತ್ಯಯ ಎದುರಿಸಬಹುದೇನೋ ಎನ್ನುವ ಗುಮಾನಿ ಕಾಡುತ್ತಿದೆ. ಏಕೆಂದರೆ, ಇಂದು ರಾಜ್ಯದ ವಿವಿಧ ಮೂಲಗಳಿಗೆ ಹೋಲಿಸುವುದಾದರೆ ಅತೀ ಹೆಚ್ಚು ಪ್ರಮಾಣ 40 ದಶಲಕ್ಷ ಯುನಿಟ್ನಷ್ಟು ವಿದ್ಯುತ್ ಅನ್ನು ಸರಬರಾಜು ಮಾಡುತ್ತಿರುವುದು ಜಲವಿದ್ಯುತ್ ಘಟಕಗಳಿಂದಲೆ, ಆದರೆ ಇಂದು ಜಲಾಶಯಗಳ ನೀರಿನ ಮಟ್ಟ ಸಂಪೂರ್ಣವಾಗಿ ಕುಸಿದಿದ್ದು ಹೀಗಿರುವಾಗ ಪಾಪ ಯಡಿಯೂರಪ್ಪನವರು ಏನು ಮಾಡಲಾದೀತು. ನೀವೆ ಹೇಳಿ?
ಈ ಜಾಗತೀಕ ಯುಗದಲ್ಲಿ ಪ್ರತಿಯೊಬ್ಬರ ಜೀವನ ವಿದ್ಯುತ್ಮಯವಾಗಿ ಬಿಟ್ಟಿದೆ ಬಹುಶಃ ಊಟವಿರದೇ ಬದುಕಬಹುದೇನೋ ಆದರೆ ವಿದ್ಯುತ್ ಇಲ್ಲದ ಬದುಕು ಊಹೆಗೂ ಎಟುಕದು. ಮುಂಜಾನೆಯಿಂದ ರಾತ್ರಿ ಮಲಗುವವರೆಗೆ ನಾವು ವಿದ್ಯುತ್ ಅನ್ನು ಅವಲಂಭಿಸಿದ್ದೇವೆ. ಇಂಥ ಅಮೂಲ್ಯವಾದ ವಿದ್ಯುತ್ನ ದುರ್ಬಳಕೆ ಮಾಡುತ್ತಿರುವುದು ಎಷ್ಟು ಸೂಕ್ತ..... ಎಂಬುದನ್ನು ನಮ್ಮ ಜನರೇ ಯೋಚಿಸಿ ನಿರ್ಧರಿಸಬೇಕು.
ಇಂದಿನ ನಮ್ಮ ಜನರಲ್ಲಿ ಒಂದು ವಿಚಿತ್ರ ಮನೋವೃತ್ತಿ ಪ್ರವೃತ್ತಿಯಾಗಿ ಮಾರ್ಪಟ್ಟಿದೆ. ವಿದ್ಯುತ್ ಇರದಿದ್ದಲ್ಲಿ, ನೀರು ಬರದಿದ್ದಲ್ಲಿ, ರಸ್ತೆ ಅಪಘಾತಗಳು ಹೆಚ್ಚಿದ್ದಲ್ಲಿ, ಒಟ್ಟಿನಲ್ಲಿ ಏನೇ ಆದರೂ ಸಕರ್ಾರಕ್ಕೆ ದೂರಲಾಗುತ್ತದೆ. ಇವೆಲ್ಲವುಗಳಲ್ಲಿ ಸಕರ್ಾರದ್ದೇ ತಪ್ಪಾ? ಸಾರ್ವಜನಿಕರ ನೈತಿಕ ಜವಾಬ್ದಾರಿ ಏನೂ ಇಲ್ಲವೇ?

'ಇದ್ದಾಗ ಕಾರುಣ್ಣಿಮೆ, ಇಲ್ಲದಿದ್ದಾಗ ಹೋಳಿಹುಣ್ಣಿಮೆ' ಎಂಬಂತೆ ವಿದ್ಯುತ್ ಇದ್ದಾಗ ಅವಶ್ಯವೋ, ಅನಾವಶ್ಯವೋ? ಇನ್ನೂ ನೈಸಗರ್ಿಕ ದೀಪ (ಸೂರ್ಯ) ಆರುವ ಮುನ್ನವೇ ಎಲ್ಲಾ ಬೀದಿ ದೀಪಗಳು ಉರಿಯುತ್ತಿರುತ್ತವೆ, ರಾತ್ರಿ ಹಾಕಿದ ದೀಪಗಳು ಮಧ್ಯಾಹ್ನ ಹನ್ನೆರಡಾದರೂ ಆರಿಸುವುದಿಲ್ಲ, ಇನ್ನು ಕೆಲವು ಕಡೆಯಂತೂ ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಬೀದಿ ದೀಪಗಳು ಉರಿಯುತ್ತಲೇ ಇರುತ್ತವೆ. ಇದೆಲ್ಲಾ ಬೀದಿವಿಚಾರ ಬಿಡಿ! ಮನೆಯಲ್ಲಿಯೇ ಅನಾವಶ್ಯಕವಾಗಿ ದೀಪಗಳು, ಫ್ಯಾನ್ಗಳು ಉರಿಯುತಿರುತ್ತವೆ. ಬಹುಶಃ ನೀವೂ ಕೇಳಿರಬಹುದು 'ಹನಿ-ಹನಿಗೂಡಿದರೆ ಹಳ್ಳ ತೆನೆ-ತೆನೆಗೂಡಿದರೆ ರಾಶಿ' ಒಂದೊಂದು ಯುನಿಟ್ಗಳನ್ನು ನಾವು ಅಮೂಲ್ಯ ಎಂದು ಬಳಸುವುದಾದರೆ, ಪ್ರಾಯಶಃ ಈ ವಿದ್ಯುತ್ ವ್ಯತ್ಯಯಕ್ಕೆ ಕಡಿವಾಣ ಹಾಕಬಹುದೇನೋ?
ಒಂದು ವೇಳೆ ಅನಾವಶ್ಯಕವಾಗಿ ಪೋಲಾಗುತ್ತಿರುವ ವಿದ್ಯುತನ್ನು ತಡೆಯುವುದಾದರೆ, ಸಕರ್ಾರವನ್ನಾಗಲಿ ಅಥವಾ ಜವಾಬ್ದಾರಿ ಹೊತ್ತ ಅಧಿಕಾರಿಗಳಿಗೆ ಪ್ರಶ್ನಿಸುವ ಹಕ್ಕು ನಮ್ಮದಾಗಬಹುದು. ಇಲ್ಲವಾದ್ದಲ್ಲಿ ಪ್ರಶ್ನಿಸುವ ಯಾವ ನೈತಿಕ ಹಕ್ಕು ನಮಗಿಲ್ಲ.
ಆತೀಶ ಬಿ ಕನ್ನಾಳೆ

Saturday, November 27, 2010

ಹಾಡು ಹಗಲೆ ಕನ್ನಡದ ಕಗ್ಗೊಲೆ.......!
ಅನ್ಯಭಾಷೆಯ ಒಡೆತನಕ್ಕೆ ಸಿಲುಕಿ ಕನ್ನಡದ ಕಂಪು ಕೊಳೆಯುತ್ತಿರುವುದು ಈಗ ಹೊಸತೇನಲ್ಲ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆ ಹಲವು ಎಡರು-ತೊಡರುಗಳನ್ನು ಎದುರಿಸುತ್ತ ಬಂದಿದೆ. ಇಂಥ ಸವಾಲುಗಳ ಮಧ್ಯೆಯು ಸಹ ಈ ಭಾಷೆ ಬೆಳೆಯುತ್ತಿರುವುದು ಸೋಜಿಗ ಎನಿಸಿದರೂ ಅದು ಈ ಭಾಷೆಯ ಹಿರಿಮೆಯನ್ನು ಸೂಚಿಸುತ್ತದೆ. ಇದಕ್ಕೆ ಅಮೆರಿಕೆಯಲ್ಲಿ ನಡೆದ 'ಅಕ್ಕಾ ಸಮ್ಮೇಳನ' ಸಾಕ್ಷಿ.
ಕನ್ನಡದ ಉಳಿವಿಗಾಗಿ ನೇಪಥ್ಯಕ್ಕೆ ಸರಿದ ಅನೇಕ ಕನ್ನಡ ಅಭಿಮಾನಿಗಳುಂಟು. 'ಕನ್ನಡವೇ ಸತ್ಯ, ಕನ್ನಡವೇ ನಿತ್ಯ' ಎಂಬ ಮಾತನ್ನೆ ಮೂಲಮಂತ್ರವಾಗಿ ಹಿಡಿದು ಜೀವನವೀಡಿ ದುಡಿದ ದ.ರಾ.ಬೇದ್ರೆ, ರಾಷ್ಟ್ರಕವಿ ಕುವೆಂಪು, ಪತ್ರಕರ್ತ ಪಾಟೀಲ್ ಪುಟ್ಟಪ್ಪ ಹೀಗೆ ಹಲವರು. ಅಷ್ಟೇ ಯಾಕೆ ಕನ್ನಡ ನಾಡಿನ ಪತಾಕೆಯನ್ನು ಹಾರಿಸಿದ ವರನಟ ಡಾ. ರಾಜ್ಕುಮಾರ್ ಹೀಗೆ ಹಲವರು ತಮ್ಮ ಜೀವನವನ್ನು ಕನ್ನಡಕ್ಕಾಗಿ ಸಮಪರ್ಿಸಿದ್ದಾರೆ. ಆದರೆ ಎಂಥಾ ವಿಪಯರ್ಾಸವೆಂದರೆ, ಇಂದು ಆಗಂತುಕವಾಗಿ ಆಗಮಿಸುತ್ತಿರುವ ಅನೇಕ ಮಾಧ್ಯಮಗಳು ಕನ್ನಡವನ್ನು ವಿಭ್ರಂಶಗೊಳಿಸುತ್ತಿರುವುದು ಜಗತ್ಜಾಹೀರಾದ ವಿಷಯ. ಇಂಥ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಳ್ಳುವ ಬದಲು ನಮ್ಮ ಕನ್ನಡಿಗರೆ ಅವುಗಳಿಗೆ ಪುಷ್ಠಿ ನೀಡಿ ಬೆಳೆಸುತ್ತಿರುವುದನ್ನು ಚೋದ್ಯವೇ ಸರಿ.
ಕನ್ನಡ ಪರ ಸಂಘಟನೆಗಳು ನೀಡಿರುವ 'ಬಾರಿಸು ಕನ್ನಡ ಡಿಂಡಿಮವ', ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ', ಎಂಬ ನುಡಿಗಳು ಕಮ್ಮಿ ಇಲ್ಲ. 'ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃರ್ಷವಾಗುವುದು' ಎಂಬ ಕವಿವಾಣಿ ಸಹ ಇಂದು ಕಣ್ಮೆರೆಯಾಗುತ್ತಿದೆ. ಇದಕ್ಕೆ ಕಾರಣಗಳು ಹಲವಾರು ಆದರೆ ಮೂಲ ಮಾತ್ರ ಒಂದೇ! ಅದು ನಮ್ಮ ಕನ್ನಡಿಗರಲ್ಲಿನ ಭಾಷಾಭಿಮಾನದ ಕೊರತೆ. ನೆರೆ ರಾಜ್ಯ ತಮಿಳುನಾಡಿಗೆ ಹೋದರೆ ಅವರ ಸಂವಹನ ಭಾಷೆ ಒಂದೇ ಅದು ತಮಿಳು ಅವರಿಗೆ ಬೇರೆ ಭಾಷೆ ಬಂದರೂ ಮಾತಾಡುವುದಿಲ್ಲ. ಆಟೋ ಚಾಲಕನಿಂದ ಹಿಡಿದ ಪ್ರತಿಯೊಬ್ಬರು ತಮಿಳು ಭಾಷೆಯಲ್ಲಿಯೇ ಸಂವಹನ ನಡೆಸುತ್ತಾರೆ. ಇದು ಅವರು ಮಾತೃ ಭಾಷೆಗೆ ನೀಡುವ ಗೌರವ. ಆದರೆ ನಾವು ಯಾವ ಭಾಷೆಯವರು ಎದುರು ಬಂದು ನಿಂತರೆ ಅವರ ಭಾಷೆಯನ್ನೇ ನಮ್ಮ ಭಾಷೆಯಾಗಿಸಿಕೊಳ್ಳುತ್ತೇವೆ ಅಂತ 'ದತ್ತುಸ್ವಿಕಾರ'ದ ಮನೋಭಾವ ನಮ್ಮದು.
ಎಲ್ಲಾದರೂ ನಾನು ಕನ್ನಡದವನು ಎಂದು ಹೇಳಿಕೊಳ್ಳಲು ಮುಜುಗರ. ನಾನು ಕನ್ನಡಿಗ ಎಂದು ಎದೆತಟ್ಟಿ ಹೇಳುವ ಬದಲು ಮೋರೆ ಬಾಡಿಸಿಕೊಂಡು ನಾಚಿಕೆಯಿಂದ ತಲೆ ತಗ್ಗಿಸುವುದನ್ನು ನೋಡಿದರೆ ನಮ್ಮ ಭಾಷಾ ಅಭಿಮಾನ ಎಷ್ಟೇಂದು ವೇದ್ಯವಾಗುತ್ತದೆ.
ಇದೊಂದು ಮೂಲ ಕಾರಣವಾದರೆ, ಇನ್ನೊಂದು ಬಲವಾದ ಕಾರಣ ಮಾಧ್ಯಮಗಳ ಸ್ವೀಕೃತಿ. ಮುಂಜಾನೆ ಎದ್ದುದ್ದೆ ತಡ ಮೊಬೈಲ್ನಲ್ಲಿ ಎಫ್.ಎಮ್. ಅನ್ನು ಹಚ್ಚಿದರೆ ಸಾಕು ಕನ್ನಡದ ಕಗ್ಗೊಲೆಯನ್ನು ಕಿವಿಯಾರೆ ಕೇಳಬಹುದು. ಒಂದು ವೇಳೆ ಅಚ್ಚ ಕನ್ನಡದಲ್ಲಿ ಮಾತನಾಡುವ ಕನ್ನಡ ಅಭಿಮಾನಿ ಏನಾದರೂ ಅದನ್ನು ಕೇಳಿದರೆ ಸ್ಥಳದಲ್ಲೆ ಎದೆ ಒಡೆದುಕೊಂಡು ಸಾಯುವುದರಲ್ಲಿ ಯಾವುದೇ ಸಂದೇಹವಿಲ್ಲ!. ಅಂಥ ಅಗ್ರಾಂಥಿಕ ಹಾಗೂ 'ಕಂಗ್ಲೀಷ್' ಪದಗಳನ್ನು ಬಳಸಲಾಗುತ್ತಿದೆ. ಇದು ಹಾಡು ಹಗಲೇ ಕನ್ನಡದ ಕೊಲೆ ಅಲ್ಲವೇ?
ರೇಡಿಯೋ ಆಯಾ ಪ್ರಾದೇಶಿಕ ಭಾಷೆಗಳಿಗೆ ಒತ್ತುಕೊಡುತ್ತದೆ ನಿಜ. ಆದರೆ ಪ್ರಾದೇಶಿಕ ಅಲ್ಲದೇ ಹಿಂದಿ, ಇಂಗ್ಲಿಷ್ ಹೀಗೆ ಹತ್ತು ಹಲವಾರು ಭಾಷೆಗಳನ್ನು ಬಳಸಿಕೊಂಡು ಎಫ್.ಎಮ್. ನಿರೂಪಕರು ಮಾತಾಡುತ್ತಿರುತ್ತಾರೆ. ಆ ಮಾತಿನಲ್ಲಿ ಯಾವುದೇ ಮೌಲ್ಯವಾಗಲಿ, ನೈತಿಕತೆಯಾಗಲಿ ಇರುವುದಿಲ್ಲ. ಕನ್ನಡದ ಪಾವಿತ್ರ್ಯತೆಯನ್ನು ಪರಮಾವಧಿಗೆ ತಂದು ನಿಲ್ಲಿಸುತ್ತಿರುವ ಇಂಥ ಮಾಧ್ಯಮಗಳ ಕಡೆಗೆ ಕನ್ನಡ ಪರ ಹೋರಾಟ ಸಂಘಗಳು ಗಮನ ಹರಿಸಬೇಕು. ಒಂದು ವೇಳೆ ಹೀಗೆಯೇ ಮುಂದುವರೆದರೆ ಬಹುಶಃ ಕನ್ನಡ ತನ್ನತನವನ್ನು ಕಳೆದುಕೊಳ್ಳಬೇಕಾಗುತ್ತದೆ.
ಒಂದು ವರದಿಯ ಪ್ರಕಾರ ಕನ್ನಡದ ರಕ್ಷಣೆಗಾಗಿಯೇ ಇರುವ ಸಂಘಗಳಿಗಿಂತ ಕನ್ನಡ ಪತ್ರಿಕೆಗಳು ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಶೇ. 60% ರಷ್ಟು ಶ್ರಮಿಸುತ್ತಿವೆ ಎಂಬುದು ಹೆಗ್ಗಳಿಕೆ ವಿಚಾರ ಜೊತೆಗೆ ಕನ್ನಡ ಪರ ಸಂಘಟನೆಗಳು ಗಹನವಾಗಿ ಯೋಚಿಸಬೇಕಾದ ವಿಚಾರವೂ ಆಗಿದೆ. ಅದೇನೇ ಇರಲಿ ಈಗಲಾದರೋ ನಮ್ಮ ಮಾತೃ ಭಾಷೆಯ ಉಳಿವಿಗಾಗಿ ಕಂಕಣಬದ್ಧರಾಗಿ ದುಡಿಯೋಣ. ಆಗ ಮಾತ್ರ ಕನ್ನಡದ ಕಂಪು ಉಳಿಸಿಕೊಂಡು ಹೋಗಲು ಸಾಧ್ಯ

ಆತೀಶ್.ಬಿ.ಕನ್ನಾಳೆ


Friday, November 26, 2010

CªÀÄä£ÉA§  §æºÀä.....
(vÁ¬ÄAiÀiÁV ªÀÄ®vÁ¬ÄAiÀÄ®è)

      ªÉÆ£Éß mÉgÀ¸ï ªÉÄÃ¯É ¤AvÀÄ gÁdzsÁ¤AiÀÄ gÀºÀzÁjUÀ¼À PÀqÉ PÀtÄÚ ºÁ¬Ä¹zÉ. ªÉÆÃmÁgÀÄ-¸ÉÊPÀ¯ïUÀ¼ÀÄ JVήèzÉ NqÁqÀÄwÛªÉ. §jà CªÀÅUÀ¼ÀzÉÝ ¸ÀzÀÄÝ. ªÁºÀ£ÀUÀ¼À ¥ÀgÀzÁl £ÉÆÃr-£ÉÆÃr ¸ÀĸÁÛAiÀÄÄÛ. C°èAzÀ mÉgÀ¸ï£À ªÀÄvÉÆÛAzÀÄ ¨sÁUÀPÉÌ §AzÀÄ NuÉAiÀÄ gÀ¸ÉÛAiÀÄ PÀqÉUÉ zÀ馅 £ÉmÉÖ. CzÀÄ ¸ÁAiÀÄAPÁ®zÀ ¸ÀªÀÄAiÀÄ gÀ¸ÉÛAiÀįÉè¯Áè ¤ÃgÀªÀ ªÀiË£À. C°è MAzÀÄ ¥ÀÄlÖ ªÀÄ£É, D ªÀÄ£É ºÉÆgÀUÉ E§âgÀÄ ¥ÀÄlÖ ªÀÄPÀ̼ÀÄ §ºÀıÀB CtÚvÀªÀÄäA¢jgÀ§ºÀÄzÉ£ÉÆà C¤¹vÉÛ. E§âgÀ PÉÊAiÀÄ®Äè MAzÉÆAzÀÄ ©¢gÀÄ CªÀgÀÄ ªÀÄÄAzÉ AiÀiÁªÀÅzÉÆà MAzÀÄ AiÀÄÄzÀÞ £ÀqÉAiÀÄ°zÉ JA§AvÉ RqÀÎAiÀÄÄzÀÞ ¥ÁgÁAiÀÄtzÀ°è vÉÆqÀVzÀÝgÀÄ.
      D ªÀÄ£ÀªÉÆúÀPÀ zÀȱÀå PÁtÄvÀÛ¯É K£ÉÆà MAxÀgÁ RĶAiÀiÁV, ªÀÄ£À¹ìUÉ gÉPÉÌ §AzÀÄ  ºÁgÁ¯ÁgÀA©ü¹vÀÄ. ªÀÄÄAzÀĪÀjzÀÄ D ¨Á®PÀgÀ ¨Á®å ZÉõÉÖUÀ¼À£ÀÄß PÀtÄÚ «ÄlÄQ¸ÀzÉ £ÉÆÃqÀÄwÛzÉÝ. CzÀÄ ºÁUÉà AiÀiÁªÀÅzÉÆà MAzÀÄ PÀ®à£Áà¯ÉÆÃPÀPÉÌ PÀgÉzÉƬÄÝvÀÄÛ. £À£Àß ¨Á®åzÀ PÀÄZÉõÉÖUÀ¼ÀÄ £É£À¥ÁV PÀtÚ CAZÀ°è ºÀ¤ ªÀÄÆrvÀÄ. ªÀļɺÀ¤AiÀÄ°è ªÉÄAzÀÄ PÁUÀzÀzÀ zÉÆÃt ªÀiÁr DrzÀÄÝ, ªÀÄ¼É ¨ÁgÀ¢zÁÝUÀ ªÀÄ¼É ¨ÁgÉÆà ªÀįÉèñÀ.. JAzÀÄ ºÁr PÀÄtÂzÁrzÀÄÝ »ÃUÉ ªÀÄtäAzÉ PÀ£À¹£À ¯ÉÆÃPÀªÉ CªÀvÀj¹ ¤AwvÀÄÛ. ºÁUÉà D PÀëtUÀ¼À£ÀÄß D¸Á颸ÀÄwÛzÉÝ, CµÀÖgÀ¯Éè J°èAzÀ §AzÀ¼ÉÆà D ªÀĺÁvÁ¬Ä...! ¸ÀÄ£Á«ÄAiÀÄAvÉ §AzÀªÀ¼É £Á¯ÉÌöÊzÀÄ ªÀµÀðzÀ D ¥ÉÆÃgÀ£À£ÀÄß vÀ£ÀßvÀÛ J¼ÉzÀÄ PÉÊAiÀÄ°èzÀÝ ¨ÉvÀÛ PÀ¹zÀÄPÉÆAqÀÄ CzÀjAzÀ¯Éà £Á®ÄÌ ¨Áj¹ ºÀÄqÀÄUÀ£À£ÀÄß ¨sÀªÀå §AUÀ¯ÉAiÉÆAzÀPÉÌ J¼ÉzÉÆAiÀÄݼÀÄ. E£ÉÆߧ⠺ÀÄqÀÄUÀ ªÀiÁvÀæ vÀÄn ¦lPï C£ÀßzÉ ªÀiÁè£ÀªÀzÀ£À¢AzÀ ZÀgÀArAiÀÄ ¥ÀPÀÌ ¤AvÀÄ PÀA§¤UÉgÉAiÀÄÄwÛzÀÝ£ÀÄ. £À£ÀUÉ MAzÀÆ w½AiÀÄ°®è. D WÀl£ÉAiÀÄ eÉÆvÉUÉ C£ÉÃPÀ ¥Àæ±ÉßUÀ¼ÀÄ PÀªÀ¯ÉÆqÉAiÀÄÄwÛzÀݪÀÅ. D AiÀĪÀÄä D ºÀÄqÀÄUÀ£À£Éß KPÉ J¼ÉzÉÆAiÀÄÝgÀÄ? F ºÀÄqÀÄUÀ ªÀiÁvÀæ AiÀiÁPÉ E¯Éè ¤AwzÁÝ£É? ºÁUÉãÁzÀÄæ vÀ¥ÀÄà ªÀiÁr¢zÉæ E§âgÀ£ÀÄß ºÉÆqÉAiÀĨÉÃQvÀÄÛ. AiÀiÁPÉ D M§â ¥ÉÆÃgÀ£À£Éß ºÉÆqÉzÀÄ J¼ÉzÉÆAiÀÄÝgÀÄ? §ºÀıÀB DPÉ F ºÀÄqÀÄUÀ£À ªÀÄ®vÁ¬Ä K£ÁzÀÄæ DVgÀ§ºÀÄzÉ? .... »ÃUÉ £ÀÆgÁgÀÄ ¥Àæ±ÉßUÀ¼ÀÄ ¥ÀÄASÁ£ÀÄ¥ÀÄARªÁV ºÉÆgÀUÉqÀĺÀÄwÛzÀÝjAzÀ ¥Àæ±ÉßUÀ¼À ªÀgÀ¸ÉAiÉÄà £À£ÉßzÀÄjVvÀÄÛ.

      EzÀgÀ  eÉÆvÉUÉ D£ÉUÁvÀæzÀ ªÀÄ»¼É ªÉÄïɠ £À£ÀUÉ J°è®èzÀ PÉÆÃ¥À. KPÉAzÀgÉ, D ºÀÄqÀÄUÀgÀ ¨Á®å PÀÄZÉõÉÖUÀ¼À£ÀÄß UÀªÀĤ¸ÀÄvÁÛ PÀëtPÁ® Erà ¥Àæ¥ÀAZÀªÀ£ÀÄß ªÀÄgÉvÀÄ £À£Àß ¨Á®åzÀ°è PÀ¼ÉzÀĺÉÆÃVzÉÝ. D PÀ£À¹£À ªÀĺÀ®£ÀÄß PÀëtzÀ°è £ÀÄZÀÄÑ£ÀÆgÀÄ ªÀiÁrzÀ¼À®è F gÁ.....PÀë¹ JA§ PÁgÀtPÁÌVAiÉÆà K£ÉÆ PÉÆ¥À PÁqÀÄwvÀÄÛ.
      CzÉÃ£É EgÀ°, ªÀÄ»¼É D jÃw ªÀwð¸ÀĪÀÅzÀPÉÌ PÁgÀt DzÀÄæ K£ÀÄ....?? AiÉÆÃa¹zÉ K£ÀÆ vÉÆÃZÀ°®è. ¸Àj EzÀgÀ GvÀÛgÀ F ºÀÄqÀÄUÀ¤AzÀ ªÀiÁvÀæ ¸ÁzsÀå JAzÀÄ CªÀ£À PÀqÉ ºÉÆgÀmÉ. PÀëtPÁ® CªÀ£À ªÀÄÄRzÀ ºÀvÁ±ÉAiÀÄ£ÀÄß eÁ¯Ár, PÀtÂÚ£À D¼ÀzÀ°è CqÀVzÀÝ ªÀÄÄUÀÞvÉAiÀÄ£ÀÄß UÀªÀĤ¹, ªÀÄj ¤£ï ºÉ¸ÀgÉãÀÄ JAzÀÄ PÉýzÉ. CzÀPÉÌ DPÁ±ï JAzÀÄ UÀ®è G©â¹PÉÆAqÀÄ GvÀÛj¹zÀ. £À£ÀUÉ CªÀ£À ªÀzÀ£À £ÉÆÃr PÀ¦ £É£À¥ÁV PÉÆAZÀ £ÀUÀħAvÀÄ DzÀgÀÆ £ÀUÀ°®è. ¥ÀÄlÖ AiÀiÁPÉÆà ¤ªÀÄäªÀÄä ¤£Àß vÀªÀÄä£À£ÀÄß ªÀiÁvÀæ PÀgÉzÀÄPÉÆAqÀÄ ºÉÆÃzÀÄæ JAzÀÄ PÉýzÉÝ vÀqÀ CzÀPÉÌ CªÀ£ÀÄ £À£Àß vÀªÀÄä C®è; £À£Àß ¸ÉßûvÀ CµÉÖ. CªÀ£ÀÄ EgÉÆÃzÀÄ D §AUÀ¯ÉAiÀÄ°è; £Á«gÉÆÃzÀÄ F UÀÄr¸À®°è. JAzÀÄ ¨ÉgÀ¼ÀÄ vÉÆÃjzÀ. CAPÀ¯ï £ÁªÀÅ §qÀªÀgÀAvÉ CzÀPÉÌ D£ÀAzÀ£À£ÀÄß £À£Àß eÉÆvÉ DqÉÆÃzÀPÉÌ ©qÉÆâ®è. JAzÀÄ eÉÆÃgÁV D¼À¯ÁgÀA©ü¹zÀ. D ¥ÀÄlÖ£À ªÀÄÄUÀÞ ªÀiÁvÀÄUÀ¼À£ÀÄß PÉý £À£Àß PÀtÚ£Á°AiÀÄ°è PÀA§¤ ªÀÄÆrzÀªÀÅ. D WÀl£ÉAiÀÄ PÁgÀt ºÁUÀÆ ¸ÁégÀ¸Àå £À£ÀUÉ zÀ¥ÀðtzÀµÀÄÖ ¤ZÀѼÀªÁAiÀÄÄÛ.
      £ÀAvÀgÀ ZÀºÀ »ÃgÀ®Ä ¸ÀºÀ ªÀÄ£À¸ÁìUÀ°®è. AiÀiÁPÉÆà ªÀÄ£À¸ÀÄì AiÀiÁªÀ PÉ®¸ÀPÀÆÌ M¥ÀàzÉ, ºÀÈzÀAiÀÄ ¨sÁgÀªÁVvÀÄÛ. ¥ÀzÉÃ-¥ÀzÉà D ¥ÀÄmÁt ºÉýzÀ CAPÀ¯ï £ÁªÀÅ §qÀªÀgÀAvÉ JA§ ªÀiÁvÀÄ £À£Àß Q«AiÀÄ°è ¥ÀÄ£ÀgÁªÀvÀð£É DUÀÄwvÀÄÛ.
      AiÀiÁPÉ  £ÀªÀÄä ¸ÀªÀiÁdzÀ F d£À ²PÀët ºÁUÀÆ fêÀ£ÀªÀÄlÖzÀ°è ªÉÄïɠºÉÆÃzÀAvɯÁè F jÃw AiÉÆÃa¸ÀÄvÁÛgÉ. EzÀgÀ°è D ªÀÄPÀ̼À vÀ¥ÁàzÀgÀÆ K£ÀÄ? AiÀiÁgÀÆ vÀªÀÄä EZÉÒ¬ÄAzÀ §qÀªÀgÁUÀĪÀÅ¢®è JA§ ¸ÀvÀå w½¢zÀÝgÀÆ KPÉ eÁtPÀÄgÀÄqÀgÀAvÉ  £ÀqÉzÀÄPÉƼÀÄîvÁÛgÉ. (¤d, EAzÀÄ DzÀ±Àð ºÁUÀÆ £ÉÊdvÉAiÀÄ £ÀqÀÄªÉ PÀ®à£ÉUÀÆ JlÄPÀzÀ PÀAzÀPÀ K¥ÀðnÖzÉ.) DzÀgÉ E°è ¥ÀjUÀt¸À¯ÉèÉÃPÁzÀ Cwà ¥ÀæªÀÄÄRªÁzÀ CA±ÀªÉAzÀgÉ, F jÃwAiÀÄ WÀl£ÉUÀ¼ÀÄ ¨É¼ÉAiÀÄĪÀ ªÀÄPÀ̼À ªÉÄÃ¯É JAxÀ ¥ÀjuÁªÀÄ ©ÃgÀ§®èªÀÅ JA§ ¥ÀjPÀ®à£É ¥ÉÆõÀPÀjV®èªÉ?! 
amma ninillade nanu "0"

       EAzÀÄ ªÀÄPÀ̼À fêÀ£ÀzÀ°è ªÀiÁUÀðzÀ±ÀðQ ºÁUÀÆ ²PÀëQAiÀÄ ¸ÁÜ£ÀzÀ°ègÀ¨ÉÃPÁzÀ  vÁAiÀÄA¢gÀÄ EAxÀ QüÀÄzÀeÉðAiÀÄ D¯ÉÆÃZÀ£ÉUÉ  E½zÀgÉ £ÀªÀÄä ¸ÀªÀiÁdzÀ ªÀÄÄA¢£À  ¹Üw K£ÁUÀ¨ÉÃPÀÄ....?
      DUÀ vÁ£É d¤¹zÀ ªÀÄUÀÄ ªÀiÁA¸ÀzÀ ªÀÄÄzÉÝAiÀÄAwzÀÄÝ, ¸ÀªÀiÁd ºÁUÀÆ CzÀgÀ ¸ÀÄvÀÛ°£À ªÁvÁªÀgÀt CzÀgÀ ªÉÄÃ¯É ¥ÀjuÁªÀĪÀ£ÀÄß ©ÃgÀÄvÀÛzÉ. EzÀjAzÀ D ªÀÄUÀÄ CAxÀzÉÝà ¸ÀA¸ÁÌgÀUÀ¼À£ÀÄß ªÉÄÌöÊUÀÆr¹PÉƼÀÄîvÀÛzÉ. JA§ ¸ÀªÀiÁd±Á¸ÀÛçdÕgÀ ªÀiÁvÀÄ E°è £É£ÉAiÀįÉèÉÃPÀÄ. KPÉAzÀgÉ, MAzÀÄ ªÀÄUÀÄ ¨É¼ÉzÀÄ ¸ÀªÀiÁdWÁvÀÄPÀ CxÀªÁ ¸ÀªÀiÁd ¸ÀÄzsÁgÀPÀ£ÀÆ DUÀ§®è. CzÀÄ ¨É¼ÉAiÀÄĪÀ ¹j ªÉƼÀPÉAiÀÄ°è JA§AvÉ CzÀgÀ ¨Á®åzÀÀ°è ¤ÃqÀĪÀ ¸ÀA¸ÁÌgÀªÀ£Éßà CªÀ®A©ü¹zÉ. ªÀiÁvÀÈUÀ¨sÀðzÀ°ègÀĪÀ ¨sÀÆætzÀ ªÉÄÃ¯É ¸ÀÄvÀÛ°£À ªÁvÁªÀÀgÀt ¥ÀjuÁªÀÄ ©ÃgÀÄvÀÛzÉ JAzÀÄ MAzÀÄ ¸ÀA±ÉÆÃzsÀ£É ¹zÁÞAvÀ ¥Àr¹zÉ. »ÃVgÀĪÁUÀ ªÀiÁA¸ÀzÀ gÀÆ¥ÀªÀ£ÀÄß zÁn D¯ÉÆÃZÀ£É ªÀiÁqÀĪÀµÀÄÖ ¨É¼É¢gÀĪÀ ªÀÄPÀ̼À ªÉÄÃ¯É EAvÀºÀ WÀl£ÉUÀ¼ÀÄ ©ÃgÀ¢gÀ®Ä ¸ÁzsÀåªÉÃ?
      ªÀÄUÀÄ E£ÀÆß ªÀÄÆgÀÄ ºÉeÉÓ ¸ÀévÀAvÀæªÁV EqÀ¯ÁUÀzÀÄ DUÀ¯Éà CzÀPÉÌ ªÀUÀð¨sÉÃzÀzÀ PÀÄjvÀÄ ¨ÉÆâü¸ÀĪÀÅzÁzÀgÉ  ¨sÀ«µÀåzÀ°è D ªÀÄPÀ̼ÀÄ GvÀÛªÀÄ ¥ÀæeÉUÀ¼ÁUÀ§®ègÀÄ JA§ SÁwæAiÀiÁzÀgÀÆ K£ÀÄ..?
PÉÆAZÀ  AiÉÆÃa¹: CAzÀÄ bÀvÀæ¥Àw ²ªÁf CªÀgÀ vÁ¬Ä ªÀÄUÀ¤UÉ gÁZÁAiÀÄt, ªÀĺÁ¨sÁgÀvÀ DzÀ±ÀðUÀ¼À£ÀÄß ¨ÉÆâü¹, CªÀgÀ gÀPÀÛzÀ PÀt-PÀtzÀ°è zÉñÀ¥ÉæêÀÄ vÀÄA§zÉà ºÉÆÃVzÀÝ°è CªÀgÀÄ gÁµÀÖçgÀPÀëuÉAiÀÄ¤ß ¤®è¯ÁUÀÄwvÉÛ? «ªÉÃPÁ£ÀAzÀgÀÄ ¨sÁgÀvÀ£ÀÄß CµÁÖV ¦æÃw¸À®Ä PÁgÀt CªÀgÀ vÁ¬Ä ¨Á®åzÀ°è ¤ÃrzÀ ²PÀët. CµÉÖà AiÀiÁPÉ EAzÀÄ C£ÉÃPÀ AiÉÆÃzsÀgÀÄ AiÀiÁªÀÅzÉà ªÀtð, ªÀUÀð¨sÉÃzÀªÀ£ÀÄß PÁtzÉ £ÀªÀÄä vÀªÀÄä fêÀ MvÉÛ¬ÄlÄÖ UÀr PÁAiÀÄÄwÛgÀĪÀÅzÀPÉÌ CªÀgÀ vÁAiÀÄA¢gÀÆ PÁgÀtªÁVgÀ§ºÀÄzÀÄ. MAzÀÄ ªÉÃ¼É CªÀjUÀÆ ªÉÄîÄ-QüÀÄ, ªÀtð-ªÀUÀð¨sÉÃzÀUÀ¼À ¥Àæ¨ÉÆÃzsÀ£É ¤ÃqÀÄwÛzÀÝ°è £ÀªÀÄä gÁµÀÖçzÀ UÀw K£ÁUÀÄwvÀÄÛ.....?
      CzÀPÁÌV vÁåUÀ, ¦æÃw, ªÀĪÀÄvÉUÉ ¥ÀæwÃPÀªÁVgÀĪÀ vÁAiÀÄA¢gÉ ¤ªÀÄä ªÀÄPÀ̼À PÉÆêÀÄ®ªÁzÀ  ªÀÄ£À¸Àì£ÀÄß ºÁ¼ÀĪÀiÁqÀ¨ÉÃr. ¤ÃªÉà CªÀgÀ ¥Á°UÉ §æºÀä ¤ÃªÀÅ gÀƦ¹zÀAvÉAiÉÄà gÀÆ¥ÀÄUÉƼÀÄÎîvÁÛgÉ. »ÃUÁV ¤ªÀÄä ªÀÄPÀ̼À zsÀªÀĤ-zsÀªÀĤUÀ¼À°è gÁµÀÖç¥ÉæêÀĪÀ£ÀÄß vÀÄA©, ºÉÆgÀvÀÄ ¸ÀªÀiÁd PÀAoÀPÀUÀ¼À£Àß®è.  
Dwñï.©.PÀ£Áß¼É