Sunday, April 24, 2011

ಫ್ರಾನ್ಸ್ಲ್ಲಿ ಘಮಲಿದ ಭಾರತದ ಕಮಲ

`ದೇವೀರಿ' ಮುಡಿಗೆ ಕಮಲ

ನಾನು ಏನೂ ಮಾಡಬೇಕಾಗಿಲ್ಲ; ಏನನ್ನೂ ಸಾಧಿಸಬೇಕಾಗಿಲ್ಲ. ಎಂತಹುದೇ ರಿಸ್ಕ್ ತೆಗೆದುಕೊಳ್ಳಬೇಕಾಗಿಲ್ಲ. ಒಂದು ವೇಳೆ ಯಾವುದರಲ್ಲಾದರೂ ಸೋಲುಂಟಾದರೆ, ಅದರಿಂದ ನುಣುಚಿಕೊಳ್ಳಬಹುದು. ಇತರರ ಸಹಾನುಭೂತಿ ಪಡೆಯಬಹುದು. ಜವಾಬ್ದಾರಿಯನ್ನು ಇತರರು ಹೊತ್ತುಕೊಳ್ಳುತ್ತಾರೆ. ಯಾರೊಂದಿಗೂ ಸ್ಪಧರ್ಿಸಬೇಕಾದ ಅಗತ್ಯವಿಲ್ಲ. ಎಲ್ಲವನ್ನು ಗಂಡ ನೋಡಿಕೊಳ್ಳುತ್ತಾನೆ; ವಯಸ್ಸಾದ ಮೇಲೆ ಮಕ್ಕಳಂತೂ ಇದ್ದೇ ಇರುತ್ತಾರಲ್ಲ! ಈ ರೀತಿ ನೇತ್ಯಾತ್ಮ ಹಾಗೂ ನಿಷ್ಕ್ರಿಯ ಆಲೋಚನೆಯಿಂದಾಗಿ ಸ್ತ್ರೀ ನಾಲ್ಕು ಗೋಡೆಗಳ ನಡುವಿನ ದೌಭರ್ಾಗ್ಯಲಕ್ಷ್ಮಿ, ಅಬಲೆ, ಹೆರಿಗೆ ಯಂತ್ರ, ಏನನ್ನೂ ಮಾಡಲು ಶಕ್ತಳಲ್ಲವೆಂಬ ಪಟ್ಟ ಕಟ್ಟಿಕೊಂಡು ಅಭಿವೃದ್ಧಿಯಿಂದ ವಂಚಿತಳಾಗುತ್ತಿದ್ದಾಳೆ.
ತನ್ನಲ್ಲಿ ನೂರಾರು ಕೌಶಲ್ಯಗಳಿದ್ದರೂ ಕ್ರಿಯಾಶೀಲತೆಯಿಂದ ಕಾರ್ಯ ನಿಭಾಯಿಸಿಕೊಂಡು ಹೋಗುವ ಚಾಕಚಕ್ಯತೆ, ನಾಯಕತ್ವದ ಗುಣಗಳಿದ್ದರೂ, ಶೈಕ್ಷಣಿಕ ಅರ್ಹತೆಗಳಿದ್ದರೂ ಅವುಗಳು ಅಡುಗೆಮನೆಗೆ ಸೀಮಿತ. ಸ್ತ್ರೀ ಇಂದಿಗೂ ಹಲವು ಕುಟುಂಬಗಳಲ್ಲಿ ಸ್ವತಂತ್ರಳಾಗಿ ನಿಧರ್ಾರಗಳನ್ನು ತೆಗೆದುಕೊಳ್ಳುವಂತಿಲ್ಲ. ಸ್ವಚ್ಚಂದವಾಗಿ ಬದುಕುವಂತಿಲ್ಲ; ದುಡಿದರೂ ಸ್ವತಂತ್ರವಿಲ್ಲ. ಯಾರೊಂದಿಗೂ ಮಾತನಾಡುವಂತಿಲ್ಲ; ಬೆರೆಯುವಂತಿಲ್ಲ. ಇದಕ್ಕೆ ಅವಳ ಸಕುಂಚಿತ ಮನೋಭಾವವೂ ಕಾರಣವಾಗಿದೆ!
ಬರೀ ಮಹಿಳೆಯ ಸಂಕುಚಿತ ಮನೋಭಾವವೇ ಆಕೆಯ ವ್ಯವಸ್ಥಿತ ಶೋಷಣೆಗೆ ಸಿಲುಕಿ ನಲುಗಲು ಕಾರಣವೆಂದರೆ ಪ್ರಾಯಶಃ ಮೂಗಿನ ನೇರಕ್ಕೆ ನುಡಿದಂತಾಗಬಹುದು. ಇದರ ಜತೆಗೆ ನಮ್ಮ ಸಮಾಜ ಕೂಡ ಅಷ್ಟೇ ಪ್ರಭಾವ ಬೀರುತ್ತಿದೆ.
`ಬಿಹೈಂಡ್ ಎವರಿ ಸಕ್ಸಸ್ಫುಲ್ ಮ್ಯಾನ್, ದೇರ್ ಇಸ್ ಎ ವುಮ್ಯಾನ್' ಎಂಬ ವಾಕ್ಯ ಕೇಳಿದ ತಕ್ಷಣ ಪ್ರತಿಯೊಬ್ಬ ಮಹಿಳೆ ಅಭಿಮಾನದಿಂದ ಹಿಗ್ಗಿ ಹೀರೆಕಾಯಿಯಾಗಬಹುದು. ಆದರೆ ಅದರಲ್ಲಿಯೇ ಅಡಕವಾಗಿರುವ ಮತ್ತೊಂದು ಅರ್ಥದ ಪರಿವೇ ಅವಳಿಗಿಲ್ಲ. ಇದರ ದ್ವಂದ್ವಾರ್ಥವೆಂದರೆ, ಮಹಿಳೆಯರು ಪುರುಷರ ಹಿಂದೆ ಇರಬೇಕೇ ವಿನಃ ಮುಂದೆ ಬಂದು ಹೆಸರಿಗಾಗಿ ಹೋರಾಟ ನಡೆಸುವಂತಿಲ್ಲ. ಸ್ವವರ್ಚಸ್ಸಿಗಾಗಿ ಸೆಣಸುವಂತಿಲ್ಲ. ಅಭಿವೃದ್ಧಿ ಏನಿದ್ದರೂ ಪುರುಷರಿಗೆ, ಮಹಿಳೆ ಪರದೆ ಹಿಂದಿನ ಕಲಾವಿದೆಯಷ್ಟೆ.


ಈ ಸಮಾಜದ ಅಂಕುಡೊಂಕು, ನಿಂದನೆಯ ಮಾತುಗಳಿಗೆ ಕಿವಿಗೊಟ್ಟು ತಮ್ಮ ಅಭಿವೃದ್ಧಿ ಮೇಲೆ ತಾವೇ ಕಲ್ಲುಹಾಕಿಕೊಳ್ಳುವುದು ಯಾವ ಸೀಮೆ ಸಂಸ್ಕೃತಿ? ಅಂದಿನ ಪುರುಷ ಪ್ರಧಾನ ಸಮಾಜಕ್ಕೆ ಸವಾಲಾಗಿ ನಿಂತವರು ಇಂದು ಇತಿಹಾಸದ ಪುಟಗಳಲ್ಲಿ ರಾರಾಜಿಸುತ್ತಿದ್ದಾರೆ. ಅಷ್ಟೇ ಯಾಕೆ ಪ್ರಸ್ತುತ ಸಮಾದಲ್ಲಿಯೂ ಅನೇಕ ಮಹಿಳೆಯರು ತಮ್ಮ ಸಾಧನೆಯಿಂದ ಮೆರೆದಿದ್ದಾರೆ. ಅದರಲ್ಲಿ ಬಾಲಿವುಡ್ ತಾರೆ ನಂದಿತಾದಾಸ್ ಕೂಡ ಒಬ್ಬರು.

ಯಾರು ಈ ನಂದಿತಾದಾಸ್?
ನಂದಿತಾ ಭಾರತೀಯ ನಟಿ ಹಾಗೂ ನಿದರ್ೇಶಕಿ ಕೂಡ ಹೌದು. ಸಿನಿಮಾರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಈಕೆ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಇಂಡೋ ಫ್ರಾನ್ಸ್ ಸಹಕಾರದಿಂದ ಸಿನಿಮಾ ಅಭಿವೃದ್ಧಿಗಾಗಿ ಶ್ರಮಿಸಿ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಇವರು ನೀಡಿರುವ ಮಹತ್ತರ ಕೊಡುಗೆ ಮತ್ತು ಕ್ರಿಯಾಶೀಲತೆಯನ್ನು ಪರಿಗಣಿಸಿರುವ ಫ್ರಾನ್ಸ್ ಸಕರ್ಾರ ಸರ್ವಶ್ರೇಷ್ಠ ಫ್ರಾನ್ಸ್ ನಾಗರಿಕ (ಶೆವೆಲಿಯರ್ ಆಫ್ ದ ಆರ್ಡರ್ ಡೆಸ್ ಆಟರ್್ ಎಟ್ ಡೆಸ್ ಲೆಟರ್ಸ್) ಪ್ರಶಸ್ತಿ ನೀಡಿ ಗೌರವಿಸಿದೆ.
ಫೈರ(1996), ಅಥರ್್(1998), ಬವಾಂದರ್(2000) ಹಾಗೂ ಅಮಾರ್ ಭುವನ್(2002) ಚಲನಚಿತ್ರಗಳ ಮೂಲಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿರಪರಿಚಿತರಾದರು ನಂದಿತಾ ದಾಸ್. ನಿದರ್ೇಶಕಿಯಾಗಿ ಹಲವು ಚಿತ್ರಗಳನ್ನು ನಿದರ್ೇಶಿಸಿರುವ ಪ್ರತಿಭಾವಂತೆ. ಅಲ್ಲಿಯವರೆಗೆ ಕ್ಯಾಮರಾ ಹಿಂದಿನ ಕಾರುಬಾರು ನೋಡಿಕೊಳ್ಳುತ್ತಿದ್ದ ಈಕೆ ಬಳಿಕ ತನ್ನ ಸೌಂದರ್ಯ, ನಟನೆ, ಮಾತಿನ ಶೈಲಿಯಿಂದ ವೀಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.
ಅವರು ನಟಿಸಿದ ಚಿತ್ರ `ಫಿರಾಕ್' ಗಳಿಸಿದ ಖ್ಯಾತಿಗೆ ಪುಳಕಿತರಾದ ದಾಸ್ ಸಂಗ್ರಾಮ್ ರೇಡಿಯೋ ನಡೆಸಿದ ಸಂದರ್ಶನದಲ್ಲಿ ಅಭಿಮಾನಿ ದೇವರುಗಳಿಗೆ ಅಭಿನಂದಿಸಿ, ಅವರ ಪ್ರತಿಕ್ರಿಯೆಗಳನ್ನು ಒಪ್ಪಿಕೊಳ್ಳುವುದಾಗಿ ತಿಳಿಸಿದ್ದು ಅವರ ಸರಳ ಸಜ್ಜನಿಕತೆಗೆ ಉದಾಹರಣೆ.

ಬಹುಮುಖ ಪ್ರತಿಭೆ
ಇಂಗ್ಲಿಷ್, ಹಿಂದಿ, ಮಲಯಾಳಂ, ಬಂಗಾಳಿ, ತಮಿಳು, ಮರಾಠಿ, ಕನ್ನಡ, ಓರಿಯಾ ಮತ್ತು ಉದರ್ು ಹೀಗೆ ವಿಭಿನ್ನ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿ ಪ್ರತಿಭೆ ಮೆರೆದಿದ್ದಾರೆ. ಅಷ್ಟೇ ಅಲ್ಲದೆ ಹಲವು ಆಡಿಯೋ ಬುಕ್ಸ್ಗಳಿಗೆ ದನಿ ಕೂಡ ನೀಡಿದ್ದಾರೆ. ಕೃಷ್ಣವರ್ಣದ ಈ ಬೆಂಗಾಲಿ ಸುಂದರಿಯದು ಬಹುಮುಖ ಪ್ರತಿಭೆ.
ಅವರು ನೀಡಿರುವ ಧ್ವನಿಪುಸ್ತಕಗಳಲ್ಲಿ ಅಂಡರ್ ದ ಬನಿಯಾನ್, ವಂಡರ್ ಪೆಟ್ಸ್ ಆಸ್ ಎ ಬೆಂಗಾಲ್ ಟೈಗರ್ ಇವು ಮಕ್ಕಳ ಸಿರೀಸ್ಗಳಾಗಿವೆ. ಅದೇ ರೀತಿ ಮಹಾತ್ಮ ಗಾಂಧೀಜಿಯವರ ಆತ್ಮಚರಿತ್ರೆ `ದ ಸ್ಟೋರಿ ಆಫ್ ಮೈ ಎಕ್ಸ್ಪೆರಿಮೆಂಟ್ ವಿಥ್ ಟ್ರುಥ್' ಪ್ರಮುಖವಾದವುಗಳಾಗಿವೆ.


ವೈಯಕ್ತಿಕ ವಿಚಾರಗಳು:
ದಾಸ್ ಭಾರತೀಯ ಖ್ಯಾತ ಪೇಂಟರ್ ಜಟಿನ್ ದಾಸ್ ಹಾಗೂ ಲೇಖಕಿ ವರ್ಷ ಅವರ ಮಗಳಾಗಿ ಜನಿಸಿ, ದೆಹಲಿ ವಿವಿಯಿಂದ(ಮಿರಂದ್ ಹೌಸ್) ಜಿಯಾಗ್ರಫಿ ವಿಷಯದಲ್ಲಿ ಪದವಿ ಪಡೆದರು. ನಂತರ ಸಮಾಜಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ದೆಹಲಿ ಸ್ಕೂಲ್ನಿಂದ ಪಡೆದರು. ಶಿಕ್ಷಣ ಮುಗಿಸಿ ಕಲೆಯ ಕಡೆಗೆ ವಾಲಿದರು. ಇವರಲ್ಲಿದ್ದ ಕಲಾವಿದೆಯನ್ನು ಬೆಳೆಸಿ, ಪೋಷಿಸಿದ್ದು `ಜನನತ್ಯ ಮಂಚ ಥೇಟರ್ ಗ್ರೂಪ್', ಈ ಸಂಸ್ಥೆ ಮೂಲಕ ಅವರು ಕಲಾ ಜೀವನಕ್ಕೆ ಕಾಲಿಟ್ಟರು.
2002ರಲ್ಲಿ ಸೌಮ್ಯಸೇನ್ ಎಂಬುವವರನ್ನು ಮದುವೆಯಾಗಿ ಸಾಂಸಾರಿಕ ಜೀವನಕ್ಕೆ  ಕಾಲಿಟ್ಟ ನಂದಿತಾ ಜಾಹಿರಾತು ಸಂಸ್ಥೆಯೊಂದನ್ನು ತೆರೆದು ಅದರ ಮೂಲಕ ಹಲವು ಸಾಮಾಜಿಕ ಜಾಗೃತಿಯ ಆಡ್ಫಿಲ್ಮ್ಗಳನ್ನು ಮಾಡಿದರು. ಬಳಿಕ ಸಂಸಾರಿಕ ಜೀವನದಲ್ಲಿ ಯಾವುದೋ ವಿರಸದಿಂದಾಗಿ ವಿಚ್ಛೇದನ ನೀಡಿದರು. ಮತ್ತೆ 2010 ಜನವರಿ 2ರಂದು ಸುಭೋದ್ ಮಸ್ಕಾರ್ ಅವರನ್ನು ವಿವಾಹವಾದರು.
 ಪ್ರಶಸ್ತಿಗಳ ಮಹಾಪೂರ:
2001-ಅತ್ಯುತ್ತಮ ನಟಿ (ಬವಾಂದರ್ ಚಿತ್ರಕ್ಕೆ), 2002-ಅತ್ಯುತ್ತಮ ನಟಿ (ಅಮಾರ್ ಭುವಾನ್ ಚಿತ್ರಕ್ಕೆ), 2002-ಕನ್ನಾಥಿಲ್ ಮುತ್ತಾಮಿತ್ತಲ್, ವಿಶೇಷ ಪ್ರಶಸ್ತಿ ತಮಿಳುನಾಡು ಸಕರ್ಾರ, 2006-ಅತ್ಯುತ್ತಮ ನಟಿ (ಕಮಲಿ),
2008-ಏಷ್ಯನ್ ಫೆಸ್ಟಿವಲ್ ಆಫ್ ಫಸ್ಟ್ ಫಿಲ್ಮನಲ್ಲಿ; ಅತ್ಯುತ್ತಮ ಚಿತ್ರ-ಫಿರಾಕ್, ಅತ್ಯುತ್ತಮ ಚಿತ್ರಕಥೆ- ಫಿರಾಕ್ ಹಾಗೂ ಅತ್ಯುತ್ತಮ ಚಿತ್ರಕ್ಕಾಗಿ ಫಾರೆನ್ ಕರಸ್ಪಾಂಡೆಂಟ್ಸ್ ಅಸೋಸಿಯೇಷನ್ ಪರ್ಪಲ್ ಆಚರ್ಿಡ್ ಪ್ರಶಸ್ತಿ., 2008-ಶೆವೆಲಿಯರ್ ಆಫ್ ದ ಆರ್ಡರ್ ಡೆಸ್ ಆಟರ್್ ಎಟ್ ಡೆಸ್ ಲೆಟರ್ಸ್ ಪ್ರಶಸ್ತಿ, 2009- ತೀಪರ್ುಗಾರರ ವಿಶೇಷ ಬಹುಮಾನ(ಫಿರಾಕ್ ಚಿತ್ರಕ್ಕೆ), 2009-ಥೊಸೆಲೊನಿಕಿ ಫಿಲ್ಮ್ ಫೆಸ್ಟಿವಲ್ನಲ್ಲಿ ವಿಶೇಷ ಪ್ರಶಸ್ತಿ, 2010-ಫಿಲ್ಮ್ಫೆರ್ ಅವಾಡರ್್ನಲ್ಲಿ ಫಿರಾಕ್ ಚಿತ್ರಕ್ಕೆ ವಿಶೇಷ ಪ್ರಶಸ್ತಿ ಸಂದಿದೆ.
ಇಷ್ಟೊಂದು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಡಿರುವ ಅಭೂತಪೂರ್ವ ಪ್ರತಿಭೆ ಇವರದ್ದಾಗಿದೆ.


ಕಲಿಯಬೇಕಾದದ್ದು ತುಂಬಾ ಇದೆ:
ಮಹಿಳೆ ಅದು ಭಾರತದಲ್ಲಿಯೇ ಹುಟ್ಟು ಬೆಳೆದಿರುವ ದಾಸ್ ಇಷ್ಟೊಂದು ಸಾಧನೆಗಳನ್ನು ಮಾಡಿರುವಾಗ ನಮ್ಮಿಂದ ಏಕೆ ಸಾಧ್ಯವಿಲ್ಲ..? ಒಂದು ಮಾತಂತೂ ನಿಜ, ಪ್ರತಿಯೊಬ್ಬರಿಗೂ ನಂದಿತಾಳಿಗೆ ದೊರೆತ ಪ್ರೋತ್ಸಾಹ ಹಾಗೂ ಅನುಕೂಲಕರವಾದ ವಾತಾವರಣ ದೊರೆಯುವುದು ದುರ್ಲಭ. ಆದರೆ ತನ್ನಲ್ಲಿರುವ ಕ್ರಿಯಾಶೀಲತೆ, ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಅಪರೂಪ ಅವಕಾಶಗಳಂತೂ ಇದ್ದೇ ಇರುತ್ತವೆ. ಅವುಗಳನ್ನು ಸಮರ್ಪಕವಾಗಿ ಬೆಳೆಸಿಕೊಂಡಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ನಂದಿತಾ ದಾಸ್ ಮಾದರಿಯಾಗಿ ನಿಲ್ಲಬಲ್ಲರು.


ಆತೀಶ್ ಬಿ ಕನ್ನಾಳೆ







No comments:

Post a Comment