Sunday, April 24, 2011

ಫ್ರಾನ್ಸ್ಲ್ಲಿ ಘಮಲಿದ ಭಾರತದ ಕಮಲ

`ದೇವೀರಿ' ಮುಡಿಗೆ ಕಮಲ

ನಾನು ಏನೂ ಮಾಡಬೇಕಾಗಿಲ್ಲ; ಏನನ್ನೂ ಸಾಧಿಸಬೇಕಾಗಿಲ್ಲ. ಎಂತಹುದೇ ರಿಸ್ಕ್ ತೆಗೆದುಕೊಳ್ಳಬೇಕಾಗಿಲ್ಲ. ಒಂದು ವೇಳೆ ಯಾವುದರಲ್ಲಾದರೂ ಸೋಲುಂಟಾದರೆ, ಅದರಿಂದ ನುಣುಚಿಕೊಳ್ಳಬಹುದು. ಇತರರ ಸಹಾನುಭೂತಿ ಪಡೆಯಬಹುದು. ಜವಾಬ್ದಾರಿಯನ್ನು ಇತರರು ಹೊತ್ತುಕೊಳ್ಳುತ್ತಾರೆ. ಯಾರೊಂದಿಗೂ ಸ್ಪಧರ್ಿಸಬೇಕಾದ ಅಗತ್ಯವಿಲ್ಲ. ಎಲ್ಲವನ್ನು ಗಂಡ ನೋಡಿಕೊಳ್ಳುತ್ತಾನೆ; ವಯಸ್ಸಾದ ಮೇಲೆ ಮಕ್ಕಳಂತೂ ಇದ್ದೇ ಇರುತ್ತಾರಲ್ಲ! ಈ ರೀತಿ ನೇತ್ಯಾತ್ಮ ಹಾಗೂ ನಿಷ್ಕ್ರಿಯ ಆಲೋಚನೆಯಿಂದಾಗಿ ಸ್ತ್ರೀ ನಾಲ್ಕು ಗೋಡೆಗಳ ನಡುವಿನ ದೌಭರ್ಾಗ್ಯಲಕ್ಷ್ಮಿ, ಅಬಲೆ, ಹೆರಿಗೆ ಯಂತ್ರ, ಏನನ್ನೂ ಮಾಡಲು ಶಕ್ತಳಲ್ಲವೆಂಬ ಪಟ್ಟ ಕಟ್ಟಿಕೊಂಡು ಅಭಿವೃದ್ಧಿಯಿಂದ ವಂಚಿತಳಾಗುತ್ತಿದ್ದಾಳೆ.
ತನ್ನಲ್ಲಿ ನೂರಾರು ಕೌಶಲ್ಯಗಳಿದ್ದರೂ ಕ್ರಿಯಾಶೀಲತೆಯಿಂದ ಕಾರ್ಯ ನಿಭಾಯಿಸಿಕೊಂಡು ಹೋಗುವ ಚಾಕಚಕ್ಯತೆ, ನಾಯಕತ್ವದ ಗುಣಗಳಿದ್ದರೂ, ಶೈಕ್ಷಣಿಕ ಅರ್ಹತೆಗಳಿದ್ದರೂ ಅವುಗಳು ಅಡುಗೆಮನೆಗೆ ಸೀಮಿತ. ಸ್ತ್ರೀ ಇಂದಿಗೂ ಹಲವು ಕುಟುಂಬಗಳಲ್ಲಿ ಸ್ವತಂತ್ರಳಾಗಿ ನಿಧರ್ಾರಗಳನ್ನು ತೆಗೆದುಕೊಳ್ಳುವಂತಿಲ್ಲ. ಸ್ವಚ್ಚಂದವಾಗಿ ಬದುಕುವಂತಿಲ್ಲ; ದುಡಿದರೂ ಸ್ವತಂತ್ರವಿಲ್ಲ. ಯಾರೊಂದಿಗೂ ಮಾತನಾಡುವಂತಿಲ್ಲ; ಬೆರೆಯುವಂತಿಲ್ಲ. ಇದಕ್ಕೆ ಅವಳ ಸಕುಂಚಿತ ಮನೋಭಾವವೂ ಕಾರಣವಾಗಿದೆ!
ಬರೀ ಮಹಿಳೆಯ ಸಂಕುಚಿತ ಮನೋಭಾವವೇ ಆಕೆಯ ವ್ಯವಸ್ಥಿತ ಶೋಷಣೆಗೆ ಸಿಲುಕಿ ನಲುಗಲು ಕಾರಣವೆಂದರೆ ಪ್ರಾಯಶಃ ಮೂಗಿನ ನೇರಕ್ಕೆ ನುಡಿದಂತಾಗಬಹುದು. ಇದರ ಜತೆಗೆ ನಮ್ಮ ಸಮಾಜ ಕೂಡ ಅಷ್ಟೇ ಪ್ರಭಾವ ಬೀರುತ್ತಿದೆ.
`ಬಿಹೈಂಡ್ ಎವರಿ ಸಕ್ಸಸ್ಫುಲ್ ಮ್ಯಾನ್, ದೇರ್ ಇಸ್ ಎ ವುಮ್ಯಾನ್' ಎಂಬ ವಾಕ್ಯ ಕೇಳಿದ ತಕ್ಷಣ ಪ್ರತಿಯೊಬ್ಬ ಮಹಿಳೆ ಅಭಿಮಾನದಿಂದ ಹಿಗ್ಗಿ ಹೀರೆಕಾಯಿಯಾಗಬಹುದು. ಆದರೆ ಅದರಲ್ಲಿಯೇ ಅಡಕವಾಗಿರುವ ಮತ್ತೊಂದು ಅರ್ಥದ ಪರಿವೇ ಅವಳಿಗಿಲ್ಲ. ಇದರ ದ್ವಂದ್ವಾರ್ಥವೆಂದರೆ, ಮಹಿಳೆಯರು ಪುರುಷರ ಹಿಂದೆ ಇರಬೇಕೇ ವಿನಃ ಮುಂದೆ ಬಂದು ಹೆಸರಿಗಾಗಿ ಹೋರಾಟ ನಡೆಸುವಂತಿಲ್ಲ. ಸ್ವವರ್ಚಸ್ಸಿಗಾಗಿ ಸೆಣಸುವಂತಿಲ್ಲ. ಅಭಿವೃದ್ಧಿ ಏನಿದ್ದರೂ ಪುರುಷರಿಗೆ, ಮಹಿಳೆ ಪರದೆ ಹಿಂದಿನ ಕಲಾವಿದೆಯಷ್ಟೆ.


ಈ ಸಮಾಜದ ಅಂಕುಡೊಂಕು, ನಿಂದನೆಯ ಮಾತುಗಳಿಗೆ ಕಿವಿಗೊಟ್ಟು ತಮ್ಮ ಅಭಿವೃದ್ಧಿ ಮೇಲೆ ತಾವೇ ಕಲ್ಲುಹಾಕಿಕೊಳ್ಳುವುದು ಯಾವ ಸೀಮೆ ಸಂಸ್ಕೃತಿ? ಅಂದಿನ ಪುರುಷ ಪ್ರಧಾನ ಸಮಾಜಕ್ಕೆ ಸವಾಲಾಗಿ ನಿಂತವರು ಇಂದು ಇತಿಹಾಸದ ಪುಟಗಳಲ್ಲಿ ರಾರಾಜಿಸುತ್ತಿದ್ದಾರೆ. ಅಷ್ಟೇ ಯಾಕೆ ಪ್ರಸ್ತುತ ಸಮಾದಲ್ಲಿಯೂ ಅನೇಕ ಮಹಿಳೆಯರು ತಮ್ಮ ಸಾಧನೆಯಿಂದ ಮೆರೆದಿದ್ದಾರೆ. ಅದರಲ್ಲಿ ಬಾಲಿವುಡ್ ತಾರೆ ನಂದಿತಾದಾಸ್ ಕೂಡ ಒಬ್ಬರು.

ಯಾರು ಈ ನಂದಿತಾದಾಸ್?
ನಂದಿತಾ ಭಾರತೀಯ ನಟಿ ಹಾಗೂ ನಿದರ್ೇಶಕಿ ಕೂಡ ಹೌದು. ಸಿನಿಮಾರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಈಕೆ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಇಂಡೋ ಫ್ರಾನ್ಸ್ ಸಹಕಾರದಿಂದ ಸಿನಿಮಾ ಅಭಿವೃದ್ಧಿಗಾಗಿ ಶ್ರಮಿಸಿ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಇವರು ನೀಡಿರುವ ಮಹತ್ತರ ಕೊಡುಗೆ ಮತ್ತು ಕ್ರಿಯಾಶೀಲತೆಯನ್ನು ಪರಿಗಣಿಸಿರುವ ಫ್ರಾನ್ಸ್ ಸಕರ್ಾರ ಸರ್ವಶ್ರೇಷ್ಠ ಫ್ರಾನ್ಸ್ ನಾಗರಿಕ (ಶೆವೆಲಿಯರ್ ಆಫ್ ದ ಆರ್ಡರ್ ಡೆಸ್ ಆಟರ್್ ಎಟ್ ಡೆಸ್ ಲೆಟರ್ಸ್) ಪ್ರಶಸ್ತಿ ನೀಡಿ ಗೌರವಿಸಿದೆ.
ಫೈರ(1996), ಅಥರ್್(1998), ಬವಾಂದರ್(2000) ಹಾಗೂ ಅಮಾರ್ ಭುವನ್(2002) ಚಲನಚಿತ್ರಗಳ ಮೂಲಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿರಪರಿಚಿತರಾದರು ನಂದಿತಾ ದಾಸ್. ನಿದರ್ೇಶಕಿಯಾಗಿ ಹಲವು ಚಿತ್ರಗಳನ್ನು ನಿದರ್ೇಶಿಸಿರುವ ಪ್ರತಿಭಾವಂತೆ. ಅಲ್ಲಿಯವರೆಗೆ ಕ್ಯಾಮರಾ ಹಿಂದಿನ ಕಾರುಬಾರು ನೋಡಿಕೊಳ್ಳುತ್ತಿದ್ದ ಈಕೆ ಬಳಿಕ ತನ್ನ ಸೌಂದರ್ಯ, ನಟನೆ, ಮಾತಿನ ಶೈಲಿಯಿಂದ ವೀಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.
ಅವರು ನಟಿಸಿದ ಚಿತ್ರ `ಫಿರಾಕ್' ಗಳಿಸಿದ ಖ್ಯಾತಿಗೆ ಪುಳಕಿತರಾದ ದಾಸ್ ಸಂಗ್ರಾಮ್ ರೇಡಿಯೋ ನಡೆಸಿದ ಸಂದರ್ಶನದಲ್ಲಿ ಅಭಿಮಾನಿ ದೇವರುಗಳಿಗೆ ಅಭಿನಂದಿಸಿ, ಅವರ ಪ್ರತಿಕ್ರಿಯೆಗಳನ್ನು ಒಪ್ಪಿಕೊಳ್ಳುವುದಾಗಿ ತಿಳಿಸಿದ್ದು ಅವರ ಸರಳ ಸಜ್ಜನಿಕತೆಗೆ ಉದಾಹರಣೆ.

ಬಹುಮುಖ ಪ್ರತಿಭೆ
ಇಂಗ್ಲಿಷ್, ಹಿಂದಿ, ಮಲಯಾಳಂ, ಬಂಗಾಳಿ, ತಮಿಳು, ಮರಾಠಿ, ಕನ್ನಡ, ಓರಿಯಾ ಮತ್ತು ಉದರ್ು ಹೀಗೆ ವಿಭಿನ್ನ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿ ಪ್ರತಿಭೆ ಮೆರೆದಿದ್ದಾರೆ. ಅಷ್ಟೇ ಅಲ್ಲದೆ ಹಲವು ಆಡಿಯೋ ಬುಕ್ಸ್ಗಳಿಗೆ ದನಿ ಕೂಡ ನೀಡಿದ್ದಾರೆ. ಕೃಷ್ಣವರ್ಣದ ಈ ಬೆಂಗಾಲಿ ಸುಂದರಿಯದು ಬಹುಮುಖ ಪ್ರತಿಭೆ.
ಅವರು ನೀಡಿರುವ ಧ್ವನಿಪುಸ್ತಕಗಳಲ್ಲಿ ಅಂಡರ್ ದ ಬನಿಯಾನ್, ವಂಡರ್ ಪೆಟ್ಸ್ ಆಸ್ ಎ ಬೆಂಗಾಲ್ ಟೈಗರ್ ಇವು ಮಕ್ಕಳ ಸಿರೀಸ್ಗಳಾಗಿವೆ. ಅದೇ ರೀತಿ ಮಹಾತ್ಮ ಗಾಂಧೀಜಿಯವರ ಆತ್ಮಚರಿತ್ರೆ `ದ ಸ್ಟೋರಿ ಆಫ್ ಮೈ ಎಕ್ಸ್ಪೆರಿಮೆಂಟ್ ವಿಥ್ ಟ್ರುಥ್' ಪ್ರಮುಖವಾದವುಗಳಾಗಿವೆ.


ವೈಯಕ್ತಿಕ ವಿಚಾರಗಳು:
ದಾಸ್ ಭಾರತೀಯ ಖ್ಯಾತ ಪೇಂಟರ್ ಜಟಿನ್ ದಾಸ್ ಹಾಗೂ ಲೇಖಕಿ ವರ್ಷ ಅವರ ಮಗಳಾಗಿ ಜನಿಸಿ, ದೆಹಲಿ ವಿವಿಯಿಂದ(ಮಿರಂದ್ ಹೌಸ್) ಜಿಯಾಗ್ರಫಿ ವಿಷಯದಲ್ಲಿ ಪದವಿ ಪಡೆದರು. ನಂತರ ಸಮಾಜಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ದೆಹಲಿ ಸ್ಕೂಲ್ನಿಂದ ಪಡೆದರು. ಶಿಕ್ಷಣ ಮುಗಿಸಿ ಕಲೆಯ ಕಡೆಗೆ ವಾಲಿದರು. ಇವರಲ್ಲಿದ್ದ ಕಲಾವಿದೆಯನ್ನು ಬೆಳೆಸಿ, ಪೋಷಿಸಿದ್ದು `ಜನನತ್ಯ ಮಂಚ ಥೇಟರ್ ಗ್ರೂಪ್', ಈ ಸಂಸ್ಥೆ ಮೂಲಕ ಅವರು ಕಲಾ ಜೀವನಕ್ಕೆ ಕಾಲಿಟ್ಟರು.
2002ರಲ್ಲಿ ಸೌಮ್ಯಸೇನ್ ಎಂಬುವವರನ್ನು ಮದುವೆಯಾಗಿ ಸಾಂಸಾರಿಕ ಜೀವನಕ್ಕೆ  ಕಾಲಿಟ್ಟ ನಂದಿತಾ ಜಾಹಿರಾತು ಸಂಸ್ಥೆಯೊಂದನ್ನು ತೆರೆದು ಅದರ ಮೂಲಕ ಹಲವು ಸಾಮಾಜಿಕ ಜಾಗೃತಿಯ ಆಡ್ಫಿಲ್ಮ್ಗಳನ್ನು ಮಾಡಿದರು. ಬಳಿಕ ಸಂಸಾರಿಕ ಜೀವನದಲ್ಲಿ ಯಾವುದೋ ವಿರಸದಿಂದಾಗಿ ವಿಚ್ಛೇದನ ನೀಡಿದರು. ಮತ್ತೆ 2010 ಜನವರಿ 2ರಂದು ಸುಭೋದ್ ಮಸ್ಕಾರ್ ಅವರನ್ನು ವಿವಾಹವಾದರು.
 ಪ್ರಶಸ್ತಿಗಳ ಮಹಾಪೂರ:
2001-ಅತ್ಯುತ್ತಮ ನಟಿ (ಬವಾಂದರ್ ಚಿತ್ರಕ್ಕೆ), 2002-ಅತ್ಯುತ್ತಮ ನಟಿ (ಅಮಾರ್ ಭುವಾನ್ ಚಿತ್ರಕ್ಕೆ), 2002-ಕನ್ನಾಥಿಲ್ ಮುತ್ತಾಮಿತ್ತಲ್, ವಿಶೇಷ ಪ್ರಶಸ್ತಿ ತಮಿಳುನಾಡು ಸಕರ್ಾರ, 2006-ಅತ್ಯುತ್ತಮ ನಟಿ (ಕಮಲಿ),
2008-ಏಷ್ಯನ್ ಫೆಸ್ಟಿವಲ್ ಆಫ್ ಫಸ್ಟ್ ಫಿಲ್ಮನಲ್ಲಿ; ಅತ್ಯುತ್ತಮ ಚಿತ್ರ-ಫಿರಾಕ್, ಅತ್ಯುತ್ತಮ ಚಿತ್ರಕಥೆ- ಫಿರಾಕ್ ಹಾಗೂ ಅತ್ಯುತ್ತಮ ಚಿತ್ರಕ್ಕಾಗಿ ಫಾರೆನ್ ಕರಸ್ಪಾಂಡೆಂಟ್ಸ್ ಅಸೋಸಿಯೇಷನ್ ಪರ್ಪಲ್ ಆಚರ್ಿಡ್ ಪ್ರಶಸ್ತಿ., 2008-ಶೆವೆಲಿಯರ್ ಆಫ್ ದ ಆರ್ಡರ್ ಡೆಸ್ ಆಟರ್್ ಎಟ್ ಡೆಸ್ ಲೆಟರ್ಸ್ ಪ್ರಶಸ್ತಿ, 2009- ತೀಪರ್ುಗಾರರ ವಿಶೇಷ ಬಹುಮಾನ(ಫಿರಾಕ್ ಚಿತ್ರಕ್ಕೆ), 2009-ಥೊಸೆಲೊನಿಕಿ ಫಿಲ್ಮ್ ಫೆಸ್ಟಿವಲ್ನಲ್ಲಿ ವಿಶೇಷ ಪ್ರಶಸ್ತಿ, 2010-ಫಿಲ್ಮ್ಫೆರ್ ಅವಾಡರ್್ನಲ್ಲಿ ಫಿರಾಕ್ ಚಿತ್ರಕ್ಕೆ ವಿಶೇಷ ಪ್ರಶಸ್ತಿ ಸಂದಿದೆ.
ಇಷ್ಟೊಂದು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಡಿರುವ ಅಭೂತಪೂರ್ವ ಪ್ರತಿಭೆ ಇವರದ್ದಾಗಿದೆ.


ಕಲಿಯಬೇಕಾದದ್ದು ತುಂಬಾ ಇದೆ:
ಮಹಿಳೆ ಅದು ಭಾರತದಲ್ಲಿಯೇ ಹುಟ್ಟು ಬೆಳೆದಿರುವ ದಾಸ್ ಇಷ್ಟೊಂದು ಸಾಧನೆಗಳನ್ನು ಮಾಡಿರುವಾಗ ನಮ್ಮಿಂದ ಏಕೆ ಸಾಧ್ಯವಿಲ್ಲ..? ಒಂದು ಮಾತಂತೂ ನಿಜ, ಪ್ರತಿಯೊಬ್ಬರಿಗೂ ನಂದಿತಾಳಿಗೆ ದೊರೆತ ಪ್ರೋತ್ಸಾಹ ಹಾಗೂ ಅನುಕೂಲಕರವಾದ ವಾತಾವರಣ ದೊರೆಯುವುದು ದುರ್ಲಭ. ಆದರೆ ತನ್ನಲ್ಲಿರುವ ಕ್ರಿಯಾಶೀಲತೆ, ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಅಪರೂಪ ಅವಕಾಶಗಳಂತೂ ಇದ್ದೇ ಇರುತ್ತವೆ. ಅವುಗಳನ್ನು ಸಮರ್ಪಕವಾಗಿ ಬೆಳೆಸಿಕೊಂಡಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ನಂದಿತಾ ದಾಸ್ ಮಾದರಿಯಾಗಿ ನಿಲ್ಲಬಲ್ಲರು.


ಆತೀಶ್ ಬಿ ಕನ್ನಾಳೆ







Friday, April 8, 2011

ಡರ್ ಕೆ ಆಗೆ ಜೀತ್ ಹೆ, ಪರ್ ಯಂಹಾ ಮೌತ್ !

ಪುಕುಶಿಮಾ ಈಗ ಮತ್ತೆ ಪುಕುಪುಕು!
"ಯಾಕೆ ಈ ಪ್ರಕೃತಿ ಹೀಗೆ ಮಾಡುತ್ತೆ...? ಏನಾದ್ರು ಪೂರ್ವಜನ್ಮದ ಹಗೆತನ ಏನಾದ್ರು ಇದೆನಾ? ಅಥವಾ ಜಪಾನ್ ಅಂದ್ರೆ ಅಲಜರ್ಿನಾ....?"

ಜಪಾನ್ ಬಹುಶಃ ಆ ದಿನವನ್ನು ಮರೆಯಬೇಕೆಂದುಕೊಂಡರೂ ಮರೆಯಲಾಗದು. ಅದು ಅಂಥ ಕರಾಳ ದಿನ. ಇಡೀ ವಿಶ್ವವೇ ನಿಬ್ಬೆರಗಾಗಿ ಆ ಕಡೆಗೆ ನೋಡುತ್ತಿತ್ತು. ಇದೇನು ಪ್ರಳಯದ ಸೂಚನೆಯೇ ಅಥವಾ ವಿನಾಶದ ಅಂಕುರವೇ..? ಭಾರತದಲ್ಲಿಯೂ ಕೂಡ ಆ ಪುಕುಪುಕು ಪ್ರಾರಂಭವಾಗಿತ್ತು. ಅಂದು ಸುದ್ದಿ ವಾಹಿನಿ ವೀಕ್ಷಿಸಿದ ಪ್ರತಿಯೊಬ್ಬರು ಉದ್ಗಾರದಿಂದ ನುಡಿದದ್ದೊಂದೆ ಇಂಥ ಟೈಂ ಎಲ್ಲೂ ಬರಬಾರ್ದಪ್ಪಾ..! ಕೆಲವರಿಗಂತೂ ಈ ಘಟನೆ ಎಸ್ಎಂಎಸ್ ಜೋಕಾಗಿ ಮಾರ್ಪಟ್ಟಿತ್ತು. ಯಮ ಚಂದ್ರಗುಪ್ತನಿಗೆ `ಜಾ ಪಾನ್ ಲೇಕೆ ಆ..' ಎಂದು ಹೇಳಿದ್ದನಂತೆ, ಆದರೆ ಅವನು ಇಡೀ ಜಪಾನ್ನನ್ನೇ ಕೊಚ್ಚಿಕೊಂಡು ಹೋದ... ಅದೆಲ್ಲಾ ಬುರುಡೆ ಬಿಡಿ. ಆದ್ರೆ ಇಂತಹ ಕ್ರಿಟಿಕಲ್ ಕಂಡಿಷನ್ ಮಾತ್ರ ಯಾವ ವೈರಿಗೂ ಬರ್ಬಾರ್ದು.
ಐತಿಹ್ಯದ ಬೆನ್ನು ಬಾರಿಸುತ್ತಾ ಕೂಡುವುದಕ್ಕಿಂತ, ಪ್ರಸ್ತುತತೆಯ ಬಗ್ಗೆ ಗಮನ ಹರಿಸಲೇಬೇಕು. ಈಗ ಮತ್ತೆ ಜಪಾನಿನಲ್ಲಿ ಸುನಾಮಿಯಾಗುವ ಮುನ್ಸೂಚನೆ ಕಾಣಿಸಿಕೊಂಡಿದೆ. ಪ್ರಾಯಶಃ ಭೂಕಂಪ ಮತ್ತೆ ಬ್ಯಾಕ್ ಟು ಪೆವೆಲಿಯನ್ ಎಂಬಂತೆ ಮರಳಬಹುದೇನೊ? ಎಂಬ ಭಯ ಕಾಡುತ್ತಿದೆ. ಗುರುವಾರವಾದ ಲಘು ಭೂಕಂಪದಿಂದ ಹಾಲಿ ಅಳಿದುಳಿದಿರುವ ಜಪಾನ್ ಅಬ್ಬೇಪಾರಿಯಾಗಿದೆ.

ಕನ್ಫೂಸ್ ಆಗೋ ಪ್ರಮೇಯವೇ ಇಲ್ಲ. ಇದೆಲ್ಲ ನಾವೇ ಮಾಡಿರೋದು ಈಗ ನಾವೆ ಅನುಭವಿಸಬೇಕು. ವಿಜ್ಞಾನ ಮುಂದುವರಿಯುವುದರಿಂದ ಏನೆನೋ ಆಗ್ತಾ ಇದೆ. ಅದನ್ನು ಅಲ್ಲಗೆಳೆಯಲಾಗದು. ಆದ್ರೆ ಆ ಏನೆನೋದಲ್ಲಿ ಇದು ಕೂಡ ಒಂದು...
"ನಮ್ ಕೈಯಲ್ಲಿರೋದು ಒಂದೇ, ಅದು ದೇವರಲ್ಲಿ ಅವರಿಗೋಸ್ಕರ ಪ್ರಾರ್ಥನೆ ಮಾಡುವುದು ಅಷ್ಟೆ ಅದನ್ನು ಬಿಟ್ಟು ಮತ್ತೇನನ್ನು ಮಾಡಲಾಗದು." ನಮ್ಮಲ್ಲಿಯೂ ಇಂಥ ಘಟನೆಗಳು ಆಗಬಾರದೆಂದರೆ ಸೃಷ್ಟಿಯ ಸಂರಕ್ಷಣೆಯಲ್ಲಿ ಎಲ್ಲರೂ ಟೊಂಕಕಟ್ಟಿ ನಿಲ್ಲಬೇಕು.. ಲೆಟ್ಸ್ ಜಾಯಿನ್ ಟುಗೆದರ್...

Wednesday, April 6, 2011

Bichu Matu...


ಒಂದು ಕಡೆ ಖುಷಿ,  
ಮತ್ತೊಂದು ಕಡೆ ನೈತಿಕತೆಯ ಅಧಃಪತನ!
ಮಿಸ್ ಪೂನಂ ಪಾಂಡೆ ನೀವ್ ಇರೋದು ಭಾರತದಲ್ಲಿ ಅದನ್ನು ಮರೀದೆ ಇದ್ರೆ ಸಾಕು.


ಭಾರತ ಶ್ರೀಲಂಕಾ ವಿರುದ್ಧ ಸಾಧಿಸಿದ ಜಯ ಪ್ರಾಯಶಃ ಪ್ರತಿಯೊಬ್ಬ ಭಾರತೀಯ ಎಂದೂ ಕೂಡ ಮರೆಯಲಾಗದು. ಅದೊಂದು ರೋಮಾಂಚಕ ಹಾಗೂ ವಿರೋಚಿತ ಜಯ. ಇಡೀ ವಿಶ್ವದೆದುರು ಸಿಂಹಳಿಯರನ್ನು ಸೆದೆಬಡಿದ ಬ್ಲೂ ಬಾಯ್ಸ್ಗಳ ಆಟದ ವೈಖರಿ ಕಣ್ಪರದೆ ಮೇಲಿಂದ ಅಳಿಸುವುದು ಅಸಾಧ್ಯವೇ ಸರಿ.
28 ವರ್ಷಗಳಿಂದ ಕಾಯುತಿದ್ದ ಆ ಕ್ಷಣ ಕೊನೆಗೂ ನಮ್ಮ ನೆಲೆದಲ್ಲೆ ಜನ್ಮ ತಳೆದದ್ದು ಮತ್ತೊಂದು ಖುಷಿಯ ವಿಚಾರ. ಈ ಹರುಷದ ವರುಷಕ್ಕೆ ಬರೀ ಪದಗಳಿಂದ ವಣರ್ಿಸುವುದು ತುಂಬಾ ಕಷ್ಟ. ಅದು ಬರೀ ಭಾರತೀಯರ ಜಯವಲ್ಲ! ಭಾರತದ ವಿಜಯ. ಧೋನಿ ಬಾರಿಸಿದ ಸಿಕ್ಸ್ಗೆ ವಾಂಖೆಡಾ ಗ್ರೌಂಡ್ ಅಷ್ಟೆ ಅಲ್ಲ, ಬದಲಿಗೆ ಇಡೀ ಭಾರತವೇ ಸಂತೋಷದಿಂದ ಕುಣಿದು ಕುಪ್ಪಳಿಸಿತು. ಬೆಂಗಳೂರಿನ ಎಂ.ಜಿ. ರೋಡ್ ಹಾಗೂ ಬ್ರಿಗೆಡ್ ರೋಡ್ನಲ್ಲಂತೂ ಹೇಳತೀರದ ಖುಷಿ ವ್ಯಕ್ತವಾಗುತ್ತಿತ್ತು.
ಹುಡುಗರಷ್ಟೆ ಅಲ್ಲ. ಹೆಂಗಳೆಯರೂ ಕೂಡ ರಾತ್ರಿ 2 ಗಂಟೆ ಆದರೂ ವಿಜಯೋತ್ಸವ ಆಚರಣೆಯಲ್ಲಿ ಫುಲ್ ಬಿಜಿ ಯಾಗಿದ್ದರು. ಏನೆ ಅನ್ನಿ ಆ ದೃಶ್ಯ ಸವಿಯಲು ಬರೀ ಎರಡು ಕಣ್ಣುಗಳು ಸಾಲವು.
ಇವೆಲ್ಲ ಒಂದು ಕಡೆ ಆದ್ರೆ ಮತ್ತೊಂದು ಕಡೆ, `ಭಾರತ ಏನಾದ್ರು ಟೂರ್ನಮೆಂಟ್ನಲ್ಲಿ ಶ್ರೀಲಂಕಾ ವಿರುದ್ಧ ಗೆದ್ದರೆ ತಾನು ಬೆತ್ತಲೆ ಪರೆಡ್ ಮಾಡುವೆ' ಎಂದು ಹೇಳಿದ್ದ ರೂಪದಶರ್ಿ ಪೂನಂ ಪಾಂಡೆಗೋಸ್ಕರ ಎಲ್ಲರೂ ಕಾಯ್ತಾ ಇದ್ರು. ಆದ್ರೆ ಪೂನಂ ಮಾತ್ರ ಕಾಣ್ಲೆ ಇಲ್ಲ :(
ಈಗಲೂ ಹಲವು ಕೊಟೇಷನ್ಗಳನ್ನು ನೀಡಿ ವಿವಾದದಲ್ಲಿದ್ದಾಳೆ ಈ ಬಿಚ್ಚಮ್ಮ. ತನ್ನ ಮೈಮಾಟದಿಂದ ಈಗಾಗಲೆ ಪಡ್ಡೆ ಹುಡುಗರಲ್ಲಿ ಹುಚ್ಚೆಬ್ಬಿಸಿರುವ ಪಾಂಡೆಗೆ ಶಿವಸೇನಾ, ಬಿಜೆಪಿ ಬೆದರಿಸಿದ್ದಕ್ಕೆ ಕ್ವೈಟ್ ಆಗಿದ್ದಾಳೆ. ಆದರೆ ಈಗಲೂ ಐಸಿಸಿ ಪಮರ್ಿಷನ್ ಕೊಟ್ರೆ ಭಾರತೀಯ ಕ್ರಿಕೆಟ್ ಆಟಗಾರರ ಮುಂದೆ ಬೆತ್ತಲಾಗುವುದಾಗಿ ಹೇಳಿದ್ದಾಳೆ. ಎಂಥಾ ಕಿಕ್ಕಿಂಗ್ ವಡ್ಸರ್್ ಅಲ್ವಾ!
ಬಡ್ಡಿಮಗುಂದು ಇಂಥವಳನ್ನು ನಮ್ಮ ಭಾರತೀಯಳೆನ್ನಲು ನಾಚಿಕೆ ಆಗುತ್ತೆ. ಶೀಲಕ್ಕಾಗಿ ಜೀವ ನೀಡುವ ಸಂಸ್ಕೃತಿ ನಮ್ಮದು ಆದರೆ ಇಂತಹ ಪವಿತ್ರ ಭಾರತ ಭೂಮಿಯಲ್ಲಿ ಜನ್ಮವೆತ್ತು ದೇಹ ತೋರಿಸುವುದಾಗಿ ಹೇಳುತ್ತಿರುವುದು ದೊಡ್ಡ ದುರಂತ. ಏನೆ ಅನ್ನಿ ಮೈತೋರಿಸಿಕೊಳ್ಳುವ ಷರತ್ತು ಮಾಡಿ, ಇಡೀ ಪರಿಸ್ಥಿತಿಯೇ ಅವಳ ಈ ನಿಧರ್ಾರಕ್ಕೆ ಎದುರಾದರೂ ಸುಮ್ಮನಾಗುವ ಬದಲು ತಾನು ಮಾತು ತಪ್ಪುವುದಿಲ್ಲವೆಂದು ಹೇಳಿಕೊಳ್ಳುತ್ತಿದ್ದಾಳೆ. ಇಂಥವರ ವಿರುದ್ಧ ಕಾನೂಕು ಕ್ರಮ ಕೈಗೊಂಡರೆ ಮುಂದಾಗುವ ಅವಘಡಗಳನ್ನು ತಪ್ಪಿಸಬಹುದೇನೊ..?
ಯಾಕೊ ನಮ್ಮ ಹುಡುಗಿಯರಿಗೆ ಸ್ವಲ್ಪ ಜಾಸ್ತಿನೇ ಸ್ವತಂತ್ರ ಸಿಕ್ಕಿದೆ ಎನೋ ಅನಸ್ತಾ ಇದೆ...

ಆತೀಶ್ ಬಿ ಕನ್ನಾಳೆ.