Monday, November 29, 2010

ಹೀಗೂ ಉಂಟೆ.......??
ಎಕೆ 47 ತುಪಾಕಿಯಲ್ಲಿ ಸಿಡಿಯಲಿವೆ ರಬ್ಬರ್ ಗುಂಡು!!

ಇನ್ನು ಮುಂದೆ ಯಾರೇ ನಿಮ್ಮ ಎದುರು ಎಕೆ 47 ಹಿಡಿದು ನಿಂತರೆ ಹೆದರಬೇಕಾಗಿಲ್ಲ..!?? ಯಾಕೆ ಅಂತಾ ಕೇಳ್ತಾ ಇದಿರಾ. ಆ ಮ್ಯಾಟರೆ ಹಾಗೆ, ಎಕೆ 47 ಎಂದರೆ ಪ್ಯಾಂಟ್ ಪ್ಯಾಂಟೆಲ್ಲಾ ಒದ್ದೆಯಾಗಿಬಿಡುತ್ತಿದ್ದ ಜಮಾನ ಒಂದಿತ್ತು. ಆದರೆ ಈಗ....?
ಎಕೆ 47 ತುಪಾಕಿಗಳಲ್ಲಿ ರಬ್ಬರ್ ಗುಂಡುಗಳು ಸಿಡಿಯುವುದೆಂದರೆ ಊಹೆಗೆ ನಿಲುಕದ ಆಲೋಚನೆ ಎನಿಸಬಹುದೇನೊ. ಆದರೆ ಇನ್ನು ಮುಂದೆ ಇದು ಸತ್ಯವಾಗಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುವ ಗಲಭೆಗಳ ನಿಯಂತ್ರಿಸುವುದಕ್ಕಾಗಿ ಕೇಂದ್ರ ಸಕರ್ಾರ ಕಂಡುಕೊಂಡ ಸೂತ್ರ ಇದಾಗಿದೆ.
 ಗೃಹ ಸಚಿವಾಲಯದಲ್ಲಿ ಸೇರಲಾಗಿದ್ದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಚಚರ್ಿಸಲಾಯಿತು. ಮತ್ತು ಆ ಸಭೆಯಲ್ಲಿ ಎಕೆ47ಗಳಲ್ಲಿ ಪ್ಲಾಸ್ಟಿಕ್ ಗುಂಡುಗಳನ್ನು ಬಳಸುವುದರ ಕುರಿತು ನಿಧರ್ಾರ ತೆಗೆದುಕೊಳ್ಳಲಾಯಿತು.
ಎಕೆ 47 ನಲ್ಲಿ ರಬ್ಬರ್ ಗುಂಡುಗಳನ್ನು ಬಳಸುವುದರಿಂದ ಗಲಭೆಕೋರರು ಸಾವಿಗೀಡಾಗುವ ಸಾಧ್ಯತೆಗಳು ಕಡಿಮೆ. ಒಂದು ವೇಳೆ ಇದನ್ನು ಕಡಿಮೆ ಅಂತರದಿಂದ ಹಾರಿಸದಿದ್ದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂದು ತಿಳಿಸಿದರು. ದೊಂಬಿಯನ್ನು ಹತ್ತಿಕ್ಕಲು ಇರುವ ಮತ್ತೊಂದು ತಂತ್ರವೆಂದರೆ, `ಡ್ಯಾಜ್ಲರ್' ಇಲ್ಲಿ ಲೆಸರ್ ಕಿರಣಗಳನ್ನು ಬಳಸಿ ಗಲಭೆಕೋರರನ್ನು ತಾತ್ಕಾಲಿಕ ಅಂಧತ್ವಕ್ಕೀಡು ಮಾಡಲಾಗುತ್ತದೆ ಈಗಾಗಲೇ ಕಾಶ್ಮಿರದಲ್ಲಿ ಇದು ಬಳಕೆಯಲ್ಲಿದೆ.
ಈ ಡ್ಯಾಜ್ಲರ್ ಅನ್ನು 50 ಮೀಟರ್ನಿಂದ 250 ಮೀ. ಒಳಗೆ ವ್ಯಾಪ್ತಿಯಲ್ಲಿ ಬಳಸಬಹುದು. ಇದನ್ನು ವೈಯಕ್ತಿಕವಾಗಿ ಒಬ್ಬೊಬ್ಬರ ಮೇಲೆ ಪ್ರಯೋಗ ಮಾಡಲಾಗುತ್ತದೆ. ಇದರಿಂದ ಗಲ್ಲಭೆಕೋರರು ಕಲ್ಲು ತೂರಾಟ ನಡೆಸುವುದನ್ನು ತಪ್ಪಿಸಬಹುದಾಗಿದೆ.
ಗಲ್ಲಭೆ ನಿಯಂತ್ರಣಕ್ಕಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪಂಪ್ ಆ್ಯಕ್ಷನ್ ಗನ್ (ಶಾಟ್ ಗನ್) ಮತ್ತು ಗಲಭೆ ನಿಯಂತ್ರಣಾ ಗನ್ಗಳನ್ನು ಬಳಸಲಾಗುತ್ತಿದೆ. ಇದರಿಂದ ಜೀವಕ್ಕೆ ಹಾನಿಯೇನೂ ಇಲ್ಲ. ಆದರೆ ಪ್ರತಿಭಟನೆಯಲ್ಲಿ ತೊಡಗಿರುವವರಿಗೆ ಗಾಯಗಳಾಗುವ ಸಾಧ್ಯತೆಗಳುಂಟು ಎಂದು ಆಪಾದಿಸಲಾಗಿದೆ.
ಕಾಶ್ಮೀರ ಕಣಿವೆ ಹಿಂಸಾಚಾರ ನಿಯಂತ್ರಣ ಸಂದರ್ಭದಲ್ಲಿ ರಕ್ಷಣಾ ಪಡೆಯವರು ನಡೆಸಿದ ಗುಂಡು ಕಾಳಗದಲ್ಲಿ ಹಲವರು ಮೃತಪಟ್ಟಿದ್ದಾರೆ. ಆದ್ದರಿಂದ ಶೀಘ್ರವಾಗಿ ಜೀವಕ್ಕೆ ಹಾನಿಮಾಡದ ಬಂದೂಕಗಳನ್ನು ತಯಾರಿಸಿ ಕೊಡುವಂತೆ ಜಮ್ಮುವಿನ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೇಂದ್ರಕ್ಕೆ ಕೋರಿದ್ದರು. ಅದರಂತೆ ಜಬಲ್ಪುರದ ಮದ್ದು ಗುಂಡು ಕಾಖರ್ಾನೆಗೆ ಅಂತಹ ಬಂದೂಕಗಳನ್ನು ತಯಾರಿಸಿ ಕೊಡುವಂತೆ ತಿಳಿಸಲಾಗಿದೆ.
ಏನು ಇದರ ವಿಶೇಷ?: ಈ ಬಂದೂಕಗಳಿಂದ ಗುಂಡು ಹಾರಿಸಿದರೆ, ಆ ಗುಂಡು 40 ಚಿಕ್ಕ ತುಕ್ಕಡಿಗಳಲ್ಲಿ ವಿಭಜನೆಗೊಂಡು ಗಲಭೆಕೋರರಿಗೆ ಬಡಿಯುತ್ತದೆ. ಇದನ್ನು ಉಳಿದ ಬೋಲ್ಟ್ ಆ್ಯಕ್ಷನ್ ಪದ್ದತಿ ಮತ್ತು ಲಿವರ್ ಆ್ಯಕ್ಷನ್ ಪದ್ದತಿಗೆ ಹೋಲಿಸಿದ್ದಲ್ಲಿ ಹೆಚ್ಚು ವೇಗವಾದದ್ದು ಮತ್ತು ಗುಂಡು ತುಂಬುವಲ್ಲಿಯೂ ಸುಲಭವಾದದ್ದಾಗಿದೆ. ಇದರಲ್ಲಿರುವ ಗುಂಡುಗಳು ಚಪ್ಪಟೆಯಾಗಿರುವುರಿಂದ ಎದುರಾಳಿಗಳಿಗೆ ಚಿಕ್ಕ ಪುಟ್ಟ ಗಾಯಗಳಾಗಬಹುದೇ ಹೊರತು ಜೀವಕ್ಕೆ ಯಾವುದೇ ಅಪಾಯವಾಗದು ಎಂದು ತಿಳಿಸಲಾಗಿದೆ.
ಆತೀಶ್ ಬಿ ಕನ್ನಾಳೆ

Tarale 3 murthigalu

ಬೀದರಿನ ತರಲೆ ತ್ರಿಮೂತರ್ಿಗಳು...
‘College life is golden life and it’s include many golden memories’ ಎನ್ನುವ ಮಾತು ಎಷ್ಟು ಅರ್ಥಗಭರ್ಿತ ಅಲ್ವಾ?
ನಾನು 2007-08 ನೇ ವರ್ಷದಲ್ಲಿ ಬೀದರ್ನ ಕನರ್ಾಟಕಾ ಕಾಲೇಜ್ನಲ್ಲಿ ಬಿಎ ಪದವಿಯನ್ನು ಮುಗಿಸಿದೆ. ಪಿಯುಸಿಯಲ್ಲೆನೋ ಕಾಲೇಜ್ ಲೈಫ್ನ ಮೊದಲ ಮೆಟ್ಟಿಲೆಂದು ಯಾರ ತಂಟೆಗೂ ಹೋಗದೆ ಕೋಲೆ ಬಸವನಂತೆ ಸುಮ್ಮನಾಗಿ, ಇನೋಸೆಂಟ್ ಬಾಯ್ ಎಂಬ ಬಿರುದನ್ನು ಪಡೆದುಕೊಂಡೆ, ನಂತರ ಡಿಗ್ರಿಯಲ್ಲಿ ಭಂಟ ಸ್ನೇಹಿತರೋಡಗೂಡಿ ತುಂಟಾಟಗಳ ವರಸೆಯನ್ನೆ ನಿಲ್ಲಿಸಿದೆ. ಆ ತುಂಟಾಟಗಳ ಲಿಸ್ಟ್ ಮಾಡಿದರೆ ಗಿನ್ನಿಸ್ ದಾಖಲೆಯಾಗಬಹುದೇನೋ(!)
ಕ್ಲಾಸ್ನಲ್ಲಿ ಕುಳಿತಾಗ ಸಂತೋಷ ಎನ್ನುವ ಸ್ನೇಹಿತ ಬಂದರೆ ಸಾಕು 'ಕ್ರಿಷ್....' ಎಂಬ ಅಡ್ಡಹೆಸರು ಪ್ಲೇ ಬ್ಯಾಕ್ ಮ್ಯೂಸಿಕ್ ಆಗಿ ಹೊರಹೋಮ್ಮುತಿದ್ದಾಗ ಮೇಷ್ಟ್ರು ಕೂಡ ದಂಗು ಬಡಿದು ನಿಲ್ಲುತ್ತಿದ್ದರು. ಸ್ಟ್ಯಾಟಿಸ್ಟಿಕ್ಸ್ ಕ್ಲಾಸ್ ನಡೆದಾಗ ಹಿಂದೆ ಕೂತು ಎಕಾನಾಮಿಕ್ಸ್ ನೋಟ್ಸ್ ಬರೆಯುವುದು ರೂಢಿಯಾಗಿ ಬಿಟ್ಟಿತ್ತು. ಒಂದ್ಸಲ ಸ್ಟ್ಯಾಟಿಸ್ಟಿಕ್ಸ್ ಮೇಷ್ಟ್ರಿಂದ ಉಗಿಸಿ ಕೊಂಡುದ್ದುಂಟು. ಹಾಗು ಎಕಾನಾಮಿಕ್ಸ್ ಮೇಷ್ಟ್ರು ಬಂದು ಕೊರೆಯುವಾಗ ಬಾಲಕೋನಿಯಲ್ಲಿ ಕುಳಿತು ಎಂಪಿ3 ಹಾಡು, ಮೊಬೈಲ್ನಲ್ಲಿ ಗೇಮ್ ಆಡುತ್ತಿದ್ದುದ್ದು, ಆಮೇಲೆ ಚಿಟಿಥಿ ಡಣಜಣಠಟಿ ಎಂದಾಗ ಮೂರು ತರಲೆ ಪ್ರಶ್ನೆಗಳು ಹೊರಹೊಮ್ಮುತ್ತಿದ್ದವು. ಇದರಿಂದ ಇಂಪ್ರೇಸ್ ಆದ ಹುಡುಗಿಯರು ಗ್ರೀನ್ ಸಿಗ್ನಲ್ ಕೂಡ ನೀಡಿದ್ದುಂಟು.
 ಇವೆಲ್ಲಾ ಇಂಡೋರ್ ತುಂಟಾಟಗಳಾದರೆ ಜೌಟ್ಡೋರ್ ತುಂಟಾಟಗಳೆ ಬೇರೆ, ಎನ್ಎಸ್ಎಸ್ ಕ್ಯಾಂಪ್ನಲ್ಲಿ ವರಕ್ಕಾಗಿ ಕಾಯುವ ಮುನಿಯಂತೆ ಸರ್ ಬರುವವರೆಗೆ ಬಿಸಿಲುಕುದುರೆಯಂತೆ ಅಂಡಲೆದು ಎನ್ಎಸ್ಎಸ್ ಸರ್ ಬರುವ ಮುನ್ನ ಗೌಂಡ್ಗೆ ಹಾಜರ್, ಅಟೆಂಡೆನ್ಸ್ ಟೈಮ್ನಲ್ಲಿ ಇದ್ದವರು ನಂತರ ಕಾಣಿಸೋದು ಊಟದ ಸಮಯದಲ್ಲೇ ಎನ್ನಬಹುದು. ಆಮೇಲೆ ಸರ್ ಕೆಲಸ ತುಂಬಾ ಆಯ್ತು ಊಟ ಎಲ್ಲಿ ಅಂತಾ ರಾಜಾರೋಷವಾಗಿ ಕೇಳ್ದಾಗ ಡೋಳ್ಳು ಹೊಟ್ಟೆಯ; ಕುಬ್ಜ ಕಾಯದ ಮೇಷ್ಟ್ರು ಆಯ್ತಪ್ಪಾ ನಡೀರಿ ಅಂತಾ ಹೇಳಿದ್ದೆ ತಡ ಎಲ್ಲಾ ಕೆಲಸ ಬಿಟ್ಟು ಊಟಕ್ಕೆ ಧಾವಿಸುತ್ತಿದ್ದೆವು. ಆ ತರೆಲೆ-ತುಂಟಾಟದ ದಿನಗಳೆ ಹಾಗೆ ಎಂದಿಗೂ ಮರೆಯಲಾಗದು.
ಗ್ರಂಥಾಲಯದ ಮೇಡಂಗಂತೂ ಅಟ್ಟದ ಮೇಲೆ ಕೂರಿಸಿ ಪುಸ್ತಕ ಗಿಟ್ಟಿಸಿಕೊಳ್ಳುವ ವಿದ್ಯೆ ನಮ್ಮಿಂದ ಕಲಿಯಬೇಕು. ಅವರಿಂದ ಪುಸ್ತಕ ಗಿಟ್ಟಿಸಿಕೊಳ್ಳುವುದೆಂದರೆ ನಮಗೆ ನೀರು ಕುಡಿದಷ್ಟು ಸುಲಭ. ಇನ್ನೊಂದು ವಿಷಯ ಹೇಳುವುದು ಮರೆತೆ ಅನ್ಸುತ್ತೆ ನಮ್ಮ ನೋಟ್ಸ್ಗಳಿಗೆ ಸರ್ ಸಹಿ ಹಾಕದೆ ಹೋದಾಗ ಅವರ ಸಿಗ್ನೇಚರ್ ಕಾಪಿ ಕೂಡ ಮಾಡಿದ್ದುಂಟು. ಒಮ್ಮೆ ಸರ್ ಅನುಮತಿ ಇಲ್ಲದೆ ಹೈದ್ರಾಬಾದ್ ಟೂರ್ಗೆ ಹೋಗಿ ಮುಖಕ್ಕೆ ಮಂಗಳಾರತಿ ಮಾಡಿಸಿಕೊಳ್ಬೆಕಾಯ್ತು. ಹೀಗೆ ತ್ರಿಮೂತರ್ಿ ತರಲೆಗಳ ತುಂಟಾಟದ ಬಗ್ಗೆ ಹೇಳುತ್ತಾ ಹೋದರೆ ಪುಸ್ತಕವೇ ಆಗಬಹುದು, ಅದಕ್ಕೆ ಇಲ್ಲಿಗೆ ನಿಲ್ಲಿಸುತ್ತೇನೆ. ನೆನೆಪುಗಳನ್ನು ರಿಫ್ರೇಶ್ ಮಾಡಿಕೋಳ್ಳುವ ಅವಕಾಶ ನೀಡಿದಕ್ಕೆ ಯುವಜನಕ್ಕೆ ತುಂಬಾ ಧನ್ಯವಾದಗಳು.
ಆತೀಶ ಬಿ ಕನ್ನಾಳೆ

ಯುಪಿ ಸಕರ್ಾರವೇನು ಮಲಗಿದೆಯೇ? 
(IS UP GOVERNMENT SLEEPING.....?)

'ಅತಿಥಿ ದೇವೋಭವ' ಎನ್ನುವ ಮಾತೊಂದಿದೆ ನಮ್ಮಲ್ಲಿಗೆ ಯಾವ ದೇಶ ಜನ ಬಂದರೂ, ಸತ್ಕರಿಸುವ ಶ್ರೀಮಂತ ಸಂಸ್ಕೃತಿ ನಮ್ಮದು. ಆದರೆ, ಇಂಥ ಸಂಸ್ಕೃತಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿರುವುದನ್ನು ನೋಡಿದರೆ ನಿಜಕ್ಕೂ ಖೇದವೆನಿಸುತ್ತದೆ.
ಜುಲೈ 2009 ರಲ್ಲಿ ನಾನು ಮತ್ತು ನನ್ನ ಸ್ನೇಹಿತ ದೆಹಲಿ ಪ್ರವಾಸಕ್ಕೆ ಹೋಗಿದ್ದೆವು. ತಿರುಗಿ ಬರುವಾಗ ತಾಜ್ಮಹಲ್ ನೋಡಬೇಕೆನ್ನುವ ಆಸೆ ನಮ್ಮದಾಗಿತ್ತು. ಹಾಗೆ ಪರಿಚಿತರಿಗೆ ಹೋಗಬೇಕಾದ ಮಾರ್ಗವನ್ನು ಕೇಳಿದೆವು. ಅವರು ಸರಿ ಮಾಹಿತಿ ನೀಡಿ, ಮಧ್ಯವತರ್ಿಗಳಿಂದ ಸ್ವಲ್ಪ ಎಚ್ಚರ ವಹಿಸಬೇಕೆಂದು ಹೇಳಿದರು.
ರೈಲಿನ ಮೂಲಕ ಆಗ್ರಾ ರೈಲು ನಿಲ್ದಾಣದಲ್ಲಿ ಇಳಿದಿದ್ದೆ ತಡ ಅಲ್ಲಿದ್ದ ಕೆಲವು ಮಧ್ಯವತರ್ಿಗಳು ಸತ್ತ ಹೆಣವನ್ನು ಹದ್ದುಗಳು ಆಕ್ರಮಿಸುವಂತೆ ನಮ್ಮನ್ನು ಸುತ್ತುವರೆದರು. ಏನನ್ನು ವಿಚಾರಿಸದೆ ಅಸಭ್ಯವಾಗಿ ವರ್ತನೆ ಮಾಡಲಾರಂಭಿಸಿದರು. ನಮ್ಮ ಕೈಗಳಲ್ಲಿದ್ದ ಬ್ಯಾಗ್ಗಳನ್ನು ಕಿತ್ತುಕೊಂಡು ಯಂಹಾ ಪೇ ದೇಖನೆಕೆ ಲಿಯೆ 5-6 ಜಗಹ ಹೇ, ಆಪಕೊ ಹಮ್ ಸಬ್ ದಿಖಾದೆಂಗೆ ಚಲಿಯೆ ಎಂದು ಒತ್ತಡ ಹೇರಲು ಆರಂಭಿಸಿದರು. ನಾವು ಅವರಿಂದ ತಪ್ಪಿಸಿಕೊಳ್ಳಬೇಕೆಂದು, ಒಂದೆರಡು ಕಿ.ಮಿ. ಕಾಲ್ನಡಿಗೆಯಲ್ಲಿಯೆ ಕ್ರಮಿಸಿದೆವು. ಆದರೂ ಅವನು ನಮ್ಮ ಬೆನ್ನು ಬಿಡದೆ ಹಿಂದೆಯೇ ಬಿದ್ದಿದ್ದ. ಮತ್ತು ಹಿಂದಿಯಲ್ಲಿ ಅಸಹ್ಯವಾಗಿ ಬೈಯಲಾರಂಬಿಸಿದ, ಹೇಗಾದರೂ ಮಾಡಿ ಅವನಿಂದ ತಪ್ಪಿಸಿಕೊಳ್ಳಬೇಕೆಂದು ರಿಕ್ಷಾ ಹಿಡಿದು ತಾಜ್ಮಹಲ್ ಕಡೆಗೆ ಹೊರೆಟೆವು. ಅಬ್ಬಾ! ಅಂತೂ ಶನೇಶ್ವರನ ಕಾಟ ತಪ್ಪಿತು ಎನ್ನುವಷ್ಟರ ಹೊತ್ತಿಗೆ 'ಹೋದೆ ಗವಾಕ್ಷಿ ಎಂದರೆ ಬಂದೆ ಕಾಮಾಕ್ಷಿ' ಎನ್ನುವ ಮಾತಿನಂತೆ ರಿಕ್ಷಾದವನು ಒಂದು ಮನೆಯ ಮುಂದೆ ನಿಲ್ಲಿಸಿ, ನಿಮ್ಮ ಬ್ಯಾಗ್ಗಳನ್ನು ಇಲ್ಲೆ ಇಡಿ ಎಂದು ಧಿಮಾಕಿನ ಧಾಟಿಯಲ್ಲಿ ಹೇಳಿದ. ಆದರೆ ನಾವು ರಾತ್ರಿ ಹೊಗಬೇಕಾದುದ್ದರಿಂದ ನಿರಾಕರಿಸಿದೆವು. ಆದರೆ ಅವನು ಹಿಟ್ಲರ್ನಂತೆ ಸವರ್ಾಧಿಕಾರ ಮಾಡಲಾರಂಭಿಸಿದ. ನಾವೂ ಸಹ ಖಡಾಖಂಡಿತವಾಗಿ ತಿರಸ್ಕರಿಸಿದ್ದರಿಂದ ನಮ್ಮನ್ನು ಅರ್ಧ ದಾರಿಯಲ್ಲೆ ಇಳಿಸಿ ಅಲ್ಲಿಂದ ಅವನು ಪಾರಾದ. ಆದರೆ ಧರ್ಮಸಂಕಟಕ್ಕೆ ನಾವು ಸಿಕ್ಕಿಬಿದ್ದೆವು. ನಂತರ ಆಟೋ ಹಿಡಿದು ತಲುಪಬೇಕಾದ ಸ್ಥಳ ಅನತಿ ದೂರದಲ್ಲಿರುವುದನ್ನು ನೋಡಿ ನಿಟ್ಟುಸಿರು ಬಿಟ್ಟೆವು.
ಮುಂದೆ ತಾಜ್ಮಹಲ್ ಕಡೆಗೆ ಹೋಗುತ್ತಿರುವಾಗಲೆ ಮತ್ತೊಬ್ಬ ಮಧ್ಯವತರ್ಿ ಬಂದು ಲಗೇಜ್ ಇಲ್ಲೆ ಇಡಿ, ಒಳಗೆ ಪ್ರಮುಖ ಸ್ಥಳಗಳನ್ನು ತೊರಿಸುತ್ತೇನೆಂದು ಹೇಳಿದ, ಅಲ್ಲೇ ಪಕ್ಕದಲ್ಲಿ ಪ್ರೇಕ್ಷಕರಿಗಾಗಿ ಸಕರ್ಾರದಿಂದ ಲಾಕರ್ ವ್ಯವಸ್ಥೆ ಮಾಡಲಾಗಿದೆ. ಆದರೆ ಅವನು ನಮಗೆ ಆ ಕಡೆಗೆ ಹೋಗಲು ಬಿಡುತ್ತಿಲ್ಲ. ಈ ಸಮಸ್ಯೆಯಿಂದ ಯಾವ ರೀತಿ ಪಾರಾಗಬೇಕೆಂದು ಯೋಚಿಸುತ್ತಿರುವಾಗಲೆ ಅಲ್ಲೊಬ್ಬ ಪೊಲೀಸ್ ಅಧಿಕಾರಿ ಕಾಣಿಸಿದ ಇವರಿಗೆಲ್ಲಾ ಖಾಕಿಯೇ ಸರಿಯಾದ ಮದ್ದು ಎಂದು ಪೊಲೀಸ್ ಕಡೆಗೆ ಹೋಗಿ ಎಲ್ಲಾ ವಿವರಿಸಿದೆ. ವಿಪಯರ್ಾಸವೆಂದರೆ ಅವನು ಕೂಡ ಮಧ್ಯವತರ್ಿಯನ್ನು ಬೆಂಬಲಿಸತೊಡಗಿದ ಕೊನೆಗೆ ಚಕಾರವೆತ್ತದೆ ಅಲ್ಲಿಂದ ಲಾಕರ್ ಕಡೆಗೆ ಧಾವಿಸಿದೆ. ಅಂತು ಇಂತು ಹೇಗೋ ಮಾಡಿ ಅಲ್ಲಿಂದ ಪಾರಾದೆವು.
ನೀವೆ ಯೋಚಿಸಿ... ದಿನಕ್ಕೆ ನೂರಾರು ಜನ ಬಂದು ಹೋಗುವ ಇಂತಹ ಪ್ರಮುಖ ಐತಿಹಾಸಿಕ ಸ್ಥಳಗಳಲ್ಲಿ ಮಧ್ಯವತರ್ಿಗಳ ಹಾವಳಿ ಇಷ್ಟೊಂದು ರಾಜಾರೋಷವಾಗಿ ನಡೆಯುತ್ತಿರುವಾಗ, ಉತ್ತರ ಪ್ರದೇಶ ಸಕರ್ಾರವೇನು ಮಲಗಿದೆಯೇ? ಒಂದು ವೇಳೆ ಇಂಥ ಕೃತ್ಯಗಳಿಗೆ ಸೊಪ್ಪು ಹಾಕುವ ಕೆಲಸ ಹೀಗೆ ಮುಂದುವರಿದರೆ ಐತಿಹಾಸಿಕ ಸ್ಥಳಗಳು ಮಧ್ಯವತರ್ಿಗಳ ತಾಣಗಳಾಗಬಹುದು, ಎಚ್ಚರಿಕೆ.
ಆತೀಶ ಬಿ ಕನ್ನಾಳೆ
ಪ್ರೀತಿಯ ಬಂಗಲೆಗೆ ಧರ್ಮದ ತಳಹದಿ
ನೋಡಮ್ಮ ಈಗ ತಾನೇ ಕಾಲೇಜ್ ಎಂಟರ್ ಆಗಿದಿಯಾ, ನಿನ್ ಹೈಸ್ಕೂಲ್ ಬುದ್ಧಿ ಎಲ್ಲಾ ಬಿಟ್ಟು ಡಿಸೆಂಟ್ ಆಗಿರಬೇಕು. ಓದಿನ ಕಡೆಗೆ ಹೆಚ್ಚು ಗಮನ ಹರಿಸಬೇಕು. ಎನ್ನುವುದು ಪ್ರತಿಯೊಂದು ಮನೆಯಲ್ಲಿ ಕೇಳಿಬರುವ ಕಾಳಜಿಯ ಕಿವಿಮಾತಾಗಿದೆ.
ಹುಡುಗಿಯರಲ್ಲಿ ಈ 16 ಎನ್ನುವ ವಯಸ್ಸು ಚಿಟ್ಟೆಯಲ್ಲಿ ಆಗುವ ಬದಲಾವಣೆಯಂತೆ ಅವರಲ್ಲಿ ಅನೇಕ ಹಾಮರ್ೋನ್ಗಳ ಬದಲಾವಣೆಯಿಂದಾಗಿ ಅವರ ಉಡುಗೆ-ತೊಡುಗೆ, ಭಾವನೆ, ಮಾತಿನ ಶೈಲಿ ಎಲ್ಲಾ ಬದಲಾಗಿ ವಿರುದ್ಧ ಲಿಂಗಗಳ ಕಡೆಗೆ ಆಕಷರ್ಿಸುತ್ತದೆ. ಈ ಸಮಯದಲ್ಲಿ ಅವರು ಇನ್ಫ್ಯಾಕ್ಚ್ಯುಯೇಷನ್ ಲವ್ಗೆ ಸುಲಭವಾಗಿ ಒಳಗಾಗುತ್ತಾರೆ.
ಸಾಮಾನ್ಯವಾಗಿ 10 ವರ್ಷಗಳ ಹಿಂದಿನ ಕಾಲೇಜು ಯುವತಿಯರ ಕಡೆಗೆ ಕಣ್ಣು ಹಾಯಿಸುವುದಾದರೆ ಅವರು ಒಬ್ಬ ಹುಡುಗನನ್ನು ಕಣ್ಣೆತ್ತಿ ನೋಡುತ್ತಿರಲಿಲ್ಲ. ಒಂದು ವೇಳೆ ನೋಡಿದರು ಅವನನ್ನು ಪರೀಕ್ಷಿಸಿ ಅವನ ಬೇಕು-ಬೇಡಗಳನ್ನು, ಎಲ್ಲಾದಕ್ಕಿಂತ ಹೆಚ್ಚಾಗಿ ನಡತೆಯನ್ನು ಸಾಣೆಗಲ್ಲಿಗೆ ಹಾಕಿ ತಿಕ್ಕುತ್ತಿದ್ದರು. ಒಂದು ವೇಳೆ ಆ ಹುಡುಗನ ಗುಣ ಅಪ್ಪಟ ಚಿನ್ನ ಎಂದು ಖಾತ್ರಿಯಾದ್ದಲ್ಲಿ ಪ್ರೇಮ ಪತ್ರಕ್ಕೆ ರುಜುಹಾಕುತ್ತಿದ್ದರು. ಹಾಗೂ ಆ ಪ್ರೀತಿ ಇಬ್ಬನಿಯಷ್ಟು ಪರಿಶುದ್ಧವಾಗಿರುತ್ತಿತ್ತು. ಅಲ್ಲಿ ಭಾವನೆಗಳ ಸಮಾಗಮವಿರುತ್ತಿತ್ತೆ ಹೊರತು ಲೈಂಗಿಕ ತೃಷೆಯಲ್ಲ. ಸಮಾಜವನ್ನು ದೃಷ್ಟಿಕೋನದಲ್ಲಿಟ್ಟುಕೊಂಡು, ಮನೆಯ ಪರವಾನಗಿ ಪಡೆದು ಮದುವೆಯ ನಂತರವೇ ಆ ಪ್ರೀತಿ ಬೆಡ್ರೂಂ ಪ್ರಣಯಕ್ಕೆ ನಾಂದಿ ಹಾಡುತ್ತಿತ್ತು.
ಆದರೆ ಇಂದಿನ 21 ನೇ ಶತಮಾನದ ಪ್ರೀತಿ ಯಂತ್ರಗಳಷ್ಟೇ ಭಾವನಾರಹಿತ ಹಾಗೂ ನಿಸ್ಸಾರಗೊಂಡಿದೆ. ಇಲ್ಲಿ ಪ್ರೀತಿ ಆರಂಭವಾಗುವುದೆ (ದೈಹಿಕ) ಚರಮ ಸುಖಕ್ಕಾಗಿ. ಇಂದು ಪ್ರೀತಿ ಎಂದರೆ ಬೆಡ್ರೂಂ ಎನ್ನುವಷ್ಟರ ಮಟ್ಟಿಗೆ ಪ್ರೀತಿಯ ವ್ಯಾಖ್ಯೆ ಅಗ್ಗವಾಗಿದೆ.
ಇಂಥ ಅವಕಾಶಗಳನ್ನು ಉಪಯೋಗಿಸಿಯೇ ಕೆಲವು ಧಮರ್ಾಂಧರು ಲವ್ ಅನ್ನು ಜಿಹಾದ್ ಆಗಿಸಿದ್ದಾರೆ. ಇಂದಿನ ಹುಡುಗಿಯರು ಹೊರಗಿನ ಸೌಂದರ್ಯ ನೋಡುವುದರ ಮೂಲಕ ಹುಡುಗರನ್ನು ಪ್ರೀತಿಸುತ್ತಾರೆ. ಹಾಗೂ ಅದು ಮುಂದೆ ಬಾರ್, ರೆಸ್ಟೋರೆಂಟ್ ಮತ್ತು ಲಾಡ್ಜ್ಗಳವರೆಗೆ ಮುಂದುವರಿಯುತ್ತದೆ. ಇದರ ಪ್ರತಿಫಲ ಎಷ್ಟುದಿನ ಮುಚ್ಚಿಡಲು ಸಾಧ್ಯ. ಕೊನೆಗೆ ಸಮಾಜದ ದೃಷ್ಟಿಯಲ್ಲಿ ಹೇಯವಾದ ಕೃತ್ಯಮಾಡಿದ ಯುವತಿಯರು ವಾಸ್ತವಕ್ಕೆ ಮರುಳುತ್ತಾರೆ. ಆಗ ಅವರ ತಲೆಯ ಪಿತ್ತ ಕಾಲಿಗಿಳಿಯುತ್ತದೆ. ಇದಕ್ಕಾಗಿಯೇ ಬಕಪಕ್ಷಿಯಂತೆ ಕಾಯುವ ಜಿಹಾದಿಗಳು ಬಲವಂತವಾಗಿ ಮಂತಾತರ ಮಾಡುತ್ತಾರೆ. ಇಂಥ ಎಷ್ಟೋ ಘಟನೆಗಳು ಇಂದು ಮಾಧ್ಯಮದಲ್ಲಿ ಸುದ್ದಿ-ಗದ್ದಲವನ್ನು ಎಬ್ಬಿಸಿವೆ. ಈ ನಿಟ್ಟಿನಲ್ಲಿ ಧಮರ್ಾಂಧ ಜನರಿಗಿಂತ ಮೋಸ ಹೋಗಿರುವ ಯುವತಿಯರದ್ದೂ ತಪ್ಪೆನ್ನಬಹುದು. ತಮ್ಮ ವಾಂಛೆಗಳನ್ನು ಪೂರೈಸಿಕೊಳ್ಳುವ ಯುವಕರು ನೂರುಜನ ನಿಂತರು. ತಾನು ಸಂಯಮ ಕಳೆದುಕೊಳ್ಳದೆ ಇದ್ದಲ್ಲಿ ಇಂಥ ಮತಾಂತರ ಪ್ರಕರಣಗಳಾಗಲು ಸಾಧ್ಯವೇ ಇಲ್ಲ.

ಪ್ರೀತಿ ಎಂಬ ಬಂಗಲೆಗೆ, ಧರ್ಮವೆಂಬ ತಳಹದಿಯನ್ನು ಹಾಕಿಕೊಂಡಿರುವುದು ಎಷ್ಟು ಸೂಕ್ತ? ಇದು ಕುರಿಯ ವೇಷದಲ್ಲಿರುವ ತೋಳಗಳ ಹೊಸ ಅವತಾರವೇ ಆಗಿದೆ. ಅವರನ್ನು ಹಿಡಿಯುವುದು ತುಂಬಾ ಕಷ್ಟ. ಆದರೆ ಹುಡುಗಿಯರೇ ನೀವು ಪ್ರೀತಿಯ ಮತ್ತಿನಿಂದ ಕೆಳಗಿಳಿದು, ವಾಸ್ತವಿಕತೆಯ ಕಡೆಗೆ ಚಿತ್ತ ಕೇಂದ್ರಿಕರಿಸಿ, ಪ್ರೀತಿಸುವ ಮುನ್ನ ಯೋಚಿಸಬೇಕು. ಬಾಹ್ಯ ಸೌಂದರ್ಯವನ್ನಲ್ಲದೆ ಆಂತರಿಕ ಸೌಂದರ್ಯವನ್ನು ಒರೆಹಚ್ಚುವುದಾದರೆ ಇವರ ಮೇಲೆ ಅಂಕುಶವಿಡಲು ಸಾಧ್ಯ. ಆದ್ದರಿಂದ ಪ್ರೀತಿ ಎಂಬ ಭವ್ಯ ಬಂಗಲೆಗೆ ಪ್ರವೇಶಿಸುವ ಮುನ್ನ ಅದರ ತಳಹದಿಯನ್ನು ಪರೀಕ್ಷಿಸಿ ತಾಳೆಹಾಕಿ. ಇಲ್ಲವಾದ್ದಲದಲ್ಲಿ, ನಿಮ್ಮ ಜೀವನ ನೀರು ಪಾಲಾಗಬಹುದು. ಏನಂತಿಯಾ ಸಖಿ..?
ಆತೀಶ ಬಿ ಕನ್ನಾಳೆ
ಆಹಾ ಎಂಥಾ 
 ಆ ಕ್ಷಣ ನೆನೆದರೆ ತಲ್ಲಣ
(ರಂಗು ರಂಗಿನ ಕೊನೆಯ ಕ್ಷಣಗಳು)


ಇದು ನಮ್ಮ ಸ್ನಾತಕೋತ್ತರ ಪತ್ರಿಕೋದ್ಯಮದ ಅಂತಿಮ ವರ್ಷ ಇನ್ಮುಂದೆ ಣಣಜಜಟಿಣ ಟಜಿಜ ಅನ್ನೋ ಉಠಟಜಜಟಿ ಠಿಜಡಿಠಜ ಮುಗಿಯಿತು. ಕಾಲೇಜು ಜೀವನದ ರಂಗು-ರಂಗಿನ ಕ್ಷಣಗಳು, ಸ್ನೇಹಿತರೊಂದಿಗೆ ಕಳೆದ ಸುಮಧುರ ದಿನಗಳು ವಾಪಸ್ ಬರ್ಲಿಕ್ಕಿಲ್ಲ. ಎಂಬ ಕಾರಣಕ್ಕೆ ಈ ಸಲದ ಹೋಳಿ ಏನಿದ್ದರೂ ಫ್ರೆಂಡ್ಸ್ ಜೊತೆಗೆ ಕ್ಯಾಂಪಸ್ನಲ್ಲಿಯೆ ಆಚರಿಸಬೇಕು. ಒಂದು ವೇಳೆ ಇದು ಮಿಸ್ ಆದ್ರೆ ಬಹುಶಃ ಇಂಥ ಜಟಿರಿಠಥಿಚಿಛಟಜ ಟಜಟಠಡಿಥಿ ಇನ್ಮುಂದೆ ಸಿಗೋದು ದುರ್ಬರ ಎಂದು ನಿಶ್ಚಯಿದೆವು.

ಅದರಂತೆ ಪ್ರಾರಂಭದ ರಂಗು-ರಂಗಿನ ದಿನಚರಿ, ಮೈ-ಮುಖವನ್ನೆಲ್ಲಾ ರಂಗು-ರಂಗಾಯಿಸಿತು. ಯಾಕೋ ಏನೋ ಬಟ್ಟೆ ತೊಡೋದು ಅಲಜರ್ಿ ಅನ್ಸುತ್ತೆ. ಬಂದ ಪ್ರತಿಯೊಬ್ಬ
ಆಸಾಮಿಯ ಬಟ್ಟೆ ಚಿಂದಿ-ಚಿಂದಿಯಾಗಿಸಿ ಅವರನ್ನು ರಂಗಿನಲ್ಲಿ ಮುಳುಗಿಸಿದೆವು. 'ಪಾಪ ರಂಗು ಬ್ಯಾಡಾ, ಗಿಂಗು ಬ್ಯಾಡಾ' ಎಂದು ಯಾರ ಸಹವಾಸಕ್ಕೂ ಬಾರದೆ, ಯಾರಿಗೂ ಹೇಳದೆ ಅಂಡೆಪಿಕರ್ಿಯಂತೆ ಟೆರಸ್ ಮೇಲೆ ಅಡ್ಡಾಡುತ್ತಿದ್ದ ಸ್ನೇಹಿತ ಸಿದ್ದಯ್ಯನ ಸುಳಿವು ಸಿಕ್ಕಿದ್ದೇ ತಡ ಅವನ ಬೆನ್ನಟ್ಟಿ ಹೊಸ ಶ್ವೇತ ವಸ್ತ್ರಕ್ಕೆ ಕ್ಷಣದಲ್ಲಿ ಕಾಮನ ಬಿಲ್ಲಿನ ಬಣ್ಣಗಳಿಂದ ಆವೃತಗೊಳಿಸಿದೆವು. ಹೀಗೆ ನಮ್ಮ ಎಲ್ಲಾ ಸ್ನೇಹಿತರು ಸೇರಿ ರಂಗಿನ ಗುಂಗಲ್ಲಿ ರಂಗಾಗಿ ಹೋದೆವು.
ಅಷ್ಟೂ ಸಾಲದ್ದಕ್ಕೆ ರಸ್ತೆಯಿಂದ ಹಾದು ಹೋಗುತ್ತಿದ್ದ ದಾರಿಹೋಕರಿಗೂ ಸುಮ್ಮನೆ ಬಿಡಲಿಲ್ಲ. ಎಷ್ಟಾದರೂ ಕಪಿಬುದ್ಧಿ ಸುಮ್ಮನಿರಬೇಕಲ್ವಾ? ಮತ್ತೆ ನಮ್ಮ ವಿಶ್ವವಿದ್ಯಾಲಯದ ಗ್ರಂಥಪಾಲಕರ ಮನೆಯಲ್ಲಿ ಸ್ವೀಟ್ಸ್ ಮಾಡಿದ್ದಾರೆ ಅನ್ನೋ ವಿಷಯ ತಿಳಿದಿದ್ದೆ ತಡ ಲಬೊ... ಲಬೋ... ಬೊಬ್ಬೆ ಹಾಕುತ್ತಾ ಕ್ವಾರ್ಟಸರ್್ ಕಡೆಗೆ ಧಾವಿಸಿ ಅವರ ಮೇಲೂ ಒಲವಿನ ಬಣ್ಣವನ್ನು ಎರಚಿದೆವು. ಈ ರೀತಿ ಬಣ್ಣಗಳ ಹಬ್ಬ ಕ್ಯಾಂಪಸ್ನಲ್ಲಿಯೇ ನೆರವೇರಿತು. ಓ ಸಾರಿ ಮರೆತೆ ಬಿಟ್ಟೆ, ನೆನಪಿಗೋಸ್ಕರ ಫೋಟೋಗಳನ್ನು ಸಹ ಕ್ಲಿಕ್ಕಿಸಿಕೊಂಡೆವು. ಇಂಥ ಕಲರ್ಫುಲ್ ಡೇಸ್ನಲ್ಲಿ ಮತ್ತಷ್ಟು ಕಲರ್ ನೀಡಿದ ಈ ಬಣ್ಣದ ಹಬ್ಬಕ್ಕೆ ತುಂಬಾನೆ ಚಿರರುಣಿ ಹಾಗೂ ಯುವಜನಕ್ಕೂ ಸಹ, wish u all the best for all my dearest friends..... 

ಆತೀಶ ಬಿ ಕನ್ನಾಳೆ
ಯುಸ್ಲೆಸ್ ಅಲ್ಲ, ಯುಸ್ಡ್ಲೆಸ್'.....!

`ನಮ್ಮ ಯುವಕರು ಯುಸ್ಲೆಸ್ ಅಲ್ಲ, ಯುಸ್ಡ್ಲೆಸ್' ಎಂಬ ವಿವೇಕಾನಂದರ ಮಾತು ಎಷ್ಟು ಅರ್ಥಗಭರ್ಿತ ಅಲ್ಲವೆ?
ಇಂದು ಅಮೇರಿಕಾ, ಆಸ್ಟ್ರೇಲಿಯಾ, ಬ್ರೆಜಿಲ್, ಚೀನಾ ಮುಂತಾದ ದೇಶಗಳಿಗೆ ಸಾಫ್ಟ್ವೇರ್ ಇಂಜಿನಿಯರ್ಗಳನ್ನು, ಸಂಶೋಧಕರನ್ನು ಬಹುಪಾಲು ನೀಡುತ್ತಿರುವುದು ನಮ್ಮ ಭಾರತ ಎಂದು ಹೆಮ್ಮೆಯಿಂದ ಹೇಳಬಹುದು. ಅವರು ಭಾರತೀಯರಾದರೂ ಇತರೆ ರಾಷ್ಟ್ರಗಳಲ್ಲಿ ತಮ್ಮ ನಿರಂತರ ಪ್ರಯತ್ನ ಹಾಗೂ ಕಠಿಣ ಪರಿಶ್ರಮದಿಂದ ಹಲವು ಸಾಧನೆಗಳನ್ನು ಮಾಡುತ್ತಿದ್ದಾರೆ. ಅದೇ ಯುವಕರು ಭಾರತದಲ್ಲಿ ತಮ್ಮ ಜ್ಞಾನ, ಚಾತುರ್ಯಗಳಿಗೆ ಶೆಡ್ಡು ಹೊಡೆದು ಆಕುಂಚನಗೊಂಡು ಕುಳಿತಿರುವುದನ್ನು ನೋಡಿದರೆ ವಿಪಯರ್ಾಸ ಎನಿಸುತ್ತದೆ.

ಅದಕ್ಕಾಗಿಯೇ ವಿವೇಕಾನಂದರು, ನಮ್ಮ ಯುವಕರಲ್ಲಿ ಕಾರ್ಯ ಸಾಧಿಸುವ ಬಲ, ಜ್ಞಾನ, ಎದೆಗಾರಿಕೆ ಎಲ್ಲವು ಇದೆ. ಅಂದರೆ ಇದರರ್ಥ ಅವರು ಣಜಟಜ ಅಲ್ಲ, ಬದಲಿಗೆ ಣಜಜ ಟಜ ಆಗಿದ್ದಾರೆ ಎಂದರ್ಥ.
ಇದಕ್ಕೆ ಹಲವು ಉದಾಹರಣೆಗಳನ್ನು ನಮ್ಮೆದುರಿಗಿವೆ, ಪರೀಕ್ಷೆಗಳನ್ನು ರಾತ್ರೋರಾತ್ರಿ ಓದಿ 60-70 ಶೇಕಡವಾರು ಫಲಿತಾಂಶವನ್ನು ಗಳಿಸುವಷ್ಟು ಚಾಕಚಕ್ಯತೆ ಹೊಂದಿರುವ ಇವರಿಗೆ ಯಾರು ತಾನೆ ಣಜಟಜ ಅನ್ನಲು ಸಾಧ್ಯ. ಅದೇ ಸ್ವಲ್ಪ ಪರಿಶ್ರಮಪಟ್ಟು ಮೊದಲಿನಿಂದಲೇ ಓದಿ ಪರೀಕ್ಷೆಗೆ ಸಿದ್ಧವಾದರೆ, ನೀವೇ ಯೋಚಿಸಿ ಅವರು ಎಂಥ ಸಾಧನೆಗಳನ್ನು ಮಾಡಬಹುದಲ್ಲವೆ?

ಈ ಎಲ್ಲಾ ವಿಷಯಗಳನ್ನು ಕೊಂಚ ಬದಿಗೊತ್ತಿ ಯೋಚಿಸುವುದಾದರೆ, ಯುವಕರು ಇಂದು ಯಾಕೆ ಕಡಿಮೆ ಉಪಯೋಗಿಸಲ್ಪಡುತ್ತಿದ್ದಾರೆ. ಇದೇನು ಆಷರ್ೇಯವೋ? ಜಾಢ್ಯವೋ? ಅಥವಾ ಮಾರ್ಗದರ್ಶನದ ಕೊರತೆಯೋ? ಇದಕ್ಕೆ ಸೂಕ್ತ ಸಲ್ಯೂಷನ್ ಕೂಡ ವಿವೇಕಾನಂದರೆ ನೀಡುತ್ತಾರೆ. ಅದೇನೆಂದರೆ, 'ನಮ್ಮ ಯುವಕರಿಗೆ ಬೇಕಾದದ್ದು ಸರಿಯಾದ ಮಾರ್ಗದರ್ಶನ' ಅದೊಂದು ದೊರೆತರೆ ಸಾಕು, ನಾವು ಏನನ್ನು ಬೇಕಾದರೂ ಸಾಧಿಸಬಹುದಗಿದೆ.
ನಮ್ಮ ರಾಷ್ಟ್ರದ ಐತಿಹ್ಯವನ್ನು ಕೆದಕಿ ನೋಡಿದಾಗ, ಯುವಕರ ಪಾತ್ರ ಮಹತ್ವದ್ದಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಜೀವವನ್ನೇ ಒತ್ತೆ ಇಟ್ಟು ಬ್ರಿಟೀಷರ ವಿರುದ್ಧ ಹೋರಾಡಿದವರು ಯುವಕರೆ, ಕಾಗರ್ಿಲ್ ಯುದ್ಧದಲ್ಲಿ ವೈರಿಗಳ ಗುಂಡಿಗೆ ಎದೆಯೊಡ್ಡಿ ಭಾರತವನ್ನು ರಕ್ಷಿಸಿದವರು ಈ ಯುವಕರೆ, ಅಷ್ಟೆ ಯಾಕೆ ಮುಂಬೈ ದಾಳಿಯಲ್ಲಿ ಉಗ್ರವಾದಿಗಳನ್ನು ಸೇದೆಬಡಿದ ಎನ್ಎಸ್ಜಿ ಕಮಾಂಡೊ ಸಂದೀಪ್ ಉನ್ನಿಕೃಷ್ಣನ್ ಕೂಡ ಒಬ್ಬ ಯುವಕನೆ ಅಲ್ಲವೆ? ಹೀಗಿರುವಾಗ ಇಂದಿನ ಯುವಕರಿಗೆ ಏನಾಗಿದೆ, ಅವರು ಏಕೆ ಡ್ರಗ್ಸ್, ಅಫೀಮು, ಮಧ್ಯಪಾನ ಹಾಗೂ ರಾಜಕೀಯ ವ್ಯಕ್ತಿಗಳ ಕೈಗೊಂಬೆಗಳಾಗಿ ಮಾರ್ಪಡುತ್ತಿದ್ದಾರೆ? ಇವುಗಳೇನು ಯಕ್ಷಪ್ರಶ್ನೆಗಳಲ್ಲ!

ಹೀಗೆ ನಮ್ಮ ಯುವಜನತೆ ಅಂಡೆಪಿಕರ್ಿಗಳಂತೆ ವತರ್ಿಸಲು ಮೂಲ ಕಾರಣ ಅವರಿಗೆ ಸೂಕ್ತ ಮಾರ್ಗದರ್ಶನ ಇಲ್ಲದಿರುವುದೆ ಎಂದು ಕಡ್ಡಿ ಮುರಿದಷ್ಟು ಸುಲಭವಾಗಿ ಹೇಳಬಹುದು.  ಅದಕ್ಕಾಗಿಯೇ ನಮ್ಮ ಯುವಕರಿಗೆ ಬೇಕಾದದ್ದು ಸರಿಯಾದ ಮಾರ್ಗದರ್ಶನ ಎಂಬ ವಿವೇಕಾನಂದರ ಮಾತು  ನಾವು ನಂಬಿ ಅದರಂತೆ ಪಾಲಕರು ತಮ್ಮ ಮಕ್ಕಳ ಭವ್ಯ ಭವಿಷ್ಯತ್ತಿಗೆ ನಾಂದಿ  ಹಾಡಬೇಕಾದಲ್ಲಿ ಅವರು ಎಷ್ಟೇ ಛಣಥಿ ಆಗಿದ್ದರೂ ಸಹ ಮಾರ್ಗದರ್ಶನ ನೀಡಲೇಬೇಕು ಇಲ್ಲವಾದಲ್ಲಿ ಯುವಜನತೆ ಣಜಜ ಟಜ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಏನಂತಿರಾ.....? 

ಆತೀಶ ಬಿ ಕನ್ನಾಳೆ