Sunday, December 25, 2011

Interview with Action Star

ಅಕ್ಷಯ್ ಫಿಟ್ನೆಸ್ ಗುಟ್ಟು..

ನೆಲದ ಮೇಲೆ ಚಂಡಿನಂತೆ ಪುಟಿಯುವ, ಪಾದರಸದಷ್ಟು ಚುರುಕು, ರಬ್ಬರ್ನಂತೆ ಹಾರುವ, ಅಪೂರ್ವ ನಟನೆ ಹಾಗೂ ಆಕರ್ಷಕ ಮೈಮಾಟದಿಂದ ಅಭಿಮಾನಿಗಳ ಮನಸಿನಲ್ಲಿ ಕ್ಷಯವಾಗದೇ ಉಳಿದುಕೊಂಡಿರುವ ಅಕ್ಷಯ್ ಅಭಿನಯ ನಿಜಕ್ಕೂ ರೋಚಕ.
ಫಿಸಿಕಲ್ ಫಿಟ್ನೆಸ್ಗೆ ಹೆಸರುವಾಸಿಯಾದ ಈತನ ಫಿಟ್ನೆಸ್ ಮಂತ್ರದ ಗುಟ್ಟು ಅವರದೇ ಮಾತಲ್ಲಿ ಕೇಳೋಣ,
ಅಕ್ಷಯ್ ದೃಷ್ಟಿಯಲ್ಲಿ ಆರೋಗ್ಯವಂತರೆಂದರೆ, ಬರೀ ದೈಹಿಕವಾಗಿ ಫಿಟ್ ಇರೋರಲ್ಲ. ಬದಲಿಗೆ, ಮಾನಸಿಕವಾಗಿಯೂ ಅಷ್ಟೇ ಸದೃಢರಾಗಿರಬೇಕು. ಅಂದರೆ, ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಮತೋಲನ ಕಾಯ್ದುಕೊಂಡಿರಬೇಕು. ಸಮಯಕ್ಕೆ ಸರಿಯಾಗಿ ಮಲಗುವುದು ಹಾಗೂ ಏಳುವುದು, ಆಹಾರ ಸೇವನೆಯಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕು. ಅಲ್ಕೋಹಾಲ್ ಹಾಗೂ ಮಾದಕ ಪದಾರ್ಥಗಳನ್ನು ಆದಷ್ಟು ಅವೈಡ್ ಮಾಡುವುದೇ ಸೂಕ್ತ ಎನ್ನುತ್ತಾರೆ `ಆ್ಯಕ್ಷನ್ ಕಿಂಗ್.'
ಮಾತು ಮುಂದುವರಿಸಿದ ಅವರು, ಇತ್ತೀಚೆಗೆ ಸಾಮಾನ್ಯವಾಗಿ ದೈಹಿಕ ಸದೃಢತೆಗಾಗಿ ಜೀಮ್ಗೆ ಮೊರೆ ಹೋಗುವುದು ಕಾಮನ್ ಫೆನಾಮಿನಾ ಆಗಿ ಪರಿಣಮಿಸಿದೆ. ಯಾರೂ ಕೂಡ ನ್ಯಾಚುರಲ್ ವ್ಯಾಯಾಮಗಳ ಮೂಲಕ ದೇಹ ಸಾಧನೆಗೆ ಮುಂದಾಗುತ್ತಿಲ್ಲ.
ಜೀಮ್ಗಿಂತ ಪಾಕರ್್ಅವರ್ ಸೂಕ್ತ:
ಒಂದು ವೇಳೆ ಜೀಮ್ಗೆ ಹೋಗುವುದ್ದಾದ್ದಲ್ಲಿ, ಕೇವಲ ಒಂದೇ ಅಂಗಾಂಗಗಳನ್ನು ಟಾಗರ್ೆಟ್ ಮಾಡಬಹುದು. ಆದರೆ, ಅದೇ ಪಾಕರ್್ ಅವರ್ಗೆ ಹೋದ್ದಲ್ಲಿ, ದೇಹದ ಪ್ರತಿಯೊಂದು ಅಂಗಕ್ಕೂ ವ್ಯಾಯಾಮ ದೊರಕುತ್ತದೆ. ಜತೆಗೆ ಖುಷಿ-ಖುಷಿಯಿಂದ ಯಾವುದೇ ತೊಂದರೆ ಇಲ್ಲದೇ ಸರಾಗವಾಗಿ ವ್ಯಾಯಾಮ ಮಾಡಬಹುದು. ಹೀಗಾಗಿ ಆದಷ್ಟು ಜೀಮ್ಗಿಂತ ಪಾಕರ್್ಅವರ್ ಬೆಟರ್ ಎಂದು ಹೇಳಿದರು.
ಮೆಡಿಟೇಷನ್ ಅಥವಾ ಮಾರ್ಷಲ್ ಲಾ:
ಬರೀ ದೈಹಿಕವಾಗಿ ಬಲಶಾಲಿಯಾಗಿದ್ದು, ಮಾನಸಿಕವಾಗಿ ದುರ್ಬಲರಾಗಿದ್ದರೆ, ವೇಸ್ಟ್. ಆದ್ದರಿಂದ ಫಿಸಿಕಲ್ ಜತೆಗೆ ಮೆಡಿಟೇಷನ್ ಕೂಡ ಮಾಡುವುದು ಒಳ್ಳೆಯದು. ಒಂದು ವೇಳೆ ಧ್ಯಾನದಲ್ಲಿ ಸಮಯ ಕಳೆಯಲಾಗದೆಂದರೆ, ಮಾರ್ಷಲ್ ಆಟರ್್ಗೆ ಮೊರೆ ಹೋಗುವುದು ಸೂಕ್ತ. ನಾನೂ ಕೂಡ ಹಾಗೇ ಮಾಡುತ್ತೇನೆ. ಇದು ನನಗೆ ಮಾನಸಿಕವಾಗಿ ಎಂಥ ಬಿರುಗಾಳಿ ಬಂದರೂ ಸಮರ್ಥವಾಗಿ ಎದುರಿಸಲು ಶಕ್ತಿ ನೀಡುತ್ತಾ ಬಂದಿದೆ.
ಪರ್ಸನಲ್ ಮ್ಯಾಟರ್:
ನಾನು ಬಾಲ್ಯದಿಂದ ಕ್ರೀಡೆಯನ್ನು ನನ್ನ ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡಿದ್ದೇನೆ. ಬೆಳಗ್ಗೆ ಬೇಗ ಎದ್ದು ಹೊರಾಂಗಣ ಕ್ರೀಡೆಗಳಾದ ಕ್ರಿಕೆಟ್ ಹಾಗೂ ಫುಟ್ಬಾಲ್ ಆಡುತ್ತಿದ್ದೇನೆ(ಶೂಟಿಂಗ್ ಇಲ್ಲದಿರುವಾಗ ಮಾತ್ರ). ಉಳಿದಂತೆ ಸೂರ್ಯಪುತ್ರನಂತು ನಾನು ಅಲ್ವೇ ಅಲ್ಲ.
ಪಂಚಿಂಗ್ ಲೈನ್:
ಇಂದಿನ ಪಾಲಕರು ತಮ್ಮ ಮಕ್ಕಳನ್ನು ತಮ್ಮ ಕೈಯಿಂದ ತಾವೇ ಹಾಳು ಮಾಡುತ್ತಿದ್ದಾರೆ. ಅವರು ದೈಹಿಕ ಹಾಗೂ ಮಾನಸಿಕವಾಗಿ ಸಮತೋಲನ ಕಳೆದುಕೊಳ್ಳಲು ಅವರೇ ಕಾರಣ. ಏಕೆಂದರೆ, ಇತ್ತೀಚಿನ ಪೀಳಿಗೆಗಳಿಗೆ ಅವರು, ಹೊರಾಂಗಣ ಆಟಗಳಾಡಲು ಅವಕಾಶ ನೀಡದೇ ಕಂಪ್ಯೂಟರ್ ವೈರಸ್ಗಳಾಗಿ ಮಾಡಿದ್ದಾರೆ. ಆದ್ದರಿಂದ ಹೀಗೆ ಮಾಡದೆ ಅವರು ತಾವು ಅನುಭವಿಸಿದ, ಕುಣಿದು ಕುಪ್ಪಳಿಸಿದ ಬಾಲ್ಯವನ್ನು ಅವರಿಗೆ ಧಾರೆ ಎರೆಯಲಿ ಎಂದು ಕರೆ ನೀಡಿದರು.

Thursday, December 1, 2011

ಸ್ಮಾಲ್ ಬಿಗಿನಿಂಗ್ ಗ್ರೇಟ್ ಎಂಡ್...


ಓದಿದ್ದು ಡಿಗ್ರಿ ಮಾಡಿದ್ದು ಅಗ್ರಿ
ಬೆಳಗ್ಗೆ ಭಾನುವಿನ ಹೊಂಗಿರಣ ಭೂಮಿಗೆ ಬರುವ ಮುನ್ನವೇ ಮೈನುಡುಗುವ ಚಳಿಯಲ್ಲಿ ಸೈಕಲ್ ತುಳಿಯುತ್ತಾ ಯಾವ ಭಯವಿಲ್ಲದೇ ತೋಟದ ಕಡೆ ಪಯಣ ಬೆಳಸುತ್ತಾರೆ. ಏಣಿ ಏರಿ ಅಂಬು ಎಲೆಗಳನ್ನು ಕೀಳುತ್ತಾ, ಗುದ್ದಲಿ ಹಿಡಿದು ತೋಟದಲ್ಲಿ ಕೆಲಸಮಾಡುತ್ತಾರೆ ಈ ಮಹಾತಾಯಿ.
ಇಲ್ಲಿವರೆಗೂ ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂದು ಕೇಳಿದ್ದೇವೆ; ನೋಡೂ ಇದ್ದೇವೆ. ಆದರೆ, ಒಬ್ಬ ಮಹಿಳೆ ಆಕಾಶದೆತ್ತರದ್ದನ್ನು ಸಾಧಿಸಬೇಕಾದರೆ, ಅವಳ ಹಿಂದೆ ಯಾರಿರುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಪತಿರಾಯನ ಪ್ರೋತ್ಸಾಹ ಹಾಗೂ ಸಾಮರಸ್ಯ ಜೀವನದಿಂದ ಏನೂ ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಸುನೀತಾ ಜ್ವಲಂತ ನಿದರ್ಶನ.
ಈಕೆಯನ್ನು ಯಾರೇ ಆಗಲಿ `ಹೆಣ್ಣೊಂದು ಮನಸು ಮಾಡಿದರೆ ಕೊರಡು ಕೊನರುವುದಯ್ಯ' ಎಂಬ ಶರಣರ ಉಕ್ತಿಯನ್ನು ಉವಾಚಿಸದಿರಲು ಸಾಧ್ಯವೇ ಇಲ್ಲ. ಅಷ್ಟೊಂದು ಆಕರ್ಷಕ ವ್ಯಕ್ತಿತ್ವ ಹಾಗೂ ಮೈಮನ ನವಿರೇಳಿಸುವ ಕಾರ್ಯಗಳನ್ನು ಮಾಡಿದ್ದಾರೆ. ಹೆಣ್ಣು ಕೃಷಿಕನನ್ನು ಮದುವೆಯಾದಲ್ಲಿ ಹೆಚ್ಚೆಂದರೆ, ಗಂಡನಿಗೆ ರೊಟ್ಟಿ ಕೊಡಬಹುದು ಅಥವಾ ಕಳೆ ಕೀಳುವಲ್ಲಿ ಸಹಾಯ ಮಾಡಬಹುದಷ್ಟೆ. ಆದರೆ, ಬರಡು ಭೂಮಿಯನ್ನೂ ಅಚ್ಚ ಹಸುರಾಗಿ ನಿಲ್ಲಿಸಬಹುದು, ಲಕ್ಷಾಂತರ ಲಾಭ ತರುವಂತೆ ಕೃಷಿಯನ್ನು ಮಾಡುವುದೆಂದರೆ ಅದು ಕನಸಿನ ಮಾತೇ ಸರಿ. ಅದರಲ್ಲೂ ಪದವೀಧರೆಯಾಗಿದ್ದರೆ, ತೋಟದ ಕೆಲಸಗಳಿಂದ ತುಸು ದೂರು ಇರುತ್ತಾರೆ. ನಾಜೂಕು ಲಲನೆಯರು ಯಾವುದೇ ರೀತಿಯ  ಕಷ್ಟದ ಕೆಲಸಕ್ಕೆ ಕೈಹಾಕೋದಿಲ್ಲ. ಅವರಿಗೇನಿದ್ದರೂ ಅಡುಗೆ ಮನೆಯೇ ಪ್ರಪಂಚ.
ಆದರೆ, ಇವೆಲ್ಲವನ್ನೂ ಮೀರಿ ಸಾಧನೆ ಗೈದ ಸುನೀತಾ ಹುಟ್ಟಿದ್ದು ಬೆಟ್ಟಗುಟ್ಟಗಳ ನಾಡು ಶಿವಮೊಗ್ಗದಲ್ಲಿ. ಬೆಳೆದು, ತನ್ನ ಬಿಎ ಗ್ರ್ಯಾಜುಯೇಷನ್ ಸಹ ಅಲ್ಲಿಯೇ ಮುಗಿಸಿದರು. ಬಳಿಕ ಮಹಿಳೆಯರ ಸಹಜ ಪ್ರವೃತ್ತಿ ಹಾಗೂ ಮನೆಯವರ ಮಜರ್ಿಯಂತೆ ರಾಣೆಬೆನ್ನೂರು ತಾಲ್ಲೂಕಿನ ಮದೇನೂರು ಗ್ರಾಮದ ಶಂಕರೇಗೌಡ ಎಂಬುವವರೊಂದಿಗೆ ಹಸೆ ಮಣೆ ಏರಿದರು. ಪತಿರಾಯ ಕೂಡ ಬಿಎ ಪದವೀಧರ. ಆದರೆ, ಅವರಿಗೆ ಸಿನಿಮಾದಲ್ಲಿ ನಟಿಸುವ ವಿಚಿತ್ರ ಹುಚ್ಚು. ಗಾಂಧಿನಗರದಲ್ಲಿ ವಾಸ್ತವ್ಯ ಹೂಡಿ, ಬಳಿಕ ಅವಕಾಶ ದೊರಕದ ಕಾರಣ ಬಂದ ದಾರಿಗೆ ಸುಂಕವಿಲ್ಲವೆಂದು ಊರಿಗೆ ವಾಪಸಾದರು. ಬಳಿಕ ಸತಿಪತಿ ಇಬ್ಬರೂ ಕೃಷಿಯಲ್ಲಿ ತೊಡಗಿಕೊಂಡರು. ಅಲ್ಲಿಂದ ಪ್ರಾರಂಭವಾದ ಅವರ ಜೀವನ ಇಂದು ಇಡೀ ಊರಿಗೆ ಊರೇ ಹೊಗಳುವ ಹಂತಕ್ಕೆ ಬಂದು ನಿಂತಿದೆ.  ಇದಕ್ಕೆ ಅಂಕುರಾರ್ಪಣೆ ಆದದ್ದು ಸುನೀತಾ ಅವರಿಂದ.
ಪ್ರಾರಂಭದಲ್ಲಿ ಮಳೆ ಆಧಾರಿತ ಉತ್ತರ ಕನರ್ಾಟಕದ ಕೃಷಿಗೆ ಒಗ್ಗಿಕೊಳ್ಳಲು ಸ್ವಲ್ಪ ಕಷ್ಟವಾದರೂ ಬಳಿಕ ಅದನ್ನೇ ಸವಾಲಾಗಿ ಸ್ವೀಕರಿಸಿದ ಈ ದಂಪತಿ ಅದನ್ನೇ ಒಗ್ಗಿಸಿಕೊಂಡರು. ಪ್ರಥಮಾರ್ಧದಲ್ಲಿ ಸುನೀತಾ ಬೆಂಗಾಡು ತೋಟನೋಡಿದಾಗ ಇಲ್ಲಿ ಅಚ್ಚ ಹಸುರಾದ ಅಡಿಕೆ ತೋಟ ನಿಮರ್ಾಣವಾಗಬಹುದೆಂದು ಖುದ್ದು ಅವರೇ ಕನಸು ಮನಸ್ಸಿನಲ್ಲೂ ಯೋಚಿಸಿರಲಿಲ್ಲ. ಆದರೆ, ಮನಸ್ಸೊಂದಿದ್ದರೆ ವಿಧಿಯನ್ನೂ ಸ್ಲೇಟು ಲಿಖಿತ ಬರಹದಂತೆ ಬದಲಿಸಬಹುದು ಎನ್ನುವುದಕ್ಕೆ ಇವರೇ ತಾಜಾ ಉದಾಹರಣೆ.
ಸುನೀತಾ ಮೂಲತಃ ಕೃಷಿಕ ಕುಟುಂಬದಿಂದಲೇ ಬಂದಿದ್ದು, ಅವರು ವಿದ್ಯಾಥರ್ಿನಿಯಾಗಿರುವಾಗಲೇ ವಿದ್ಯಾಭ್ಯಾಸದ ಜತೆಗೆ ಅಡಿಕೆ ತೋಟದಲ್ಲಿ ತಮ್ಮ ಬಿಡುವಿನ ವೇಳೆಯಲ್ಲಿ ಕೆಲಸಮಾಡುತ್ತಿದ್ದರಂತೆ. ಹೀಗಾಗಿ ಕೃಷಿ ಅಂದರೆ ಇವರಿಗೆ ಅಚ್ಚುಮೆಚ್ಚು ಎಂದು ಖುಷಿ-ಖುಷಿಯಿಂದ ಹೇಳಿಕೊಂಡರು.

ಅಷ್ಟಕ್ಕೂ ಸಾಧಿಸಿದ್ದೇನು?
ಈ ಹಿಂದೆಯೂ ಕೃಷಿ ಕ್ಷೇತ್ರದಲ್ಲಿ ಸಾದನೆಗೈದ ಮಹಿಳೆಯರು ಹಲವು. ಹಾಗೇ ಅವರು ಮುಖ್ಯವಾಹಿನಿಗೆ ಬಂದು ಪ್ರಶಸ್ತಿಗೂ ಭಾಜನರಾಗಿದ್ದಾರೆ. ಆದರೆ, ವಿಪಯರ್ಾಸವೆಂದರೆ, ಸುನೀತಾರಂಥ ಅನೇಕ ಮಹಿಳೆಯರು ಇನ್ನೂ ಬೆಳಕಿಗೆ ಬಾರದೆ ಎಲೆಮರೆ ಕಾಯಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರು ಸಾಧಿಸಿದ್ದು ಅಷ್ಟಿಷ್ಟಲ್ಲ. ಆಲೋಚನೆಗೆ ಸಿಗದು, ಅಕ್ಷರಗಳಿಗೆ ಎಟುಕದು. ಸಾಮಾನ್ಯವಾಗಿ ಎಲ್ಲ ಇರುವೆಡೆ ಕೃಷಿ ಮಾಡುವುದೆಂದರೆ, `ಯಚ್ಚ(ಮಸಾಲೆ) ಕೊಟ್ರೆ ಹುಚ್ಚಿಯೂ ಅಡುಗೆ ಮಾಡಬಲ್ಲಳು' ಎಂಬ ಹೈದ್ರಾಬಾದ್ ಕನರ್ಾಟಕದ ಪ್ರತಿಷ್ಠಿತ ಗಾದೆಯಂತೆ. ಆದರೆ, ನೂರಾರು ಸಮಸ್ಯೆ ಸವಾಲುಗಳ ಮಧ್ಯೆ, ಹಲವಾರು ಅನಾನುಕೂಲಗಳ ನಡುವೆಯೇ ಕೃಷಿಗಿಳಿದು ಆಕಾಶಕ್ಕೆ ಎಟುಕುವಂಥ ಅಡಿಕೆ ಮರಗಳನ್ನು, ಜೌಷಧಿಗಿಡಗಳನ್ನು, ಗಿಡಮೂಲಿಕೆಗಳನ್ನು, ತರಕಾರಿ, ಹಣ್ಣುಹಂಪಲು, ತೆಂಗು, ಬಾಳೆ, ವೀಳ್ಯದೆಲೆ, ಮಿಶ್ರಬೆಳೆ, ಶ್ರೀಗಂಧ ಮುಂತಾದ ಬೆಳೆಗಳನ್ನು ಬೆಳೆಸುವುದೆಂದರೆ ಸಾಮಾನ್ಯದಾದುದ್ದೇನಲ್ಲ.
ತೋಟದ ಸುತ್ತ ಪಕ್ಷಿನೋಟ:
ಅಡಿಕೆ: ಈ ಹಿಂದೆನೆ ಹೇಳಿರುವಂತೆ ಇಲ್ಲಿ ಇವರು ಬೆಳೆಸಿರುವ ಪ್ರಮುಖ ಬೆಳೆ ಅಡಿಕೆ. ಸುಮಾರು  1100 ಅಡಿಕೆ ಮರಗಳನ್ನು ಬೆಳೆಸಿದ್ದು, ಈ ಹಿಂದಿನ ಇಳುವರಿಯಲ್ಲಿ ಅವರಿಗೆ 5 ಕೀಲೂ ಅಡಿಕೆ ಬಂದಿದೆಯಂತೆ. ಇದಕ್ಕೆ ಇವರು 15 ದಿನಕ್ಕೋಮ್ಮೆ ನೀರು ಕೊಡುತ್ತಾ ಬಂದಿದ್ದಾರೆ.
ತೆಂಗು: ಇಲ್ಲಿ 80 ತೆಂಗಿನಗಿಡಗಳನ್ನು ನೆಟ್ಟಿದ್ದಾರೆ, ಹಿಂದಿನ ವರ್ಷ ಸುಮಾರು 50 ಸಾವಿರ ಆದಾಯ ಬಂದಿದೆಯಂತೆ. ಈ ವರ್ಷವೂ ಬೆಳೆ ಚೆನ್ನಾಗಿದ್ದು, ಕಳೆದ ಬಾರಿಗಿಂತ ಉತ್ತಮ ಇಳುವರಿ ಬರಲಿದೆ ಎಂದು ಹರ್ಷದಿಂದ ನುಡಿದರು.
ಬಾಳೆಗಿಡ: ಅಡಿಕೆ ಮರಗಳ ಮಧ್ಯೆ ಏಲಕ್ಕಿ ಬಾಳೆಯನ್ನೂ ಬೆಳೆದಿದ್ದಾರೆ. ಸುಮಾರು ಒಂದು ಸಾವಿರ ಬಾಳೆ ಗಿಡಗಳಿವೆ. ಈ ಬಾಳೆಯನ್ನು ನಾಟಿಮಾಡಿ 10 ವರ್ಷ ಕಳೆದರೂ ಇಂದಿಗೂ ಅದೇ ಬೆಳೆದುಕೊಂಡುಬಂದಿದೆ. ಈ ಬಾಳೆಯಲ್ಲಿ ಅವರು ಯಾವುದೇ ರೀತಿಯ ಕೆಲಸ ಮಾಡಲ್ವಂತೆ. ಇಲ್ಲಿ ಒಣಗಿ ಬಿದ್ದ ಬಾಳೆ ಎಲೆಗಳೇ ಅದಕ್ಕೇ ಗೊಬ್ಬರ ಹಾಗೂ ಫಲವತ್ತಾದದ್ದು ಎನ್ನುತ್ತಾರೆ ಸುನೀತಾ.
ಕಾಳು ಮೆಣಸಿನ ಕಾಯಿ: 100 ಕಾಳು ಮೆಣಸಿನ ಬಳ್ಳಿ ಹಾಕಲಾಗಿದೆ. ಹಿಂದಿನ ವರ್ಷವಷ್ಟೇ ಇದರ ಇಳುವರಿ ಪ್ರಾರಂಭವಾಗಿದ್ದು, ಈ ಬಾರಿ ಕೇವಲ 1 ಕೆಜಿ (ಮೊದಲನೇ ಇಳುವರಿ) ದೊರೆತಿದೆ. ಅದೇ ರೀತಿಯಲ್ಲಿ ಒಂದು ಎಕರೆ ಭೂಮಿಯಲ್ಲಿ ಅಂಬುಎಲೆಯನ್ನು ಬೆಳೆಸಿದ್ದಾರೆ. ಇವರು ಎಲೆ ಬಳ್ಳಿಗೆ ಬೇರೆ ರೈತರು ತೆಗೆದುಕೊಳ್ಳುವಷ್ಟು ಕಾಳಜಿಯನ್ನು ತೆಗೆದುಕೊಂಡಿಲ್ಲ. ಈ ಬಳ್ಳಿ ತನ್ನಷ್ಟಕ್ಕೆ ತಾನೇ ಬೆಳೆದಿದೆ. ಆದರೂ ಈ ಎಲೆಯಿಂದ 50 ಸಾವಿರ ರೂ. ಲಾಭ ಬಂದಿರುವುದಾಗಿ ತಿಳಿಸಿದರು. ಇದೆಲ್ಲಕ್ಕೂ ಜೀವಂತ ಕಾವಲಾಗಿ ಸುಬಾಬುಲ್ ಗಿಡಗಳನ್ನು ಬೆಳೆಸಿದ್ದಾರೆ. ಇದೂ ಕೂಡ ಅಷ್ಟೆ. ಪ್ರತಿ ಎರಡು ವರ್ಷಕ್ಕೊಮ್ಮೆ ಇವುಗಳ ಕಟಾವು ಮಾಡಿ ದಾಂಡೇಲಿ ಕಾಖರ್ಾನೆಗೆ ಮಾರಾಟ ಮಾಡುತ್ತಾರೆ. ಇದರಿಂದ 4 ಲಕ್ಷ ಆದಾಯ ಬಂದಿರುವುದಾಗಿ ಹೇಳಿದರು. ಜತೆಗೆ ಶ್ರೀಗಂಧ ಕೂಡ ಬೆಳೆಸಲಾಗಿದೆ. ಆದರೆ, ಇದರಿಂದ ನಿರೀಕ್ಷತ ಲಾಭ ದೊರೆತಿಲ್ಲ ಎನ್ನುತ್ತಾರೆ ಶಂಕರೇಗೌಡ.
ಸಾಮಾನ್ಯವಾಗಿ ಇಂದಿನ ರೈತರು `ಅಗಸನಿಗೆ ನೀರಿನ ಬರ' ಎಂಬಂತೆ ಬೇರೆಯವರ ಕಡೆ ಆಹಾರಕ್ಕೆ ಬೇಕಾದ ತರಕಾರಿಯನ್ನು ಖರೀದಿಸುತ್ತಾರೆ. ಆದರೆ, ಈ ದಂಪತಿಗಳು ಮಾತ್ರ ದಿನನಿತ್ಯ ಅವಶ್ಯಕವಾದ (ಬದನೆ, ಹಾಗಲಕಾಯಿ, ಬೆಂಡೆ, ಹೀರೆಕಾಯಿ, ನುಗ್ಗಿ, ಕುಂಬಳ, ಮರಗೆಣಸು, ತೊಗರಿಬೆಳೆ) ಸೇರಿದಂತೆ ವಿವಿಧ ತರಕಾರಿಗಳನ್ನು ತಾವೇ ಬೆಳೆದು ಬಳಸುತ್ತಾರೆ. ಇಷ್ಟೇ ಅಲ್ಲದೇ ಸಾಂಬಾರು ಪದಾರ್ಥ(ಏಲಕ್ಕಿ, ಕಾಫಿ, ಚಕ್ಕೆ, ಅರಿಶಿಣ, ಕರಿಬೇವು ಇತ್ಯಾದಿ)ಗಳನ್ನು ಕೂಡ ಬೆಳಸುತ್ತಾರೆ. ಚಿಕ್ಕಪುಟ್ಟ ಕಾಯಿಲೆಗಳಿಗೆ ಮದ್ದಾಗಿ ಬಳಸಬಲ್ಲ ದೊಡ್ಡಪತ್ರೆ, ಶುಂಠಿ, ಪೇಪರ್ ಗಿಡ, ಬೆಳ್ಳುಳ್ಳಿ, ನಿಂಬೆ, ಚಕ್ರಮುನಿ ಹೀಗೆ ಹತ್ತು ಹಲವಾರು ಉಪಬೆಳೆಗಳನ್ನು ಬೆಳೆದಿದ್ದಾರೆ.
ಪಕ್ಕಾ ನಿಸರ್ಗವಾದಿಗಳು ಈ ದಂಪತಿಗಳು:
ಇವರು ಪಕ್ಕಾ ಪರಿಸರವಾದಿಗಳು. ನಿಸರ್ಗ ಹಾಳು ಮಾಡುವ ಯಾವುದೇ ವಸ್ತುವನ್ನು ಬಳಸೋದಿಲ್ಲ. ತೋಟಕ್ಕೆ ಹೋಗುವಾಗ ಗಾಡಿಯನ್ನೂ ಬಳಸದೆ ಸೈಕಲ್ ಅನ್ನು ಬಳಸುತ್ತಾರೆ. ಇದರಿಂದ ವ್ಯಾಯಾಮವಾಗುತ್ತದೆ ಹಾಗೂ ಆರೋಗ್ಯದಿಂದಿರಲು ಸಾಧ್ಯ. ಜತೆಗೆ ಪರಿಸರಕ್ಕೂ ಯಾವುದೇ ಹಾನಿಯಾಗುವುದಿಲ್ಲ ಎನ್ನುತ್ತಾರೆ ಸುನೀತಮ್ಮ.
ಪ್ಲಾಸ್ಟಿಕ್ ಬ್ಯಾಗ್ನಲ್ಲಿ ತಿಂದು ಬಿಸಾಡಿ ಓಡುವ ಜಮಾನಾ ಇದು. ಆದರೆ, ಇವರು ಮಾತ್ರ ಬಾಳೆ ಎಲೆ ಬಿಟ್ಟು ಬೇರೆ ಯಾವುದರಲ್ಲೂ ಆಹಾರ ಸೇವಿಸುವುದಿಲ್ಲ. ಅಷ್ಟೆ ಯಾಕೆ ಅಡುಗೆಗಾಗಿ ಬಳಸುವ ಪಾತ್ರೆ ಕೂಡ ಮಣ್ಣಿನದ್ದೇ ಆಗಿವೆ. ಬೆಳಗ್ಗೆ ಇವರು ಟಿಫನ್(ತಿಂಡಿ)ನಲ್ಲಿ ಕೇವಲ ಹಣ್ಣುಹಂಪಲು ಮತ್ತು ಗೆಡ್ಡೆಗೆಣಸುಗಳನ್ನೇ ತಿನ್ನುತ್ತಾರೆ.
ಎಲ್ಲದಕ್ಕಿಂತ ವಿಶೇಷವೆಂದರೆ, ಇವರು ಬೆಳೆ, ಗಿಡ ಹಾಗೂ ಮರಗಳಿಗೆ ಇಲ್ಲಿವರೆಗೂ ಯಾವುದೇ ರೀತಿಯ ಗೊಬ್ಬರವನ್ನು ಬಳಸಿಲ್ಲ. ಎರಡು ಎಳೆಹುಳು ತೊಟ್ಟಿಗಳನ್ನು ಕಟ್ಟಿಕೊಂಡಿದ್ದು, ಅದರ ಮೂಲಕ ನೈಸಗರ್ಿಕ ಗೊಬ್ಬರವನ್ನು ಉತ್ಪಾದಿಸಿ ಅದನ್ನು ಬೆಳೆಗಳಿಗೆ ಬೆಳೆಸುತ್ತಾರೆ.  ಒಂದು ಮೊಬೈಲ್ ಬಯೋಗ್ಯಾಸ್ ಅನ್ನು ಹೊಂದಿದ್ದಾರೆ.
ಒಂದು ಬೆಳೆಯನ್ನೇ ಬೆಳೆಸುವಲ್ಲಿ ನೆಲಕಚ್ಚುತ್ತಿರುವ ಈ ಕಾಲದಲ್ಲಿ ಪದವಿ ಮುಗಿಸಿ, ಅದೂ ತಾನು ಹೆಣ್ಣೆಂಬ ವಿಚಾರ ಬದಿಗೊತ್ತಿ ಯಾವ ಕೂಲಿ ಕಾಮರ್ಿಕರ ಸಹಾಯವಿಲ್ಲದೇ ಗಂಡನೊಂದಿಗೆ ಜತೆಗೂಡಿ ಸ್ವಬಲ ಹಾಗೂ ಆತ್ಮವಿಶ್ವಾಸದಿಂದ ಸುನೀತಾ ಸಾಧಿಸಿರುವುದು ವಿರಳಾತಿವಿರಳ. ಇಂಥವರನ್ನು ಮುಖ್ಯವಾಹಿನಿಗೆ ತಂದು ಸನ್ಮಾನಿಸಿ, ಪ್ರೋತ್ಸಾಹಿಸುವುದು ಸಕರ್ಾರ ಮಾತ್ರವಲ್ಲದೇ ಮಹಿಳಾ ಸಂಘಟನೆಗಳ ಆದ್ಯ ಕರ್ತವ್ಯ. ಹೀಗೆ ಮಾಡಿದ್ದಲ್ಲಿ ನಮ್ಮ ಸಮಾಜದಲ್ಲಿರುವ ಮಹಿಳೆಯರನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರೋತ್ಸಾಹಿಸಿದಂತಾಗುವುದಲ್ಲದೇ, ಮಹಿಳಾ ಸಶಕ್ತಿಕರಣಕ್ಕೆ ಬೃಹತ್ ನಾಂದಿಯಾಗಬಲ್ಲದು.
ಈ ಲೇಖನ ಒಂದು ಸಣ್ಣ ಪ್ರಯತ್ನ. ಇನ್ನೂ ಮಹಿಳಾ ಸಂಘಸಂಸ್ಥೆಗಳು ಜಾಗೃತಗೊಂಡಲ್ಲಿ ಈ ಲೇಖನ ಹಾಗೂ ಆ ಮಹಾತಾಯಿಯ ಶ್ರಮ ಸಾರ್ಥಕವಾದೀತು.
ಆತೀಶ್ ಬಿ. ಕೆ.
http://www.ekanasu.com/2011/12/blog-post_2212.html
 

Thursday, November 24, 2011

ಟ್ರಾಫಿಕ್ ಪ್ರಾಬ್ಲಂ

ನೀರಿಗಿಳಿಯದ ಹೊರತು ಆಳ ಅರ್ಥವಾದೀತೆ..?
ಯಾವುದೇ ಮೆಟ್ರೋಪಾಲಿಟನ್ ಹಾಗೂ ಕಾಸ್ಮಾಸಿಟಿಗಳಲ್ಲಿ `ಟ್ರಾಫಿಕ್' ಕಾಮನ್ ಫಿನಾಮಿನಾ, ಅಂಥದ್ರಲ್ಲಿ ಇದನ್ನು ಒಂದು ಸಮಸ್ಯೆ ಎಂದು ಹೇಳಲಾದೀತೆ..?
ಖಂಡಿತ ಎಂದು ಕೆಲವರ ವಾದ. ಇನ್ನು ಕೆಲವರು ಇದು ಸಾಮಾನ್ಯ ವಿಷಯ ಎಂದು ನುಂಗುತ್ತಾರೆ. ಮತ್ತೆ ಕೆಲವರು ಲಾವಾ(ಸಿಟ್ಟು) ಹೊರಹಾಕುತ್ತಾರೆ. ಬೆಂಗಳೂರಿನ ಟ್ರಾಫಿಕ್ ಕುರಿತು ಆಲೋಚಿಸುತ್ತಾ ಹೋದರೆ, ಇದು ನಮ್ಮ ರಾಷ್ಟ್ರದ ಜನಸಂಖ್ಯೆಯಷ್ಟೇ ವಿರಳ. ಹುಟ್ಟು ಬೆಳವಣಿಗೆ ಎರಡೂ ಕಾಮನ್... ಹುಟ್ಟಿಸಿದ ದೇವರು ಹುಲ್ಲಂತೂ ಮೇಯಿಸೋದಿಲ್ಲ ಎಂಬ ಖಾತ್ರಿ ನಮ್ಮೀ ಜನರಿಗೆ(ಸಮಜಾಯಿಷಿ ಎಂದರೂ ತಪ್ಪಾಗದು)!
ಯಾವುದೇ ಒಂದು ವಿಷಯ, ಅದನ್ನು ಸಮಸ್ಯೆ ಎಂದು ಕರೆಯಲಾಗದು. ಹಾಗೆಂದು ಕರೆಯಬೇಕಾದರೆ ಅದರಿಂದ ಕನಿಷ್ಠ ಪಕ್ಷ ಕೆಲವರಿಗೆ ತೊಂದರೆಯಾಗಬೇಕು. ಅಂದ್ರೆ ಟ್ರಾಫಿಕ್ ಎಂದಿಗೂ ಸಮಸ್ಯೆಯಲ್ಲ. ಅದು ನಾಲ್ಕು ಜನರಿಗೆ ತೊಂದರೆಯಾದಾಗ ಮಾತ್ರ ಸಮಸ್ಯೆಯ ರೂಪ ತಳೆಯುತ್ತದೆ. ಇದನ್ನು ಇನ್ನೊಂದು ಅರ್ಥದಲ್ಲಿ ಟ್ರಾಫಿಕ್ ನಿಯಮ ಪಾಲನೆಯಲ್ಲಿನ ವೈಫಲ್ಯ ಎಂದು ಕಡ್ಡಿ ಮುರಿದ ಹಾಗೆ ಹೇಳಬಹುದಲ್ಲವೆ?
ಮೊನ್ನೆ ರಾಜ್ಯದ ರಾಜಧಾನಿಯ ಪ್ರತಿಷ್ಠಿತ ರಿಚ್ಮಂಡ್ ಟೌನ್ ಹತ್ತಿರದ ರಸ್ತೆಯಲ್ಲಿ ಒಬ್ಬ ಟ್ರಾಫಿಕ್ ರೂಲ್ಸ್ ಮುರಿದು ಹೋಗುತ್ತಿದ್ದ, ಬಹುಶಃ ಅವನು ಬೆಂಗಳೂರಿಗೆ ಹೊಸಬ ಎನಿಸುತ್ತಿತ್ತು. ಅಷ್ಟರಲ್ಲೇ ಅದೆಲ್ಲಿಂದಲೋ ಟ್ರಾಫಿಕ್ ಪೊಲೀಸ್ ನುಸುಳಿಕೊಂಡು ಬಂದುದ್ದೇ ಹಣ ವಸೂಲು ಮಾಡಿದ. ಅದು ನಿಯಮದಡಿ ಇದ್ದಿದ್ರೆ, ಯಾವ ಸಮಸ್ಯೆನೂ ಇರ್ತಿರ್ಲಿಲ್ಲ. ಆದರೆ, ಅವನು ಜೋಬಲ್ಲಿರೋ ದುಡ್ಡೆಲ್ಲ ಕಿತ್ತುಕೊಂಡು ಅಲ್ಲಿಂದ ಅವನನ್ನು ಓಡಿಸಿದ ಪಾಪ ಆತ ಹಿಂದಿರುಗಿ ನೋಡದೆ ಪರಾರಿ ಆದ.
ಈ ಹಿಂದೆ ಹೇಳಿರುವಂತೆ ಒಬ್ಬ ವ್ಯಕ್ತಿಗೆ ಯಾವ ವಿಷಯಗಳ ಕುರಿತು ತೊಂದರೆಗಳಾಗುವುದಿಲ್ಲವೋ ಅಲ್ಲಿಯವರೆಗೂ ಅದು ಅವರ ದೃಷ್ಟಿಯಲ್ಲಿ ತೊಂದರೆಯಾಗಿ ಕಾಣಿಸುವುದಿಲ್ಲ. ಮೊನ್ನೆ ಅಂದ್ರೆ ಬರೋಬ್ಬರಿ ಒಂದು ತಿಂಗಳಾಗಿರಬಹುದು. ನೆರೆ ರಾಜ್ಯದ ಮುಖ್ಯಮಂತ್ರಿ ಜಯಲಲಿತಾ ಬೆಂಗಳೂರಿನ `ಪರಪ್ಪನ ಅಗ್ರಹಾರ' ಜೈಲಿಗೆ ವಿಚಾರಣೆ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದರು. ಆಗ ಇಡೀ ಹೊಸೂರು ರಸ್ತೆಯಲ್ಲೆಲ್ಲಾ ನೀರವ ಮೌನ. ಆಕಡೆ ಜನ ಈಕಡೆ ಹೋಗುವಂತಿಲ್ಲ, ಈಕಡೆಯಿಂದ ಆಕಡೆಗೆ ಹೋಗುವಂತಿಲ್ಲ. ಯಡಿಯೂರಪ್ಪ ಅವರನ್ನು ಬಂಧಿಸಿದಾಗಲೂ ಅದೇ ಕಿರಿಕಿರಿ. ಅಷ್ಟೇ ಯಾಕೆ ನಮ್ಮ ಶಾಸಕರು, ಸಚಿವರು, ಪೊಲೀಸ್ ಅಧಿಕಾರಿಗಳು ಯಾರೇ ಹೋಗಬೇಕಾದರೂ ರಸ್ತೆಯಲ್ಲಿ ಯಾರೂ ಓಡಾಡುವಂತಿಲ್ಲ. ಅವರ ವಾಹನ ಮುವ್ ಆಗುವವರೆಗೂ 144 ಜಾರಿ! ಥರ ಫಿಲ್ ಆಗುತ್ತೆ. ಪರಿಸ್ಥಿತಿ ಹೀಗಿರುವಾಗ ನಮ್ಮ ರಾಜಕೀಯ ವ್ಯಕ್ತಿಗಳಿಗೆ ಟ್ರಾಫಿಕ್ ಒಂದು ಸಮಸ್ಯೆಯಾಗಿ ಕಾಣಲು ಸಾಧ್ಯವೇ? ಅವರೂ ಒಂದು ವೇಳೆ ನಿಮ್ಹ್ಯಾನ್ಸ್, ಫೋರಂ, ಬನಶಂಕರಿ ಮತ್ತಿತರ ರೋಡ್ಗಳಲ್ಲಿ ಗಂಟೆಗಟ್ಟೆಲೆ ಸಾಲುಗಟ್ಟಿ ನಿಲ್ಲುವುದಾದರೆ ಟ್ರಾಫಿಕ್ ಪ್ರಾಬ್ಲಂ ಅಂದ್ರೆ ಏನು, ಜನಸಮಾನ್ಯರ ನೋವೇನು ಎಂದೆಲ್ಲಾ ಅರ್ಥವಾಗುತಿತ್ತು. ಆದರೆ, ನಮ್ಮ ರಾಷ್ಟ್ರದ ದೌಭರ್ಾಗ್ಯವೆಂದರೆ, ಒಬ್ಬ ವ್ಯಕ್ತಿ ನೋಟು ನೀಡಿ, ಓಟು ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಅವರು ಹಿಟ್ಲರ್ ಮಾದರಿಯಲ್ಲಿ ವತರ್ಿಸುತ್ತಾರೆ. ಅವರು ಜನಸಾಮಾನ್ಯರು ಅಡ್ಡಾಡುವಂತೆ ಅಡ್ಡಾಡುವ ಹಾಗಿಲ್ಲ. ತಿರುಗಾಡಲು ಗಾಡಿ, ಅದಕ್ಕೆ ಯಾವುದೇ ಟ್ರಾಫಿಕ್ ನಿರ್ಬಂಧಗಳಿಲ್ಲ. ಅದೇನೊ ಅಂತಾರಲ್ಲ `ಜಿಸ್ಕಿ ಲಾಠಿ ಉಸೀಕಿ ಭೈಂಸ್' ಹೀಗಿದೆ ನಮ್ಮ ಟ್ರಾಫಿಕ್ ನಿಯಮ. ಇವತ್ತು ಜನಸಾಮಾನ್ಯರಿಗೆ ಇರುವ ಕಾನೂನು ಟ್ರಾಫಿಕ್ ನಿಯಮಗಳು ಪೊಲೀಸರಿಗೆ ಹಾಗೂ ಪ್ರಭಾವಿ ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ!
ಹಲವು ಬಾರಿ ಗೂಟದ ಕಾರುಗಳು ಅತ್ತಿಂದಿತ್ತ ಚಲಿಸುತ್ತಿರುತ್ತವೆ. ಅವರೇನೋ ರೊಂಯ್.... ಎಂದು ಹೋಗುತ್ತಾರೆ. ಆದರೆ, ಕ್ಷಣ ತಡವಾದರೆ ಜೀವ ಜವರಾಯನ ಪಾಲಾಗುತ್ತೆ ಎಂದು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಅಂಬ್ಯೂಲೆನ್ಸ್ನಲ್ಲಿ ಚಿಕಿತ್ಸೆಗಾಗಿ ಹೋಗುವ ಜನರ ಬಗ್ಗೆ ಯಾರು ಯೋಚಿಸುತ್ತಾರೆ. ಒಂದು ವೇಳೆ ವ್ಯಕ್ತಿ ರಸ್ತೆ ಮಧ್ಯೆ ಕೊನೆಯುಸಿರೆಳೆದರೆ ಅಂಬ್ಯೂಲೆನ್ಸ್ನಲ್ಲಿರುವವರಿಗೆ ಕುತ್ತು. ಸಂಬಂಧಿಕರ ಆಕ್ರೋಶಕ್ಕೆ ಅವರೇ ತಾನೆ ಬಕ್ರಾ. ಇದೆಲ್ಲಾ ನಮ್ಮ ರಾಜಕೀಯ ವ್ಯಕ್ತಿಗಳಿಗೆ ಯಾಕೆ ತಿಳಿಯುತ್ತಿಲ್ಲ.
ಅವರು ಇಷ್ಟೊಂದು ಸ್ವಾಥರ್ಿಗಳಾದರೂ ಯಾಕಾದರು? ಇದಕ್ಕೆಲ್ಲ ಪರಿಹಾರವೇ ಇಲ್ವಾ? ಬಹುಶಃ ಇದಕ್ಕೆಲ್ಲಾ ಉತ್ತರ, ನಿರುತ್ತರ. ಈ ಕುರಿತು ದನಿ ಎತ್ತುವ ಹಾಗಿಲ್ಲ, ಒಂದು ವೇಳೆ ಎತ್ತಿದರೂ ಶಮರ್ಿಳಾಳಂತೆ ಉಪವಾಸವೇ ಇದ್ದು, ಹಣ್ಣುಗಾಯಿ ನೀರುಗಾಯಿ ಆಗಬೇಕಾಗುತ್ತದೆ. ಅಣ್ಣಾ ಹಜಾರೆ ಹಾಗೆ ಎಲ್ಲರಿಗೂ ಜಯ ದೊರಕಲ್ಲ. ಬಾಬಾ ರಾಮದೇವ್ ಹಾಗೇ ಪ್ರಚಾರವೂ ಸಿಗಲ್ಲ. ಇದೆಲ್ಲಾ ಆಲೋಚಿಸುವಾಗ ನಾವು ಸ್ವತಂತ್ರ್ಯರಾಗಿದ್ದೇವಾ ಅನ್ನುವ ಅನುಮಾನ ಆಗಂತುಕವಾಗಿ ಉದ್ಭವಿಸುತ್ತದೆ.
ಒಟ್ಟಲ್ಲಿ ನಮ್ಮ ರಾಷ್ಟ್ರದ ಪ್ರಜ್ಞಾವಂತ ಪ್ರಜೆಗಳೇ ನೀವೇ ಹೇಳಿ, ಇದಕ್ಕೆ ಮುಕ್ತಿನೇ ಇಲ್ವಾ? ಮತ್ತು ಟ್ರಾಫಿಕ್ ಎನ್ನುವ ಪೆಡಂಭೂತ ಜನಸಾಮಾನ್ಯರ ಪಾಲಿಗೆ ಮಾತ್ರ ಸಮಸ್ಯೆ. ಅದು ವಿಐಪಿಗಳಿಗೆ ಅನ್ವಯಿಸುವುದಿಲ್ಲ. ಹೀಗಾದಾಗ ಅದು ಬಗೆಹರಿಸುವ ಪ್ರಯತ್ನಕ್ಕೆ ಯಾರೂ ಇಳಿಯುವುದಿಲ್ಲ..
ನೀರಲ್ಲಿ ಇಳೀದಾಗ ತಾನೆ ಅದರ ಆಳ ಅರ್ಥ, ಉಸಿರುಗಟ್ಟುವ ಅನುಭವವಾಗೋದು.

ಪರಿಹಾರಗಳು:
ಟ್ರಾಫಿಕ್ ಸಮಸ್ಯೆಯೆನೋ ಓಕೆ ಆದರೆ, ಬೆಂಗಳೂರಿಗರಿಗೆ ಇದರಿಂದ ಮುಕ್ತಿಯೇ ಇಲ್ವಾ? ಇದರ ಸಲ್ಯೂಷನ್ ಆದ್ರೂ ಏನು? ಖಂಡಿತ ಇದೆ. ಆದರೆ, ಸಕರ್ಾರ ಹಾಗೂ ಆಡಳಿತಾರೂಢರು ಮನಸು ಮಾಡಬೇಕಷ್ಟೆ.
ಸಲಹೆಗಳು:
ಮರಗಳ ಮಾರಣ ಹೋಮವಾಗದಂತೆ ರಸ್ತೆ ಅಗಲೀಕರಣ ಹಾಗೂ ಅಂಡರ್ಗ್ರೌಂಡ್ಗಳ ನಿಮರ್ಾಣ.
ಜೌಟರ್ ರಿಂಗ್ರೋಡ್ ಮಾಡುವುದು. ಈಗಾಗಲೇ ಇರುವ ವತರ್ುಲ ರಸ್ತೆಯನ್ನು ಸಮರ್ಪಕವಾಗಿ ಬಳಸುವುದು.
ಸರಕು ತುಂಬಿದ ಭಾರಿ ವಾಹನಗಳು ಸಿಟಿ ಹೊರಗಡೆಯಿಂದ ಚಲಿಸಬೇಕು.
ಜೆಸಿ ರೋಡ್ನಿಂದ ಕಾಪರ್ೊರೇಷನ್ವರೆಗೆ ಫ್ಲೈಓವರ್ ನಿಮರ್ಿಸಬೇಕು.
ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ಪ್ರತ್ಯೇಕ ರಸ್ತೆ ನಿಮರ್ಾಣ ಹಾಗೂ ಕಟ್ಟುನಿಟ್ಟಾಗಿ ಬಳಸುವಂತೆ ಸೂಚನೆ ನೀಡುವುದು.
ಟ್ರಾಫಿಕ್ ನಿಯಮ ಪಾಲಿಸುವುದು.
ಮಾನೋ ರೈಲ್ ಆರಂಭಿಸುವುದು.
ಚರಂಡಿ ವ್ಯವಸ್ಥೆ ಹಾಗೂ ರಸ್ತೆಗಳ ಸುಧಾರಣೆ.
ಸಲ್ಯೂಷನ್ ಸಾರ್ವಜನಿಕರ ಮಾತಲ್ಲಿ...
ನಮ್ಮ ರಾಜಕಾರಣಿಗಳಲ್ಲಿ ದೂರ ದೃಷ್ಟಿಯ ಕೊರತೆಯಿಂದಾಗಿಯೇ ಟ್ರಾಫಿಕ್ ತೊಂದರೆ ಉಲ್ಭಣಿಸಿದೆ. ಕಾರಣ, ಈ ಹಿಂದೆಯೇ ಮೆಟ್ರೋ ಪ್ರಾರಂಭಿಸಬೇಕಿತ್ತು. ಆದರೆ, ಅವರಿಗೆ ಈಗ ಕಣ್ಣು ತೆರೆದಿದ್ದರಿಂದ ಇದೆಲ್ಲಾ ತೊಂದರೆಯಾಗುತ್ತಿದೆ. ಜತೆಗೆ ದಿನದಿಂದ ದಿನಕ್ಕೆ ಬೆಂಗಳೂರಂಥ ಸಿಟಿಗೆ ಸಾವಿರಾರು ಜನ ಉದ್ಯೋಗ ಅರಸಿ ವಲಸೆ ಬರುತ್ತಿದ್ದು, ಅವರು ತಮ್ಮ ಸ್ಥಳಗಳಲ್ಲಿಯೇ ಉದ್ಯೋಗ ಸಿಗುವಂತೆ ಮಾಡಿದ್ದಲ್ಲಿ ಸ್ವಲ್ಪ ಮಟ್ಟಗಾದರೂ ಜನಸಂಖ್ಯೆಯನ್ನು ತಗ್ಗಿಸಬಹುದು.
(ಹೆಸರು ಬೇಡ.)

ಇಡೀ ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿಯನ್ನು ಪ್ರಾರಂಭಿಸುವುದಕ್ಕಿಂತ ಯಾವುದಾದರೂ ಒಂದು ಕಡೆ ಕಾಮಗಾರಿ ಮುಗಿಸಿ, ಬಳಿಕ ಇನ್ನೊಂದು ಕಡೆ ಕಾಮಗಾರಿ ಪ್ರಾರಂಭಿಸಬೇಕಿತ್ತು. ಆಗ ಟ್ರಾಫಿಕ್ ಅನ್ನು ನಿಯಂತ್ರಿಸಬಹುದಾಗಿತ್ತು.
ಸುನಿಲ್ (ಗ್ರಂಥಪಾಲಕರು, ಆಕ್ಸ್ಫಡರ್್ ಕಾಲೇಜ್)

ಇಂದು ಬೆಂಗಳೂರಿನ ಪ್ರತಿ ಮನೆಯಲ್ಲೂ ತಲೆಗೊಂದರಂತೆ ಬೈಕ್ಗಳಿದ್ದು, ಇವುಗಳನ್ನು ಕಡಿಮೆಗೊಳಿಸಬೇಕು. ಇದು ಎಲ್ಲ ಕಡೆ ಸಮರ್ಪಕ ಬಿಎಂಟಿಸಿ ಬಸ್ ಸೌಲಭ್ಯ ದೊರಕಿಸಿಕೊಟ್ಟಾಗ ಮಾತ್ರ ಸಾಧ್ಯವಾಗಬಲ್ಲದು. ಇದಕ್ಕಾಗಿ ಪ್ರತಿ ನಿಮಿಷಕ್ಕೆ ಒಂದರಂತೆ ಬಸ್ ಸೌಲಭ್ಯವನ್ನು ಒದಗಿಸಬೇಕು. ಆಗ ಜನ ತಾವಾಗಿಯೇ ಬಸ್ ಸೌಲಭ್ಯ ಪಡೆದುಕೊಳ್ಳುತ್ತಾರೆ.
ಯೋಗೇಶ್ (ಸಾಫ್ಟ್ವೇರ್)

ಮಳೆ ಶುರುವಾದರೆ ಟ್ರಾಫಿಕ್ ಜಾಮ್ ಸಾಮಾನ್ಯ. ಹೀಗಾಗಿ, ಮಳೆಗಾಲಕ್ಕೂ ಮುನ್ನ ಚರಂಡಿ ಶುಚೀಕರಣಗೊಳಿಸುವುದು ಹಾಗೂ ಮಳೆಯ ನೀರು ರಸ್ತೆ ಮೇಲೆ ಶೇಖರಣೆಗೊಳ್ಳದಂತೆ ಪಯರ್ಾಯ ವ್ಯವಸ್ಥೆ ಮಾಡುವುದು.
ಸತ್ಯಶಂಕರ್ (ಡಿಸೈನರ್)
ಆತೀಶ್ ಬಿ. ಕನ್ನಾಳೆ 

Wednesday, October 26, 2011

ಪ್ರತಿಯೊಬ್ಬರೂ ಓದಲೇ ಬೇಕಾದ ಮನದಾಳದ ಮಾತು... ತಪ್ಪದೇ ಓದಿ ಪ್ಲzzz.


ಕಾಡತಾವ ನೆನಪು...
ಈ ಬಾರಿಯ ದೀಪಾವಳಿ ನನ್ ಪಾಲಿಗೆ ಬೆಳಿಕಿನ ಹಬ್ಬ ಅಲ್ಲ; ಬದಲಿಗೆ ತಮಸು ಆವರಿಸಕೊಂಡ ದಿಬ್ಬ! ರೂಮಿನ ಮೇಲೆ ನಿಂತು (ಬೆಂಗಳೂರು) ಆಕಾಶದ ಚುಕ್ಕೆ ಎಣಿಸುವ ಪ್ರಯತ್ನದಲ್ಲಿದ್ದೆ, ಅಷ್ಟರಲ್ಲೇ ಏನೆನೋ ಆಲೋಚನೆಗಳು ಆಗಂತುಕವಾಗಿ ಮನಸಿನ ಮೂಲೆಯಲ್ಲಿ ಉದ್ಭವಿಸುತ್ತಿದ್ದವು. ಕಳೆದ ಬಾರಿಯ ದೀಪಾವಳಿ ಕುರಿತು ಆಲೋಚಿಸುವಾಗ ಈ ಬಾರಿಯ ದೀಪಾವಳಿ ನನಗೆ ಮೂದಿಸುತಿತ್ತು. ಆಕಾಶಕ್ಕೆ ಸೊಂಯ್ ಎಂದು ಹಾರಿದ ಬಾಣಗಳು ಸೀದಾ ಬಂದು ನನ್ನ ಹೃದಯಕ್ಕೆ ಘಾಸಿಗೊಳಿಸುತ್ತಿದ್ದವು. ಹಾರುತ್ತಿದ್ದ ಪಟಾಕಿಗಳು ಅಂತರಾತ್ಮವನ್ನು ಕದಲಿಸುತ್ತಿದ್ದವು. ಹೀಗೆಲ್ಲಾ ನನಗಾಗಿದ್ದು ಇದೇ ಮೊದಲು.
ಈ ಹಿಂದೆ ನನಗೆ ಎಂದೂ ಹೀಗಾಗಿರಲಿಲ್ಲ. ದೀಪಾವಳಿ ಅಂದ್ರೆ ನನಗೆ ಅತೀ ಪ್ರೀತಿಯ ಹಬ್ಬ, ಎಲ್ಲ ಹಬ್ಬಗಳಿಗಿಂತ ನಾನು ಪ್ರೀತಿಸುವ ಹಾಗೂ ಇಷ್ಟಪಡುವ ಹಬ್ಬ. ಇದರೊಂದಿಗೆ ನನ್ನ ಅನೇಕ ಭಾವಚುಂಬಿ ಕನಸುಗಳು ತಳುಕುಹಾಕಿಕೊಂಡಿವೆ. ನನಗೆ ಈಗಲೂ ತುಂಬಾ ಚೆನ್ನಾಗಿ ನೆನಪಿದೆ. ಆ ದಿನ, ಅದನ್ನೂ ನಾನು ಸಾಯುವವರೆಗೂ ಮರೆಯಲು ಸಾಧ್ಯವೇ ಇಲ್ಲ. ಇದು ಮಾತ್ರ ಸ್ಪಟಿಕದಷ್ಟು ನಿಚ್ಚಳ, ಸ್ಪಷ್ಟ. ಅದು ಕೂಡ ದೀಪಾವಳಿಯ ದಿನವೇ ಆಗಿತ್ತು. ಆಗ ನಾನು ಬರೀ ಆರೇಳು ವರ್ಷದ ಪೋರ(ಬಾಲಕ). ಕಾಂಪೌಂಡ್ ಮೇಲೆ ಕುಳಿತು ನನ್ನ ಓಣೆಯಲ್ಲಿ ಪಟಾಕಿಹಾರಿಸುತ್ತಿದ್ದ ಬೇರೆಯವರನ್ನು ನೋಡುತ್ತಿದ್ದೆ. ಅವರು ಖುಷಿಯಿಂದ ಕುಟುಂಬದೊಂದಿಗೆ ಪಟಾಕಿ ಹಾರಿಸುತ್ತಿದ್ದರು. ನಾನೂ ಅವರಂತೆಯೇ ಬಾಣ-ಬಿರುಸುಗಳನ್ನು ಹಾರಿಸಬೇಕು, ಮನಃತುಂಬಿ ಕುಣಿದಾಡಬೇಕು, ಪಟಾಕಿಯ ಸದ್ದು ಒಳಗೆ ಹಾಸಿಗೆಯಲ್ಲಿ ಮಲಗಿದ್ದ ಅಣ್ಣ ಹಾಗೂ ಅಕ್ಕಳಿಗೆ ಎಬ್ಬಿಸಿ ಅಚ್ಚರಿಯನ್ನುಂಟುಮಾಡಬೇಕು ಎಂದು ಕುಳಿತಿದ್ದೆ. ಮುಂದೆ ನಾನೂ ವಿಭಿನ್ನಾವಿಭಿನ್ನ ಥರದ ಪಟಾಕಿಗಳನ್ನು ಹಾರಿಸುತ್ತಿರುವುದನ್ನು ಹೃದಯದಲ್ಲಿ ಧೆನಿಸಿಕೊಂಡೆ, ವ್ಹಾ...! ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು.. ಮತ್ತೆ ವಾಸ್ತವಕ್ಕೆ ಮರಳಿದೆ.
ಎಲ್ಲರೂ ಪಟಾಕಿ ಹೊಡೆದು ಮನೆಯೊಳಗೆ ತೆರಳಿದ್ದರು. ಆದರೆ, ನಾನು ಮಾತ್ರ ಅಪ್ಪನಿಗಾಗಿ ಕಾಯ್ತಾ ಕುಳಿತಿದ್ದೆ. ಬೆಳಗ್ಗೆ ನಾನು ಪಟಾಕಿ ಲಿಸ್ಟ ಮಾಡಿಕೊಟ್ಟಿದ್ದೆ, ಅಪ್ಪ ನನಗೆ ಆ ಎಲ್ಲಾ ಪಟಾಕಿಗಳನ್ನು ತರುವುದಾಗಿ ಪ್ರಾಮಿಸ್ ಮಾಡಿ ಹೋಗಿದ್ರು. ಆದ್ರೆ ರಾತ್ರಿ 10 ಗಂಟೆ ಆದರೂ ಅಪ್ಪನ ಸುಳಿವೇ ಇಲ್ಲ, ಒಳಗಡೆಯಿಂದ ಅಮ್ಮ ಕೂಗಿದಳು ಬಾರೋ ನಿಮ್ಮಪ್ಪ ಇವತ್ತೂ ಲೇಟೆ.. ಬಂದು ಊಟ ಮಾಡಿ ಮಲ್ಕೋ ಎಂದರು. ಅದರೆ ಮನಸಿನಲ್ಲಿ ಮಂಡಕ್ಕಿ ತಿನ್ನುತಿದ್ದ ನನ್ನ ಈ ಹಾಳು ವಾಂಛೆ ನಿದ್ದೆ ಮಆಡಲು ಬಿಟ್ಟೀತೆ.
ಆಯ್ತಮ್ಮ ಇನ್ನೇನು ಅಪ್ಪ ಬರ್ಬಹುದು ಎಂದು ಓಣೆಯ ರಸ್ತೆ ಕಡೆ ಕಣ್ಣು ಹಾಯಿಸಿದೆ. ಯಾರೂ ಇಲ್ಲ. ಕಣ್ಣು ರೆಪ್ಪೆ ಮುಚ್ಚುತಿದ್ದವು, ಆದರೂ ಪಟಾಕಿ ಹಾರಿಸಬೇಕೆಂಬ ನನ್ನ ಹೆಬ್ಬಯಕೆಯ ಎದುರು  ನಿದ್ದೆ ಯಾವ ಲೆಕ್ಕ ಹಾಗೇ ಕುಳಿತೆ. ಕೊನೆಗೂ ನಿರೀಕ್ಷೆ ಬಸಿರು ಹರಿದು ರಸ್ತೆಯ ಮೇಲೆ ಯಾರೋ ಬರುವ ಕರಿನೆರಳು ಕಣ್ಣಿಗೆ ಕಾಣಿಸಿತು. ಅದ್ಯಾರಿರಬಹುದೆಂದು ತದೇಕ ಚಿತ್ತದಿಂದ ನೋಡಿದೆ. ದೂರ ಕಡಿಮೆ ಆಗುತ್ತಾಹೋದಂತೆ, ಆಖತ್ರಿ ಆಯ್ತು ಅಪ್ಪಾನೇ ಬರ್ತಾ ಇದಾರೆ ಅಂತಾ, ಯುನೋ ಆ ನನಗೆ ಸ್ವರ್ಗ ಜಸ್ಟ್ ಮೂರೇ ಗೇಣು! ಕಾಂಪೌಂಡ್  ಎತ್ತರ ಗಮನಿಸದೇ ಹಾರಿ ರಸ್ತೆ ಮೇಲೆ ನಿಂತೆ.. ಆಶ್ಚರ್ಯ ಅಪ್ಪನ ಕೈಯಲ್ಲಿ ಯಾವ ಬಾಣ-ಬಿರುಸೂ ಇಲ್ಲ. ಸೈಕಲ್ನಿಂದ ಕೆಳಗಿಳಿದವರೇ ಅವರಿಗೆ ನಿಲ್ಲೋದಕ್ಕೂ ಆಗುತ್ತಿಲ್ಲ. ಅಮೇಲೆ ತಾನೆ ಗೊತ್ತಾಗಿದ್ದು, ಅಪ್ಪಾ ಅವತ್ತೂ ಸುರಾಧಿನರಾಗಿದ್ದರು. ನನ್ನ ಮೂರು ಗಂಟೆಯ ನಿರೀಕ್ಷೆ ಕಣ್ಣಾಲಿಯಲ್ಲಿ ನೀರಾಗಿ ಹರಿಯಲಾರಂಭಿಸಿತು. ಕಷ್ಟಪಟ್ಟು ಕಂಟ್ರೋಲ್ ಮಾಡಿಕೊಳ್ಳಲು ಯತ್ನಿಸಿದೆ, ಆಗಲಿಲ್ಲ. ಅಮ್ಮನೆಡೆಗೆ ಓಡಿ ಗಟ್ಟಿಯಾಗಿ ತಬ್ಬಿಕೊಂಡೆ, ಅಳಲಾರಂಭಿಸಿದೆ. ಅಮ್ಮ ಕೂಡ ಅಷ್ಟೆ ನನ್ನನ್ನು ತನ್ನ ಸೆರಗಿನಲ್ಲಿ ನನ್ನನ್ನು ಅವಿತುಕೊಂಡ ಸಂತೈಸಿದಳು. ಅಪ್ಪಾ ಒಳಗೆ ಬಂದವರೇ ಅಮ್ಮನಿಗೆ ಹೊಡೆಯಲಾರಂಭಿಸಿದರು. ಇದು ನಮ್ಮ ಮನೆಯಲ್ಲಿ ನಿತ್ಯ ಕಥೆ...
ಟ್ರಸ್ಟ್ ಮಿ ಫ್ರೆಂಡ್ಸ್ ಅವತ್ತು ಪಟಾಕಿ ತರಲು ಮರೆತಿದ್ದ ನಮ್ಮಪ್ಪ ಮುಂದೆ ನನ್ನ ಭವಿಷ್ಯಕ್ಕಾಗಿ ಅಷ್ಟೊಂದು ಕಷ್ಟ ಪಡಬಹುದು ಎಂದುಕೊಂಡಿರಲಿಲ್ಲ. ಅವರು ತನ್ನ ಎಲ್ಲ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ, ಅಷ್ಟೆ ಯಾಕೆ ತಮ್ಮ ಒಡಲಲ್ಲಿ ಅನೇಕ ಚಿಂತೆಗಳನ್ನು ತುಂಬಿಕೊಂಡು ನನಗೆ ಪಿಜಿ(ಪತ್ರಿಕೋದ್ಯಮ) ಓದಿಸಿದರು. ಅಂದಿನ ಅಪ್ಪನಿಗೂ ಇಂದಿನ ಅಪ್ಪನಿಗೂ ವ್ಯತ್ಯಾಸ ತಾಳೆ ಹಾಕುವುದಾದರೆ, ಕಣ್ರೆಪ್ಪೆ ಒದ್ದೆಯಾಗುತ್ತೆ. ಬಳಿಕ ನಾನೂ ಸ್ನಾತಕೋತ್ತರ ಮುಗಿಸಿ, ಸಂಯುಕ್ತ ಕನರ್ಾಟಕ ಬೆಂಗಳೂರು ಕಚೇರಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ, ಇವತ್ತಿಗೆ ನಾನು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಒಂದು ವರ್ಷ ಒಂದು ತಿಂಗಳು ಕಳೆದಿರಬಹುದು. ಅದೇ ರೀತಿ ನನ್ನ ಭವಿಷ್ಯಕ್ಕಾಗಿ ಬೆನ್ನೆಲುಬಾಗಿ, ಇಂಬಾಗಿ, ಕಸುವಾಗಿ, ಸ್ಫೂತರ್ಿಯ ಸೆಲೆಯಾಗಿ ನಿಂತಿದ್ದ ನಮ್ಮಪ್ಪ ನನ್ನನ್ನು ಬಿಟ್ಟು ಅಗಲಿ ಆರು ತಿಂಗಳುಗಳೇ ಕಳೆದಿವೆ. ಆದರೆ, ಅವರ ನೆನಪು ಮಾತ್ರ ಇನ್ನೂ ಹಸಿಹಸಿ, ಅಮ್ಮ ಕೂಡ ಅಷ್ಟೆ ಈ ದೀಪಾವಳಿಯಲ್ಲಿ ಯಾವುದೇ ಆಚರಣೆ ಮಾಡುತ್ತಿಲ್ಲ. ಮನೆಯಲ್ಲೆಲ್ಲಾ ಸೂತಕದ ಛಾಯೆ... ನಾನು ಈ ಸಲ ದೀಪಾವಳಿಗೆ ಮನೆಗೆ ಹೋಗಲಾಗಲಿಲ್ಲ. ಯಾಕೋ ಹೋಗಬೇಕೆಂದೂ ಎನಿಸುತಿಲ್ಲ. ಭಾವನೆಗಳು ಭಾರವಾಗಿ, ಕಣ್ಣಹನಿಗಳು ಬತ್ತಿಹೋಗಿವೆ ಎಂದೆನಿಸುತ್ತಿದೆ.
ಅದಕ್ಕೆ ಹೇಳಿದ್ದು, ಹೊರಗಡೆ ದೀಪಾವಳಿ ಆದರೆ ನನ್ನೊಡಲಲ್ಲಿ ದೀಪಗಳ ಹಾವಳಿ ಎಂದು..
ಫ್ರೆಂಡ್ಸ್ ಅಪ್ಪನನ್ನು ಎಂದೂ ಹೇಟ್ ಮಾಡಬೇಡಿ ಆದಷ್ಟು ದಿನ ಅವರೊಂದಿಗೆ ಖುಷಿಖುಷಿಯಿಂದ ಬದುಕಿ, ಈ ದೀಪಾವಳಿ ನಿಮ್ಮೆಲ್ಲರ ಬಾಳಲ್ಲಿ ಸುಖ, ನೆಮ್ಮದಿ, ಶಾಂತಿ ಹಾಗೂ ಬೆಳಕನ್ನು ತರಲಿ ಎನ್ನುವುದೇ ನನ್ನ ಹೆಬ್ಬಯಕೆ..


Saturday, October 22, 2011

ಇಲ್ಲ್ಲೂ ನೀನೆ ಎಲ್ಲೂ ನೀನೆ ಎಲ್ಲೆಲ್ಲೂ ನೀನೆ..

ಹೊಸ ಗಾನಾ ಬಜಾನಾ..
ಅಪಸ್ವರದ ಮಧ್ಯೆ ಮೆಟ್ರೋ ಮೋಡಿ..!
ಮೊನ್ನೆ ಬೆಂಗಳೂರಿಗರ ಖುಷಿಗೆ ಪಾರವೇ ಇರಲಿಲ್ಲ. ಅಂತೂ ಬಹುದಿನದ ಕನಸು ನನಸಾಯಿತು ಎಂಬ ಸಾರ್ಥಕತೆ ಜತೆಗೆ ದಕ್ಷಿಣ ಭಾರತದಲ್ಲಿಯೇ ಇದೇ ಮೊದಲು ಕನರ್ಾಟಕದಲ್ಲಿ ಮೆಟ್ರೋ ಟಿಸಿಲೊಡೆದು ಹಳಿಗಳ ಮೇಲೆ ರೊಂಯ್ ಗುಟ್ಟುತ್ತ ಹೋಗುವಾಗ ಎಲ್ಲರ ಕಣ್ಣಲ್ಲೂ ಧನ್ಯತೆಯ ಭಾವ.
ಹಲವು ವರ್ಷಗಳಿಂದ ಎಲ್ಲರ ಗಮನ ತನ್ನತ್ತ ಸೆಳೆದಿದ್ದ `ನಮ್ಮ ಮೆಟ್ರೋ'ಗೆ ಕೊನೆಗೂ ಉದ್ಘಾಟನೆಯ ಭಾಗ್ಯ ಲಭಿಸಿದೆ. ವಿಧಾನಸೌಧ ಹಾಗೂ ಪರಪ್ಪನ ಅಗ್ರಹಾರ ನಡುವಣ ಸಂಬಂಧ  ಗಟ್ಟಿಗೊಳ್ಳುತ್ತಿರುವ ಜತೆಜತೆಗೆ ಈ ಬೆಳವಣಿಗೆ ನಡೆಯಿತು. ತಾನೇ ಮೆಟ್ರೋ ಉದ್ಘಾಟನೆ ನೆರವೇರಿಸಬೇಕು ಎಂಬ ವಾಂಛೆಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡ್ಯೂರಪ್ಪ ಅವರ ಅನುಪಸ್ಥಿಯಲ್ಲಿಯೇ ಈ `ಐ-ಘಟನೆ' ನಡೆದು ಪರದೆಯತ್ತ ಸರಿಯಿತು. ಆಕಡೆ ಕಂಬಿಯ ಮೇಲೆ ಅಂಬೇಗಾಲಿಡುತ್ತಾ ಮೆಟ್ರೋ ಮುನ್ನೆದಿತ್ತು. ಈಕಡೆ ಕಂಬಿಯ ಹಿಂದೆ ಸಂಘಟನೆಯ ನಾಯಕ ಅಂಬ್ಯೂಲೆನ್ಸ್ನಿಂದ ಅಂಬ್ಯೂಲೆನ್ಸ್ಗೆ ಹಾರಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಹಾರುವ ಯತ್ನದಲ್ಲಿದ್ದರು. ಮತ್ತೊಂದು ಕಡೆ ಇವರ ಆಪ್ತರೆನಿಸಿಕೊಳ್ಳುವ ಭಾಜಪ ಸದಸ್ಯರು ಖುಷಿಯ ಕ್ಷಣಗಳನ್ನು ಮೆಟ್ರೋ ರೈಲಲ್ಲಿ ಕಳೆಯುತ್ತಿದ್ದರು. ಇನ್ನೊಂದೆಡೆ ಕೇಂದ್ರವನ್ನೇ ಕದಲಿಸಿದ ಸೆಡ್ಯೂರಪ್ಪ ಹತಾಷೆಯ ನಡುವೆ ತನ್ನ ಕ್ಷಣಗಳನ್ನು `ಗಾಂಧೀ ಭಯಾಗ್ರಫಿ'ಯ ಪುಟಗಳನ್ನು ಭಕ್ತಿಪೂರ್ವಕವಾಗಿ ಎಣಿಸುವ ಪ್ರಯತ್ನದಲ್ಲಿದ್ದರು.
ನಾನು ಈ ಹಿಂದೆ `ಖರಾಬ್ ಟೈಂ' ಅನ್ನೋದರ ಬಗ್ಗೆ ಕೇಳಿದ್ದೆ. ಆದರೆ, ಹೀಗೂ ಇರಬಹುದು ಎಂದೂ ಎಂದೆಂದೂ ಊಹಿಸಿರಲಿಲ್ಲ. ಒಂದು ಟೈಂನಲ್ಲಿ ಕುಬೇರರಂತೆ ಮೆರದ ಇವರೆಲ್ಲ ಹೀಗೂ ಜೈಲಲ್ಲಿ ಕಾಲ ಕಳೆಯುತ್ತಾರೆ ಎಂದೆನಿಸಿರಲಿಲ್ಲ. ಇದೆಲ್ಲ ನೋಡುವಾಗ `ಉಪ್ಪು ತಿಂದವರು ನೀರು ಕುಡಿಯಲೇಬೇಕು' ಎಂಬ ಮಾತು ನೆನಪಾಯ್ತು.
ಏನೇ ಇರ್ಲಿ, `ಹತ್ತರ ಜತೆ ಹನ್ನೊಂದು' ಎಂಬಂತೆ ಪರ ರಾಜ್ಯದ ಮುಖ್ಯಮಂತ್ರಿ ಸಹ ಕೇಂದ್ರ ಕಾರಾಗ್ರಹಕ್ಕೆ ಬಂದು ವಿಸಿಟ್ ಕೊಟ್ಟು ಹೋಗೋ ರೇಂಜಿಗೆ ನಮ್ಮ ಕನರ್ಾಟಕ ಕಾರಾಗೃಹಗಳು ಬಂದಿವೆ ಅಂದ್ರೆ ಒಂದೊಂದು ಸಾರಿ `ಡೌಟ್' ಸ್ಟಾಟರ್್ ಆಗುತ್ತೆ! ನಮ್ಮ ಕಾರಾಗೃಹದ ದ್ವಾರಗಳಿಗೆ ಇಷ್ಟೊಂದು ಕಸುವು ಬಂದುದ್ದಾದ್ರು ಎಲ್ಲಿಂದ? ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಿಗೆ ಇಷ್ಟೊಂದು ಆನೆಬಲ ಎಲ್ಲಿಂದ ಬಂತು. ಇದೆಲ್ಲಾ ಸಂತೋಷ ಹೆಡ್ಗೆ ಅವರು ನೀಡಿದ ಗಣಿ ವರದಿ ಬಳಿಕವೇ ಆದ ಪಾಸಿಟಿವ್ ಇಂಪೆಕ್ಟ್ ಅಲ್ವಾ..?
ಒಟ್ಟಲ್ಲಿ ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರಿಗೆ ನಂಬಿಕೆ ಉಲ್ಭಣಿಸಿದೆ. ಬೆಳಿಗ್ಗೆಯಿಂದ ರಾತ್ರಿವರಗೂ ಹಗರಣಗಳನ್ನು ನೋಡಿ ಜನ ಬೇಸತ್ತು ಹೋಗಿದ್ದರು. ರಾಜಕೀಯ ಎಂದರೆ, ವಾಕರಿಕೆ ಹುಟ್ಟಿಸುತಿತ್ತು. ಸಮ್ ಟೈಮ್ಸ್ ಅಂತು ನಾವು ಆರಿಸಿ ಕಳುಹಿದ ಜನನಾಯಕರು ಇವರೇನಾ ಎಂದೂ ಎನಿಸತೊಡಗಿತ್ತು. ಇವರು ಇಷ್ಟೊಂದು ಭ್ರಷ್ಟತೆಯಿಂದ ಮೆರೆದರೂ ಕಾನೂನು ದೇವತೆ ಮತ್ರ ಕನ್ಫ್ಯೂಷನ್ನಲ್ಲಿ ಏಕೆ ಕೂತಿದ್ದಾಳೆ ಎಂದೆನಿಸುತ್ತಿತ್ತು. ಇದರ ಫಲಶೃತಿ ಎಂಬಂತೆ ಅಣ್ಣಾಗಿರಿಯೂ ಆರಂಭವಾಯ್ತು. ಇದರಿಂದ ಯುವಶಕ್ತಿ ಒಗ್ಗಟ್ಟಿನಿಂದ, ಒಕ್ಕೊರಳಿನಿಂದ ಸಕರ್ಾರದ ಮೇಲೆ ಒತ್ತಡ ಹೇರಿತ್ತು. ಹೀಗೆ ಬೆಳಯುತ್ತಾ ಬಂದ ಕ್ರಾಂತಿಯ ಸೆಲೆ ವಿವಿಧ ರೂಪ ಪಡೆಯುತ್ತಾ ಇಂದು ಇಂಥ ಸ್ವರೂಪ ತಳೆದಿದೆ.
ಈ ಹಿಂದನಿಂದಲೂ ಪ್ರತಿಯೊನ್ನರೂ ಹೇಳುತ್ತಿದ್ದ ಸಾಮಾನ್ಯ ಮಾತಿನಂತೆ, ಕಾನೂನು ಶಿಕ್ಷಿಸುವುದು ಕೇವಲ ದುರ್ಬಲರನ್ನು ಎಂಬ ಮಾತು ಇಲ್ಲಿ ಸ್ವಲ್ಪ ಮಟ್ಟಿಗೆ ಸುಳ್ಳಾಗಿದೆ. ಇತ್ತೀಚೆಗೆ ಪ್ರಭಾವಿ ವ್ಯಕ್ತಿಗಳಿಗಾದ ಗತಿಯನ್ನು ನೋಡಿ ಜನರಿಗೆ ಕಾನೂನಿನ ಮೇಲಿದ್ದ ಅಪನಂಬಿಕೆಯ ಕಾಮರ್ೋಡ ಮಾಯವಾಗಿ ನಿರೀಕ್ಷೆಯ ಕಿರಣವೊಂದು ಟಿಸಿಲೊಡೆದಿದೆ. ಇದೆಲ್ಲಾ ಅಭಿವೃದ್ಧಿಯ ಪ್ರತೀಕವೇ ಅಥವಾ ಮಿಡಿಯಾ ಹಾಗೂ ರಾಜಕೀಯ ಪಕ್ಷಗಳ ಮಸಲತ್ತೇ ಎನ್ನುವ ವಿಷಯ ಇನ್ನು ಕೆಲವೇ ದಿನಗಳಲ್ಲಿ ಗೋಚರಿಸುವದರಲ್ಲಿ ಸಂದೇಹವಿಲ್ಲ.
ಮತ್ತಷ್ಟು ಗೋಮುಖವ್ಯಾಘ್ರರ ಸಾಚಾತನ ಬಯಲಿಗೆ ಬರಲಿದೆ.. ಇದೆಲ್ಲದರ ಹಿಂದೆ ಮಾಹಿತಿ ಹಕ್ಕು ಕಾಯ್ದೆ ಕಾರ್ಯವೈಖರಿಯನ್ನು ಎಂದೂ ಮರೆಯುವಂತಿಲ್ಲ.
ಆತೀಶ್ ಬಿ ಕೆ.

Friday, October 14, 2011

ಮುಂದೂ+ಭಯ=ಮುಂಭಯ

ಇತ್ತೀಚೆಗೆ ನಮ್ಮ ಸುತ್ತಲೂ ನಡೆಯುತ್ತಿರುವ ದಗಲ್ಬಾಜಿ ಸುತ್ತ ಒಂದು Reವೀವ್...

Thursday, October 13, 2011

ಲೈಫ್ ಇಸ್ ಮ್ಯಾಜಿಕ್ ಬಾಕ್ಸ್..!

ರಾ ದರ್ಬಾರು
ಕುಛ್ ಖಟ್ಟಾ; ಕುಛ್ ಮಿಠಾ..

ನಿಮಗೆ ಯಾವತ್ತಾದ್ರು ಯಾಕಾದ್ರು ದೊಡ್ಡವರಾದ್ವಪ್ಪಾ ಚಿಕ್ಕವರಿದ್ದಾಗೆ ಲೈಫ್ ಚೆನ್ನಾಗಿತ್ತು. ಒಂಥರಾ ಖುಷಿ ಇತ್ತು. (ಕುಛ್ ಖಟ್ಟಾ; ಕುಛ್ ಮಿಠಾ) ಎಂದೆನಿಸಿದೇನಾ?
ನನಗೆ ಮೊನ್ನೆ ಹಾಗೇ ಅನಿಸ್ತು! ಆಫಿಸ್ಗೆನೋ ರಜೆ ಇರ್ಲಿಲ್ಲಾ. ಆದ್ರು ಈ ಬಾರಿ ನಮ್ಮೂರಲ್ಲೇ ವಿಜಯದಶಮಿ ಆಚರಣೆ ಮಾಡ್ಬೇಕು ಅನ್ಕೊಂಡು ಹೊಗಿದ್ದೆ, ಆದ್ರೆ ಅಲ್ಲಿ ಆದದ್ದೇ ಬೇರೆ. ಪ್ರತಿ ವರ್ಷ ಇರುತ್ತಿದ್ದ ಖುಷಿ, ಉನ್ಮಾದ, ಭಾವೋದ್ವೇಗ ಹಾಗೂ ಚೈತನ್ಯ ಈ ಬಾರಿ ಕಾಣಲೇ ಇಲ್ಲ.
ಊರಲ್ಲಿದ್ದದ್ದು ಕೇವಲ ಒಂದೇ ಒಂದು ವಾರ. ಅದೆಲ್ಲಾ ಕಳೆದದ್ದು, ಮನೆಯಲ್ಲೇ ಹೊರತು ಎಲ್ಲಿಗೂ ಹೋಗೋದಕ್ಕೆ ಮನಸಾಗಲ್ಲಿಲ್ಲ. ತಿರುಗಾಡೋದಕ್ಕೆ ಸ್ನೇಹಿತರೂ ಊರಿಗೆ ಬಂದಿರಲಿಲ್ಲ. ಕಾರಣ ಅವರಿಗ್ಯಾರಿಗೂ ಲೀವ್ ಸಿಕ್ಕಿರಲಿಲ್ವಂತೆ. ಹೀಗಾಗಿ ಈ ಬಾರಿ ಮನೆಯೇ ಎನ್ನ ಪಾಲಿಗೆ ಮಂತ್ರಾಲಯವಾಗಿತ್ತು.
ಡಿಶ್ ಡಿಶುಮ್: ಅಮ್ಮ ಮಾಡಿದ್ದ ಚಕ್ಕಲಿ, ಕರಜಿಕಾಯಿ ಹಾಗೂ ಒಬ್ಬಟ್ಟು ಸೋ ಆನ್ ತಿಂದು ತಿನ್ನುತ್ತಲೇ ಕಾಲ ಕಳೆದೆ. ಹಾಗೇ ಬೋರ್ ಆದಾಗಂತೂ ಇದೇ ಅಲ್ಲಾ ಆ(3ಖ)ರ ಪೆಟ್ಟಿಗೆ! ಅದರ ಮುಂದೆ ಕಾಲ ಕಳೆದೆ, ಹಾಗೇ ಓದೊದಕ್ಕೆ ಏನೋ ಪುಸ್ತಕ ತಗೊಂಡುಹೋಗಿದ್ದೆ ಅಂತಾ ಬಚಾವಾದೆ. ಸೋ ಪುಸ್ತಕನೂ ಓದಿ ಮುಗಿಸೋದಕ್ಕಾಯಿತು.
ಬಟ್ ಈ ಹಿಂದೆಂದಿಗಿಂತ ಈ ಬಾರಿ ಮನೇಲಿ ಅದ್ರಲ್ಲೂ ಸ್ಪೆಷಲ್ಲಿ ಅಮ್ಮನ ಜತೆ ಸ್ವಲ್ಪ ಜಾಸ್ತಿನೇ ಸಮಯ ಕಳೆಯೋದಕ್ಕೆ ಅವಕಾಶ ಸಿಕ್ತು. ಬೆಂಗಳೂರು ಊಟ ತಿಂದು ಸಾಕಾಗಿತ್ತು, ವ್ಹಾ ಅಮ್ಮನ ಕೈ ಊಟ ನೆನೆಸಿಕೊಂಡರೆ ಈಗಲೂ ಬಾಯಲ್ಲಿ ನೀರು ಬರುತ್ತೆ. ಒಂಥರಾ ಖುಷಿಯಲ್ಲಿ ಮನಸು ತೇಲಾಡುತ್ತೆ. ಅದ್ರಲ್ಲೂ ಜೋಳದ ರೊಟ್ಟಿ, ಶೇಂಗಾ ಚಟ್ನಿ ತಿನ್ನದೇ ತುಂಬಾನೇ ದಿನಗಳು ಕಳೆದಿದ್ವು. ಹಬ್ಬ ಇತ್ತು ಹೀಗಾ ರೊಟ್ಟಿ ಏನೂ ತಿನ್ನಕ್ಕಾಗಲಿಲ್ಲ. ಆದರೆ, ಹಬ್ಬದ ಮರುದಿನದಿಂದಂತೂ ರೊಟ್ಟಿಯದ್ದೇ ಪಾರುಪತ್ಯ.
ಮೊನ್ನೆ ಅಂದ್ರೆ ಸಂಡೇ ಮತ್ತೆ ಬೆಂಗಳೂರಿಗೆ ಬಂದಿದ್ದೀನಿ, ಲೆಟ್ಸ್ ಮತ್ತೆ ಅದೇ ಹೋರಾಟ, ಅದೇ ಬದುಕು ನಡೀತಾ ಇದೆ. ಬಹುಶಃ ದೀಪಾವಳಿಗೆ ಊರಿಗೆ ಹೋಗೋದಕ್ಕಾಗಲ್ಲ ಅನಸುತ್ತೆ. ಏನೆ ಇರಲಿ ಈ ಬಾರಿ ಮನೇಲಿ ಕಳೆದ ಟೈಮ್ ಮರೆಯಲಾಗದು.. ಅಮ್ಮನನ್ನು ಮಾತ್ರ ತುಂಬಾ ಮಿಸ್ ಮಾಡ್ಕೋತಿನಿ.. ಫ್ರೆಂಡ್ಸ್ ನಿಮ್ದು ಅದೇ ಕಥೆ ಅನ್ಕೋತಿನಿ.. ಇಸ್ ಇಟ್?