Saturday, July 16, 2011

Direct Word...

ಮತ್ತೆ ನಲುಗಿದ ಮುಂಬೈ...

ಹೈ ಸೋನೆ ಕಿ ಚಿಡಿಯಾ, ಅಬ್ ತೇರೆ ಬೇಟೆ ಹೋಗಯೆ ಹೈ ರಾಜನೀತಿಕಿ ಗುಡಿಯಾ(ಕೈಗೊಂಬೆ)!!!
"ನಾರೀಮನ್ ನರಳಾಟ, ತಾಜ್ ತಾಂಡವ ಇನ್ನೂ ಹಸಿ-ಬಿಸಿ. ಹೀಗಿರುವಾಗಲೇ ಏದುಸಿರು. ಲೆಟ್ಸ್ ಟುಗೆದರ್ ಇದು ಸರ್ವ ಭಾರತೀಯರು ಒಂದಾಗಲೇಬೇಕಾದ ಸಮಯ. ಈಗ ಒಂದಾಗದಿದ್ದಲ್ಲಿ ಮುಂದೆ ಅವಕಾಶ ದೊರಕದೆ ಹೋಗದಿರುವಲ್ಲಿ ಸಂದೇಹವಿಲ್ಲ. ಕಾರಣವಿಷ್ಟೆ, ಮುಂದೆ ಕಸಬ್ ನಿಮ್ಮ ಮನೆಗೂ ಬರಬಹುದು! ಅಲ್ಲಿಯೂ ರಕ್ತದೋಕುಳಿ ಹರಿಸಬಹುದು. ಇಲ್ಲಿ ರಾವಣನ ನಿನರ್ಾಮ ಖಚಿತ... (ರಾವಣ ಯಾರು ಎನ್ನುವುದು ಇನ್ನೂ ನಿಗೂಢ ಎನ್ನುವುದು ನಮ್ಮ ರಾಜಕೀಯ ವ್ಯಕ್ತಿಗಳ ಅಭಿಪ್ರಾಯ..!!)"
ಪದೇ-ಪದೆ ರಕ್ತದೋಕುಳಿಯಾಡುತ್ತಿರುವ ಈ ನರಹಂತಕರರಿಗೆ ಮೂಗುದಾರ ಹಾಕುವ ಸಾಮಥ್ರ್ಯ ಭಾರತಕ್ಕಾಗಲೀ, ವಿಶ್ವದ ಹಿರಿಯಣ್ಣನ ಸ್ಥಾನದಲ್ಲಿರುವ ಅಮೆರಿಕಕ್ಕಾಗಲಿ ಅಷ್ಟೇ ಯಾಕೆ ಖುದ್ದು ಪಾಕಿಸ್ತಾನಕ್ಕೇ ಇಲ್ಲ. ಅದರ ಪರಿಣಾಮವೇ ಈ ತ್ರಿವಳಿ ಬಾಂಬ್ ಸ್ಫೋಟಗಳು.
26/11 ಇನ್ನೂ ಕಣ್ಣೆದುರು ಹಸಿಹಸಿಯಾಗಿದೆ. ಅಷ್ಟರಲ್ಲೇ 13/7 ನಡೆದು ಪರದೆಯತ್ತ ಸರಿಯಿತು. ಈ ಪಾತಕಿಗಳ ಪಾಪಕೃತ್ಯಕ್ಕೆ 17 ಜನ ಬಲಿಯಾಗಿದ್ದಾರೆ. 131 ಜನ ಜೀವನ್ಮರಣದ ನಡುವೆ ಸೆಣಸುತ್ತಿದ್ದಾರೆ. ಇಂಥ ಕ್ರೌರ್ಯದಲ್ಲಿಯೇ ಸಂತೃಪ್ತಿ ಪಡುವ ಪಾಕಿಸ್ತಾನಿಗಳು ಜಿಹಾದ್ ಹೆಸರಿನಲ್ಲಿ ಇದೆಲ್ಲಾ ನಡೆಸುತ್ತಿರುವುದಕ್ಕೆ ಕಾರಣ ಹಲವಾದರೆ, ಉದ್ದೇಶ ಒಂದೇ ಅದು ಭಯ+ಉತ್ಪಾದನೆ. ಕಂಪನಿಯಲ್ಲಿ ವಸ್ತುಗಳ ಉತ್ಪಾದನೆ ಹಾಗೂ ಟಾಗರ್ೆಟ್ಗಳಿರುವಂತೆ ಇಲ್ಲಿಯೂ ಅವರಿಗಿರುವುದು ಭಯ ಹುಟ್ಟಿಸಲೇಬೇಕೆಂಬ ಟಾಗರ್ೆಟ್.
ಇಂಡಿಯನ್ ಮುಜಾಹಿದ್ದೀನ್, ಲಷ್ಕರ್ ಕೃತ್ಯ ಎಂದು ಹೇಳಲಾಗುತ್ತಿದೆ. ಆದರೂ ಇನ್ನೂ ಯಾರೂ ಇದರ ಹೊಣೆಹೊತ್ತುಕೊಂಡಿಲ್ಲ. ಯಾರು ಹೊಣೆ ಹೊತ್ತುಕೊಂಡರೆಷ್ಟು ಬಿಟ್ಟರೆಷ್ಟು ಏನೂ ಬದಲಾಗದು ಎಂಬ ಮಾತು ಮಾತ್ರ ಸ್ಪಟಿಕದಷ್ಟು ಸ್ಪಷ್ಟ.
ಈ ಘಟನೆಗಳನ್ನು ಗಮನಿಸುತ್ತಿರುವಾಗ ಒಂದು ಮಾತು ನೆನಪಾಗುತ್ತೆ, "ಹಿಂಸೆ ಕೊಡುವವರಿಗಿಂತ ಸಹಿಸಿಕೊಳ್ಳುವವನೇ ಹೆಚ್ಚು ಅಪರಾಧಿ..." ಹಾಗೇ ಇಲ್ಲಿಯೂ ಅಷ್ಟೆ. ಬೆಣ್ಣೆ ಕೈಲಿಟ್ಟುಕೊಂಡು ತುಪ್ಪಕ್ಕಾಗಿ ಅಲೆದಾಡಿದಂತಾಗಿದೆ. ನಮ್ಮೀ ರಾಷ್ಟ್ರದ ಸ್ಥಿತಿ, ಪರಿಸ್ಥಿತಿ... ಇದರ ಫಲಶ್ರುತಿ ಅಮಾಯಕರ ಪ್ರಾಣತ್ಯಾಗ.
ಈ ಉದಾಹರಣೆಗೆ ಇಷ್ಟೇ ಕಾರಣ, ಕಸಬ್ ಸಿಕ್ಕು ತಿಂಗಳುಗಳು ಸವೆಯುತ್ತಿವೆ. ವರ್ಷಗಳು ಘಟಿಸುತ್ತಿವೆ. ಆದರೆ, ಬೆಳವಣಿಗೆ ಮಾತ್ರ ಶೂನ್ಯ! ಬದಲಿಗೆ `ಪಾತಕಿಗಳ ಪತಿ'ಗೆ ರಾಜ ಸತ್ಕಾರ ಹಾಗೂ ಭೋಗದ ಜೀವನ ನೀಡಲಾಗುತ್ತಿದೆ. ಇರುವುದಕ್ಕೆ ಜೈಲು, ಓದುವುದಕ್ಕೆ ಪುಸ್ತಕಗಳು, ಸಮಯ-ಸಮಯಕ್ಕೆ ಬೇಕಾದ ಎಲ್ಲಾ ವಸ್ತುಗಳು ಹಾಗೂ ಇಲ್ಲಿಯವರೆಗೆ ಇವನ ಜೀವನ ನಿರ್ವಹಣೆಗೆ ಭಾರತ (ಅ)ಸಕರ್ಾರ ಕೋಟಿ ಕ್ರಾಸ್ ಮಾಡಿದೆ. ಬಹುಶಃ ಬೆಂಗಳೂರಿನಂಥ ನಗರದಲ್ಲಿ ದಿನವಿಡೀ ದುಡಿಯುವ ಕೂಲಿಯಾಳಿಗೂ ಆ ಜೀವನ ಅಲಭ್ಯವಾಗಿದೆ. ಇದನ್ನು ನಮ್ಮ ದೌಭರ್ಾಗ್ಯವೆಂದರೆ ಉತ್ಪ್ರೇಕ್ಷೆಯೇನಲ್ಲ.
ವಿಷಯವಸ್ತು ಇಷ್ಟೆ, 13 ಜುಲೈ ಮಿಸ್ಟರ್ ಪರಮ ಪಾತಕಿಯ ಹುಟ್ಟು ಹಬ್ಬ. ಆ ಹುಟ್ಟು ಹಬ್ಬದ ಉಡುಗೊರೆಯಾಗಿ ಅವನಿಗೆ ಭಾರತೀಯರ ರಕ್ತದ ಹವ್ವಿಸ್ಸು. ವಾಹ್ಹ ಎಂಥಾ `ದೇಶ ಪ್ರೇಮ.' ಅವರಿಗಾಗಿ ತಾಜ್ನಲ್ಲಿ ತಕರಾರಿಲ್ಲದೆ ತರಾತುರಿಯಲ್ಲಿ ಬುಲೆಟ್ ಸುರಿಸಿದ ಕಸಬ್ ಇಂದು (ನಿ)ರ್ಬಂಧಿ. ಅಂಥವನಿಗಾಗಿ ಇಂಥದ್ದೊಂದು ಕೊಡುಗೆ ನೀಡುವ ಉ(ದಾರ)ದ್ರಿ  ಮನೋಭಾವ. ಇವರ ತಮ್ಮ ಸ್ವಾರ್ಥಕ್ಕಾಗಿ, ಸೀಟು ರಕ್ಷಣೆಗಾಗಿ ತಿಪ್ಪರಲಾಗ ಹಾಕುವ ರಾಜಕೀಯ ಧುರಿಣರು.
ಇಷ್ಟೇಲ್ಲಾ ಹೇಳೋದರ ಪ್ರಮುಖ ಉದ್ದೇಶ ಒಂದೆ, ಸಾಯಂಕಾಲದ ಸುಂದರ ಗಾಳಿಯಲ್ಲಿ ಕುಟುಂಬದೊಂದಿಗೆ ಏನೋ ಖರೀದಿ ಮಾಡಬೇಕೆಂದು ಬಂದ ಮಕ್ಕಳು, ಪಾಲಕರು ಹೀಗೆ ಹತ್ತು ಹಲವಾರು ವರ್ಗದ ಜನ ನಿಭರ್ಿಡೆಯಿಂದ (ಬಹುಶಃ ಇದು ತಮ್ಮ ಮನೆಯೆಂದು) ತಿಳಿದೋ ಏನೋ ತಿರುಗಾಡುತ್ತಿದ್ದರು. ಅಂಥ ವೇಳೆ ನಡೆದುದ್ದೇ ಈ ನರಮೇಧ....
ಜಸ್ಟ್ ಈ ನರಮೇಧದ ಕಡೆ ಮೆಲುಕು ಹಾಕೋಣ:
mugdha aakrandana
ಅಪೇರಾ ಹೌಸ್, ಜವೇರಿ ಬಜಾರ್, ಚನರ್ಿರಸ್ತೆ ಹಾಗೂ ದಾದರ್ ಮತ್ತಿತರ ಸ್ಥಳಗಳಲ್ಲಿ ಒಟ್ಟು 9 ನಿಮಿಷಗಳಲ್ಲಿ ಅಂದರೆ, 6.51-7 ಆಸುಪಾಸಿನವರೆಗೆ ನಡೆದ ಈ ಡೀಲಿಂಗ್ ಮತ್ತೆ ಜನರಲ್ಲಿ ಎಲ್ಲಿಲ್ಲದ ಭಯ ಮೂಡಿಸಿದೆ. ವಿಶೇಷವೆಂದರೆ ಈ ಮೂರೂ ಸ್ಥಳಗಳು ಜನನಿಬಿಡ. ಇಂಥ ಸ್ಥಳದಲ್ಲಿ ಸ್ಫೋಟ ನಡೆಯಬೇಕಾದ್ದಲ್ಲಿ ಸಾಮಾನ್ಯವಾದುದ್ದೇನಲ್ಲ. ಇದೊಂದೆ ಅಲ್ಲ, ಯಾವ ಸ್ಫೋಟ ನಡೆಯಬೇಕಾದರೂ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈ ಇರಲೇಬೇಕು. ಹೀಗಿದ್ದಾಗ ಮಾತ್ರ ಇದು ಸಾಧ್ಯ. ಈಗ ಪ್ರತಿಯೊಂದು ಪ್ರಾಬ್ಲಮ್ಗಳ ಎದುರಿರುವುದು ಒಂದೇ ಸವಾಲು, ಅದು ಈ ರಕ್ತದೋಕುಳಿ ಹಿಂದಿರುವ ಕೈಗಳನ್ನು ಪತ್ತೆ ಹಚ್ಚುವ ಕೆಲಸವಾಗಬೇಕು.
ಈ ವಿಷಯಗಳು ಸೈಡ್ಗಿಟ್ಟು, ಸರಣಿ ಸ್ಫೋಟಗಳ ಕುರಿತು ನಮ್ಮ ರಾಷ್ಟ್ರದ ಹೊಣೆಹೊತ್ತವರ ಅಭಿಪ್ರಾಯಗಳನ್ನು ನೋಡೋಣ;

"ಈ ವಿಧ್ವಂಸಕ ಕೃತ್ಯದ ಹಿಂದಿರುವವರ ಹೆಸರು ಹೇಳಲಾರೆ ಹಾಗೂ ಇದರ ಹಿಂದಿರುವವರ ಸುಳಿವು ಸಿಕ್ಕಿಲ್ಲ"
ಪಿ. ಚಿದಂಬರಂ, ಗೃಹ ಸಚಿವ
"ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೊಗೆಯಲು ಸಕರ್ಾರ ನೀತಿಯನ್ನು ರೂಪಿಸಬೇಕು. ವಿಫಲವಾಗಿರುವುದು ಗುಪ್ತಚರ ಸಂಸ್ಥೆಯಲ್ಲ ಸಕರ್ಾರ"
ಲಾಲ್ಕೃಷ್ಣ ಅಡ್ವಾಣಿ, ಬಿಜೆಪಿ ಹಿರಿಯ ನಾಯಕ.
ಉಗ್ರರ ಎಲ್ಲ ದಾಳಿಗಳನ್ನು ತಡೆಯುವುದು ಕಠಿಣ. ಅಮೆರಿಕದಲ್ಲೂ ಉಗ್ರರ ದಾಳಿಗಳು ನಡೆದಿದ್ದು, ಅದನ್ನು ತಡೆಯಲು ಅವರಿಂದಲೂ ಸಾಧ್ಯವಾಗಲಿಲ್ಲ."
ರಾಹುಲ್ ಗಾಂಧಿ, ಎಐಸಿಸಿ ಕಾರ್ಯದಶರ್ಿ.

ಹೀಗೆ ಹಲವರು ಹಲವು ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಇದರಲ್ಲಿ ಕೆಲವರದ್ದು ಪಕ್ಷ ಉಳಿಸಿಕೊಳ್ಳುವ ಪ್ರಯತ್ನವಾದರೆ, ಇನ್ನೂ ಕೆಲವರದ್ದು ಪಕ್ಷ ಬೀಳಿಸುವುದಾಗಿದೆ. ಅವರ ಅಭಿಪ್ರಾಯಗಳಲ್ಲಿ ಪಾರದರ್ಶಕತೆ ಎನ್ನುವುದು ಮೈಲಿ ದೂರ!
ಸತ್ತವರು ಸುಮಾರು. ಆದರೆ ಆ ಸ್ಫೋಟದಲ್ಲಿ ಯಾರೂ ಪ್ರಭಾವಿ ವ್ಯಕ್ತಿಗಳಿಲ್ಲ. (ಇದು ಇಂಥರಾ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟಂತೆ ಎಂದೆನ್ಸಲ್ವಾ?) ಇದರ ಒಳಾರ್ಥ ಸುಸ್ಪಷ್ಟ, ಕಸಬ್ ಬುಲೆಟ್ಗೆ ಕಾಣುವುದು ಕೇವಲ ಬಡವರು, ಅಬ್ಬೇಪಾರಿಗಳು ಹೊರತು ಪ್ರಭಾವಿ(ಸ್ಟ್ರಾಂಗ್) ವ್ಯಕ್ತಿಗಳಲ್ಲ. ಇದೆಲ್ಲಾ ಗಮನಿಸಿವುದಾದರೆ ಕಿತ್ತೂರು ರಾಣಿ ಚೆನ್ನಮ್ಮಳ ರಾಜ್ಯದಲ್ಲಾದ ದಗೇಬಾಜಿ ಏನಾದರೂ ನಮ್ಮಲ್ಲಿಯೂ ನಡೆಯುತ್ತಿರಬಹುದೇ ಎಂಬ ಪ್ರಶ್ನೆ ಏಳುವುದು ಸಾಮಾನ್ಯ... ಅಷ್ಟೆ ಯಾಕೆ ಇದು ಪ್ರತಿಯೋರ್ವ ಭಾರತೀಯನ ಆಂತರ್ಯದ ಕೂಗು.
ಆತೀಶ್ ಬಿ ಕೆ.

Sunday, April 24, 2011

ಫ್ರಾನ್ಸ್ಲ್ಲಿ ಘಮಲಿದ ಭಾರತದ ಕಮಲ

`ದೇವೀರಿ' ಮುಡಿಗೆ ಕಮಲ

ನಾನು ಏನೂ ಮಾಡಬೇಕಾಗಿಲ್ಲ; ಏನನ್ನೂ ಸಾಧಿಸಬೇಕಾಗಿಲ್ಲ. ಎಂತಹುದೇ ರಿಸ್ಕ್ ತೆಗೆದುಕೊಳ್ಳಬೇಕಾಗಿಲ್ಲ. ಒಂದು ವೇಳೆ ಯಾವುದರಲ್ಲಾದರೂ ಸೋಲುಂಟಾದರೆ, ಅದರಿಂದ ನುಣುಚಿಕೊಳ್ಳಬಹುದು. ಇತರರ ಸಹಾನುಭೂತಿ ಪಡೆಯಬಹುದು. ಜವಾಬ್ದಾರಿಯನ್ನು ಇತರರು ಹೊತ್ತುಕೊಳ್ಳುತ್ತಾರೆ. ಯಾರೊಂದಿಗೂ ಸ್ಪಧರ್ಿಸಬೇಕಾದ ಅಗತ್ಯವಿಲ್ಲ. ಎಲ್ಲವನ್ನು ಗಂಡ ನೋಡಿಕೊಳ್ಳುತ್ತಾನೆ; ವಯಸ್ಸಾದ ಮೇಲೆ ಮಕ್ಕಳಂತೂ ಇದ್ದೇ ಇರುತ್ತಾರಲ್ಲ! ಈ ರೀತಿ ನೇತ್ಯಾತ್ಮ ಹಾಗೂ ನಿಷ್ಕ್ರಿಯ ಆಲೋಚನೆಯಿಂದಾಗಿ ಸ್ತ್ರೀ ನಾಲ್ಕು ಗೋಡೆಗಳ ನಡುವಿನ ದೌಭರ್ಾಗ್ಯಲಕ್ಷ್ಮಿ, ಅಬಲೆ, ಹೆರಿಗೆ ಯಂತ್ರ, ಏನನ್ನೂ ಮಾಡಲು ಶಕ್ತಳಲ್ಲವೆಂಬ ಪಟ್ಟ ಕಟ್ಟಿಕೊಂಡು ಅಭಿವೃದ್ಧಿಯಿಂದ ವಂಚಿತಳಾಗುತ್ತಿದ್ದಾಳೆ.
ತನ್ನಲ್ಲಿ ನೂರಾರು ಕೌಶಲ್ಯಗಳಿದ್ದರೂ ಕ್ರಿಯಾಶೀಲತೆಯಿಂದ ಕಾರ್ಯ ನಿಭಾಯಿಸಿಕೊಂಡು ಹೋಗುವ ಚಾಕಚಕ್ಯತೆ, ನಾಯಕತ್ವದ ಗುಣಗಳಿದ್ದರೂ, ಶೈಕ್ಷಣಿಕ ಅರ್ಹತೆಗಳಿದ್ದರೂ ಅವುಗಳು ಅಡುಗೆಮನೆಗೆ ಸೀಮಿತ. ಸ್ತ್ರೀ ಇಂದಿಗೂ ಹಲವು ಕುಟುಂಬಗಳಲ್ಲಿ ಸ್ವತಂತ್ರಳಾಗಿ ನಿಧರ್ಾರಗಳನ್ನು ತೆಗೆದುಕೊಳ್ಳುವಂತಿಲ್ಲ. ಸ್ವಚ್ಚಂದವಾಗಿ ಬದುಕುವಂತಿಲ್ಲ; ದುಡಿದರೂ ಸ್ವತಂತ್ರವಿಲ್ಲ. ಯಾರೊಂದಿಗೂ ಮಾತನಾಡುವಂತಿಲ್ಲ; ಬೆರೆಯುವಂತಿಲ್ಲ. ಇದಕ್ಕೆ ಅವಳ ಸಕುಂಚಿತ ಮನೋಭಾವವೂ ಕಾರಣವಾಗಿದೆ!
ಬರೀ ಮಹಿಳೆಯ ಸಂಕುಚಿತ ಮನೋಭಾವವೇ ಆಕೆಯ ವ್ಯವಸ್ಥಿತ ಶೋಷಣೆಗೆ ಸಿಲುಕಿ ನಲುಗಲು ಕಾರಣವೆಂದರೆ ಪ್ರಾಯಶಃ ಮೂಗಿನ ನೇರಕ್ಕೆ ನುಡಿದಂತಾಗಬಹುದು. ಇದರ ಜತೆಗೆ ನಮ್ಮ ಸಮಾಜ ಕೂಡ ಅಷ್ಟೇ ಪ್ರಭಾವ ಬೀರುತ್ತಿದೆ.
`ಬಿಹೈಂಡ್ ಎವರಿ ಸಕ್ಸಸ್ಫುಲ್ ಮ್ಯಾನ್, ದೇರ್ ಇಸ್ ಎ ವುಮ್ಯಾನ್' ಎಂಬ ವಾಕ್ಯ ಕೇಳಿದ ತಕ್ಷಣ ಪ್ರತಿಯೊಬ್ಬ ಮಹಿಳೆ ಅಭಿಮಾನದಿಂದ ಹಿಗ್ಗಿ ಹೀರೆಕಾಯಿಯಾಗಬಹುದು. ಆದರೆ ಅದರಲ್ಲಿಯೇ ಅಡಕವಾಗಿರುವ ಮತ್ತೊಂದು ಅರ್ಥದ ಪರಿವೇ ಅವಳಿಗಿಲ್ಲ. ಇದರ ದ್ವಂದ್ವಾರ್ಥವೆಂದರೆ, ಮಹಿಳೆಯರು ಪುರುಷರ ಹಿಂದೆ ಇರಬೇಕೇ ವಿನಃ ಮುಂದೆ ಬಂದು ಹೆಸರಿಗಾಗಿ ಹೋರಾಟ ನಡೆಸುವಂತಿಲ್ಲ. ಸ್ವವರ್ಚಸ್ಸಿಗಾಗಿ ಸೆಣಸುವಂತಿಲ್ಲ. ಅಭಿವೃದ್ಧಿ ಏನಿದ್ದರೂ ಪುರುಷರಿಗೆ, ಮಹಿಳೆ ಪರದೆ ಹಿಂದಿನ ಕಲಾವಿದೆಯಷ್ಟೆ.


ಈ ಸಮಾಜದ ಅಂಕುಡೊಂಕು, ನಿಂದನೆಯ ಮಾತುಗಳಿಗೆ ಕಿವಿಗೊಟ್ಟು ತಮ್ಮ ಅಭಿವೃದ್ಧಿ ಮೇಲೆ ತಾವೇ ಕಲ್ಲುಹಾಕಿಕೊಳ್ಳುವುದು ಯಾವ ಸೀಮೆ ಸಂಸ್ಕೃತಿ? ಅಂದಿನ ಪುರುಷ ಪ್ರಧಾನ ಸಮಾಜಕ್ಕೆ ಸವಾಲಾಗಿ ನಿಂತವರು ಇಂದು ಇತಿಹಾಸದ ಪುಟಗಳಲ್ಲಿ ರಾರಾಜಿಸುತ್ತಿದ್ದಾರೆ. ಅಷ್ಟೇ ಯಾಕೆ ಪ್ರಸ್ತುತ ಸಮಾದಲ್ಲಿಯೂ ಅನೇಕ ಮಹಿಳೆಯರು ತಮ್ಮ ಸಾಧನೆಯಿಂದ ಮೆರೆದಿದ್ದಾರೆ. ಅದರಲ್ಲಿ ಬಾಲಿವುಡ್ ತಾರೆ ನಂದಿತಾದಾಸ್ ಕೂಡ ಒಬ್ಬರು.

ಯಾರು ಈ ನಂದಿತಾದಾಸ್?
ನಂದಿತಾ ಭಾರತೀಯ ನಟಿ ಹಾಗೂ ನಿದರ್ೇಶಕಿ ಕೂಡ ಹೌದು. ಸಿನಿಮಾರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಈಕೆ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಇಂಡೋ ಫ್ರಾನ್ಸ್ ಸಹಕಾರದಿಂದ ಸಿನಿಮಾ ಅಭಿವೃದ್ಧಿಗಾಗಿ ಶ್ರಮಿಸಿ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಇವರು ನೀಡಿರುವ ಮಹತ್ತರ ಕೊಡುಗೆ ಮತ್ತು ಕ್ರಿಯಾಶೀಲತೆಯನ್ನು ಪರಿಗಣಿಸಿರುವ ಫ್ರಾನ್ಸ್ ಸಕರ್ಾರ ಸರ್ವಶ್ರೇಷ್ಠ ಫ್ರಾನ್ಸ್ ನಾಗರಿಕ (ಶೆವೆಲಿಯರ್ ಆಫ್ ದ ಆರ್ಡರ್ ಡೆಸ್ ಆಟರ್್ ಎಟ್ ಡೆಸ್ ಲೆಟರ್ಸ್) ಪ್ರಶಸ್ತಿ ನೀಡಿ ಗೌರವಿಸಿದೆ.
ಫೈರ(1996), ಅಥರ್್(1998), ಬವಾಂದರ್(2000) ಹಾಗೂ ಅಮಾರ್ ಭುವನ್(2002) ಚಲನಚಿತ್ರಗಳ ಮೂಲಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿರಪರಿಚಿತರಾದರು ನಂದಿತಾ ದಾಸ್. ನಿದರ್ೇಶಕಿಯಾಗಿ ಹಲವು ಚಿತ್ರಗಳನ್ನು ನಿದರ್ೇಶಿಸಿರುವ ಪ್ರತಿಭಾವಂತೆ. ಅಲ್ಲಿಯವರೆಗೆ ಕ್ಯಾಮರಾ ಹಿಂದಿನ ಕಾರುಬಾರು ನೋಡಿಕೊಳ್ಳುತ್ತಿದ್ದ ಈಕೆ ಬಳಿಕ ತನ್ನ ಸೌಂದರ್ಯ, ನಟನೆ, ಮಾತಿನ ಶೈಲಿಯಿಂದ ವೀಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.
ಅವರು ನಟಿಸಿದ ಚಿತ್ರ `ಫಿರಾಕ್' ಗಳಿಸಿದ ಖ್ಯಾತಿಗೆ ಪುಳಕಿತರಾದ ದಾಸ್ ಸಂಗ್ರಾಮ್ ರೇಡಿಯೋ ನಡೆಸಿದ ಸಂದರ್ಶನದಲ್ಲಿ ಅಭಿಮಾನಿ ದೇವರುಗಳಿಗೆ ಅಭಿನಂದಿಸಿ, ಅವರ ಪ್ರತಿಕ್ರಿಯೆಗಳನ್ನು ಒಪ್ಪಿಕೊಳ್ಳುವುದಾಗಿ ತಿಳಿಸಿದ್ದು ಅವರ ಸರಳ ಸಜ್ಜನಿಕತೆಗೆ ಉದಾಹರಣೆ.

ಬಹುಮುಖ ಪ್ರತಿಭೆ
ಇಂಗ್ಲಿಷ್, ಹಿಂದಿ, ಮಲಯಾಳಂ, ಬಂಗಾಳಿ, ತಮಿಳು, ಮರಾಠಿ, ಕನ್ನಡ, ಓರಿಯಾ ಮತ್ತು ಉದರ್ು ಹೀಗೆ ವಿಭಿನ್ನ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿ ಪ್ರತಿಭೆ ಮೆರೆದಿದ್ದಾರೆ. ಅಷ್ಟೇ ಅಲ್ಲದೆ ಹಲವು ಆಡಿಯೋ ಬುಕ್ಸ್ಗಳಿಗೆ ದನಿ ಕೂಡ ನೀಡಿದ್ದಾರೆ. ಕೃಷ್ಣವರ್ಣದ ಈ ಬೆಂಗಾಲಿ ಸುಂದರಿಯದು ಬಹುಮುಖ ಪ್ರತಿಭೆ.
ಅವರು ನೀಡಿರುವ ಧ್ವನಿಪುಸ್ತಕಗಳಲ್ಲಿ ಅಂಡರ್ ದ ಬನಿಯಾನ್, ವಂಡರ್ ಪೆಟ್ಸ್ ಆಸ್ ಎ ಬೆಂಗಾಲ್ ಟೈಗರ್ ಇವು ಮಕ್ಕಳ ಸಿರೀಸ್ಗಳಾಗಿವೆ. ಅದೇ ರೀತಿ ಮಹಾತ್ಮ ಗಾಂಧೀಜಿಯವರ ಆತ್ಮಚರಿತ್ರೆ `ದ ಸ್ಟೋರಿ ಆಫ್ ಮೈ ಎಕ್ಸ್ಪೆರಿಮೆಂಟ್ ವಿಥ್ ಟ್ರುಥ್' ಪ್ರಮುಖವಾದವುಗಳಾಗಿವೆ.


ವೈಯಕ್ತಿಕ ವಿಚಾರಗಳು:
ದಾಸ್ ಭಾರತೀಯ ಖ್ಯಾತ ಪೇಂಟರ್ ಜಟಿನ್ ದಾಸ್ ಹಾಗೂ ಲೇಖಕಿ ವರ್ಷ ಅವರ ಮಗಳಾಗಿ ಜನಿಸಿ, ದೆಹಲಿ ವಿವಿಯಿಂದ(ಮಿರಂದ್ ಹೌಸ್) ಜಿಯಾಗ್ರಫಿ ವಿಷಯದಲ್ಲಿ ಪದವಿ ಪಡೆದರು. ನಂತರ ಸಮಾಜಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ದೆಹಲಿ ಸ್ಕೂಲ್ನಿಂದ ಪಡೆದರು. ಶಿಕ್ಷಣ ಮುಗಿಸಿ ಕಲೆಯ ಕಡೆಗೆ ವಾಲಿದರು. ಇವರಲ್ಲಿದ್ದ ಕಲಾವಿದೆಯನ್ನು ಬೆಳೆಸಿ, ಪೋಷಿಸಿದ್ದು `ಜನನತ್ಯ ಮಂಚ ಥೇಟರ್ ಗ್ರೂಪ್', ಈ ಸಂಸ್ಥೆ ಮೂಲಕ ಅವರು ಕಲಾ ಜೀವನಕ್ಕೆ ಕಾಲಿಟ್ಟರು.
2002ರಲ್ಲಿ ಸೌಮ್ಯಸೇನ್ ಎಂಬುವವರನ್ನು ಮದುವೆಯಾಗಿ ಸಾಂಸಾರಿಕ ಜೀವನಕ್ಕೆ  ಕಾಲಿಟ್ಟ ನಂದಿತಾ ಜಾಹಿರಾತು ಸಂಸ್ಥೆಯೊಂದನ್ನು ತೆರೆದು ಅದರ ಮೂಲಕ ಹಲವು ಸಾಮಾಜಿಕ ಜಾಗೃತಿಯ ಆಡ್ಫಿಲ್ಮ್ಗಳನ್ನು ಮಾಡಿದರು. ಬಳಿಕ ಸಂಸಾರಿಕ ಜೀವನದಲ್ಲಿ ಯಾವುದೋ ವಿರಸದಿಂದಾಗಿ ವಿಚ್ಛೇದನ ನೀಡಿದರು. ಮತ್ತೆ 2010 ಜನವರಿ 2ರಂದು ಸುಭೋದ್ ಮಸ್ಕಾರ್ ಅವರನ್ನು ವಿವಾಹವಾದರು.
 ಪ್ರಶಸ್ತಿಗಳ ಮಹಾಪೂರ:
2001-ಅತ್ಯುತ್ತಮ ನಟಿ (ಬವಾಂದರ್ ಚಿತ್ರಕ್ಕೆ), 2002-ಅತ್ಯುತ್ತಮ ನಟಿ (ಅಮಾರ್ ಭುವಾನ್ ಚಿತ್ರಕ್ಕೆ), 2002-ಕನ್ನಾಥಿಲ್ ಮುತ್ತಾಮಿತ್ತಲ್, ವಿಶೇಷ ಪ್ರಶಸ್ತಿ ತಮಿಳುನಾಡು ಸಕರ್ಾರ, 2006-ಅತ್ಯುತ್ತಮ ನಟಿ (ಕಮಲಿ),
2008-ಏಷ್ಯನ್ ಫೆಸ್ಟಿವಲ್ ಆಫ್ ಫಸ್ಟ್ ಫಿಲ್ಮನಲ್ಲಿ; ಅತ್ಯುತ್ತಮ ಚಿತ್ರ-ಫಿರಾಕ್, ಅತ್ಯುತ್ತಮ ಚಿತ್ರಕಥೆ- ಫಿರಾಕ್ ಹಾಗೂ ಅತ್ಯುತ್ತಮ ಚಿತ್ರಕ್ಕಾಗಿ ಫಾರೆನ್ ಕರಸ್ಪಾಂಡೆಂಟ್ಸ್ ಅಸೋಸಿಯೇಷನ್ ಪರ್ಪಲ್ ಆಚರ್ಿಡ್ ಪ್ರಶಸ್ತಿ., 2008-ಶೆವೆಲಿಯರ್ ಆಫ್ ದ ಆರ್ಡರ್ ಡೆಸ್ ಆಟರ್್ ಎಟ್ ಡೆಸ್ ಲೆಟರ್ಸ್ ಪ್ರಶಸ್ತಿ, 2009- ತೀಪರ್ುಗಾರರ ವಿಶೇಷ ಬಹುಮಾನ(ಫಿರಾಕ್ ಚಿತ್ರಕ್ಕೆ), 2009-ಥೊಸೆಲೊನಿಕಿ ಫಿಲ್ಮ್ ಫೆಸ್ಟಿವಲ್ನಲ್ಲಿ ವಿಶೇಷ ಪ್ರಶಸ್ತಿ, 2010-ಫಿಲ್ಮ್ಫೆರ್ ಅವಾಡರ್್ನಲ್ಲಿ ಫಿರಾಕ್ ಚಿತ್ರಕ್ಕೆ ವಿಶೇಷ ಪ್ರಶಸ್ತಿ ಸಂದಿದೆ.
ಇಷ್ಟೊಂದು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಡಿರುವ ಅಭೂತಪೂರ್ವ ಪ್ರತಿಭೆ ಇವರದ್ದಾಗಿದೆ.


ಕಲಿಯಬೇಕಾದದ್ದು ತುಂಬಾ ಇದೆ:
ಮಹಿಳೆ ಅದು ಭಾರತದಲ್ಲಿಯೇ ಹುಟ್ಟು ಬೆಳೆದಿರುವ ದಾಸ್ ಇಷ್ಟೊಂದು ಸಾಧನೆಗಳನ್ನು ಮಾಡಿರುವಾಗ ನಮ್ಮಿಂದ ಏಕೆ ಸಾಧ್ಯವಿಲ್ಲ..? ಒಂದು ಮಾತಂತೂ ನಿಜ, ಪ್ರತಿಯೊಬ್ಬರಿಗೂ ನಂದಿತಾಳಿಗೆ ದೊರೆತ ಪ್ರೋತ್ಸಾಹ ಹಾಗೂ ಅನುಕೂಲಕರವಾದ ವಾತಾವರಣ ದೊರೆಯುವುದು ದುರ್ಲಭ. ಆದರೆ ತನ್ನಲ್ಲಿರುವ ಕ್ರಿಯಾಶೀಲತೆ, ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಅಪರೂಪ ಅವಕಾಶಗಳಂತೂ ಇದ್ದೇ ಇರುತ್ತವೆ. ಅವುಗಳನ್ನು ಸಮರ್ಪಕವಾಗಿ ಬೆಳೆಸಿಕೊಂಡಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ನಂದಿತಾ ದಾಸ್ ಮಾದರಿಯಾಗಿ ನಿಲ್ಲಬಲ್ಲರು.


ಆತೀಶ್ ಬಿ ಕನ್ನಾಳೆ







Friday, April 8, 2011

ಡರ್ ಕೆ ಆಗೆ ಜೀತ್ ಹೆ, ಪರ್ ಯಂಹಾ ಮೌತ್ !

ಪುಕುಶಿಮಾ ಈಗ ಮತ್ತೆ ಪುಕುಪುಕು!
"ಯಾಕೆ ಈ ಪ್ರಕೃತಿ ಹೀಗೆ ಮಾಡುತ್ತೆ...? ಏನಾದ್ರು ಪೂರ್ವಜನ್ಮದ ಹಗೆತನ ಏನಾದ್ರು ಇದೆನಾ? ಅಥವಾ ಜಪಾನ್ ಅಂದ್ರೆ ಅಲಜರ್ಿನಾ....?"

ಜಪಾನ್ ಬಹುಶಃ ಆ ದಿನವನ್ನು ಮರೆಯಬೇಕೆಂದುಕೊಂಡರೂ ಮರೆಯಲಾಗದು. ಅದು ಅಂಥ ಕರಾಳ ದಿನ. ಇಡೀ ವಿಶ್ವವೇ ನಿಬ್ಬೆರಗಾಗಿ ಆ ಕಡೆಗೆ ನೋಡುತ್ತಿತ್ತು. ಇದೇನು ಪ್ರಳಯದ ಸೂಚನೆಯೇ ಅಥವಾ ವಿನಾಶದ ಅಂಕುರವೇ..? ಭಾರತದಲ್ಲಿಯೂ ಕೂಡ ಆ ಪುಕುಪುಕು ಪ್ರಾರಂಭವಾಗಿತ್ತು. ಅಂದು ಸುದ್ದಿ ವಾಹಿನಿ ವೀಕ್ಷಿಸಿದ ಪ್ರತಿಯೊಬ್ಬರು ಉದ್ಗಾರದಿಂದ ನುಡಿದದ್ದೊಂದೆ ಇಂಥ ಟೈಂ ಎಲ್ಲೂ ಬರಬಾರ್ದಪ್ಪಾ..! ಕೆಲವರಿಗಂತೂ ಈ ಘಟನೆ ಎಸ್ಎಂಎಸ್ ಜೋಕಾಗಿ ಮಾರ್ಪಟ್ಟಿತ್ತು. ಯಮ ಚಂದ್ರಗುಪ್ತನಿಗೆ `ಜಾ ಪಾನ್ ಲೇಕೆ ಆ..' ಎಂದು ಹೇಳಿದ್ದನಂತೆ, ಆದರೆ ಅವನು ಇಡೀ ಜಪಾನ್ನನ್ನೇ ಕೊಚ್ಚಿಕೊಂಡು ಹೋದ... ಅದೆಲ್ಲಾ ಬುರುಡೆ ಬಿಡಿ. ಆದ್ರೆ ಇಂತಹ ಕ್ರಿಟಿಕಲ್ ಕಂಡಿಷನ್ ಮಾತ್ರ ಯಾವ ವೈರಿಗೂ ಬರ್ಬಾರ್ದು.
ಐತಿಹ್ಯದ ಬೆನ್ನು ಬಾರಿಸುತ್ತಾ ಕೂಡುವುದಕ್ಕಿಂತ, ಪ್ರಸ್ತುತತೆಯ ಬಗ್ಗೆ ಗಮನ ಹರಿಸಲೇಬೇಕು. ಈಗ ಮತ್ತೆ ಜಪಾನಿನಲ್ಲಿ ಸುನಾಮಿಯಾಗುವ ಮುನ್ಸೂಚನೆ ಕಾಣಿಸಿಕೊಂಡಿದೆ. ಪ್ರಾಯಶಃ ಭೂಕಂಪ ಮತ್ತೆ ಬ್ಯಾಕ್ ಟು ಪೆವೆಲಿಯನ್ ಎಂಬಂತೆ ಮರಳಬಹುದೇನೊ? ಎಂಬ ಭಯ ಕಾಡುತ್ತಿದೆ. ಗುರುವಾರವಾದ ಲಘು ಭೂಕಂಪದಿಂದ ಹಾಲಿ ಅಳಿದುಳಿದಿರುವ ಜಪಾನ್ ಅಬ್ಬೇಪಾರಿಯಾಗಿದೆ.

ಕನ್ಫೂಸ್ ಆಗೋ ಪ್ರಮೇಯವೇ ಇಲ್ಲ. ಇದೆಲ್ಲ ನಾವೇ ಮಾಡಿರೋದು ಈಗ ನಾವೆ ಅನುಭವಿಸಬೇಕು. ವಿಜ್ಞಾನ ಮುಂದುವರಿಯುವುದರಿಂದ ಏನೆನೋ ಆಗ್ತಾ ಇದೆ. ಅದನ್ನು ಅಲ್ಲಗೆಳೆಯಲಾಗದು. ಆದ್ರೆ ಆ ಏನೆನೋದಲ್ಲಿ ಇದು ಕೂಡ ಒಂದು...
"ನಮ್ ಕೈಯಲ್ಲಿರೋದು ಒಂದೇ, ಅದು ದೇವರಲ್ಲಿ ಅವರಿಗೋಸ್ಕರ ಪ್ರಾರ್ಥನೆ ಮಾಡುವುದು ಅಷ್ಟೆ ಅದನ್ನು ಬಿಟ್ಟು ಮತ್ತೇನನ್ನು ಮಾಡಲಾಗದು." ನಮ್ಮಲ್ಲಿಯೂ ಇಂಥ ಘಟನೆಗಳು ಆಗಬಾರದೆಂದರೆ ಸೃಷ್ಟಿಯ ಸಂರಕ್ಷಣೆಯಲ್ಲಿ ಎಲ್ಲರೂ ಟೊಂಕಕಟ್ಟಿ ನಿಲ್ಲಬೇಕು.. ಲೆಟ್ಸ್ ಜಾಯಿನ್ ಟುಗೆದರ್...

Wednesday, April 6, 2011

Bichu Matu...


ಒಂದು ಕಡೆ ಖುಷಿ,  
ಮತ್ತೊಂದು ಕಡೆ ನೈತಿಕತೆಯ ಅಧಃಪತನ!
ಮಿಸ್ ಪೂನಂ ಪಾಂಡೆ ನೀವ್ ಇರೋದು ಭಾರತದಲ್ಲಿ ಅದನ್ನು ಮರೀದೆ ಇದ್ರೆ ಸಾಕು.


ಭಾರತ ಶ್ರೀಲಂಕಾ ವಿರುದ್ಧ ಸಾಧಿಸಿದ ಜಯ ಪ್ರಾಯಶಃ ಪ್ರತಿಯೊಬ್ಬ ಭಾರತೀಯ ಎಂದೂ ಕೂಡ ಮರೆಯಲಾಗದು. ಅದೊಂದು ರೋಮಾಂಚಕ ಹಾಗೂ ವಿರೋಚಿತ ಜಯ. ಇಡೀ ವಿಶ್ವದೆದುರು ಸಿಂಹಳಿಯರನ್ನು ಸೆದೆಬಡಿದ ಬ್ಲೂ ಬಾಯ್ಸ್ಗಳ ಆಟದ ವೈಖರಿ ಕಣ್ಪರದೆ ಮೇಲಿಂದ ಅಳಿಸುವುದು ಅಸಾಧ್ಯವೇ ಸರಿ.
28 ವರ್ಷಗಳಿಂದ ಕಾಯುತಿದ್ದ ಆ ಕ್ಷಣ ಕೊನೆಗೂ ನಮ್ಮ ನೆಲೆದಲ್ಲೆ ಜನ್ಮ ತಳೆದದ್ದು ಮತ್ತೊಂದು ಖುಷಿಯ ವಿಚಾರ. ಈ ಹರುಷದ ವರುಷಕ್ಕೆ ಬರೀ ಪದಗಳಿಂದ ವಣರ್ಿಸುವುದು ತುಂಬಾ ಕಷ್ಟ. ಅದು ಬರೀ ಭಾರತೀಯರ ಜಯವಲ್ಲ! ಭಾರತದ ವಿಜಯ. ಧೋನಿ ಬಾರಿಸಿದ ಸಿಕ್ಸ್ಗೆ ವಾಂಖೆಡಾ ಗ್ರೌಂಡ್ ಅಷ್ಟೆ ಅಲ್ಲ, ಬದಲಿಗೆ ಇಡೀ ಭಾರತವೇ ಸಂತೋಷದಿಂದ ಕುಣಿದು ಕುಪ್ಪಳಿಸಿತು. ಬೆಂಗಳೂರಿನ ಎಂ.ಜಿ. ರೋಡ್ ಹಾಗೂ ಬ್ರಿಗೆಡ್ ರೋಡ್ನಲ್ಲಂತೂ ಹೇಳತೀರದ ಖುಷಿ ವ್ಯಕ್ತವಾಗುತ್ತಿತ್ತು.
ಹುಡುಗರಷ್ಟೆ ಅಲ್ಲ. ಹೆಂಗಳೆಯರೂ ಕೂಡ ರಾತ್ರಿ 2 ಗಂಟೆ ಆದರೂ ವಿಜಯೋತ್ಸವ ಆಚರಣೆಯಲ್ಲಿ ಫುಲ್ ಬಿಜಿ ಯಾಗಿದ್ದರು. ಏನೆ ಅನ್ನಿ ಆ ದೃಶ್ಯ ಸವಿಯಲು ಬರೀ ಎರಡು ಕಣ್ಣುಗಳು ಸಾಲವು.
ಇವೆಲ್ಲ ಒಂದು ಕಡೆ ಆದ್ರೆ ಮತ್ತೊಂದು ಕಡೆ, `ಭಾರತ ಏನಾದ್ರು ಟೂರ್ನಮೆಂಟ್ನಲ್ಲಿ ಶ್ರೀಲಂಕಾ ವಿರುದ್ಧ ಗೆದ್ದರೆ ತಾನು ಬೆತ್ತಲೆ ಪರೆಡ್ ಮಾಡುವೆ' ಎಂದು ಹೇಳಿದ್ದ ರೂಪದಶರ್ಿ ಪೂನಂ ಪಾಂಡೆಗೋಸ್ಕರ ಎಲ್ಲರೂ ಕಾಯ್ತಾ ಇದ್ರು. ಆದ್ರೆ ಪೂನಂ ಮಾತ್ರ ಕಾಣ್ಲೆ ಇಲ್ಲ :(
ಈಗಲೂ ಹಲವು ಕೊಟೇಷನ್ಗಳನ್ನು ನೀಡಿ ವಿವಾದದಲ್ಲಿದ್ದಾಳೆ ಈ ಬಿಚ್ಚಮ್ಮ. ತನ್ನ ಮೈಮಾಟದಿಂದ ಈಗಾಗಲೆ ಪಡ್ಡೆ ಹುಡುಗರಲ್ಲಿ ಹುಚ್ಚೆಬ್ಬಿಸಿರುವ ಪಾಂಡೆಗೆ ಶಿವಸೇನಾ, ಬಿಜೆಪಿ ಬೆದರಿಸಿದ್ದಕ್ಕೆ ಕ್ವೈಟ್ ಆಗಿದ್ದಾಳೆ. ಆದರೆ ಈಗಲೂ ಐಸಿಸಿ ಪಮರ್ಿಷನ್ ಕೊಟ್ರೆ ಭಾರತೀಯ ಕ್ರಿಕೆಟ್ ಆಟಗಾರರ ಮುಂದೆ ಬೆತ್ತಲಾಗುವುದಾಗಿ ಹೇಳಿದ್ದಾಳೆ. ಎಂಥಾ ಕಿಕ್ಕಿಂಗ್ ವಡ್ಸರ್್ ಅಲ್ವಾ!
ಬಡ್ಡಿಮಗುಂದು ಇಂಥವಳನ್ನು ನಮ್ಮ ಭಾರತೀಯಳೆನ್ನಲು ನಾಚಿಕೆ ಆಗುತ್ತೆ. ಶೀಲಕ್ಕಾಗಿ ಜೀವ ನೀಡುವ ಸಂಸ್ಕೃತಿ ನಮ್ಮದು ಆದರೆ ಇಂತಹ ಪವಿತ್ರ ಭಾರತ ಭೂಮಿಯಲ್ಲಿ ಜನ್ಮವೆತ್ತು ದೇಹ ತೋರಿಸುವುದಾಗಿ ಹೇಳುತ್ತಿರುವುದು ದೊಡ್ಡ ದುರಂತ. ಏನೆ ಅನ್ನಿ ಮೈತೋರಿಸಿಕೊಳ್ಳುವ ಷರತ್ತು ಮಾಡಿ, ಇಡೀ ಪರಿಸ್ಥಿತಿಯೇ ಅವಳ ಈ ನಿಧರ್ಾರಕ್ಕೆ ಎದುರಾದರೂ ಸುಮ್ಮನಾಗುವ ಬದಲು ತಾನು ಮಾತು ತಪ್ಪುವುದಿಲ್ಲವೆಂದು ಹೇಳಿಕೊಳ್ಳುತ್ತಿದ್ದಾಳೆ. ಇಂಥವರ ವಿರುದ್ಧ ಕಾನೂಕು ಕ್ರಮ ಕೈಗೊಂಡರೆ ಮುಂದಾಗುವ ಅವಘಡಗಳನ್ನು ತಪ್ಪಿಸಬಹುದೇನೊ..?
ಯಾಕೊ ನಮ್ಮ ಹುಡುಗಿಯರಿಗೆ ಸ್ವಲ್ಪ ಜಾಸ್ತಿನೇ ಸ್ವತಂತ್ರ ಸಿಕ್ಕಿದೆ ಎನೋ ಅನಸ್ತಾ ಇದೆ...

ಆತೀಶ್ ಬಿ ಕನ್ನಾಳೆ.

 

Thursday, March 17, 2011

My Voice...

ತಿಮ್ಮಕ್ಕನ ದನಿಗೆ ಕಿವುಡಾಯಿತೆ ಸಕರ್ಾರ....?


"ನಾನು ನನ್ನ ಪತಿ ಬೆಳೆಸಿದ್ದು 284 ಮರಗಳಲ್ಲ, ಹತ್ತಿರಾತ್ತಿರ ಸಾವಿರ ಮರಗಳು. ನನಗೆ ಸಕರ್ಾರ ಈವರೆಗೂ ಏನನ್ನೂ ಕೊಟ್ಟಿಲ್ಲ. ನನಗೆ ಅನ್ನ, ಸಂಪತ್ತು ಯಾವುದೂ ಬೇಡ. ನಮ್ಮೂರಿನಲ್ಲಿ ಹೆರಿಗೆ ಆಸ್ಪತ್ರೆ ಸ್ಥಾಪಿಸಬೇಕೆಂದು ಬಹುದಿನಗಳ ಕನಸು. ಸಕರ್ಾರ ಆ ಕನಸನ್ನು ನನಸು ಮಾಡಬೇಕು ಇದನ್ನು ಬಿಟ್ಟು ಬೇರೆನನ್ನು ಕೇಳಲಾರೆ. ಹತ್ತು ದಿನಗಳೊಳಗೆ ಸಕರ್ಾರ ಆಸ್ಪತ್ರೆ ನಿಮರ್ಾಣದ ಭರವಸೆ ನೀಡಬೇಕು."


ಮೊನ್ನೆ ಬೆಳಗಾವಿ ವಿಶ್ವಕನ್ನಡ ಸಮ್ಮೇಳನದಲ್ಲಿ ಸಾಲುಮರದ ತಿಮ್ಮಕ್ಕನ ಬಾಯಿಂದ ಭಾವೋದ್ವೇಗದಿಂದ ಹೊರಬಂದ ಮಾತುಗಳಿವು. ವಿಪಯರ್ಾಸವೆಂದರೆ, ಇದಕ್ಕೆ ಯಾವ ನಾಯಕರಾಗಲಿ, ರಾಜಕೀಯ ಮುಖಂಡರಾಗಲಿ ಅಥವಾ ಮಾಧ್ಯಮಗಳಾಗಲಿ ಒತ್ತು ನೀಡಲಿಲ್ಲ. ಆ ಅಜ್ಜಿಯ ಚಿತ್ಕಾರ ಯಾರ ಚಿತ್ತಕ್ಕೂ ಬಾರದೆ ಕುಂದಾನಗರಿಯಲ್ಲಿ ಕಣ್ಮರೆಯಾಯಿತು.
ಆಶ್ವಾಸನೆಗಳ ಮಹಾಪುರ:
ಲಿಬಟರ್ಿ ಮಾದರಿಯಲ್ಲಿ ಭುವನೇಶ್ವರಿ ಪ್ರತಿಮೆ ನಿಮರ್ಾಣಕ್ಕೆ 100 ಕೋಟಿ, ಬೆಳಗಾವಿಯಲ್ಲಿ ಸುವರ್ಣಸೌಧಕ್ಕೆ 300 ಕೋಟಿ, ಲಾಲ್ಬಾಗ್ ಮಾದರಿಯ ಉದ್ಯಾನವನ ಹಾಗೂ ಗಾಜಿನ ಮನೆ ನಿಮರ್ಾಣಕ್ಕೆ 25 ಕೋಟಿ, ಬಸವ ಅಂತಾರಾಷ್ಟ್ರೀಯ ಕೇಂದ್ರ ಸ್ಥಾಪನೆಗೆ 25 ಕೋಟಿ, ಕುವೆಂಪು ಭವನಕ್ಕೆ 3 ಕೋಟಿ, ಹೀಗೆ ಆಶ್ವಾಸನೆಗಳ ಮಹಾಪುರವನ್ನೇ ಸುರಿಸಿದ ಮುಖ್ಯಮಂತ್ರಿಯವರಿಗೆ ಮುದಿದನಿಯ ಮರ್ಮ ತಿಳಿಯಲ್ಲೇ ಇಲ್ಲ..!
ಕನರ್ಾಟಕ ಜನತೆಯ ಜೀವನ ಕಟ್ಟಲು ಬೇಕಾಗಿರುವುದು ಉತ್ತಮ ಆರೋಗ್ಯ, ಶಿಕ್ಷಣ ಹಾಗೂ ವರಮಾನ ಇದೆಲ್ಲಾ ಇರದ ಹೊರತು ಸರ್ವವೂ ತೃಣ. ಆದರೆ ಈ ಅಂಶಗಳ ಕುರಿತು ತಲೆಕೆಡಿಸಿಕೊಳ್ಳದ ಸಕರ್ಾರದ ವತಿಯಿಂದ ಸ್ಟ್ಯಾಚ್ಯು, ಗ್ಲಾಸ್ಹೌಸ್ ಮತ್ತಿತರ ಅಂಶಗಳನ್ನು ನಿಮರ್ಿಸುವುದಾಗಿ ಹೇಳಿರುವುದು ಯಾವ ಪುರುಷಾರ್ಥಕ್ಕಾಗಿ...? (`ಭೂಕೆ ಕೋ ಕಾನ್ ನಹಿ ಹೋತೆ ಎನ್ನುವ ಮಾತು ಬಹುಶಃ ನಮ್ಮನ್ನಾಳುವ ಪ್ರಭುಗಳು ಮರೆತಿದ್ದಾರೆ!')
ಕನಸು ನನಸಾಗುವುದೆ...
`ಕ್ಷೌರನ ತಿಪ್ಪೆ ಕೆದಕಿದ್ದಲ್ಲಿ ಬರೀ ಕೂದಲೆ' ಎಂಬ ಗಾದೆಯೇ ಇದೆ. ಆದರೂ ನೈತಿಕ ಮೌಲ್ಯ ಹಾಗೂ ನಡುಕದ ಆ ಮುದಿದನಿಯ ಒಳನೋವು ಅಕ್ಷರರೂಪ ತಳೆಯಲು ಕಾರಣ. ಸುಮಾರು ವರ್ಷಗಳಿಂದ ಯಾವ ಸಂಸ್ಥೆ ಅಥವಾ ಸಕರ್ಾರದ ನೆರವಿಲ್ಲದೆ ತನ್ನ ಪತಿ ಚಿಕ್ಕಯ್ಯನ ಜತೆಗೂಡಿ ಮರ ನೆಡುವ ಕೆಲಸಕ್ಕೆ ಕೈಹಾಕಿ ಸು. 4 ಕಿ.ಮೀ. ಹೆದ್ದಾರಿಯ ಅಕ್ಕಪಕ್ಕ 284 ಗಿಡಗಳನ್ನು ನೆಟ್ಟು ಅವುಗಳನ್ನು ಮಕ್ಕಳಂತೆ ಪೋಷಿಸಿ, ಯಾವುದೇ ಜಾನುವಾರುಗಳು ಹಾಳು ಮಾಡದಂತೆ ಬೆಳೆಸಿರುವ ಈ ತಾಯಿಗೆ ಸಕಲ ಕನ್ನಡಿಗರ ಸಾಷ್ಟಾಂಗ ನಮನ... ಸು. 1.5 ಮಿಲಿಯನ್ ಮೌಲ್ಯದ ಮರಗಳನ್ನು ಬೆಳಿಸಿರುವ ಖ್ಯಾತಿ ಈ ಅಜ್ಜಿಯದು. ಇದಕ್ಕೆ ವಿದೇಶಿ ಹಾಗೂ ಕನರ್ಾಟಕ ಸಕರ್ಾರ ಗುತರ್ಿಸಿ, ಪುರಸ್ಕರಿಸಿದ್ದು ಬೇರೆ ವಿಷಯ ಬಿಡಿ. ಆದರೆ ಎಂದಿಗೂ `ಪ್ರಶಸ್ತಿಯ ಮುಲಾಮು ಹಾಕದು ಹಸಿವಿಗೆ ಲಗಾಮು' ಎಂಬ ಮಾತು ನಮ್ಮ ಪಾಲಿನ ದುರಂತವೇ ಸರಿ.
`ನನಗೆ ಸಕರ್ಾರ ಏನನ್ನೂ ಕೊಟ್ಟಿಲ್ಲ. ನನಗೆ ಅನ್ನ, ಸಂಪತ್ತು ಯಾವುದೂ ಬೇಡ ನಮ್ಮೂರಿನಲ್ಲಿ ಇಂದು ಹೆರಿಗೆ ಆಸ್ಪತ್ರೆ ನಿಮರ್ಿಸಿಕೊಡುವುದಾಗಿ 10 ದಿನಗಳಲ್ಲಿ ಭರವಸೆ ನೀಡದರೆ ಸಾಕು!' ಎಷ್ಟು ಮುಗ್ಧ ಮಾತಲ್ಲವೇ ರಾಷ್ಟ್ರ ಅಷ್ಟೇ ಯಾಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುತರ್ಿಸಿಕೊಂಡುರುವ ಈಕೆಯ ಮುಗ್ಧ ನಿಷ್ಕಪಟ ಮಾತು ಎಂಥ ಕಲ್ಲು ಹೃದಯವನ್ನೂ ಸಹ ಕರಗಿಸಬಲ್ಲದು. ಆದರೆ, ನಮ್ಮ ಗೂಟದ ಕಾರಿನ ಮುಖಂಡರಿಗೆ....?
ಯಾರು ಈ ಸಾಲುಮರದ ತಿಮ್ಮಕ್ಕ
ಈಕೆ ಮೂಲತಃ ಪರಿಸರ ಪ್ರೇಮಿ. ಸಾಲು ಮರಗಳನ್ನು ನೆಡುವುದರ ಮೂಲಕ ಸಾಲುಮರದ ತಿಮ್ಮಕ್ಕ ಎಂದೇ ಪ್ರಖ್ಯಾತಿಯಾಗಿದ್ದಾರೆ.
ಬೆಂಗಳೂರಿನ ಮಾಗಡಿ ತಾಲ್ಲೂಕಿನ ಹುಳಿಯಾಳ ಇವರ ವಾಸೂರು. ಸುಮಾರು ವರ್ಷಗಳಿಂದ ಪರಿಸರ ಪ್ರೇಮಿಯಾಗಿ ಸಮಾಜ ಅಭಿಮುಖವಾದ ಕೆಲಸವನ್ನು ಎಗ್ಗಿಲ್ಲದೆ ಲೋಪರಹಿತವಾಗಿ ಮಾಡುತ್ತಾಬಂದಿದ್ದಾರೆ.
1991ರಲ್ಲಿ ತಮ್ಮ ಪತಿರಾಯನನ್ನು ಕಳೆದುಕೊಂಡು ಅಬ್ಬೇಪಾರಿಯಾದ ಈಕೆಯ ಆಧಾರಕ್ಕೆ, ಕಣ್ಣು ವರಿಸಿ ಸಾಂತ್ವಾನ ಹೇಳುವುದಕ್ಕೆ ಮಕ್ಕಳೂ ಇರಲಿಲ್ಲ. ಈ ಕೊರತೆಯನ್ನು ನೀಗಿಸಿಕೊಳ್ಳುವುದಕ್ಕಾಗಿಯೇ ಗಿಡಗಳನ್ನು ಬೆಳೆಸುವ ಕೆಲಸಕ್ಕೆ ಕೈಹಾಕಿರುವುದಾಗಿ ಹೇಳುತ್ತಾರೆ ಸಾಳುಮರದ ತಿಮ್ಮಕ್ಕ. ಇಲ್ಲಿಯವರೆಗೂ ಸಕರ್ಾರಕ್ಕೆ ಎಂದೂ ಕೈಚಾಚಿಲ್ಲ. ಪರಿಸರ ಸಂರಕ್ಷಣೆಯಲ್ಲಿ ತನ್ನಿಂದಾದಷ್ಟು ಕೆಲಸ ಮಾಡುತ್ತಾಬಂದಿದ್ದೇನೆ.
ನಂತರ ಅವರ ಅಳಿಲುಸೇವೆಗೆ ಹಲು ಪ್ರಶಸ್ತಿಗಳು ಸಂದಿವೆ. ಆದರೆ ದುಖಃದ ವಿಷಯವೆಂದರೆ 4 ಕಿ.ಮೀ. ದೂರದಿಂದ ನೀರು ಹೊತ್ತುತಂದು ಹಸಿರಿನ ತೋರಣಕ್ಕೆ ಸೊಬಗುತರಲು ಕೈಜೋಡಿಸಿದ್ದ ಪತಿರಾಯರೇ ಇಲ್ಲವೆಂಬುದು ಅವರ ಕೊರಗು.
ಪ್ರಶಸ್ತಿಗಳು:
ನಾಡೋಜ ಪ್ರಶಸ್ತಿ, ಹಂಪಿ ವಿವಿ-2000
ರಾಷ್ಟ್ರೀಯ ಪೌರ ಪ್ರಶಸ್ತಿ-1995
ಇಂದಿರಾ ಪ್ರಿಯದಶರ್ಿನಿ ವೃಕ್ಷಮಿತ್ರ ಪ್ರಶಸ್ತಿ-1997
ವೀರ ಚಕ್ರ ಪ್ರಶಸ್ತಿ-1997
ಮಹಿಳಾ ಮತ್ತು ಮಕ್ಕಳ ಯೋಗಕ್ಷೇಮ ಇಲಾಖೆ, ಕನರ್ಾಟಕ ಸಕರ್ಾರ ವತಿಯಿಂದ ಗೌರವಾನ್ವಿತ ಪ್ರಮಾಣ ಪತ್ರ.
ಕನರ್ಾಟಕ ಕಲ್ಪವಲ್ಲಿ ಪ್ರಶಸ್ತಿ-2000
ಗೋಡ್ ಫ್ರೆ ಪಿಲಿಪ್ಪಿ ಶೌರ್ಯ ಪ್ರಶಸ್ತಿ-2006
ವಿಶಾಲಾಕ್ಷ್ಮಿ ಪ್ರಶಸ್ತಿ (ಆಟರ್್ ಆಫ್ ಲಿವಿಂಗ್)

ಭುವನೇಶ್ವರಿಯ ಮಡಿಲಿಂದ ಹೊರಟಿರುವ ಚಿತ್ತ ಸೆಳೆಯುವ ಚಿತ್ಕಾರಕ್ಕೆ ಬೆಲೆಯುಂಟೆ? ಸಮಾಜದ ಏಳ್ಗೆಗೆ ಜೀವನ ಮುಡುಪಾಗಿಟ್ಟ ಆಕೆಯ ನಿಷ್ಕಪಟ ಕನಸಿಗೆ ಅರ್ಥವುಂಟೆ...? ಹಾಗಿದ್ದಲ್ಲಿ ಪ್ರಭುವೆ ಈ ದನಿಗೆ ಧ್ವನಿಯಾಗಿ. ಈಗಲೂ ರೋಮ್ ಸಾಮ್ರಾಟ ನೀರೋನಂತೆ ಪಿಟಿಲು ಬಾರಿಸುತ್ತಾ ಕುಳಿತರೆ ಅಧಿಕಾರ ಹಾಗೂ ಆಯ್ಕೆಮಾಡಿ ಕಳುಹಿರುವ ಪ್ರಜೆಗಳಿಗೆ ದ್ರೋಹ ಬಗೆದ ಹಾಗಲ್ಲವೇ?
ಅದಕ್ಕೆ ಹೇಳಿದ್ದು ಕಿವುಡಾಯಿತೇ ನಿಮ್ಮ ಕಿವಿ ತಿಮ್ಮಕ್ಕನ ದನಿ ಕೇಳದೆ, ಓ ಪ್ರಭುವೆ ಎಂದು......?
ಆತೀಶ್ ಬಿ ಕನ್ನಾಳೆ

Sunday, March 6, 2011

Dare 2 B Different...

ಏನಾಗಲಿ ಮುಂದೆ ಸಾಗುನಿ.... 
ಹೆಣ್ಣೊಂದು ಮನಸು ಮಾಡಿದರೆ!


ಈ ಪ್ರಪಂಚದಲ್ಲಿ ಮಾತಿನ ಜಾಣರೇ ಹೆಚ್ಚು. ಮಾತಿನಲ್ಲಿ ಮಂಟಪ ಕಟ್ಟುವಷ್ಟು ಚತುರರಿರುತ್ತಾರೆ. ಕೆಲವರ ಬೆರಗುಗೊಳಿಸುವ ಮಾತಂತೂ ನಿಮಿಷಾರ್ಧದಲ್ಲಿ ಮತ್ತೊಂದು ಲೋಕವನ್ನು ಇಳೆಗಿಳಿಸುವಷ್ಟು ಪ್ರಭಾವಪೂರ್ಣವಾಗಿರುತ್ತದೆ. ಓ! ಇನ್ನೇನು ಎಲ್ಲವೂ ಆಯಿತು, ಅವರು ಹೇಳಿದ್ದೆಲ್ಲ ನನಗೆ ದೊರಕೇಬಿಟ್ಟಿತು ಎಂದು ನಂಬಿಕೊಳ್ಳುವಂತೆ ಮಾಡಿಬಿಡುತ್ತದೆ.
ಹೀಗೆ ಮಾಡುವುದು ವಾಕ್ಚತುರರಿಗಂತೂ ಅತ್ಯಂತ ಸುಲಭ. ಆದರೆ ಆಡಿದ ಮಾತನ್ನು ಕೃತಿಗಿಳಿಸುವುದು ಅಷ್ಟು ಸುಲಭವಲ್ಲ. ಅದೇ ಮಾತಿಗೂ ಕೃತಿಗೂ ಇರುವ ವ್ಯತ್ಯಾಸ. ವೇದಿಕೆ ಮೇಲೆ ನಿಂತು ಆದರ್ಶದ ಮಾತು ಗಳನ್ನು ಗಂಟೆಗಟ್ಟಲೆ ಆಡಿಬಿಡಬಹುದು, ಆದರೆ ಅವುಗಳನ್ನು ಬದುಕಿಗೆ ಅಳವಡಿಸಿಕೊಳ್ಳಲು ಹೊರಟಾಗ ಸಂಕಟಗಳ ಸರಮಾಲೆಯೇ ಮುಂದೆ ನಿಲ್ಲುತ್ತದೆ. ಬದುಕು ನಿತ್ಯದ ಹೋರಾಟವಾಗುತ್ತದೆ. ಹಾಗೆಂದು ಹೋರಾಟಕ್ಕೆ ಎಲ್ಲರೂ ವಿಮುಖವಾದರೆ ಆದರ್ಶಮಯ ವ್ಯಕ್ತಿಗಳು ಕಾಣದಾಗಿಬಿಡುತ್ತಾರೆ. ಹಾಗೆ ಅಂತಹ ಆದರ್ಶ, ವಿಶೇಷ ಗುರಿಗಳಿಗೆ ತಮ್ಮನ್ನು ಒಪ್ಪಿಸಿ ಕೊಂಡವರಿಗೆ ತ್ಯಾಗ, ಸಂಘರ್ಷ, ಹೋರಾಟದ ಜೀವನ ಅವಶ್ಯ. ಹೀಗೆ ಬದುಕಿದವರೇ ಇತಿಹಾಸದ ಪುಟಗಳಲ್ಲಿ ಶೋಭಿಸಲು ಸಾಧ್ಯ.
ಈಗೆಲ್ಲ ದಾಖಲೆ ವೀರರೇ ಶೋಭಿಸುವ ಕಾಲ. ಏನಾದರೂ ಸಾಧಿಸಬೇಕು, ನಮ್ಮಿಂದ ನಾಲ್ಕಾರು ಜನಕ್ಕೆ ಒಳ್ಳೆಯದಾಗಬೇಕು ಎಂದು ಭಾವಿಸುವವರು ಅತಿ ಕಡಿಮೆ. ಹಾಗೆ ಸಾಧಿಸಲು ಹೊರಟರೆ ಸಾಧನೆ ಬೇಕೆಂದಾಗ ಕೈಗೆ ಸಿಗುವ ಹಿತ್ತಲ ಕುಂಬಳಕಾಯಲ್ಲ. ಕಾಸು ಕೊಟ್ಟರೆ ಸುಲಭವಾಗಿ ದೊರಕಬಲ್ಲ ಆಟಿಕೆಯೂ ಅಲ್ಲ.
ಸವಾಲುಗಳನ್ನು ಸ್ವೀಕರಿಸಿ, ಸಾಧಿಸಲು ಮುಂದಾಗು ವವರಿಗೆ ಶ್ರಮ, ಸಹನೆ ಅತ್ಯವಶ್ಯ. ಶಿಲ್ಪಿ ಒಂದು ಕಲ್ಲನ್ನು ಸುಂದರವಾದ ಕಲಾಕೃತಿಯಾಗಿ ನಿಮರ್ಿಸುವಾಗ ಶಿಲ್ಪಿಗೆ ಏಕಾಗ್ರತೆ, ಗುರಿ ಮುಖ್ಯವಾದರೆ ಆ ಕಲ್ಲಿಗೆ ಸಹಸ್ರಾರು ಪೆಟ್ಟುಗಳನ್ನು ಸಹಿಸಬಲ್ಲೆನೆಂಬ ಛಾತಿ ಅನಿ ವಾರ್ಯ. ಹಾಗಾದಾಗ ಮಾತ್ರ ಅದು ಮುಂದೊಂದು ದಿನ ಸರ್ವರ ಚಿತ್ತ ತನ್ನತ್ತ ಸೆಳೆಯಬಲ್ಲ ಸುಂದರ ಮೂತರ್ಿಯಾಗಿ ರೂಪುಗೊಳ್ಳಲು ಸಾಧ್ಯ.
ಒಂದು ವೇಳೆ ಪೆಟ್ಟುಗಳಿಗೆ ಹೆದರಿ ಹುದುಗಿ ಕುಳಿತಲ್ಲಿ ಅದು ಜನ ತಿಂದು ತೇಗಿ ಹರಟುವ ಹರಟೆ ಕಟ್ಟೆಯಾಗಬಹುದು ಇಲ್ಲವೆ ತುಳಿದು ಮುಂದೆ ಸಾಗುವ ಹಾಸುಗಲ್ಲೂ ಆಗಬಹುದು.
ಹಾಗೆಯೇ ಮನುಷ್ಯ ತನ್ನ ಜೀವನ ಸಂತೃಪ್ತಿ ಕಾಣ ಬೇಕಾದರೆ ಅದಕ್ಕೊಂದು ಅರ್ಥ ನೀಡಬೇಕೆಂದಾದಲ್ಲಿ ಬೇಕಾದ-ಬೇಡವಾದ ಹಲವಾರು ಕಷ್ಟಗಳನ್ನು ಎದುರಿಸ ಬೇಕು, ಸಹಿಸಲೂಬೇಕು.
ತೊಡರುಗಳ ಸರಮಾಲೆ
ಇಂದಿನ ಜಾಗತೀಕರಣದ ಯುಗದಲ್ಲಿ ಜನರು ಸ್ವತೃಪ್ತಿಗಾಗಷ್ಟೇ ಬದುಕಿದರೆ ಸಾಕು ಎನ್ನುವಷ್ಟು ಸ್ವಾಥರ್ಿಗಳಾಗಿದ್ದಾರೆ. ಸಮಾಜ ಸೇವೆಯ ಹೆಸರಲ್ಲಿ ಸ್ವಾರ್ಥಸಾಧನೆ ಮಾಡಿಕೊಳ್ಳುವವರೇ ಹೆಚ್ಚು. ಉಪಕಾರ-ಅಪಕಾರಗಳ ಚಿಂತೆ ಇಲ್ಲದೆ ತನ್ನಷ್ಟಕ್ಕೆ ತಾನು ಬದುಕುವುದೇ ದೊಡ್ಡ ಸಾಧನೆ ಎನಿಸಿರುವ ಈ ಕಾಲಮಾನದಲ್ಲಿ ಸಾಧಿಸುವುದು-ಸೇವೆ ಮಾಡುವುದು ಎಂದರೆ ಸಣ್ಣ ವಿಷಯವಲ್ಲ. ಬಹಳಷ್ಟು ಬಾರಿ ಈ ಸಾಧನೆಗಳು ವೈಯಕ್ತಿಕವಾಗಿದ್ದು ಹೆಸರು ಸಂಪಾದನೆ ಗಾಗಿ ಸೀಮಿತವಾಗಿರುತ್ತದೆಯೇ ವಿನಃ ಸಮಾಜ, ಸಮೂಹದ ಉಪಕಾರಕ್ಕಾಗಿ ಇರುವುದಿಲ್ಲ. ಅಪರೂಪ ಕ್ಕೊಮ್ಮೆ ಕಾಣುವ ಕೋಲ್ಮಿಂಚಿನಂತೆ ಅಲ್ಲೊಬ್ಬರು ಇಲ್ಲೊಬ್ಬರು ಸೇವಾಮನೋಭಾವದಿಂದ ಸಾಮಾಜಿಕ ಕ್ಷೇತ್ರಕ್ಕೆ ಧುಮುಕುತ್ತಾರೆ. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವುದೆಂದರೆ ಸಾಹಸವೇ ಸರಿ. ಅದರಲ್ಲೂ ಆ ವ್ಯಕ್ತಿ ಮಹಿಳೆಯಾದರೆ ಕಾರ್ಯಸಾಧನೆ, ಅಭಿವೃದ್ಧಿ ಎಲ್ಲವೂ ಹರಸಾಹಸವೇ ಸರಿ.
ನೂರಾರು ಜನರ ನಡುವೆ ಮುನ್ನುಗ್ಗಿ ಕೆಲಸ ಮಾಡ ಬೇಕಾದಾಗ ಪ್ರೋತ್ಸಾಹ ನೀಡುವುದಕ್ಕಿಂತ ಕಾಲೆಳೆಯು ವವರೇ ಹೆಚ್ಚು. ಓರ್ವ ಮಹಿಳೆ ಏನನ್ನಾದರೂ ಮಾಡ ಬೇಕೆಂದಾದಲ್ಲಿ ಅದಕ್ಕೆ ಪುರುಷಪ್ರಧಾನ ಸಮಾಜದ ಕಟ್ಟುಕಟ್ಟಳೆಗಳು ತೊಡರುಗಳಾಗೇ ಗೋಚರಿಸುತ್ತವೆ. ಭಂಡ ಧೈರ್ಯದಿಂದ ಮುಂದೆ ಹೋದರೂ ಕಟ್ಟಿಟ್ಟ ಕಷ್ಟದ ಬುತ್ತಿಯ ಜೊತೆಗೆ ಟೀಕೆ-ನಿಂದನೆ, ಕೋಟಳೆಗಳ ಮುಖಾಮುಖಿ.
ಇಂಥ ಹಲವಾರು ಸಾಂಪ್ರದಾಯಿಕ-ಪ್ರಾದೇಶಿಕ-ಸಾಮಾಜಿಕ ಸವಾಲುಗಳ ಮಧ್ಯೆ ಒಬ್ಬ ಯುವತಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಬಂದು ಯಾವ ಸ್ವಾರ್ಥವಿಲ್ಲದೆ ಸಮಾಜಕಾರ್ಯಗಳಲ್ಲಿ ತೊಡಗಿದರೆಂದರೆ ಅವರಿಗೆ ಹ್ಯಾಟ್ಸ್ ಅಪ್ ಎನ್ನಲೇಬೇಕಲ್ಲ!
ಹೆಸರು ಶಿಖಾಸಿಂಗ್. ಓದಿದ್ದು ದೆಹಲಿ ವಿಶ್ವವಿದ್ಯಾಲಯದಲ್ಲಿ. 1999ರಲ್ಲಿ ತಮ್ಮ ಎಂಬಿಎ ಮುಗಿಸಿ, ನಂತರ ದೆಹಲಿಯಲ್ಲಿಯೇ ಇಟಲಿ ರಾಯಭಾರಿ ಕಚೇರಿ ಯಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ರಾಯಭಾರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸಿದವರಿಗೆ ಅವಕಾಶಗಳಿಗೇನು ಕೊರತೆ? ಶಿಖಾ ಅವರಿಗೂ ಹಾಗೆಯೇ ಅವಕಾಶಗಳು ನಾ ಮುಂದು, ತಾ ಮುಂದು ಸಾಲುಗಟ್ಟಿ ನಿಂತಿದ್ದವು. ಆದರೆ ಆಕೆಯ ಆಯ್ಕೆ ಸಮಾಜ ಸೇವೆಯಾಗಿತ್ತು.
ಮನದಾಳದ ಮಾತು:
ನಾನು ದೇಶ-ವಿದೇಶಗಳನ್ನು ಸುತ್ತಿದ್ದೇನೆ. ಹೊರದೇಶಗಳಲ್ಲಿ ನನಗೆ ಅಪಾರ ಅವಕಾಶಗಳಿದ್ದವು. ಹಾಗೆಯೇ ಸಾಧಿಸಲು ಹಲವಾರು ಮಾರ್ಗಗಳಿದ್ದವು. ಜೀವನದಲ್ಲಿ ಮಹತ್ತರವಾದ ಹಾಗೂ ಅರ್ಥಪೂರ್ಣ ವಾದ ಕಾರ್ಯ ಮಾಡಲು ಮನಸ್ಸು ಹಾತೊರೆಯುತಿತ್ತು. ಅದೇ ಸಂದರ್ಭದಲ್ಲಿ ಕೆ. ಎನ್. ಗೋವಿಂದಾಚಾರ್ಯರ ಕನಸಿನ ಕೂಸಾದ ಭಾರತ ವಿಕಾಸ ಸಂಗಮದ 3ನೇ ಕಾರ್ಯಕ್ರಮವಾದ `ಕಲ್ಬುಗರ್ಿ ಕಂಪು 2010' ರ ಕಾರ್ಯಕ್ರಮದಲ್ಲಿ ಜನರ ಜೊತೆ ಬೆರೆತು ಅವರ ಕಷ್ಟ, ಸಮಸ್ಯೆ, ಸವಾಲುಗಳನ್ನು ತಿಳಿದುಕೊಳ್ಳಲು, ಅವಶ್ಯವಿದ್ದಲ್ಲಿ ಉತ್ತಮ ಮಾರ್ಗದರ್ಶನ ನೀಡಲು ಒಂದು ಸುವರ್ಣ ಅವಕಾಶ ದೊರಕಿತು ಎಂದೇ ಇದನ್ನು ಕಾರ್ಯಕ್ಷೇತ್ರವನ್ನಾಗಿ ಆಯ್ದುಕೊಂಡ ಶಿಖಾ ಇಟಲಿ ರಾಯಭಾರಿ ಕಚೇರಿಯ ತಮ್ಮ ವೃತ್ತಿಗೆ ರಾಜೀನಾಮೆ ಇತ್ತು ಕಲ್ಬುಗರ್ಿಗೆ ಕಾಲಿಟ್ಟಿದ್ದಾರೆ. ತಮ್ಮ ಮನದಾಳದ ಮಾತುಗಳನ್ನು ಹಿಂದಿ ಮಿಶ್ರಿತ ಕನ್ನಡದಲ್ಲಿ ಹೇಳುವಾಗ ಧನ್ಯತೆ, ಸಂತೃಪ್ತ ಭಾವ ಅವರ ಮೊಗದಲ್ಲಿ ಎದ್ದು ಕುಣಿಯುತಿತ್ತು.
ಏನಿದು ಭಾರತ ವಿಕಾಸ ಸಂಗಮ?
ಕೊತ್ತಲ ಬಸವೇಶ್ವರ ಭಾರತ ವಿಕಾಸ ಸಂಗಮ ಸಮಿತಿ, ಸೇಡಂ 1974ರಲ್ಲಿ ಹೈದರಾಬಾದ್-ಕನರ್ಾಟಕ ಭಾಗದ ಅಭಿವೃದ್ಧಿಗಾಗಿ ಇದನ್ನು ಪ್ರಾರಂಭಿಸಿತು. ಇದರ ಪ್ರಮುಖ ಉದ್ದೇಶ ಈ ಭಾಗದ 5 ಜಿಲ್ಲೆಗಳು ಹಾಗೂ 24 ತಾಲೂಕುಗಳನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವುದು. ಆಥರ್ಿಕ, ಕೃಷಿ, ಇಂಗ್ಲಿಷ್ ಮತ್ತು ಕಂಪ್ಯೂಟರ್ ಶಿಕ್ಷಣ, ಪ್ರವಾಸ, ಶಿಷ್ಯವೇತನ, ಮಹಿಳಾ ಸಶಕ್ತಿಕರಣದ ಬಹುಮುಖ್ಯವಾದ ಜವಾಬ್ದಾರಿಯನ್ನು ಈ ನಿಟ್ಟಿನಲ್ಲಿ ವಹಿಸಿಕೊಳ್ಳಲಾಗಿದೆ. ಈ ಕಾರ್ಯದ ಚಾಲನೆ ಗಾಗಿ ಭಾರತ ವಿಕಾಸ ಸಂಗಮ ಸಮಿತಿ `ಕಲ್ಬುಗರ್ಿ ಕಂಪು' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಅದರ ಮೂಲಕ ಸಾಮಾಜಿಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತದೆ. ಕಳೆದ ವರ್ಷ ಸಹ 10 ದಿನಗಳ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಪ್ರಮುಖ ಧ್ಯೇಯ ಅಭಿವೃದ್ಧಿ ಇನ್ನೊಂದು ಅರ್ಥದಲ್ಲಿ ಗಾಂಧೀಜಿಯವರ ಕನಸಿನ ಪರಿಪೂರ್ಣತೆ ಎಂದರೂ ತಪ್ಪಾಗಲಾರದು.
ಇಂತಹ ಅರ್ಥಪೂರ್ಣ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ದೇಶದ ಇನ್ನೊಂದು ಮೂಲೆಯಿಂದ ಕಲ್ಬುಗರ್ಿಯಂತಹ ಬಿಸಿಲನಾಡಿಗೆ ಬಂದಿಳಿದ ಶಿಖಾರ ಆತ್ಮಸ್ಥೈರ್ಯ ಮೆಚ್ಚಬೇಕಾದದ್ದೆ. ತಿಳಿಯದ ಭಾಷೆ, ಜನ, ಜಾಗ...ಇವೆಲ್ಲದರ ನಡುವೆ ಕೆಲಸ ಮಾಡುವ ಉತ್ಕಟತೆ, ಮಾಡುವೆನೆಂಬ ಆತ್ಮವಿಶ್ವಾಸ ಇವೆರಡೇ ಆಕೆಯ ಜೊತೆಗಿದ್ದುದು.
ಸವಾಲುಗಳು:
ಸಾಮಾನ್ಯವಾಗಿ ಯಾವುದೇ ಒಬ್ಬ ಮಹಿಳೆ ಅದರಲ್ಲೂ ಇಲ್ಲಿನ ಸಂಸ್ಕೃತಿ, ಭಾಷೆ, ಆಚಾರ-ವಿಚಾರ, ಯಾವುದನ್ನೂ ತಿಳಿಯದ ಅವಿವಾಹಿತ ಯುವತಿ ದೊರೆತ ವಿಪುಲ ಅವಕಾಶಗಳನ್ನು ತೃಣವೆಂದು ಭಾವಿಸಿ, ಸೂರ್ಯನಗರಿ ಎನಿಸಿರುವ ಕಲ್ಬುಗರ್ಿಯಂತಹ ಸ್ಥಳಕ್ಕೆ ಬಂದು ಉದ್ಯೋಗ ಮಾಡುವುದೆಂದರೆ ಹುಡುಗಾಟವಲ್ಲ.
ಹಿಂದುಳಿದ ಭಾಗ ಎಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಹೈದ್ರಾಬಾದ್ ಕನರ್ಾಟಕವನ್ನು, ಇಲ್ಲಿನ ಜನರ ಜೀವನ ಮಟ್ಟ, ವ್ಯಕ್ತಿತ್ವ ಹಾಗೂ ಈ ಭಾಗಕ್ಕೆ ವಿಶೇಷ ಸ್ಥಾನ ಮಾನ ಕಲ್ಪಿಸುವ ನಿಮಿತ್ತ ಇವರು ಈ ಸಂಘಟನೆ ಮೂಲಕ ಪಡುತ್ತಿರುವ ಶ್ರಮ ಮಾತಿಗೆ ಎಟುಕು ಭಾವನೆಗಳಿಗೆ ನಿಲುಕದು.
`ಪ್ರಾರಂಭದಲ್ಲಂತೂ ಜನರೊಂದಿಗೆ ಒಂದಾಗುವಲ್ಲಿ ಅವರು ಬಹು ಶ್ರಮ ಪಟ್ಟಿದ್ದಾರೆ. `ಇಲ್ಲಿನ ಊಟ-ತಿಂಡಿ, ವಾತಾವರಣ ಇವೆಲ್ಲವುಗಳ ಜೊತೆ ಹೊಂದಿಕೊಳ್ಳಲು ಕೊಂಚ ಕಷ್ಟವೇನೋ ಪಡಬೇಕಾಯಿತು. ಆದರೆ, ಇಲ್ಲಿನ ಜನರ ಪ್ರೀತಿ, ವಿಶ್ವಾಸ ಹಾಗೂ ಪ್ರೋತ್ಸಾಹ ನನಗೆ ನನ್ನ ಗುರಿ ಸಾಧನೆಯಲ್ಲಿ ಮತ್ತಷ್ಟು ಬಲವಾಗಿ ನಿಲ್ಲಲು ಹುರಿದುಂಬಿಸಿದೆ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ.'
ಪ್ರಾರಂಭದಲ್ಲಂತೂ ನಮ್ಮ ಕುಟುಂಬದವರು ಈ ಕೆಲಸಕ್ಕೆ ಒಪ್ಪಲಿಲ್ಲ. ತುಂಬಾ ಆತಂಕ ವ್ಯಕ್ತಪಡಿಸಿದ್ದರು. ಕುಟುಂಬದಿಂದ ನೀನೊಬ್ಬಳೆ ಅಲ್ಲಿ ಹೇಗಿರಲು ಸಾಧ್ಯ. ಎಂದು ತಡೆಯೊಡ್ಡಿದರು. ಅದೇನೋ ಅಂತಾರಲ್ಲ, ಗುರಿಗೆ ಧೈರ್ಯ ಪ್ರಚೋದನಾಕಾರಿಯಾಗಿ ನಿಲ್ಲುವು ದಾದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. ಅದರಂತೆ ನನಗೆ ಎಲ್ಲವೂ ಸರಳವಾಗಿಯೇ ಗೋಚರಿಸುತ್ತಿವೆ. ಬಂದ ಸವಾಲುಗಳನ್ನು ಭಾರವೆಂದು ನಾನು ಪರಿಗಣಿಸಿಲ್ಲ ಎಂದು ನಗೆ ಬೀರಿದರು.
ಕುಟುಂಬ:
ಶಿಖಾ ತಂದೆ ರೈಲ್ವೆ ಇಲಾಖೆಯಲ್ಲಿ ಕಾರ್ಯನಿವರ್ಾಹಕ ನಿದರ್ೇಶಕರಾಗಿ ಸೇವೆ ಸಲ್ಲಿಸಿರುವ ನಿವೃತ್ತ ಅಧಿಕಾರಿಗಳು. ಇವರೇ ಮನೆಗೆ ಹಿರಿಯ ಮಗಳು. ಆದರೆ ಇಂದು ಕುಟುಂಬವನ್ನು ಬಿಟ್ಟು ಒಬ್ಬರೇ ಕಲ್ಬುಗರ್ಿಯಲ್ಲಿದ್ದಾರೆ.
  
ಸ್ನೇಹಿತರೆ, ಯುವತಿಯೊಬ್ಬಳು ಉನ್ನತ ಹುದ್ದೆಗೆ ರಾಜೀನಾಮೆ ಕೊಟ್ಟು, ದೂರದ ದೆಹಲಿಯಿಂದ ಬಿಸಿಲನಾಡಿಗೆ ಬಂದು, ಅಭಿವೃದ್ಧಿ ಕಾರ್ಯಗಳಿಗಾಗಿ ಟೊಂಕಕಟ್ಟಿ ನಿಂತಿದ್ದಾರೆಂದರೆ ಅದು ಸಾಮಾನ್ಯ ವಿಷಯವಲ್ಲ. ಹೊರ ರಾಜ್ಯದವರಿಗೆ ನಮ್ಮ ಹಿಂದುಳಿದ ಜಿಲ್ಲೆ, ತಾಲ್ಲೂಕು, ಹೋಬಳಿಗಳ ಕುರಿತು ಅಷ್ಟೊಂದು ಆಸಕ್ತಿ ಇರುವಾಗ, ಇಲ್ಲಿಯೇ ಹುಟ್ಟಿ ಬೆಳೆದಿರುವ ನಮಗೆ ಅದರ ಬಗ್ಗೆ ಇನ್ನಷ್ಟು ಆಪ್ತತೆ ಇರಬೇಕು.
ಮಹಿಳೆಯೊಬ್ಬಳು ಮನಸ್ಸು ಮಾಡಿದರೆ ಹಳ್ಳಿಯಾದರೇನು, ದಿಲ್ಲಿಯಾದರೇನು ಸಾಮಾಜಿಕ ಜವಾಬ್ದಾರಿಗಳನ್ನು ಉತ್ತಮವಾಗಿ ನಿಭಾಯಿಸಬಲ್ಲಳು ಎನ್ನುವುದಕ್ಕೆ ಶಿಖಾಸಿಂಗ್ ಯುವಪೀಳಿಗೆಗಳಿಗೆ ಆದರ್ಶವಾಗಿ ನಿಲ್ಲಬಲ್ಲಾಕೆ.
ದಿಟ್ಟ ಹೆಜೆಯನ್ನಿಟ್ಟ ಶಿಖಾ ಜತೆ ನೀವು ಮಾತನಾಡಿ ಅವರನ್ನು ಮತ್ತಷ್ಟು ಹುರಿದುಂಬಿಸಬೇಕಾದ್ದಲ್ಲಿ 0847-2273810 ಕರೆ ಮಾಡಿ.
ಎನಿ ವೇ ಎಲ್ಲರೂ ಮುಂದೆ ಸಾಗೋಣ ಸಮಾಜ ಕಟ್ಟಲು ಎದೆಗಾರಿಕೆಯಿಂದ ಮುಂದೆ ಸಾಗೋಣ.....
ಆತೀಶ್ ಬಿ ಕನ್ನಾಳೆ