Sunday, March 6, 2011

Dare 2 B Different...

ಏನಾಗಲಿ ಮುಂದೆ ಸಾಗುನಿ.... 
ಹೆಣ್ಣೊಂದು ಮನಸು ಮಾಡಿದರೆ!


ಈ ಪ್ರಪಂಚದಲ್ಲಿ ಮಾತಿನ ಜಾಣರೇ ಹೆಚ್ಚು. ಮಾತಿನಲ್ಲಿ ಮಂಟಪ ಕಟ್ಟುವಷ್ಟು ಚತುರರಿರುತ್ತಾರೆ. ಕೆಲವರ ಬೆರಗುಗೊಳಿಸುವ ಮಾತಂತೂ ನಿಮಿಷಾರ್ಧದಲ್ಲಿ ಮತ್ತೊಂದು ಲೋಕವನ್ನು ಇಳೆಗಿಳಿಸುವಷ್ಟು ಪ್ರಭಾವಪೂರ್ಣವಾಗಿರುತ್ತದೆ. ಓ! ಇನ್ನೇನು ಎಲ್ಲವೂ ಆಯಿತು, ಅವರು ಹೇಳಿದ್ದೆಲ್ಲ ನನಗೆ ದೊರಕೇಬಿಟ್ಟಿತು ಎಂದು ನಂಬಿಕೊಳ್ಳುವಂತೆ ಮಾಡಿಬಿಡುತ್ತದೆ.
ಹೀಗೆ ಮಾಡುವುದು ವಾಕ್ಚತುರರಿಗಂತೂ ಅತ್ಯಂತ ಸುಲಭ. ಆದರೆ ಆಡಿದ ಮಾತನ್ನು ಕೃತಿಗಿಳಿಸುವುದು ಅಷ್ಟು ಸುಲಭವಲ್ಲ. ಅದೇ ಮಾತಿಗೂ ಕೃತಿಗೂ ಇರುವ ವ್ಯತ್ಯಾಸ. ವೇದಿಕೆ ಮೇಲೆ ನಿಂತು ಆದರ್ಶದ ಮಾತು ಗಳನ್ನು ಗಂಟೆಗಟ್ಟಲೆ ಆಡಿಬಿಡಬಹುದು, ಆದರೆ ಅವುಗಳನ್ನು ಬದುಕಿಗೆ ಅಳವಡಿಸಿಕೊಳ್ಳಲು ಹೊರಟಾಗ ಸಂಕಟಗಳ ಸರಮಾಲೆಯೇ ಮುಂದೆ ನಿಲ್ಲುತ್ತದೆ. ಬದುಕು ನಿತ್ಯದ ಹೋರಾಟವಾಗುತ್ತದೆ. ಹಾಗೆಂದು ಹೋರಾಟಕ್ಕೆ ಎಲ್ಲರೂ ವಿಮುಖವಾದರೆ ಆದರ್ಶಮಯ ವ್ಯಕ್ತಿಗಳು ಕಾಣದಾಗಿಬಿಡುತ್ತಾರೆ. ಹಾಗೆ ಅಂತಹ ಆದರ್ಶ, ವಿಶೇಷ ಗುರಿಗಳಿಗೆ ತಮ್ಮನ್ನು ಒಪ್ಪಿಸಿ ಕೊಂಡವರಿಗೆ ತ್ಯಾಗ, ಸಂಘರ್ಷ, ಹೋರಾಟದ ಜೀವನ ಅವಶ್ಯ. ಹೀಗೆ ಬದುಕಿದವರೇ ಇತಿಹಾಸದ ಪುಟಗಳಲ್ಲಿ ಶೋಭಿಸಲು ಸಾಧ್ಯ.
ಈಗೆಲ್ಲ ದಾಖಲೆ ವೀರರೇ ಶೋಭಿಸುವ ಕಾಲ. ಏನಾದರೂ ಸಾಧಿಸಬೇಕು, ನಮ್ಮಿಂದ ನಾಲ್ಕಾರು ಜನಕ್ಕೆ ಒಳ್ಳೆಯದಾಗಬೇಕು ಎಂದು ಭಾವಿಸುವವರು ಅತಿ ಕಡಿಮೆ. ಹಾಗೆ ಸಾಧಿಸಲು ಹೊರಟರೆ ಸಾಧನೆ ಬೇಕೆಂದಾಗ ಕೈಗೆ ಸಿಗುವ ಹಿತ್ತಲ ಕುಂಬಳಕಾಯಲ್ಲ. ಕಾಸು ಕೊಟ್ಟರೆ ಸುಲಭವಾಗಿ ದೊರಕಬಲ್ಲ ಆಟಿಕೆಯೂ ಅಲ್ಲ.
ಸವಾಲುಗಳನ್ನು ಸ್ವೀಕರಿಸಿ, ಸಾಧಿಸಲು ಮುಂದಾಗು ವವರಿಗೆ ಶ್ರಮ, ಸಹನೆ ಅತ್ಯವಶ್ಯ. ಶಿಲ್ಪಿ ಒಂದು ಕಲ್ಲನ್ನು ಸುಂದರವಾದ ಕಲಾಕೃತಿಯಾಗಿ ನಿಮರ್ಿಸುವಾಗ ಶಿಲ್ಪಿಗೆ ಏಕಾಗ್ರತೆ, ಗುರಿ ಮುಖ್ಯವಾದರೆ ಆ ಕಲ್ಲಿಗೆ ಸಹಸ್ರಾರು ಪೆಟ್ಟುಗಳನ್ನು ಸಹಿಸಬಲ್ಲೆನೆಂಬ ಛಾತಿ ಅನಿ ವಾರ್ಯ. ಹಾಗಾದಾಗ ಮಾತ್ರ ಅದು ಮುಂದೊಂದು ದಿನ ಸರ್ವರ ಚಿತ್ತ ತನ್ನತ್ತ ಸೆಳೆಯಬಲ್ಲ ಸುಂದರ ಮೂತರ್ಿಯಾಗಿ ರೂಪುಗೊಳ್ಳಲು ಸಾಧ್ಯ.
ಒಂದು ವೇಳೆ ಪೆಟ್ಟುಗಳಿಗೆ ಹೆದರಿ ಹುದುಗಿ ಕುಳಿತಲ್ಲಿ ಅದು ಜನ ತಿಂದು ತೇಗಿ ಹರಟುವ ಹರಟೆ ಕಟ್ಟೆಯಾಗಬಹುದು ಇಲ್ಲವೆ ತುಳಿದು ಮುಂದೆ ಸಾಗುವ ಹಾಸುಗಲ್ಲೂ ಆಗಬಹುದು.
ಹಾಗೆಯೇ ಮನುಷ್ಯ ತನ್ನ ಜೀವನ ಸಂತೃಪ್ತಿ ಕಾಣ ಬೇಕಾದರೆ ಅದಕ್ಕೊಂದು ಅರ್ಥ ನೀಡಬೇಕೆಂದಾದಲ್ಲಿ ಬೇಕಾದ-ಬೇಡವಾದ ಹಲವಾರು ಕಷ್ಟಗಳನ್ನು ಎದುರಿಸ ಬೇಕು, ಸಹಿಸಲೂಬೇಕು.
ತೊಡರುಗಳ ಸರಮಾಲೆ
ಇಂದಿನ ಜಾಗತೀಕರಣದ ಯುಗದಲ್ಲಿ ಜನರು ಸ್ವತೃಪ್ತಿಗಾಗಷ್ಟೇ ಬದುಕಿದರೆ ಸಾಕು ಎನ್ನುವಷ್ಟು ಸ್ವಾಥರ್ಿಗಳಾಗಿದ್ದಾರೆ. ಸಮಾಜ ಸೇವೆಯ ಹೆಸರಲ್ಲಿ ಸ್ವಾರ್ಥಸಾಧನೆ ಮಾಡಿಕೊಳ್ಳುವವರೇ ಹೆಚ್ಚು. ಉಪಕಾರ-ಅಪಕಾರಗಳ ಚಿಂತೆ ಇಲ್ಲದೆ ತನ್ನಷ್ಟಕ್ಕೆ ತಾನು ಬದುಕುವುದೇ ದೊಡ್ಡ ಸಾಧನೆ ಎನಿಸಿರುವ ಈ ಕಾಲಮಾನದಲ್ಲಿ ಸಾಧಿಸುವುದು-ಸೇವೆ ಮಾಡುವುದು ಎಂದರೆ ಸಣ್ಣ ವಿಷಯವಲ್ಲ. ಬಹಳಷ್ಟು ಬಾರಿ ಈ ಸಾಧನೆಗಳು ವೈಯಕ್ತಿಕವಾಗಿದ್ದು ಹೆಸರು ಸಂಪಾದನೆ ಗಾಗಿ ಸೀಮಿತವಾಗಿರುತ್ತದೆಯೇ ವಿನಃ ಸಮಾಜ, ಸಮೂಹದ ಉಪಕಾರಕ್ಕಾಗಿ ಇರುವುದಿಲ್ಲ. ಅಪರೂಪ ಕ್ಕೊಮ್ಮೆ ಕಾಣುವ ಕೋಲ್ಮಿಂಚಿನಂತೆ ಅಲ್ಲೊಬ್ಬರು ಇಲ್ಲೊಬ್ಬರು ಸೇವಾಮನೋಭಾವದಿಂದ ಸಾಮಾಜಿಕ ಕ್ಷೇತ್ರಕ್ಕೆ ಧುಮುಕುತ್ತಾರೆ. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವುದೆಂದರೆ ಸಾಹಸವೇ ಸರಿ. ಅದರಲ್ಲೂ ಆ ವ್ಯಕ್ತಿ ಮಹಿಳೆಯಾದರೆ ಕಾರ್ಯಸಾಧನೆ, ಅಭಿವೃದ್ಧಿ ಎಲ್ಲವೂ ಹರಸಾಹಸವೇ ಸರಿ.
ನೂರಾರು ಜನರ ನಡುವೆ ಮುನ್ನುಗ್ಗಿ ಕೆಲಸ ಮಾಡ ಬೇಕಾದಾಗ ಪ್ರೋತ್ಸಾಹ ನೀಡುವುದಕ್ಕಿಂತ ಕಾಲೆಳೆಯು ವವರೇ ಹೆಚ್ಚು. ಓರ್ವ ಮಹಿಳೆ ಏನನ್ನಾದರೂ ಮಾಡ ಬೇಕೆಂದಾದಲ್ಲಿ ಅದಕ್ಕೆ ಪುರುಷಪ್ರಧಾನ ಸಮಾಜದ ಕಟ್ಟುಕಟ್ಟಳೆಗಳು ತೊಡರುಗಳಾಗೇ ಗೋಚರಿಸುತ್ತವೆ. ಭಂಡ ಧೈರ್ಯದಿಂದ ಮುಂದೆ ಹೋದರೂ ಕಟ್ಟಿಟ್ಟ ಕಷ್ಟದ ಬುತ್ತಿಯ ಜೊತೆಗೆ ಟೀಕೆ-ನಿಂದನೆ, ಕೋಟಳೆಗಳ ಮುಖಾಮುಖಿ.
ಇಂಥ ಹಲವಾರು ಸಾಂಪ್ರದಾಯಿಕ-ಪ್ರಾದೇಶಿಕ-ಸಾಮಾಜಿಕ ಸವಾಲುಗಳ ಮಧ್ಯೆ ಒಬ್ಬ ಯುವತಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಬಂದು ಯಾವ ಸ್ವಾರ್ಥವಿಲ್ಲದೆ ಸಮಾಜಕಾರ್ಯಗಳಲ್ಲಿ ತೊಡಗಿದರೆಂದರೆ ಅವರಿಗೆ ಹ್ಯಾಟ್ಸ್ ಅಪ್ ಎನ್ನಲೇಬೇಕಲ್ಲ!
ಹೆಸರು ಶಿಖಾಸಿಂಗ್. ಓದಿದ್ದು ದೆಹಲಿ ವಿಶ್ವವಿದ್ಯಾಲಯದಲ್ಲಿ. 1999ರಲ್ಲಿ ತಮ್ಮ ಎಂಬಿಎ ಮುಗಿಸಿ, ನಂತರ ದೆಹಲಿಯಲ್ಲಿಯೇ ಇಟಲಿ ರಾಯಭಾರಿ ಕಚೇರಿ ಯಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ರಾಯಭಾರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸಿದವರಿಗೆ ಅವಕಾಶಗಳಿಗೇನು ಕೊರತೆ? ಶಿಖಾ ಅವರಿಗೂ ಹಾಗೆಯೇ ಅವಕಾಶಗಳು ನಾ ಮುಂದು, ತಾ ಮುಂದು ಸಾಲುಗಟ್ಟಿ ನಿಂತಿದ್ದವು. ಆದರೆ ಆಕೆಯ ಆಯ್ಕೆ ಸಮಾಜ ಸೇವೆಯಾಗಿತ್ತು.
ಮನದಾಳದ ಮಾತು:
ನಾನು ದೇಶ-ವಿದೇಶಗಳನ್ನು ಸುತ್ತಿದ್ದೇನೆ. ಹೊರದೇಶಗಳಲ್ಲಿ ನನಗೆ ಅಪಾರ ಅವಕಾಶಗಳಿದ್ದವು. ಹಾಗೆಯೇ ಸಾಧಿಸಲು ಹಲವಾರು ಮಾರ್ಗಗಳಿದ್ದವು. ಜೀವನದಲ್ಲಿ ಮಹತ್ತರವಾದ ಹಾಗೂ ಅರ್ಥಪೂರ್ಣ ವಾದ ಕಾರ್ಯ ಮಾಡಲು ಮನಸ್ಸು ಹಾತೊರೆಯುತಿತ್ತು. ಅದೇ ಸಂದರ್ಭದಲ್ಲಿ ಕೆ. ಎನ್. ಗೋವಿಂದಾಚಾರ್ಯರ ಕನಸಿನ ಕೂಸಾದ ಭಾರತ ವಿಕಾಸ ಸಂಗಮದ 3ನೇ ಕಾರ್ಯಕ್ರಮವಾದ `ಕಲ್ಬುಗರ್ಿ ಕಂಪು 2010' ರ ಕಾರ್ಯಕ್ರಮದಲ್ಲಿ ಜನರ ಜೊತೆ ಬೆರೆತು ಅವರ ಕಷ್ಟ, ಸಮಸ್ಯೆ, ಸವಾಲುಗಳನ್ನು ತಿಳಿದುಕೊಳ್ಳಲು, ಅವಶ್ಯವಿದ್ದಲ್ಲಿ ಉತ್ತಮ ಮಾರ್ಗದರ್ಶನ ನೀಡಲು ಒಂದು ಸುವರ್ಣ ಅವಕಾಶ ದೊರಕಿತು ಎಂದೇ ಇದನ್ನು ಕಾರ್ಯಕ್ಷೇತ್ರವನ್ನಾಗಿ ಆಯ್ದುಕೊಂಡ ಶಿಖಾ ಇಟಲಿ ರಾಯಭಾರಿ ಕಚೇರಿಯ ತಮ್ಮ ವೃತ್ತಿಗೆ ರಾಜೀನಾಮೆ ಇತ್ತು ಕಲ್ಬುಗರ್ಿಗೆ ಕಾಲಿಟ್ಟಿದ್ದಾರೆ. ತಮ್ಮ ಮನದಾಳದ ಮಾತುಗಳನ್ನು ಹಿಂದಿ ಮಿಶ್ರಿತ ಕನ್ನಡದಲ್ಲಿ ಹೇಳುವಾಗ ಧನ್ಯತೆ, ಸಂತೃಪ್ತ ಭಾವ ಅವರ ಮೊಗದಲ್ಲಿ ಎದ್ದು ಕುಣಿಯುತಿತ್ತು.
ಏನಿದು ಭಾರತ ವಿಕಾಸ ಸಂಗಮ?
ಕೊತ್ತಲ ಬಸವೇಶ್ವರ ಭಾರತ ವಿಕಾಸ ಸಂಗಮ ಸಮಿತಿ, ಸೇಡಂ 1974ರಲ್ಲಿ ಹೈದರಾಬಾದ್-ಕನರ್ಾಟಕ ಭಾಗದ ಅಭಿವೃದ್ಧಿಗಾಗಿ ಇದನ್ನು ಪ್ರಾರಂಭಿಸಿತು. ಇದರ ಪ್ರಮುಖ ಉದ್ದೇಶ ಈ ಭಾಗದ 5 ಜಿಲ್ಲೆಗಳು ಹಾಗೂ 24 ತಾಲೂಕುಗಳನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವುದು. ಆಥರ್ಿಕ, ಕೃಷಿ, ಇಂಗ್ಲಿಷ್ ಮತ್ತು ಕಂಪ್ಯೂಟರ್ ಶಿಕ್ಷಣ, ಪ್ರವಾಸ, ಶಿಷ್ಯವೇತನ, ಮಹಿಳಾ ಸಶಕ್ತಿಕರಣದ ಬಹುಮುಖ್ಯವಾದ ಜವಾಬ್ದಾರಿಯನ್ನು ಈ ನಿಟ್ಟಿನಲ್ಲಿ ವಹಿಸಿಕೊಳ್ಳಲಾಗಿದೆ. ಈ ಕಾರ್ಯದ ಚಾಲನೆ ಗಾಗಿ ಭಾರತ ವಿಕಾಸ ಸಂಗಮ ಸಮಿತಿ `ಕಲ್ಬುಗರ್ಿ ಕಂಪು' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಅದರ ಮೂಲಕ ಸಾಮಾಜಿಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತದೆ. ಕಳೆದ ವರ್ಷ ಸಹ 10 ದಿನಗಳ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಪ್ರಮುಖ ಧ್ಯೇಯ ಅಭಿವೃದ್ಧಿ ಇನ್ನೊಂದು ಅರ್ಥದಲ್ಲಿ ಗಾಂಧೀಜಿಯವರ ಕನಸಿನ ಪರಿಪೂರ್ಣತೆ ಎಂದರೂ ತಪ್ಪಾಗಲಾರದು.
ಇಂತಹ ಅರ್ಥಪೂರ್ಣ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ದೇಶದ ಇನ್ನೊಂದು ಮೂಲೆಯಿಂದ ಕಲ್ಬುಗರ್ಿಯಂತಹ ಬಿಸಿಲನಾಡಿಗೆ ಬಂದಿಳಿದ ಶಿಖಾರ ಆತ್ಮಸ್ಥೈರ್ಯ ಮೆಚ್ಚಬೇಕಾದದ್ದೆ. ತಿಳಿಯದ ಭಾಷೆ, ಜನ, ಜಾಗ...ಇವೆಲ್ಲದರ ನಡುವೆ ಕೆಲಸ ಮಾಡುವ ಉತ್ಕಟತೆ, ಮಾಡುವೆನೆಂಬ ಆತ್ಮವಿಶ್ವಾಸ ಇವೆರಡೇ ಆಕೆಯ ಜೊತೆಗಿದ್ದುದು.
ಸವಾಲುಗಳು:
ಸಾಮಾನ್ಯವಾಗಿ ಯಾವುದೇ ಒಬ್ಬ ಮಹಿಳೆ ಅದರಲ್ಲೂ ಇಲ್ಲಿನ ಸಂಸ್ಕೃತಿ, ಭಾಷೆ, ಆಚಾರ-ವಿಚಾರ, ಯಾವುದನ್ನೂ ತಿಳಿಯದ ಅವಿವಾಹಿತ ಯುವತಿ ದೊರೆತ ವಿಪುಲ ಅವಕಾಶಗಳನ್ನು ತೃಣವೆಂದು ಭಾವಿಸಿ, ಸೂರ್ಯನಗರಿ ಎನಿಸಿರುವ ಕಲ್ಬುಗರ್ಿಯಂತಹ ಸ್ಥಳಕ್ಕೆ ಬಂದು ಉದ್ಯೋಗ ಮಾಡುವುದೆಂದರೆ ಹುಡುಗಾಟವಲ್ಲ.
ಹಿಂದುಳಿದ ಭಾಗ ಎಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಹೈದ್ರಾಬಾದ್ ಕನರ್ಾಟಕವನ್ನು, ಇಲ್ಲಿನ ಜನರ ಜೀವನ ಮಟ್ಟ, ವ್ಯಕ್ತಿತ್ವ ಹಾಗೂ ಈ ಭಾಗಕ್ಕೆ ವಿಶೇಷ ಸ್ಥಾನ ಮಾನ ಕಲ್ಪಿಸುವ ನಿಮಿತ್ತ ಇವರು ಈ ಸಂಘಟನೆ ಮೂಲಕ ಪಡುತ್ತಿರುವ ಶ್ರಮ ಮಾತಿಗೆ ಎಟುಕು ಭಾವನೆಗಳಿಗೆ ನಿಲುಕದು.
`ಪ್ರಾರಂಭದಲ್ಲಂತೂ ಜನರೊಂದಿಗೆ ಒಂದಾಗುವಲ್ಲಿ ಅವರು ಬಹು ಶ್ರಮ ಪಟ್ಟಿದ್ದಾರೆ. `ಇಲ್ಲಿನ ಊಟ-ತಿಂಡಿ, ವಾತಾವರಣ ಇವೆಲ್ಲವುಗಳ ಜೊತೆ ಹೊಂದಿಕೊಳ್ಳಲು ಕೊಂಚ ಕಷ್ಟವೇನೋ ಪಡಬೇಕಾಯಿತು. ಆದರೆ, ಇಲ್ಲಿನ ಜನರ ಪ್ರೀತಿ, ವಿಶ್ವಾಸ ಹಾಗೂ ಪ್ರೋತ್ಸಾಹ ನನಗೆ ನನ್ನ ಗುರಿ ಸಾಧನೆಯಲ್ಲಿ ಮತ್ತಷ್ಟು ಬಲವಾಗಿ ನಿಲ್ಲಲು ಹುರಿದುಂಬಿಸಿದೆ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ.'
ಪ್ರಾರಂಭದಲ್ಲಂತೂ ನಮ್ಮ ಕುಟುಂಬದವರು ಈ ಕೆಲಸಕ್ಕೆ ಒಪ್ಪಲಿಲ್ಲ. ತುಂಬಾ ಆತಂಕ ವ್ಯಕ್ತಪಡಿಸಿದ್ದರು. ಕುಟುಂಬದಿಂದ ನೀನೊಬ್ಬಳೆ ಅಲ್ಲಿ ಹೇಗಿರಲು ಸಾಧ್ಯ. ಎಂದು ತಡೆಯೊಡ್ಡಿದರು. ಅದೇನೋ ಅಂತಾರಲ್ಲ, ಗುರಿಗೆ ಧೈರ್ಯ ಪ್ರಚೋದನಾಕಾರಿಯಾಗಿ ನಿಲ್ಲುವು ದಾದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. ಅದರಂತೆ ನನಗೆ ಎಲ್ಲವೂ ಸರಳವಾಗಿಯೇ ಗೋಚರಿಸುತ್ತಿವೆ. ಬಂದ ಸವಾಲುಗಳನ್ನು ಭಾರವೆಂದು ನಾನು ಪರಿಗಣಿಸಿಲ್ಲ ಎಂದು ನಗೆ ಬೀರಿದರು.
ಕುಟುಂಬ:
ಶಿಖಾ ತಂದೆ ರೈಲ್ವೆ ಇಲಾಖೆಯಲ್ಲಿ ಕಾರ್ಯನಿವರ್ಾಹಕ ನಿದರ್ೇಶಕರಾಗಿ ಸೇವೆ ಸಲ್ಲಿಸಿರುವ ನಿವೃತ್ತ ಅಧಿಕಾರಿಗಳು. ಇವರೇ ಮನೆಗೆ ಹಿರಿಯ ಮಗಳು. ಆದರೆ ಇಂದು ಕುಟುಂಬವನ್ನು ಬಿಟ್ಟು ಒಬ್ಬರೇ ಕಲ್ಬುಗರ್ಿಯಲ್ಲಿದ್ದಾರೆ.
  
ಸ್ನೇಹಿತರೆ, ಯುವತಿಯೊಬ್ಬಳು ಉನ್ನತ ಹುದ್ದೆಗೆ ರಾಜೀನಾಮೆ ಕೊಟ್ಟು, ದೂರದ ದೆಹಲಿಯಿಂದ ಬಿಸಿಲನಾಡಿಗೆ ಬಂದು, ಅಭಿವೃದ್ಧಿ ಕಾರ್ಯಗಳಿಗಾಗಿ ಟೊಂಕಕಟ್ಟಿ ನಿಂತಿದ್ದಾರೆಂದರೆ ಅದು ಸಾಮಾನ್ಯ ವಿಷಯವಲ್ಲ. ಹೊರ ರಾಜ್ಯದವರಿಗೆ ನಮ್ಮ ಹಿಂದುಳಿದ ಜಿಲ್ಲೆ, ತಾಲ್ಲೂಕು, ಹೋಬಳಿಗಳ ಕುರಿತು ಅಷ್ಟೊಂದು ಆಸಕ್ತಿ ಇರುವಾಗ, ಇಲ್ಲಿಯೇ ಹುಟ್ಟಿ ಬೆಳೆದಿರುವ ನಮಗೆ ಅದರ ಬಗ್ಗೆ ಇನ್ನಷ್ಟು ಆಪ್ತತೆ ಇರಬೇಕು.
ಮಹಿಳೆಯೊಬ್ಬಳು ಮನಸ್ಸು ಮಾಡಿದರೆ ಹಳ್ಳಿಯಾದರೇನು, ದಿಲ್ಲಿಯಾದರೇನು ಸಾಮಾಜಿಕ ಜವಾಬ್ದಾರಿಗಳನ್ನು ಉತ್ತಮವಾಗಿ ನಿಭಾಯಿಸಬಲ್ಲಳು ಎನ್ನುವುದಕ್ಕೆ ಶಿಖಾಸಿಂಗ್ ಯುವಪೀಳಿಗೆಗಳಿಗೆ ಆದರ್ಶವಾಗಿ ನಿಲ್ಲಬಲ್ಲಾಕೆ.
ದಿಟ್ಟ ಹೆಜೆಯನ್ನಿಟ್ಟ ಶಿಖಾ ಜತೆ ನೀವು ಮಾತನಾಡಿ ಅವರನ್ನು ಮತ್ತಷ್ಟು ಹುರಿದುಂಬಿಸಬೇಕಾದ್ದಲ್ಲಿ 0847-2273810 ಕರೆ ಮಾಡಿ.
ಎನಿ ವೇ ಎಲ್ಲರೂ ಮುಂದೆ ಸಾಗೋಣ ಸಮಾಜ ಕಟ್ಟಲು ಎದೆಗಾರಿಕೆಯಿಂದ ಮುಂದೆ ಸಾಗೋಣ.....
ಆತೀಶ್ ಬಿ ಕನ್ನಾಳೆ


Sunday, February 6, 2011

Filmy Funda...

ಮಗನಿಗೆ ತಕ್ಕ ಅಪ್ಪ 

ತಂದೆಯಂತೆ ಮಗ ಎಂಬ ಮಾತು ನೀವು ಕೇಳಿರಬಹುದು ಅಥವಾ ನೋಡಿರಲೂಬಹುದು. ಆದರೆ, ಮಗನಂತೆ ಅಪ್ಪನೆಂಬ ಮಾತು ಎಲ್ಲಾದರೂ ನೀವು ಕೇಳಿದ್ದಿರಾ?! ಹೋಗಲಿ ನೋಡಿದ್ದಾದ್ರು ನೆನಪಿದೇನಾ?
ಆದರೆ, ನಮ್ಮ ಕನ್ನಡ ಫೀಲ್ಮ್ ಇಂಡಸ್ಟ್ರಿಯಲ್ಲಿ ಇಂಥ ಉದಾಹರಣೆ ನೋಡಬಹುದು. ಒಂಬತ್ತರ ಬಾಲ್ಯದಲ್ಲೇ ಗಿನ್ನಿಸ್ ವಿಶ್ವ ದಾಖಲೆ ಪುಸ್ತಕಕ್ಕೆ ಸೇರಿದ ಮಾಸ್ಟರ್ ಕಿಶನ್ ಅಪ್ಪಾ ಈಗ ಹೊಸ ಸಾಹಸ ಕಾರ್ಯಕ್ಕೆ ಕೈಹಾಕಿದ್ದಾರೆ.
ಮಾಚರ್್ 2011ರಲ್ಲಿ ಅವರು ಕನರ್ಾಟಕದ 1 ಲಕ್ಷ ವಿದ್ಯಾಥರ್ಿಗಳನ್ನು ವೇದಿಕೆ ಮೇಲೆ ಏಕಕಾಲಕ್ಕೆ ಡ್ಯಾನ್ಸ್ ಮಾಡಿಸುವುದರ ಮೂಲಕ ವಿಶ್ವ ದಾಖಲೆಯನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಬೇಕೆಂಬ ಮಹತ್ತಾಸೆ ತೋಡಿಕೊಂಡಿದ್ದಾರೆ. ಕನರ್ಾಟಕದ ಬೆಂಗಳೂರು, ಹುಬ್ಬಳ್ಳಿ, ಚಿತ್ರದುರ್ಗ, ಹಾಸನ್, ಬಳ್ಳಾರಿ, ಶಿವಮೊಗ್ಗ, ಮಂಗಳೂರು ಮತ್ತು ಗುಲ್ಬಗರ್ಾದ ವಿದ್ಯಾಥರ್ಿಗಳು ಈ ಡ್ಯಾನ್ಸ್ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಸಾಹಸವೇನೂ ಇದೇ ಪ್ರಥಮ ಬಾರಿಗೆ ನಡೆಯುತ್ತಿಲ್ಲ. ಈ ಹಿಂದೆಯೂ ಅನೇಕರು ಇದಕ್ಕೆ ಕೈಹಾಕಿ ಗಿನ್ನಿಸ್ ದಾಖಲೆ ಬಾಚಿಕೊಂಡಿದ್ದಾರೆ. ಅದರಲ್ಲಿ ಮೈಕಲ್ ಜಾಕ್ಸ್ನ್ ತನ್ನ 51ನೇ ಹುಟ್ಟುಹಬ್ಬದ ಸಂದರ್ಭದಲ್ಲಿ 22,596 ಜನರ ಜೊತೆ `ಥ್ರಿಲರ್ ಅಲ್ಬಂ' ಸಂಗೀತಕ್ಕೆ ಸ್ಟೆಪ್ಸ್ ಹಾಕಿದ್ದರು.
ಕೆಲ ದಿನಗಳ ಹಿಂದೆಯಷ್ಟೆ 1,082 ಶಾಲಾ ವಿದ್ಯಾಥರ್ಿಗಳು ಬಾಲಿವುಡ್ ಸಂಗೀತಕ್ಕೆ ಸಿಂಗಾಪುರನಲ್ಲಿ ಕುಣಿದಿದ್ದರು. ಅದೇ ರೀತಿ 2,100 ಭಾರತೀಯ ಸ್ಪಧರ್ಾಳುಗಳು ಭಾಂಗ್ರಾ ಹಾಡಿಗೆ ಕುಣಿದು ದಾಖಲೆ ಮಾಡಿದ್ದರು. ಇವೆಲ್ಲವುಗಳ ಗಡಿಮೀರಿ ಏಕ ಕಾಲಕ್ಕೆ ಬೇರೆ-ಬೇರೆ ಸ್ಥಳದ ಹಾಗೂ ವಿಭಿನ್ನ ಸಂಸ್ಕೃತಿಯ ಒಂದೇ ವೇದಿಕೆ ಮೇಲೆ 1 ಲಕ್ಷ ವಿದ್ಯಾಥರ್ಿಗಳನ್ನು ಕುಣಿಸುವ ಒತ್ತಾಸೆ ಶ್ರೀಕಾಂತ್(ಕಿಶನ್ ಅಪ್ಪ) ಅವರದ್ದಾಗಿದೆ.
ಈ ಉದ್ದೇಶದ ಪೂತರ್ಿಗಾಗಿಯೇ ಹಲವು ಶಾಲೆಗಳಿಗೆ ಭೇಟಿ ನೀಡಿದ್ದೇವೆ. 48,000 ಶಾಲಾ ವಿದ್ಯಾಥರ್ಿಗಳು ಇದಕ್ಕಾಗಿ ಒಪ್ಪಿಕೊಂಡಿದ್ದಾರೆ ಆದರೆ ಈ ವಿಷಯವನ್ನು ಬಹಿರಂಗ ಪಡಿಸಿಲ್ಲ ಎಂದು ಶ್ರೀಕಾಂತ್ ಮನದಾಳದ ಮಾತನ್ನು ಬಿಚ್ಚಿಟ್ಟರು. ಇದಕ್ಕಾಗಿ ನಾಲ್ಕು ನಿಮಿಷಗಳ ಹಾಡನ್ನು ಆರಿಸಿಕೊಳ್ಳಲಾಗಿದ್ದು, ಅದಕ್ಕೆ ಗೀತ ನಿದರ್ೇಶನ ಪ್ರೇಮ್ ಮಾಡಿದ್ದು, ಸಿದ್ಧಾರ್ಥ ವಿಪ್ಪಿನ್ ದನಿ ನೀಡಿದ್ದಾರೆ ಹಾಗೂ ಕೊರಿಯೋಗ್ರಾಫಿ ರಾಮು ನೀಡಿದ್ದಾರೆ. ಈ ಸಾಹಸ ಕಾರ್ಯಕ್ಕೆ 40 ಲಕ್ಷ ರೂಪಾಯಿ ಖಚರ್ು ಮಾಡಲಾಗುತ್ತಿದೆ.
ಒಂದು ವೇಳೆ ಈ ಸಾಹಸ ಫಲನೀಡಿದ್ದಲ್ಲಿ, ಕನರ್ಾಟಕ 1 ಲಕ್ಷ ಗಿನ್ನಿಸ್ ದಾಖಲೆಗಾರರು ಹೊಂದಲಿದೆ ಎಂದು ಖುಷಿಯಿಂದ ನುಡಿದರು.
ಆತೀಶ್ ಬಿ ಕನ್ನಾಳೆ
 

Tuesday, January 18, 2011

ಬುಟ್ಟಿ ಹೆಣೆಯುವವರ ಬದುಕಿನ ಸುತ್ತ  ಕೋಟಲೆಗಳ ಹುತ್ತ ...

'ಈಗ ಆ್ಯನೋ ಮದಿ ಸೀಸನ್ ಆದಾರಿ ರೊಕ್ಕದ ಸಮಸ್ಯೆ ಆ್ಯನಬಿ ಇಲ್ರಿ, ಆದುರಾ ಮಳಗಾಲ ಬಂತು ಅಂದುರಾ ಒಂದು ಹೊತ್ತಿಂದ ಉಳ್ಳಾಕಬಿ ಪರದಾಡಬೇಕಾಯ್ತುದ್ರಿ ಅಂತಾರೆ ಈ ಬುಟ್ಟಿ ಹೆಣೆಯುವ ಮಹಿಳೆ.' ಹಾಗು ಇಡೀ ನಮ್ ಕುಟುಂಬಾನೆ ಈ ವೃತ್ತಿ ಮಾಡ್ತಿವ್ರಿ ಆದುರಾ ಆದಾಯ ಮಾತ್ರ ಒಪ್ಪತ್ತಿನ ಕೂಳಿಗು ಸಾಲಂಗಿಲ್ರಿ. ಈ ಮಹಿಳೆ ಮಾತು ಕೇಳಿ ಎಷ್ಟು ಜನರ ಕರುಳು ಚುರುಕ್ ಅನ್ನೋಲ್ಲಾ ನೀವೆ ಹೇಳಿ? 
ಬೀದರ್ನಲ್ಲಿ ಬಿದಿರಿನಿಂದ ಸಾಮಗ್ರಿಗಳನ್ನು ತಯಾರಿಸುವ ಇವರು ಸುಮಾರು ವರ್ಷಗಳಿಂದ ಈ ಸ್ಥಳದಲ್ಲಿಯೇ ನೆಲೆಸಿದ್ದು ಈ ವೃತ್ತಿಯಲ್ಲಿ ನಿರತರಾಗಿದ್ದಾರೆ. ಇವರು ತಮಗೆ ಬೇಕಾದ ಬಿದಿರುಗಳನ್ನು ಸಾಮಗ್ರಿ ಎನ್ನುವ ಸ್ಥಳದಿಂದ ಆಮದು ಮಾಡಿಸಿಕ್ಕೊಳ್ಳುತ್ತಾರೆ. ಈ ಬಿದಿರಿನಿಂದ ಹಲವು ಬಗೆಯ ಬುಟ್ಟಿ, ಹೂವಿನ ಪುಟ್ಟಿ, ಮೊರ ಮುಂತಾದ ಹಲವು ಬಗೆಯ ಸಾಮಗ್ರಿಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. 1 ಬಂಬುಗೆ ಸು. 60-70 ರೂ. ನೀಡಿ ಅದರಿಂದ ಹಲವು ಬಗೆಯ ಸಾಮಗ್ರಿಗಳನ್ನು ತಯಾರು ಮಾಡಿ ದಿನಕ್ಕೆ 1000 ರೂ. ನಷ್ಟು ಹಣಗಳಿಸುತ್ತಾರೆ. ಮದುವೆ ಸಮಯದಲ್ಲಿ ಮಾತ್ರ ಬುಟ್ಟಿಗಳಿಗೆ ಬೇಡಿಕೆ ಹೆಚ್ಚುವುದರಿಂದ ಸ್ವಲ್ಪ ಮಟ್ಟಿಗೆ ಹಣದ ಸಮಸ್ಯೆಯೇನಿರುವುದಿಲ್ಲ, ಆದರೆ ಮಳೆಗಾಲದಲ್ಲಂತೂ ಇಡಿ ಕುಟುಂಬವೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದ ಸದಸ್ಯರೆಲ್ಲರು ಬೇರೆ ತಿಳಿಯದ ಕಾರಣ ಇದೆ ವೃತ್ತಿಯನ್ನು ಜೀವನದ ಮಾರ್ಗವೆಂದು ಆರಿಸಿಕೊಂಡಿರುವುದು. 'ಶಾಸ್ತ್ರ ಹೇಳೋಕ್ಕೆ ಬದನೆಕಾಯಿ ತಿನ್ನೋಕ್ಕೆ' ಎಂಬಂತೆ ಸಕರ್ಾರದ ಯೋಜನೆಗಳೆಲ್ಲಾ ಇಂಥವರಿಗೆ ಸ್ಪಂದಿಸುತ್ತಿಲ್ಲ! ಕುಟುಂಬದಲ್ಲಿ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡಲಾಗಿಲ್ಲವೆಂಬ ಕೊರಗು ಹೆತ್ತ ಕರುಳಿನದ್ದಾದರೆ, ಇನ್ನೊಂದು ಕಡೆ ಕಿತ್ತು ತಿನ್ನುವ ಬಡತನ ಇರುವಾಗ ನಮಗೆ ಯಾಕೆ ಈ ಶಾಲೆ-ಗೀಲೆ ಸಾರ್ ಎನ್ನುತ್ತಾರೆ ಹತಾಶಗೊಂಡ ಆ ಮಹಿಳೆ. ವಿಪಯರ್ಾಸವೆಂದರೆ ಜನರಿಗೆಲ್ಲಾ ರೊಟ್ಟಿಗಾಗಿ ಬುಟ್ಟಿ ನೇಯ್ದು ಕೊಡುವ ಇವರ ಜೀವನಕ್ಕೆ ಭದ್ರತೆಯ ಬುಟ್ಟಿಯೇ ಇಲ್ಲ.
ಹಾಗಾದರೆ ಇವರು ಜೀವನ ಆದ್ರು ಹೇಗೆ ಮಾಡ್ತಾರೆ ಅನ್ನೊ ಪ್ರಶ್ನೆ ನಿಮಗೆ ಬರ್ಲಿಲ್ವಾ? ಬೇಸಿಗೆಯಲ್ಲಿ ದುಡಿದುದ್ದನ್ನು ಮಳೆಗಾಲದಲ್ಲಿ ತಿನ್ನುವ ಇರುವೆಯಂತೆ ಇವರ ಜೀವನ ಎನ್ನಬಹುದು! ಏಕೆಂದರೆ ಇವರು ಸಹ ಇರುವೆಯಂತೆಯೇ ಬೇಸಿಗೆಯ ಸೀಸನ್ನಲ್ಲಿ ಗಳಿಸಿದ್ದನ್ನು ಯೋಜನಾಬದ್ದವಾಗಿ ಮಳೆಗಾಲದಲ್ಲಿ ವ್ಯಯಮಾಡುತ್ತಾರೆ. ಆದರೆ ಇಂದಿನ ಆಧುನಿಕ ಪಾಶ್ಚಾತ್ಯ ಸಂಸ್ಕೃತಿಯಿಂದಾಗಿ ಬೇಸಿಗೆಯು ಅವರ ಪಾಲಿಗೆ ಮಳೆಗಾಲವೆ ಆಗಿದೆ..!
ಬುಟ್ಟಿ ಹೆಣೆಯುವವರ ಜೀವನದ ಸುತ್ತ ಸುತ್ತಿ ನೋಡುವಾಗ ಮುತ್ತಿರುವುದು ಬರೀ ಕರಾಳ ಛಾಯೆ, ದುಃಖ ಹಾಗು ಹಸಿವಿನ ಪರದಾಟ. ಇವೆಲ್ಲವುಗಳಿಂದ ಇವರಿಗೆಮುಕ್ತಿಯೇ ಇಲ್ಲವೆ?
ಆತೀಶ ಬಿ ಕನ್ನಾಳೆ

Saturday, January 1, 2011

In & As

ಕಥೆಯಲ್ಲ ವ್ಯಥ್ಯೆ..!
ಲೈಫು ಇಷ್ಟೆನೆ...

ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ...(ಎಲ್ಲಿ ಮಹಿಳೆಯರನ್ನು ಆದರಿಸಲಾಗುತ್ತದೆಯೋ ಅಲ್ಲಿ ದೇವರು ನೆಲೆಸಿರುತ್ತಾರೆ) ಎನ್ನುತ್ತದೆ ಈ ಶ್ಲೋಕ. ಸ್ತ್ರೀಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿ...! ಆಕೆ ಆದಿಶಕ್ತಿ, ಪ್ರಕೃತಿ, ಸೃಷ್ಟಿಯ ಮೂಲ ಎಂದೆಲ್ಲಾ ಗೌರವಿಸುತ್ತೇವೆ.
ಆದರೆ...ಎಷ್ಟರಮಟ್ಟಿಗೆ...?
ಕೆಲವು ದಿನಗಳು ಹಿಂದೆ ನಾನು ಮೆಜೆಸ್ಟಿಕ್ ಪ್ಲೈಓರ್ ಮೇಲೆ ಸ್ನೇಹಿತರ ಜೊತೆ ಹೋಗುತ್ತಿದ್ದೆ. ಅದು ಸಂಧ್ಯಾ  ಸಮಯವಾದ್ದರಿಂದ ಸಿಕ್ಕಾಪಟ್ಟೆ ಜನರಿಂದ ಫ್ಲೈಓರ್ ಫುಲ್ ರಷ್. ಅಲ್ಲಿ ಕೆಲವು ಪೋಲಿ ಹುಡುಗರು ನಿಂತಿದ್ದರು. ಎಲ್ಲರು 20-25 ಹದಿಹರೆಯದವರೆ. ಅಲ್ಲಿಯೇ ಕುಳಿತಿದ್ದ ಮೂವರು ಹುಡುಗಿಯರನ್ನು ನೋಡಿ ಏನೆನೋ ಮಾತನಾಡುತ್ತಿದ್ದರು. ಆ ಮೂವರು ಹುಡುಗಿಯರು ಕೂಡ ಅಷ್ಟೇ ಬಿಂದಾಸಾಗಿ ನಗುತ್ತಾ, ಮಾತನಾಡುತ್ತ ಈ ಹುಡುಗರ ಕಡೆಗೆ ನೋಡುತ್ತಿದ್ದರು. ನಾನೂ ಸ್ವಲ್ಪ ಹೊತ್ತು ಅಲ್ಲೇ ನಿಂತೆ, ಪರಿಸ್ಥಿತಿಯನ್ನು ತಿಳಿದುಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದೆ. ನನ್ನ ಲೇಖನಿಗೆ ಆಹಾರ ಸಿಕ್ಕಬಹುದೆಂಬ ತವಕ ಮನದ ಮೂಲೆಯಲ್ಲಿ ಸಮುದ್ರದ ಅಲೆಗಳಂತೆ ಏಳುತ್ತಿತ್ತು.
ಆ ಯುವತಿಯರು ತಮ್ಮ ದೇಹದ ಮೇಲೆ ಬಟ್ಟೆ ಇದೆಯೋ ಇಲ್ಲವೋ ಎಂಬ ಪರಿವಿಲ್ಲದೆ ಕುಳಿತಿದ್ದರು. ಒಂದೇ ಪದದಲ್ಲಿ ಹೇಳಬೇಕಾದರೆ ಹೆಣ್ಣಿಗೆ ಸಹಜವಾದ ಲಜ್ಜೆಯ ಸ್ವಭಾವವೇ ಅವರಲ್ಲಿ ಕಾಣುತ್ತಿರಲಿಲ್ಲ...!
ಹದಿನೈದಿಪ್ಪತ್ತು ನಿಮಿಷ ನಿಂತು ಪರಿಸ್ಥಿತಿಯನ್ನು ಪರಾಮಶರ್ಿಸಿದಾಗ ಗೊತ್ತಾಯ್ತು. ಅವರು ಬೇರೆ ಯಾರೂ ಅಲ್ಲ, `ಬದುಕಿನ ಬಂಡಿ ದೂಡಲು ದೇಹವನ್ನು ಬಂಡವಾಳವಾಗಿ ಮಾಡಿಕೊಂಡಿರುವವರು.'
ಆಮೇಲೆ 24-25 ಆಸುಪಾಸು ವಯಸ್ಸಿನ ಹುಡುಗ ಬಂದು ಕಣ್ಣು ಮಿಟುಕಿಸಿದ ತಕ್ಷಣ ಗ್ರೀನ್ ಸಿಗ್ನಲ್ ದೊರೆತ ಯುವತಿ ಸನ್ನೆಯ ಮೂಲಕ ಏನೋ ಹೇಳಿದಳು. ನಂತರ ಇಬ್ಬರೂ ಆಟೋ ಹಿಡಿದು ಎಲ್ಲಿಗೋ ಹೊರಟು ಹೋದರು.
ಆ ಘಟನೆಯಿಂದ ನನ್ನಲ್ಲಿ ಹಲವು ಪ್ರಶ್ನೆಗಳು ಫುಂಕಾನುಫುಂಕವಾಗಿ ಏಳಲಾರಂಭಿಸಿದವು. ಡಿಗ್ರಿಯಲ್ಲಿದ್ದಾಗ ಸಾಮಾಜಿಕ ಸಮಸ್ಯೆಗಳ ಕುರಿತಾಗಿ  ಓದಿದ್ದೆ. ಆದರೆ ಅದೇನೋ ಅಂತಾರಲ್ಲಾ, ಓದಿದ್ದು ಸುಳ್ಳಾಗಬಹುದು, ನೋಡಿದ್ದೂ ಸುಳ್ಳಾಗಬಹುದು, ನಿಧಾನಿಸಿ  ಯೋಚಿಸಿದಾಗ ನಿಜವ ತಿಳಿವುದು.... ಎಂಬಂತೆ ನನಗೂ ಆ ಮೆಜೆಸ್ಟಿಕ್ ಮೂಲೆಯಲ್ಲಿ ಈ ಲೋಕದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಇಂತಹ ವಿಷಯಗಳ ಒಂದು ತುಣುಕು ಕಣ್ಣಿಗೆ ಬಿತ್ತು. ಅದರ ಪ್ರತಿಫಲವೇ ಈ ಲೇಖನ.
ಮೆಜೆಸ್ಟಿಕ್ ಫ್ಲೈಓರ್ ಮೇಲೆ ಟೋಪಿ, ವಾಚು ಮಾರಿಕೊಂಡಿದ್ದ ಹಲವರನ್ನು ಅಲ್ಲಿಂದ ನೌದೋಗ್ಯಾರಾಹ (ಓಡಿಸಲಾಗಿದೆ) ಮಾಡಲಾಗಿದೆ.

ಮೂಗು ಮುರಿಯುವವರು
ಇಂತಹ ವೃತ್ತಿ ಎಂದಾಕ್ಷಣ ಮೂಗುಮುರಿಯುವ ಜನರೇ ಇವತ್ತು ಅತ್ಯಧಿಕ. ಆದರೆ ಹೀಗೆ ಮೂಗು ಮುರಿಯುವ ಮುನ್ನ ಕೆಲವು ಸಂಗತಿಗಳ ಕುರಿತು ಯೋಚಿಸಲೇಬೇಕು.
ಯಾವ ಹೆಣ್ಣು ತಾನೆ ಹುಟ್ಟಿದ ತಕ್ಷಣದಿಂದ ಇಂತಹ ವೃತ್ತಿಗಿಳಿಯಲು ಸಾಧ್ಯ....? ಈ ಸೃಷ್ಟಿಯ ನಿಯಮದಂತೆ ಪ್ರತಿ ಹೆಣ್ಣಿನಲ್ಲೂ ನಾಚಿಕೆ, ಸಂಕೋಚ ಮನೆಮಾಡಿರುತ್ತದೆ. ಒಬ್ಬ ಪುರುಷ ತನ್ನನ್ನು ನೋಡುತ್ತಿದ್ದಾನೆಂದರೆ, ಅಲ್ಲಿಂದ ಪಾರಾಗಲು ಯತ್ನಿಸುತ್ತಾಳೆ. ಅವಳಿಗೆ ಅವಳದ್ದೇ ಆದ ಆತ್ಮಾಭಿಮಾನ, ವರ್ಚಸ್ಸೆನ್ನುವುದಿದೆ. ಅದರಲ್ಲೂ ನಮ್ಮ ಭಾರತದ ಸಂಸ್ಕೃತಿ ಶ್ರೇಷ್ಠವಾದದ್ದು. ಆ ಶ್ರೇಷ್ಠತೆಗೆ ಇಲ್ಲಿಯ ನಾರಿ ದ್ಯೋತಕ. ಇಲ್ಲಿ ಹೆಣ್ಣಿಗೆ ನಾಚಿಕೆ, ಮಾನ-ಮಯರ್ಾದೆ ಎನ್ನುವ ಗುಣಗಳೆ ನಿಜ ಭೂಷಣ. ಆ ಗುಣಗಳನ್ನು ಅವಳು ಮೈಗೂಡಿಸಿಕೊಂಡಾಗ ಮಾತ್ರ ಪರಿಪೂರ್ಣಳಾಗಲು ಸಾಧ್ಯ. ಅದಕ್ಕೂ ಮಿಗಿಲಾಗಿ ಬೇರೆ ರಾಷ್ಟ್ರಗಳಿಗೆ ಹೋಲಿಸಿದಾಗ ನಮ್ಮ ದೇಶದಲ್ಲಿ ಸಾಂಪ್ರದಾಯಿಕ ಕುಟುಂಬಗಳು, ಕಟ್ಟುಕಟ್ಟಳೆಗಳು ಅತೀ ಹೆಚ್ಚು. ಇಂತಹ ವಾತಾವರಣದ ಮಧ್ಯೆ, ಇಷ್ಟೆಲ್ಲ ಕಟ್ಟುಪಾಡುಗಳ ನಡುವೆಯೂ ಈ ವೃತ್ತಿ ನಾಯಿಕೊಡೆಯಂತೆ ಬೆಳೆಯುತ್ತಿದೆ ಎಂದರೆ ಇಲ್ಲಿ ಯಾರ ಲೋಪವಿದೆ...?
ಈ ವೃತ್ತಿಯಲ್ಲಿರುವವರಿಗೆ ಸೌಂದರ್ಯವೇ ಬಂಡವಾಳ. ವಯಸ್ಸು ಕಳೆದಂತೆ ಅವಳ ಇಡೀ ಜೀವನ ಮುಳ್ಳಿನ ಹಾಸಿಗೆ. ಇವರ ಬದುಕಿನ ಕುರಿತು ಕ್ಷಣಹೊತ್ತು ಆಲೋಚಿಸುವಾಗ ಕಸಿವಿಸಿಯಾಗುತ್ತದೆ.

ಸ್ಥಾನಮಾನ
ಬಾಲ್ಯದಲ್ಲಿ ಯಾರಿಗೆ ಬೇಕಾದರೂ ಕೇಳಿ ನೋಡಿ ಅವಳು(ರು) ಇಂಜಿನೀಯರ್, ಡಾಕ್ಟರ್, ವಿಜ್ಞಾನಿ, ಪತ್ರಪತರ್ೆ, ಶಿಕ್ಷಕಿ ಹೀಗೆ ಹಲವಾರು ಗುರಿಗಳನ್ನು ನಿಮ್ಮ ಎದುರು ಬಿತ್ತರಿಸುತ್ತಾರೆ. ಆದರೆ ಯಾರೂ ಕೂಡ ತಾನು ಲೈಂಗಿಕ ಕಾರ್ಯಕತರ್ೆಯಾಗಬೇಕೆಂದು ಹೇಳುವುದಿಲ್ಲ. ಹೇಳಲು ಸಾಧ್ಯವೂ ಇಲ್ಲ. ಏಕೆಂದರೆ ಅದೊಂದು `ಪಾಪಕೂಪ'ವೆಂದು ಪ್ರತಿಯೊಬ್ಬರಿಗೂ ಗೊತ್ತು. ಹೀಗಿರುವಾಗ್ಯೂ ಇವತ್ತು ಆ ಇದನ್ನು ಅವರು ತಮ್ಮ (ಪ್ರ)ವೃತ್ತಿಯನ್ನಾಗಿಸಿಕೊಂಡಿದ್ದಾರೆಂದರೆ ಬಹುಶಃ ಸ್ವಯಿಚ್ಛೆಯಿಂದ ಯಾರೂ ಆ ವೃತ್ತಿಗೆ ಕಾಲು ಇಟ್ಟಿಲ್ಲವೆಂದು ಕಡ್ಡಿ ಮುರಿದಷ್ಟು ಸುಲಭವಾಗಿ ಹೇಳಬಹುದು. ಕ್ಷಣಹೊತ್ತು ನೀವೆ ಯೋಚಿಸಿ.... ಒಬ್ಬ ಮಹಿಳೆ ತನ್ನ ದೇಹವನ್ನು ಹಲವು ಪುರುಷರಿಗೆ ಒಪ್ಪಿಸಬೇಕಾದ್ದಲ್ಲಿ ಅವಳು ತನ್ನ ಮನಃಸಾಕ್ಷಿಯನ್ನು ಎಷ್ಟರ ಮಟ್ಟಿಗೆ ಕೊಂದಿರಬಹುದು(ಕೊಲೆಗೈದಿರಬಹುದು)!?
ಕನಸುಗಳಿಲ್ಲವೆ?
ಹಾಗಾದರೆ ಈ ಹೆಣ್ಣು ಮಕ್ಕಳಿಗೆ ಬೇರೆಯವರಂತೆ ತಮ್ಮದೇ ಕನಸುಗಳೇ ಇಲ್ಲವೇ..? ಅವರು ಇತರರಂತೆ ಬದುಕಬೇಕು ಎಂದುಕೊಳ್ಳೋದೇ ಇಲ್ಲವೇ...??
ಖಂಡಿತವಾಗಿ ಅವರಲ್ಲಿಯೂ ಅನೇಕ ಕನಸುಗಳುಂಟು. ಇಂತಹ ಹೀನಾಯ ಬದುಕನ್ನು ದೂಡುತ್ತಿರುವ ಅವರ ಹೃದಯ ನೋಯುತ್ತಲೇ ಇರುತ್ತದೆ. ಈ ಬದುಕಿನ ಹೊರತಾಗಿಯೂ ಆ ಹೃದಯದಲ್ಲಿ ನೂರಾರು ಆಸೆಗಳುಂಟು.
ತನ್ನ ಬದುಕಿಗಿಂತ ಭಿನ್ನವಾಗಿ ಬದುಕುತ್ತಿರುವ ಬೇರೆ ಸ್ತ್ರೀಯರನ್ನು ನೋಡುವಾಗ ಅವಳೂ ಅಂತಹ ಜೀವನಕ್ಕಾಗಿ ತವಕಿಸಬಹದು. ಅವರ ಕೌಟುಂಬಿಕ ಜೀವನ, ಪುಟ್ಟ ಸಂಸಾರ ನೋಡುವಾಗ ಅವಳ ಹೃದಯದಲ್ಲಿ ಜ್ವಾಲಾಮುಖಿ ಭುಗಿಲೇಳುತ್ತಿರಬಹುದು?
ಪರಿಸ್ಥಿತಿ ಹೀಗಿರುವಾಗ ಏಕೆ ಈ ಜಾಡ್ಯ ನಮ್ಮ ಸಮಾಜದಲ್ಲಿ ಹೆಚ್ಚುತ್ತಿದೆ?
ಸಿ.ಎನ್.ಮುಕ್ತಾರವರ `ಪರಿಭ್ರಮಣ' ಕಾದಂಬರಿಯಲ್ಲಿ `ಈ ಏಕೆ?' ಎನ್ನುವ ಪ್ರಶ್ನೆಗೆ ಸ್ಪಟಿಕದಂಥ ಉತ್ತರ ದೊರಕಬಹುದು. ಒಂದು ಹೆಣ್ಣು ಹುಟ್ಟಿದಾಗ ತಂದೆಯ, ಮದುವೆಯ ನಂತರ ಪತಿಯ ಹಾಗೂ ಮುಂದೆ ಮಕ್ಕಳು ಹೇಳಿದಂತೆ ಕೇಳುತ್ತಾ ಜೀವಿಸಬೇಕೆಂಬ ನಿಯಮ (ಪ್ರಾಯಶಃ ಇದು ಮೆಟ್ರೋ ಸಿಟಿಗಳಿಗೆ  ಅಷ್ಟು ಅನ್ವಯಿಸದು) ಹಳ್ಳಿಗಳಲ್ಲಿ ಅಷ್ಟೆ ಏಕೆ ಅನೇಕ ನಗರಗಳಲ್ಲಿ ಇಂದಿಗೂ ಚಾಲ್ತಿಯಲ್ಲಿದೆ.
ಈ ಪರಿಭ್ರಮಣ ಕಾದಂಬರಿಯ ಸ್ವಾರಸ್ಯ ಕೂಡ ಅದೇ. ಅಪ್ಪನಿಲ್ಲದ ಸುಂದರ ಯುವತಿಯೊಬ್ಬಳ ಬದುಕಿನ ವ್ಯಥ್ಯೆ ಇದರಲ್ಲಿ ಅಡಕವಾಗಿದೆ. ಅನಾರೋಗ್ಯದಲ್ಲಿದ್ದ ಅಜ್ಜಿ ಆಶ್ರಯದಲ್ಲಿ ಅವಳು ಬೆಳೆಯುತ್ತಾಳೆ ನಂತರ ಅಜ್ಜಿ ಸತ್ತ ಮೇಲೆ ಅವಳು ಕಂಗಾಲಾಗಿ ಪುರುಷ ಪ್ರಧಾನ ಸಮಾಜದ  ಕಾಮಾಲೆ ಕಣ್ಣಿಗೆ ಗುರಿಯಾಗುತ್ತಾಳೆ. ಇಂತಹ ವಾತಾವರಣ ಇಂದಿಗೂ ಇದೆ. ಇದೆಲ್ಲಾ ಕಥೆಯಂತೆ ಭಾಸವಾದರೂ ವಾಸ್ತವ್ಯಕ್ಕೆ ಆಳ ಸಂಬಂಧವಿದೆ. ಕಥಾನಕಗಳು ಯಾರದೋ ಬದುಕಿನ ವಾಸ್ತವವಾಗಿರಬಹುದು.
ಅನಿವಾರ್ಯ ಕಾರಣಗಳು
ಎಸ್ಟಿಡಿ(ಸೆಕ್ಷುಯಲ್ ಟ್ರಾನ್ಸ್ಮಿಟಡ್ ಡಿಸಿಸ್) ಎಂದು ಕರೆಯಲಾಗುವ ಈ ವೇಶ್ಯೆಯರ ತಾಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇವತ್ತು 100ಕ್ಕೆ ಪ್ರತಿಶತಃ ಓರ್ವ ಮಹಿಳೆ ಸ್ವಇಚ್ಛೆಯಿಂದ ಈ ವೃತ್ತಿಗೆ ಇಳಿದರೂ, ಇನ್ನುಳಿದ 99% ಮಹಿಳೆಯರು ಈ ಕೂಪಕ್ಕೆ ಅನಿವಾರ್ಯ ಕಾರಣಗಳಿಂದ ದೂಡಲ್ಪಡುತ್ತಿದ್ದಾರೆ. ಇದಕ್ಕೆ ಹಲವು ಕಾರಣಗಳುಂಟು.

ವಿಭಕ್ತ ಕುಟುಂಬಗಳ ಹೆಚ್ಚಳ: `ವಿನಾಶ ಕಾಲೆ ವಿಪರೀತ ಬುದ್ಧಿ' ಎಂಬಂತಾಗಿದೆ ನಮ್ಮ ಈ ಸಮಾಜದ ಪರಿಸ್ಥಿತಿ. ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ವಲಸೆ ಪ್ರಮಾಣ ಮುಗಿಲು ಮುಟ್ಟಿದೆ. ಜೌದ್ಯೋಗೀಕರಣದ ಫಲಶ್ರುತಿಯಾಗಿ ಇಂದು ಅವಿಭಕ್ತ ಕುಟುಂಬಗಳು ಕಾಣೆಯಾಗಿವೆ. ಹಿರಿಯರೂ ಅನುಭವಿಗಳೂ ಇದ್ದ ಅವಿಭಕ್ತ ಕುಟುಂಬಗಳಲ್ಲಿ ಏನಾದರೂ ಕೌಟುಂಬಿಕ ವಿರಸ ತಲೆದೋರಿದರೆ, ಅದಕ್ಕೆ ಅವರು ತಕ್ಷಣ ಸೂಕ್ತ ಪರಿಹಾರ ನೀಡುತ್ತಿದ್ದರು. ಆದರೆ ಈಗ ಪತಿ-ಪತ್ನಿಯರಿಬ್ಬರು ದುಡುಕಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ವಿಚ್ಛೇದನಗಳ ಪ್ರಮಾಣ ಹೆಚ್ಚಿದೆ. ಇದು ಪರೋಕ್ಷವಾಗಿ ಅನೈತಿಕ ಸಂಬಂಧ, ವೇಶ್ಯಾವೃತ್ತಿ ಹೆಚ್ಚಳಕ್ಕೆ ಕಾರಣವಾಗಿದೆ.
ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕಾದ ಆರಕ್ಷರು (ಪೊಲೀಸರು) ಹಾಗೂ ರಾಜಕಾರಣಿಗಳು ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಇದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಬೇಲಿಯೇ ಎದ್ದು ಹೊಲವನ್ನು ಮೇಯ್ದಂತೆ ಎಂಬ ಪರಿಸ್ಥಿತಿ ನಿಮರ್ಾಣವಾಗಿದೆ.
ಪಿಂಕ್ ಸಿಟಿ, ಮರುಭೂಮಿಗೆ ಪ್ರಖ್ಯಾತಿ ಪಡೆದಿರುವ ರಾಜಸ್ಥಾನ ಎಲ್ಲರಿಗೂ ಗೊತ್ತೆ ಇದೆ. ಈ ರಾಜಸ್ತಾನದಲ್ಲಿರುವ ಚಿಕ್ಕ ಪಟ್ಟಣ `ಆಲ್ವರ್' ಯಾವುದಕ್ಕೆ ಪ್ರಸಿದ್ಧಿ ಪಡೆದಿದೆ ಎಂದರೆ, ದೇಶದ ಹಲವು ರಾಜ್ಯಗಳಿಂದ ಚಿಕ್ಕ ಹುಡುಗಿಯರನ್ನು ಹೊತ್ತೊಯ್ದು ಅವರನ್ನು ಈ ವೇಶ್ಯಾಗೃಹಕ್ಕೆ ದಬ್ಬಲಾಗುತ್ತದೆ. ಅತೀ ಕಡಿಮೆ ವಯೊಮಾನದಲ್ಲಿ(12ವರ್ಷದ) ಹುಡುಗಿಯರನ್ನು ಈ ವೃತ್ತಿಗೆ ಇಳಿಸಲಾಗುತ್ತದೆ.
ರಾತ್ರೋರಾತ್ರಿ ಏನೂ ತಿಳಿಯದ ಬಾಲೆಯರನ್ನು  ಕರೆತಂದು ಅವರನ್ನು ಮಕ್ಕಳಂತೆ ಬೆಳೆಸಲಾಗುತ್ತದೆ. ಕೇಳಿದಾಗ ಪೌಷ್ಠಿಕಾಂಶಯುಕ್ತ ಊಟ ನೀಡಲಾಗುತ್ತದೆ. ಆದರೆ ಅದರ ಜತೆ `ಆಕ್ಸಿಟಾಸಿನ್' ಇಂಜಕ್ಷನ್ ಕೂಡ ನೀಡಲಾಗುತ್ತದೆ. ಇದರ ಪ್ರಮುಖ ಉದ್ದೇಶ ಹುಡುಗಿಯರು ಆದಷ್ಟು ಬೇಗ ಋತುಮತಿಯರಾಗಿ ಈ ವೃತ್ತಿಗೆ ಯೋಗ್ಯರಾಗಲೆನ್ನುವುದು!. ಇದರಿಂದ ದಷ್ಟಪುಷ್ಟರಾಗಿ ತುಂಬಿಕೊಂಡು ಬೆಳೆಯುವ ಯುವತಿಯರನ್ನು ಅರಬ್ (ಯುಎಇ) ರಾಷ್ಟ್ರಗಳಿಗೆ ಮಾರಲಾಗುತ್ತದೆ. ಈ ವ್ಯವಹಾರದಲ್ಲಿ ತೊಡಗಿರುವವರು ಕೈತುಂಬಾ ಹಣ ಪಡೆದು, ಐಷಾರಾಮಿ ಜೀವನ ನಡೆಸುತ್ತಾರೆ. ಆದರೆ ಈ ವಿಷ ವತರ್ುಲದಲ್ಲಿ ಸಿಲುಕುವ ಹೆಣ್ಣುಗಳ ಜೀವನ ಮಾತ್ರ ದುರ್ಭರ. ಸಾಯುವುದಕ್ಕೂ ಸ್ವಾತಂತ್ರವಿಲ್ಲ. ಇವತ್ತು ಇದರ ಪರಿಣಾಮವಾಗಿ ಈ `ಆಲ್ವರ್'ನಲ್ಲಿರುವ ಬಹುತೇಕ ಮಹಿಳೆಯರು ಲೈಂಗಿಕ ರೋಗಗಳಿಗೆ ತುತ್ತಾಗಿದ್ದಾರೆ. ಇದು ಅಲ್ಲಿನ ಪೊಲೀಸರಿಗೆ ತಿಳಿದಿಲ್ಲವೆಂದೇನಿಲ್ಲ. ಆದರೆ ಅವರೂ ಮಾಮುಲು ಪಡೆದು ತಮ್ಮ ಜೇಬು ತುಂಬಿಸಿಕೊಂಡು ಕುರುಡ ಜಾಣರಾಗಿದ್ದಾರೆ. ಇಲ್ಲಿ ಶೋಷಣೆಗೆ ಒಳಗಾಗುತ್ತಿರುವವಳು ಮಹಿಳೆ. ವಿಪಯರ್ಾಸವೆಂದರೆ ಇಲ್ಲಿ ಹೆಣ್ಣೇ ಮತ್ತೋರ್ವ ಹೆಣ್ಣಿನ ಪಾಲಿಗೆ ವೈರಿಯಾಗಿದ್ದಾಳೆ.

ಇದಕೆ ಕೊನೆಯೇ ಇಲ್ಲವೇ?
ಇದಕ್ಕೆ ಕೊನೆನೇ ಇಲ್ವಾ..? ನಮ್ಮದು ಭವ್ಯಸಂಸ್ಕೃತಿ. ಆದರೆ ಇಲ್ಲಿ ಹೆಣ್ಣು ಹುಟ್ಟಿದಂದಿನಿಂದ ಒಂದಲ್ಲಾ ಒಂದು ರೀತಿಯಲ್ಲಿ ಶೀಷಣೆಗೆ ಗುರಿಯಾಗುತ್ತಲೇ ಬಂದಿದ್ದಾಳೆ. ಅನೇಕ ಹೋರಾಟಗಳಾದವು, ಸತ್ಯಾಗ್ರಹಗಳಾದವು, ಅನೇಕರು ಇದಕ್ಕಾಗಿ ಹೋರಾಡಿ ಮಡಿದರು. ಆದರೆ ಇದರಿಂದ ಮುಕ್ತಿ ಸಿಕ್ಕಿಲ್ಲ.
ಸ್ತ್ರೀ ಆದಿಶಕ್ತಿ, ಮಹಿಷಾಸುರ ಮದರ್ಿನಿ ಎಂದು ಹೊಗಳಿ ಚಪ್ಪರದ ಮೇಲೆ ಕೂಡಿಸಲಾಗುತ್ತಿದೆಯೇ ಹೊರತು ನೈಜವಾಗಿ ಸ್ತ್ರೀ ವಿಮೋಚನೆ ಆಗಿಲ್ಲ. ಒಂದು ವೇಳೆ ಇದು ಹೀಗೆ ಮುಂದುವರೆದರೆ ಖಂಡಿತವಾಗಿ ನಮ್ಮ ರಾಷ್ಟ್ರದ  ಭವಿಷ್ಯ ಕತ್ತಲು ಕವಿದು ಕಣ್ಮರೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಈಗಾಲಾದರೋ ಕಾನೂನು, ಮಹಿಳಾ ಅಭಿವೃದ್ಧಿ ಪರ ಎಂದು ಸೆಡ್ಡುಹೊಡೆದು ಕುಳಿತಿರುವ ಸಂಸ್ಥೆಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಜಾಗೃತವಾಗಿ ಇದರ ವಿರುದ್ಧ ಹೋರಾಡಿದರೆ ಸ್ವಲ್ಪಮಟ್ಟಿಗಾದರೂ ಪರಿಸ್ಥಿತಿ ಸುಧಾರಿಸೀತು.

ಆತೀಶ್ ಬಿ ಕನ್ನಾಳೆ

Monday, December 13, 2010

Love is sweet Poison

ಕೊನೆಗೂ ಕೂಡದ ಪ್ರೀತಿ...... 
ಮೊಬೈಲ್ ಇಲ್ಲದ ಕಾಲವದು. ಆವಾಗ ಎಲ್ಲಿ ಮೊಬೈಲ್? ತಂತ್ರಜ್ಞಾನ, ಜನಜೀವನ ಇಷ್ಟೊಂದು ಮುಂದುವರೆದಿರಲಿಲ್ಲ. ಆದರೆ ಪ್ರೀತಿಸುವ ಮನಸ್ಸುಗಳಿಗೆ ಅನುಕೂಲಕರವಾದ ಎಲ್ಲಾ ವಾತಾವರಣ ಆಗ ಇತ್ತು. ಬಹುಷ್ಯ ಈ ವಾತಾವರಣವೇ ಅವರ ಪ್ರೀತಿಯ ಹುಟ್ಟಿಗೆ ಕಾರಣವಾಯಿತೇನೋ?
ಅವರಿಬ್ಬರ ನಡುವಿನ ಸ್ನೇಹ ಯಾವಾಗ ಪ್ರೇಮವಾಗಿ ಮಾರ್ಪಟ್ಟಿತೋ ಗೊತ್ತಿಲ್ಲ. ಅದು ಪ್ರೀತಿ ಎಂದು ತಿಳಿಯುವ ಹೊತ್ತಿಗಾಗಲೇ ಕಾಲ ಮಿಂಚಿಹೋಗಿತ್ತು. ಅದು ಅವರ ಪದವಿಯ ಕೊನೆಯ ವರ್ಷವಾಗಿದ್ದರಿಂದ ಅವರು ಬೇರೆ-ಬೇರೆ ಸ್ಥಳಗಳಿಗೆ ಪಲಾಯನಗೈಯಲೇ ಬೇಕಾಯಿತು. ಅವನು ಉದ್ಯೋಗ ಅರಸಿ ಬೆಂಗಳೂರಿಗೆ ಹೋದನು. ಇತ್ತ ಇವಳು ಮನೆಯ ಒತ್ತಾಯಕ್ಕೆ ಮಣಿದು ಉದ್ಯೋಗದ ಸೊಲ್ಲೆತ್ತದೆ ಆಟೋಗ್ರಾಫ್ ಡೈರಿ ನೋಡುತ್ತಾ ಸುಮ್ಮನಾಗುತ್ತಿದ್ದಳು. ಮನೆಯಲ್ಲೆಲ್ಲಾ ಬರೀ ಸ್ಮಶಾನ ಮೌನ, ಚಿಗುರೆಯಂತೆ ಚೂಟಿಯಾಗಿದ್ದ ಈಕೆ ಸಮ್ಮನಾಗಿದ್ದಳು. 'ಎಷ್ಟಾದರೂ ಕಾಯಿಯಾದ ಪ್ರೀತಿ ಅಲ್ಲವೇ? ಹೂವಾಗಿದ್ದರೆ ಚಿವುಟಬಹುದಾಗಿತ್ತೇನೋ.' ಆದರೆ ಅದು ಮಾಗಿಹೋಗಿತ್ತು. ಮನೆಯಲ್ಲಿ ಮದುವೆಯ ಒತ್ತಾಯ ಬೇರೆ ಹೆಚ್ಚುತ್ತಲೇ ಇತ್ತು. ಹೇಗಾದರೂ ಮಾಡಿ ತನ್ನ ಪ್ರೀತಿಯನ್ನು ಸುರೇಶನಿಗೆ ತಿಳಿಸಲೇಬೇಕು. ಎಂದು ಪಟ್ಟು ಹಿಡಿದು, ಬಂಡು ಧೈರ್ಯದಿಂದ ಅವನಿಗೆ ತನ್ನ ಭಾವನೆಗಳನ್ನು ಪತ್ರದ ಮೂಲಕ ಹೇಳಿಯೇ ಬಿಟ್ಟಳು.
ಪತ್ರ ಕಳುಹಿದ ಮೇಲೆ ಮನಸ್ಸು ಸುಮ್ಮನಿರಬೇಕಲ್ಲ. ಯಾಕೆ ಪ್ರತ್ಯುತ್ತರ ಬರಲಿಲ್ಲ. ಪತ್ರ ತಲುಪಿತೋ ಹೇಗೋ. ಎಂದು ಹಲವು ಅನುಮಾನಗಳ ಸುಳಿಯಲ್ಲಿ ಆಕೆ ಸಿಲುಕಿದ್ದಳು. ಪ್ರತ್ಯುತ್ತರಕ್ಕಾಗಿ ನೀರಿನಿಂದ ಹೊರತೆಗೆದ ಮೀನಿನಂತೆ ವಿಲಿ-ವಿಲಿ ಒದ್ದಾಡುತ್ತಿದ್ದಳು. ಪತ್ರ ಇಂದು ಬರಬಹುದು, ನಾಳೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಳು. ಬಹುಷ್ಯ ಇಂದಿನಷ್ಟು ಸೌಲಭ್ಯಗಳಿದ್ದರೆ ಫೋನಾಯಿಸುತ್ತಿದ್ದಳೋ ಏನೋ..! ಕೊನೆಗೂ ಒಂದು ದಿನ ನಿರೀಕ್ಷೆಯ ಬಸುರನ್ನು ಒಡೆದು ಒಂದು ಪತ್ರ ಬಂದೆ ಬಿಟ್ಟಿತು.
ಪ್ರೀತಿಯ ಗೀತಾ,
ನಿನ್ನ ಪತ್ರವನ್ನು ಓದಿದೆ, ನಾನೂ ಸಹ ನಿನಗೆ ತುಂಬಾ ಪ್ರೀತ್ರಿಸುತ್ತಿದ್ದೇನೆ. ಆದರೆ, ಸ್ನೇಹಕ್ಕೆ ಚ್ಯುತಿ ಬರಬಹುದೆಂದು ನನ್ನ ಒಡಲಿನ ಪ್ರೀತಿಯನ್ನು ನಿನ್ನ ಜೊತೆ ಹಂಚಿಕೊಳ್ಳಲಿಲ್ಲ. ಈಗಲೂ ಅಷ್ಟೇ ಪ್ರೀತಿಸುತ್ತೇನೆ. ನಿನ್ನನ್ನು ಬಿಟ್ಟು ಇಂದು ಕ್ಷಣ ಜೀವಿಸಲಾಗದು. ನಾನು ನಿನ್ನಲ್ಲಿಗೆ ಬಂದು ನಿಮ್ಮ ತಂದೆಯ ಜೊತೆ ಮಾತಾಡುತ್ತೇನೆ. ಆದರೆ ಈಗ ನನ್ನ ತಂದೆಗೆ ಹುಷಾರಿಲ್ಲ ಆದ್ದರಿಂದ  ಚೇತರಿಸಿಕೊಂಡ ತಕ್ಷಣ ನಿನ್ನಲ್ಲಿಗೆ ಬರುತ್ತೇನೆ.
ಇತಿ ನಿನ್ನ ಪ್ರೀತಿಯ
ಸುರೇಶ.

ಪತ್ರ ಓದಿದ್ದೆ ಆಕೆಯ ಕಾಲು ನೆಲದ ಮೇಲೆ ನಿಲ್ಲಲಿಲ್ಲ. ವಾರವಾಗುತಿತ್ತದ್ದಂತೆ ಈ ಕಡೆಯ ಪತ್ರ ಆಕಡೆಗೆ, ಆ ಕಡೆಯಿಂದ ಈ ಕಡೆಗೆ ಹೀಗೆ ಪ್ರೀತಿಯ ಪ್ರಹಸನ ನಡೆಯುತ್ತಿತ್ತು. ಆದರೆ ಈ ವಿಚಾರ ಮನೆಯಲ್ಲಿ ಮಾತ್ರ ಯಾರಿಗೂ ತಿಳಿದಿರಲಿಲ್ಲ. ತಿಳಿಯಲು ತಾನೆ ಹೇಗೆ ಸಾಧ್ಯ. ಪತ್ರಗಳೇನಿದ್ದರೂ ಸ್ನೇಹಿತೆಯ ಮನೆಗೆ ಹೋಗುತ್ತಿದ್ದವು. ಹೀಗೆ ಪ್ರೇಮ ಪತ್ರಾಯಣ ಮಂದುವರಿಯಿತು.
ದಿನಗಳೆದಂತೆ ಸುರೇಶ ಕಡೆಯಿಂದ ಪತ್ರಗಳು ಕಮ್ಮಿಯಾದವು. ಬಹುಷ್ಯ ಕಚೇರಿಯ ಕೆಲಸ ಹಾಗೂ ತಂದೆಯ ಆರೋಗ್ಯದಿಂದಾಗಿ ಸಮಯ ಜೋಡಿಸಲಾಗುತ್ತಿಲ್ಲವೆನೋ ಎಂದು ಸಮ್ಮನಾದಳು. ಈ ಕಡೆಯಿಂದ ವಾರವಾರಕ್ಕೆ ತಪ್ಪದೆ ಪತ್ರ ಹೋಗುತಿತ್ತು. ಅಂತೂ ಒಂದು ದಿನ ಸುರೇಶ ಕಡೆಯಿಂದ ಪತ್ರ ಬರುವುದು ಸಂಪೂರ್ಣವಾಗಿ ನಿಂತೆಬಿಟ್ಟಿತು.
ಸುರೇಶ ತಂದೆಯ ಆರೋಗ್ಯ ಏನಾಯಿತೋ? ಕಚೇರಿ ಕೆಲಸಗಳು ಹೆಚ್ಚಾದವೋ? ಏನಾಯಿತೋ ಏನೋ ಒಂದು ತಿಳಿಯದೆ ಗೀತಾ ದಿನಗಳನ್ನು ದೂಡುತ್ತಿದ್ದಳು. ಆದರೆ ಒಳಗಿದ್ದ ಪ್ರೀತಿ ಆಕೆಯನ್ನು ದಿನೇ-ದಿನೇ ಸುಡುತ್ತಲೇ ಇತ್ತು. ಕೊನೆಗೆ ತಾನೇ ಹೇಗಾದರೂ ಮಾಡಿ ಸುರೇಶನಲ್ಲಿಗೆ  ಹೋಗಬೇಕೆಂದು ನಿರ್ಧರಿಸಿದಳು. ಆದರೆ..... ಬೆಂಗಳೂರು ಎಂಥಾ ನಗರವೋ ಏನೋ, ಎಲ್ಲಿ ಹೋಗೋದು? ಹೇಗೆ ಹೋಗೋದು? ಅಲ್ಲಿ ಸುರೇಶ ಮನೆ ಎಲ್ಲಿರುವುದೋ ಏನೋ? ಇಲ್ಲಿಯವರೆಗೆ ಬರೀ ಪುಸ್ತಕದಲ್ಲಿ ಹಾಗೂ ಬೇರೆಯವರ ಬಾಯಿಂದ ಮಾತ್ರ ಬೆಂಗಳೂರಿನ ಬಗ್ಗೆ ಕೇಳಿದ ಈಕೆಗೆ ತಮ್ಮ ಹಳ್ಳಿಯೊಂದು ಬಿಟ್ಟರೆ ಬೇರೆನೂ ತಿಳಿಯದಷ್ಟು ಮುಗ್ಧೆ ಈಕೆ. ಹಾಗೆಂದು ಸುಮ್ಮನಿದ್ದರೆ ಪ್ರೀತಿಯನ್ನು ಕಳೆದುಕೊಳ್ಳಬೇಕಾಗುತ್ತದೆ, ಎಂದು ಕೊನೆಗೂ ಆಕುಂಚನಗೊಳ್ಳದೆ(ಕುಗ್ಗದೆ) ಬೆಂಗಳೂರಿಗೆ ಪ್ರಯಾಣ ಬೆಳೆಸಿಯೇ ಬಿಟ್ಟಳು. ಅಲ್ಲಿ ಇಳಿದಿದ್ದೆ ಅಲ್ಲಿನ ಜನ, ದೊಡ್ಡ ರಸ್ತೆ, ಕಟ್ಟಡಗಳು, ಟ್ರಾಫಿಕ್ ಎಲ್ಲವೂ ಆಕೆಯನ್ನು ಹೌಹಾರುವಂತೆ ಮಾಡಿತು. ತಂದಿದ್ದ ಅಲ್ಪಸ್ವಲ್ಪ ದುಡ್ಡಿನಿಂದ ಸುರೇಶ ಮನೆಯ ಕಡೆಗೆ ಹೊರಟಳು. ಮನೆ ಸಿಕ್ಕಿದ್ದೆ ತಡ ಖುಷಿ-ಖುಷಿಯಿಂದ ಮನೆಯ ಕಡೆಗೆ ಧಾವಿಸಿದಳು. ಆದರೆ ವಿಪಯರ್ಾಸ, ಜಾಳುಗಟ್ಟಿದ ಮನೆಯ ಬಾಗಿಲು, ಜಡಿದ ಬೀಗ ಅನೇಕ ಆಖ್ಯಾನಗಳ ವರಸೆಯನ್ನೇ ಹೇಳುತ್ತಿತ್ತು. ಛೇ.. ಹಾಗೇ ಯೋಚಿಸುವುದು ತಪ್ಪು ಎಂದು ಅಲ್ಲಿಂದ ಕಾಲು ಕಿತ್ತಿದಳು. ವಿದ್ಯಾಭ್ಯಾಸದಲ್ಲಿ ಪದವಿ ಮುಗಿದ ಈಕೆಗೆ ಅವನ ಕಚೇರಿಯ ವಿಳಾಸ ಹುಡುಕಿ ತೆಗೆಯುವುದು ಅಷ್ಟೇನು ಕಷ್ಟದ ಕೆಲಸವಾಗಿರಲಿಲ್ಲ. ಕೊನೆಗೂ ಕಚೇರಿ ಪತ್ತೆ ಹಚ್ಚಿ ಜೀವ ಕೈಯಲ್ಲಿ ಹಿಡಿದುಕೊಂಡು ಕಚೇರಿ ತಲುಪಿದಳು.
ಅಲ್ಲಿ ಸುರೇಶ ವಿಷಯದ ಸತ್ಯ ಕೇಳಿ ಆಕೆಯ ಹೃದಯ ಒಡೆದು ಹೋಯಿತು. ಕಣ್ಣೀರು ಸಮುದ್ರದಂತೆ ಉಕ್ಕಿ ಬಂದವು. 'ಕೊನೆಗೂ ನನ್ನ ಪ್ರೀತಿ ನನ್ನ ಕೈಸಿಗಲಿಲ್ಲ,' ಎಂದು ರೋಧಿಸುತ್ತಾ ಅವನ ಫೋಟೊ ಮೇಲಿದ್ದ ಹಾರವನ್ನು ಕಿತ್ತೆಸೆದಳು. ಅಷ್ಟೊಂದು ಗಾಢವಾಗಿದ್ದ ಪ್ರೀತಿ ಬದುಕಲು ಬಿಟ್ಟಿತೆ? ಅವಳ ಪ್ರಾಣಪಕ್ಷಿಯೂ ಆಗಂತುಕನಾಗಿ ಬಂದವನ ಹಿಂದೆ ಹಾರಿಹೋಯಿತು.
'ಕೊನೆಗೂ ಪತ್ರದಲ್ಲಿ ಒಂದಾದ ಪ್ರೀತಿ, ವಾಸ್ತವದಲ್ಲಿ ಒಂದಾಗಲೇ ಇಲ್ಲ.'
ಆತೀಶ. ಬಿ. ಕನ್ನಾಳೆ.

Sunday, December 12, 2010

ಅಮ್ಮನೆಂಬ ಬ್ರಹ್ಮ.....
(ತಾಯಿಯಾಗಿ ಮಲತಾಯಿಯಲ್ಲ)

 ಮೊನ್ನೆ ಟೆರಸ್ ಮೇಲೆ ನಿಂತು ರಾಜಧಾನಿಯ ರಹದಾರಿಗಳ ಕಡೆ ಕಣ್ಣು ಹಾಯಿಸಿದೆ. ಮೋಟಾರು-ಸೈಕಲ್ಗಳು ಎಗ್ಗಿಲ್ಲದೆ ಓಡಾಡುತ್ತಿವೆ. ಬರೀ ಅವುಗಳದ್ದೆ ಸದ್ದು. ವಾಹನಗಳ ಪರದಾಟ ನೋಡಿ-ನೋಡಿ ಸುಸ್ತಾಯ್ತು. ಅಲ್ಲಿಂದ ಟೆರಸ್ನ ಮತ್ತೊಂದು ಭಾಗಕ್ಕೆ ಬಂದು ಓಣೆಯ ರಸ್ತೆಯ ಕಡೆಗೆ ದೃಷ್ಟಿ ನೆಟ್ಟೆ. ಅದು ಸಾಯಂಕಾಲದ ಸಮಯ ರಸ್ತೆಯಲ್ಲೆಲ್ಲಾ ನೀರವ ಮೌನ. ಅಲ್ಲಿ ಒಂದು ಪುಟ್ಟ ಮನೆ, ಆ ಮನೆ ಹೊರಗೆ ಇಬ್ಬರು ಪುಟ್ಟ ಮಕ್ಕಳು ಬಹುಶಃ ಅಣ್ಣತಮ್ಮಂದಿರಿರಬಹುದೆನೋ ಅನಿಸಿತ್ತೆ. ಇಬ್ಬರ ಕೈಯಲ್ಲು ಒಂದೊಂದು ಬಿದಿರು ಅವರು ಮುಂದೆ ಯಾವುದೋ ಒಂದು ಯುದ್ಧ ನಡೆಯಲಿದೆ ಎಂಬಂತೆ ಖಡ್ಗಯುದ್ಧ ಪಾರಾಯಣದಲ್ಲಿ ತೊಡಗಿದ್ದರು.
ಆ ಮನಮೋಹಕ ದೃಶ್ಯ ಕಾಣುತ್ತಲೆ ಏನೋ ಒಂಥರಾ ಖುಷಿಯಾಗಿ, ಮನಸ್ಸಿಗೆ ರೆಕ್ಕೆ ಬಂದು ಹಾರಾಲಾರಂಭಿಸಿತು. ಮುಂದುವರಿದು ಆ ಬಾಲಕರ ಬಾಲ್ಯ ಚೇಷ್ಟೆಗಳನ್ನು ಕಣ್ಣು ಮಿಟುಕಿಸದೆ ನೋಡುತ್ತಿದ್ದೆ. ಅದು ಹಾಗೇ ಯಾವುದೋ ಒಂದು ಕಲ್ಪನ್ಪಾಲೋಕಕ್ಕೆ ಕರೆದೊಯ್ದಿತ್ತು. ನನ್ನ ಬಾಲ್ಯದ ಕುಚೇಷ್ಟೆಗಳು ನೆನಪಾಗಿ ಕಣ್ಣ ಅಂಚಲ್ಲಿ ಹನಿ ಮೂಡಿತು. ಮಳೆಹನಿಯಲ್ಲಿ ಮೆಂದು ಕಾಗದದ ದೋಣಿ ಮಾಡಿ ಆಡಿದ್ದು, ಮಳೆ ಬಾರದಿದ್ದಾಗ ಮಳೆ ಬಾರೋ ಮಲ್ಲೇಶ.. ಎಂದು ಹಾಡಿ ಕುಣಿದಾಡಿದ್ದು ಹೀಗೆ ಮಣ್ಮಂದೆ ಕನಸಿನ ಲೋಕವೆ ಅವತರಿಸಿ ನಿಂತಿತ್ತು. ಹಾಗೇ ಆ ಕ್ಷಣಗಳನ್ನು ಆಸ್ವಾದಿಸುತ್ತಿದ್ದೆ, ಅಷ್ಟರಲ್ಲೆ ಎಲ್ಲಿಂದ ಬಂದಳೋ ಆ ಮಹಾತಾಯಿ...! ಸುನಾಮಿಯಂತೆ ಬಂದವಳೆ ನಾಲ್ಕೈದು ವರ್ಷದ ಆ ಪೋರನನ್ನು ತನ್ನತ್ತ ಎಳೆದು ಕೈಯಲ್ಲಿದ್ದ ಬೆತ್ತ ಕಸಿದುಕೊಂಡು ಅದರಿಂದಲೇ ನಾಲ್ಕು ಬಾರಿಸಿ ಹುಡುಗನನ್ನು ಭವ್ಯ ಬಂಗಲೆಯೊಂದಕ್ಕೆ ಎಳೆದೊಯ್ದಳು. ಇನ್ನೊಬ್ಬ ಹುಡುಗ ಮಾತ್ರ ತುಟಿ ಪಿಟಕ್ ಅನ್ನದೆ ಮ್ಲಾನವದನದಿಂದ ಚರಂಡಿಯ ಪಕ್ಕ ನಿಂತು ಕಂಬನಿಗೆರೆಯುತ್ತಿದ್ದನು. ನನಗೆ ಒಂದೂ ತಿಳಿಯಲಿಲ್ಲ. ಆ ಘಟನೆಯ ಜೊತೆಗೆ ಅನೇಕ ಪ್ರಶ್ನೆಗಳು ಕವಲೊಡೆಯುತ್ತಿದ್ದವು. ಆ ಯಮ್ಮ ಆ ಹುಡುಗನನ್ನೆ ಏಕೆ ಎಳೆದೊಯ್ದರು? ಈ ಹುಡುಗ ಮಾತ್ರ ಯಾಕೆ ಇಲ್ಲೆ ನಿಂತಿದ್ದಾನೆ? ಹಾಗೇನಾದ್ರು ತಪ್ಪು ಮಾಡಿದಿದ್ರೆ ಇಬ್ಬರನ್ನು ಹೊಡೆಯಬೇಕಿತ್ತು. ಯಾಕೆ ಆ ಒಬ್ಬ ಪೋರನನ್ನೆ ಹೊಡೆದು ಎಳೆದೊಯ್ದರು? ಬಹುಶಃ ಆಕೆ ಈ ಹುಡುಗನ ಮಲತಾಯಿ ಏನಾದ್ರು ಆಗಿರಬಹುದೆ? .... ಹೀಗೆ ನೂರಾರು ಪ್ರಶ್ನೆಗಳು ಪುಂಖಾನುಪುಂಖವಾಗಿ ಹೊರಗೆಡುಹುತ್ತಿದ್ದರಿಂದ ಪ್ರಶ್ನೆಗಳ ವರಸೆಯೇ ನನ್ನೆದುರಿಗಿತ್ತು.

ಇದರ ಜೊತೆಗೆ ಆನೆಗಾತ್ರದ ಮಹಿಳೆ ಮೇಲೆ ನನಗೆ ಎಲ್ಲಿಲ್ಲದ ಕೋಪ. ಏಕೆಂದರೆ, ಆ ಹುಡುಗರ ಬಾಲ್ಯ ಕುಚೇಷ್ಟೆಗಳನ್ನು ಗಮನಿಸುತ್ತಾ ಕ್ಷಣಕಾಲ ಇಡೀ ಪ್ರಪಂಚವನ್ನು ಮರೆತು ನನ್ನ ಬಾಲ್ಯದಲ್ಲಿ ಕಳೆದುಹೋಗಿದ್ದೆ. ಆ ಕನಸಿನ ಮಹಲನ್ನು ಕ್ಷಣದಲ್ಲಿ ನುಚ್ಚುನೂರು ಮಾಡಿದಳಲ್ಲ ಈ ರಾ.....ಕ್ಷಸಿ ಎಂಬ ಕಾರಣಕ್ಕಾಗಿಯೋ ಏನೊ ಕೊಪ ಕಾಡುತಿತ್ತು.
ಅದೇನೆ ಇರಲಿ, ಮಹಿಳೆ ಆ ರೀತಿ ವತರ್ಿಸುವುದಕ್ಕೆ ಕಾರಣ ಆದ್ರು ಏನು....?? ಯೋಚಿಸಿದೆ ಏನೂ ತೋಚಲಿಲ್ಲ. ಸರಿ ಇದರ ಉತ್ತರ ಈ ಹುಡುಗನಿಂದ ಮಾತ್ರ ಸಾಧ್ಯ ಎಂದು ಅವನ ಕಡೆ ಹೊರಟೆ. ಕ್ಷಣಕಾಲ ಅವನ ಮುಖದ ಹತಾಶೆಯನ್ನು ಜಾಲಾಡಿ, ಕಣ್ಣಿನ ಆಳದಲ್ಲಿ ಅಡಗಿದ್ದ ಮುಗ್ಧತೆಯನ್ನು ಗಮನಿಸಿ, ಮರಿ ನಿನ್ ಹೆಸರೇನು ಎಂದು ಕೇಳಿದೆ. ಅದಕ್ಕೆ ಆಕಾಶ್ ಎಂದು ಗಲ್ಲ ಉಬ್ಬಿಸಿಕೊಂಡು ಉತ್ತರಿಸಿದ. ನನಗೆ ಅವನ ವದನ ನೋಡಿ ಕಪಿ ನೆನಪಾಗಿ ಕೊಂಚ ನಗುಬಂತು ಆದರೂ ನಗಲಿಲ್ಲ. ಪುಟ್ಟ ಯಾಕೋ ನಿಮ್ಮಮ್ಮ ನಿನ್ನ ತಮ್ಮನನ್ನು ಮಾತ್ರ ಕರೆದುಕೊಂಡು ಹೋದ್ರು ಎಂದು ಕೇಳಿದ್ದೆ ತಡ ಅದಕ್ಕೆ ಅವನು ನನ್ನ ತಮ್ಮ ಅಲ್ಲ; ನನ್ನ ಸ್ನೇಹಿತ ಅಷ್ಟೆ. ಅವನು ಇರೋದು ಆ ಬಂಗಲೆಯಲ್ಲಿ; ನಾವಿರೋದು ಈ ಗುಡಿಸಲಲ್ಲಿ. ಎಂದು ಬೆರಳು ತೋರಿದ. ಅಂಕಲ್ ನಾವು ಬಡವರಂತೆ ಅದಕ್ಕೆ ಆನಂದನನ್ನು ನನ್ನ ಜೊತೆ ಆಡೋದಕ್ಕೆ ಬಿಡೋದಿಲ್ಲ. ಎಂದು ಜೋರಾಗಿ ಆಳಲಾರಂಭಿಸಿದ. ಆ ಪುಟ್ಟನ ಮುಗ್ಧ ಮಾತುಗಳನ್ನು ಕೇಳಿ ನನ್ನ ಕಣ್ಣನಾಲಿಯಲ್ಲಿ ಕಂಬನಿ ಮೂಡಿದವು. ಆ ಘಟನೆಯ ಕಾರಣ ಹಾಗೂ ಸ್ವಾರಸ್ಯ ನನಗೆ ದರ್ಪಣದಷ್ಟು ನಿಚ್ಚಳವಾಯ್ತು.
ನಂತರ ಚಹ ಹೀರಲು ಸಹ ಮನಸ್ಸಾಗಲಿಲ್ಲ. ಯಾಕೋ ಮನಸ್ಸು ಯಾವ ಕೆಲಸಕ್ಕೂ ಒಪ್ಪದೆ, ಹೃದಯ ಭಾರವಾಗಿತ್ತು. ಪದೇ-ಪದೇ ಆ ಪುಟಾಣಿ ಹೇಳಿದ ಅಂಕಲ್ ನಾವು ಬಡವರಂತೆ ಎಂಬ ಮಾತು ನನ್ನ ಕಿವಿಯಲ್ಲಿ ಪುನರಾವರ್ತನೆ ಆಗುತಿತ್ತು.
ಯಾಕೆ ನಮ್ಮ ಸಮಾಜದ ಈ ಜನ ಶಿಕ್ಷಣ ಹಾಗೂ ಜೀವನಮಟ್ಟದಲ್ಲಿ ಮೇಲೆ ಹೋದಂತೆಲ್ಲಾ ಈ ರೀತಿ ಯೋಚಿಸುತ್ತಾರೆ. ಇದರಲ್ಲಿ ಆ ಮಕ್ಕಳ ತಪ್ಪಾದರೂ ಏನು? ಯಾರೂ ತಮ್ಮ ಇಚ್ಛೆಯಿಂದ ಬಡವರಾಗುವುದಿಲ್ಲ ಎಂಬ ಸತ್ಯ ತಿಳಿದಿದ್ದರೂ ಏಕೆ ಜಾಣಕುರುಡರಂತೆ ನಡೆದುಕೊಳ್ಳುತ್ತಾರೆ. (ನಿಜ, ಇಂದು ಆದರ್ಶ ಹಾಗೂ ನೈಜತೆಯ ನಡುವೆ ಕಲ್ಪನೆಗೂ ಎಟುಕದ ಕಂದಕ ಏರ್ಪಟ್ಟಿದೆ.) ಆದರೆ ಇಲ್ಲಿ ಪರಿಗಣಿಸಲೇಬೇಕಾದ ಅತೀ ಪ್ರಮುಖವಾದ ಅಂಶವೆಂದರೆ, ಈ ರೀತಿಯ ಘಟನೆಗಳು ಬೆಳೆಯುವ ಮಕ್ಕಳ ಮೇಲೆ ಎಂಥ ಪರಿಣಾಮ ಬೀರಬಲ್ಲವು ಎಂಬ ಪರಿಕಲ್ಪನೆ ಪೋಷಕರಿಗಿಲ್ಲವೆ?!


ಇಂದು ಮಕ್ಕಳ ಜೀವನದಲ್ಲಿ ಮಾರ್ಗದರ್ಶಕಿ ಹಾಗೂ ಶಿಕ್ಷಕಿಯ ಸ್ಥಾನದಲ್ಲಿರಬೇಕಾದ ತಾಯಂದಿರು ಇಂಥ ಕೀಳುದಜರ್ೆಯ ಆಲೋಚನೆಗೆ ಇಳಿದರೆ ನಮ್ಮ ಸಮಾಜದ ಮುಂದಿನ ಸ್ಥಿತಿ ಏನಾಗಬೇಕು....?
ಆಗ ತಾನೆ ಜನಿಸಿದ ಮಗು ಮಾಂಸದ ಮುದ್ದೆಯಂತಿದ್ದು, ಸಮಾಜ ಹಾಗೂ ಅದರ ಸುತ್ತಲಿನ ವಾತಾವರಣ ಅದರ ಮೇಲೆ ಪರಿಣಾಮವನ್ನು ಬೀರುತ್ತದೆ. ಇದರಿಂದ ಆ ಮಗು ಅಂಥದ್ದೇ ಸಂಸ್ಕಾರಗಳನ್ನು ಮ್ಕೈಗೂಡಿಸಿಕೊಳ್ಳುತ್ತದೆ. ಎಂಬ ಸಮಾಜಶಾಸ್ತ್ರಜ್ಞರ ಮಾತು ಇಲ್ಲಿ ನೆನೆಯಲೇಬೇಕು. ಏಕೆಂದರೆ, ಒಂದು ಮಗು ಬೆಳೆದು ಸಮಾಜಘಾತುಕ ಅಥವಾ ಸಮಾಜ ಸುಧಾರಕನೂ ಆಗಬಲ್ಲ. ಅದು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಅದರ ಬಾಲ್ಯದಲ್ಲಿ ನೀಡುವ ಸಂಸ್ಕಾರವನ್ನೇ ಅವಲಂಭಿಸಿದೆ. ಮಾತೃಗರ್ಭದಲ್ಲಿರುವ ಭ್ರೂಣದ ಮೇಲೆ ಸುತ್ತಲಿನ ವಾತಾವರಣ ಪರಿಣಾಮ ಬೀರುತ್ತದೆ ಎಂದು ಒಂದು ಸಂಶೋಧನೆ ಸಿದ್ಧಾಂತ ಪಡಿಸಿದೆ. ಹೀಗಿರುವಾಗ ಮಾಂಸದ ರೂಪವನ್ನು ದಾಟಿ ಆಲೋಚನೆ ಮಾಡುವಷ್ಟು ಬೆಳೆದಿರುವ ಮಕ್ಕಳ ಮೇಲೆ ಇಂತಹ ಘಟನೆಗಳು ಬೀರದಿರಲು ಸಾಧ್ಯವೇ?
ಮಗು ಇನ್ನೂ ಮೂರು ಹೆಜ್ಜೆ ಸ್ವತಂತ್ರವಾಗಿ ಇಡಲಾಗದು ಆಗಲೇ ಅದಕ್ಕೆ ವರ್ಗಭೇದದ ಕುರಿತು ಬೋಧಿಸುವುದಾದರೆ ಭವಿಷ್ಯದಲ್ಲಿ ಆ ಮಕ್ಕಳು ಉತ್ತಮ ಪ್ರಜೆಗಳಾಗಬಲ್ಲರು ಎಂಬ ಖಾತ್ರಿಯಾದರೂ ಏನು..?
ಕೊಂಚ ಯೋಚಿಸಿ: ಅಂದು ಛತ್ರಪತಿ ಶಿವಾಜಿ ಅವರ ತಾಯಿ ಮಗನಿಗೆ ರಾಚಾಯಣ, ಮಹಾಭಾರತ ಆದರ್ಶಗಳನ್ನು ಬೋಧಿಸಿ, ಅವರ ರಕ್ತದ ಕಣ-ಕಣದಲ್ಲಿ ದೇಶಪ್ರೇಮ ತುಂಬದೇ ಹೋಗಿದ್ದಲ್ಲಿ ಅವರು ರಾಷ್ಟ್ರರಕ್ಷಣೆಯನ್ನಿ ನಿಲ್ಲಲಾಗುತಿತ್ತೆ? ವಿವೇಕಾನಂದರು ಭಾರತನ್ನು ಅಷ್ಟಾಗಿ ಪ್ರೀತಿಸಲು ಕಾರಣ ಅವರ ತಾಯಿ ಬಾಲ್ಯದಲ್ಲಿ ನೀಡಿದ ಶಿಕ್ಷಣ. ಅಷ್ಟೇ ಯಾಕೆ ಇಂದು ಅನೇಕ ಯೋಧರು ಯಾವುದೇ ವರ್ಣ, ವರ್ಗಭೇದವನ್ನು ಕಾಣದೆ ನಮ್ಮ ತಮ್ಮ ಜೀವ ಒತ್ತೆಯಿಟ್ಟು ಗಡಿ ಕಾಯುತ್ತಿರುವುದಕ್ಕೆ ಅವರ ತಾಯಂದಿರೂ ಕಾರಣವಾಗಿರಬಹುದು. ಒಂದು ವೇಳೆ ಅವರಿಗೂ ಮೇಲು-ಕೀಳು, ವರ್ಣ-ವರ್ಗಭೇದಗಳ ಪ್ರಬೋಧನೆ ನೀಡುತ್ತಿದ್ದಲ್ಲಿ ನಮ್ಮ ರಾಷ್ಟ್ರದ ಗತಿ ಏನಾಗುತಿತ್ತು.....?
ಅದಕ್ಕಾಗಿ ತ್ಯಾಗ, ಪ್ರೀತಿ, ಮಮತೆಗೆ ಪ್ರತೀಕವಾಗಿರುವ ತಾಯಂದಿರೆ ನಿಮ್ಮ ಮಕ್ಕಳ ಕೋಮಲವಾದ ಮನಸ್ಸನ್ನು ಹಾಳುಮಾಡಬೇಡಿ. ನೀವೇ ಅವರ ಪಾಲಿಗೆ ಬ್ರಹ್ಮ ನೀವು ರೂಪಿಸಿದಂತೆಯೇ ರೂಪುಗೊಳ್ಗ್ಳುತ್ತಾರೆ. ಹೀಗಾಗಿ ನಿಮ್ಮ ಮಕ್ಕಳ ಧಮನಿ-ಧಮನಿಗಳಲ್ಲಿ ರಾಷ್ಟ್ರಪ್ರೇಮವನ್ನು ತುಂಬಿ, ಹೊರತು ಸಮಾಜ ಕಂಠಕಗಳನ್ನಲ್ಲ.
ಆತೀಶ್.ಬಿ.ಕನ್ನಾಳೆ